ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಮನತುಂಬಿದ ಕವಿ

June 17, 2008 - 4:40pm — shylaswamy

ಮನ ತುಂಬಿದ ಕವಿ
“ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು.
“I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು
“ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನಷ್ಟೇ ಹಣಿಸು ನನಗೆ”
ಹೀಗೆಂದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು.
ಸಾಹಿತ್ಯ ಲೋಕದಲ್ಲಿ ಅರಳಿದ ಕುಸುಮಗಳೆಂದರೆ ಈ ಸಾಹಿತಿಗಳು. ಸಂವೇದನಾಶೀಲ ವ್ಯಕ್ತಿಗಳು. ತಮ್ಮ ನೋವು ನಲಿವುಗಳನ್ನೆಲ್ಲಾ ಹಾಡಾಗಿ ಹೊರ ಹೊಮ್ಮಿಸಿ ಹಗುರಾಗುತ್ತಿದ್ದರೇನೋ ಮನದೊಳಗೆ. ಹಾಗೆಯೇ ದ.ರಾ.ಬೇಂದ್ರೆಯವರ ಅನೇಕ ಕವನಗಳು ಅಂತಃಕರಣ ಕುದ್ದು ಕುದ್ದು ಹೊರಬಿದ್ದ ಕವನಗಳಾಗಿರಬೇಕು. ಅವರು ತಮ್ಮ ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗಿ ಹೊರಬಂದು ಓದುಗರ ಮನ ಮುಟ್ಟಿದೆ. ಹೀಗೆ ಅವರ ನೋವಿನ ಹಾಡುಗಳನ್ನು ಓದಿದಾಗ ಕಣ್ಣೀರು ಮಿಡಿದು ಅವರ ಹಾಸ್ಯ ಮಾತುಗಳ ಬಗ್ಗೆ ಕೇಳಿದಾಗ ಉಲ್ಲಾಸಗೊಂಡು ನಾನು ನಕ್ಕು ಸಂತೋಷ ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಬೇಂದ್ರೆ ಬಡತನದಲ್ಲಿ ಬೆಂದವರು. ಸಾವು ನೋವುಗಳ ಬೆಂಕಿಯಲ್ಲಿ ಬೆಂದವರು. ಎದೆಯುದ್ದದ ಮಗನನ್ನು ಕಳೆದುಕೊಂಡಾಗ ,
“ಸತ್ತ ದಶರಥಗಾಗಿ ಅತ್ತನಾರಾಮನಾಕ್ಷಣ
ಇದ್ದ ದಶರಥ ಅತ್ತೆ ಅಳುವನು ಹೋದ ರಾಮನಿಗಾಗಿ ಕ್ಷಣಕ್ಷಣ.”
ಹುಟ್ಟಿದ ಗಂಡುಮಗುವು ಹುಟ್ಟುವಾಗಲೇ ಸಾವನ್ನಪ್ಪಿತು. ದ.ರಾ.ಬೇಂದ್ರೆಯವರನ್ನು ಅವರ ಹೆಂಡತಿ ಕರುಳು ಇರಿಯುವಂತೆ ನೋಡಿದಾಗ ಹೊರಬಿದ್ದ ಹಾಡು,
“ನೀ ಹೀಂಗೆ ನೋಡಬೇಡ ನನ್ನ!
ನೀ ಹೀಂಗೆ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗೆ ನೋಡಲೇ ನಿನ್ನ.
ಮಲಗಿರುವ ಕೂಸು ಮಲಗಿರಲಿ ಅತ್ತ
ಮುಂದಿನದು ದೇವರ ಚಿತ್ತ
ಹೀಗೆ ಭಾವನೆಗಳನ್ನು ಹೊರಹೊಮ್ಮಿಸುವ ಕವಿಯನ್ನು ದೇಶದ ಸ್ವಾತಂತ್ರ್ಯ ಹೋರಾಟದ ಬಿಸಿಯೂ ತಾಕಿತು. ಬರೆದರು ’ನರಬಲಿ’ ಎಂಬ ದೇಶಭಕ್ಥಿ ಗೀತೆ.
“ಯಾರು ನಮ್ಮ ಅರಿತರೇನು? ಯಾರು ನಮ್ಮ ಮರೆತರೇನು?
ತವರೂರು ತಮ್ ತಮಗೆ ತಾನೆ ಚಂದ
ಕಟ್ಟಿಕೊಡುವುದಲ್ಲ, ಬಿಚ್ಚಿ ಬಿಡುವುದಲ್ಲ
ಹೊಕ್ಕಳಿನ ಹುರಿಯಂಥ ಭಾವ ಬಂಧ.”
ಈ ದೇಶಭಕ್ತಿ ಗೀತೆ ಇವರನ್ನು ಸೆರೆವಾಸಕ್ಕೆ ನೂಕಿತಲ್ಲದೇ ಸೆರೆಯಿಂದ ಹೊರಬಂದ ನಂತರ ನಿರುದ್ಯೋಗದ ಸಮಸ್ಯೆಯನ್ನೂ ಎದುರಿಸುವಂತಾಯಿತು.
“ನರಬಲಿ ಕವನವು ಬಲಮಾಡಿತೆನ್ನನು,
ಹೆಳವನಿದ್ದಲ್ಲಿಗೆ ಹೊಳೆ ಬಂದಿತು,
ಮನೆಯನ್ನು ಮುರಿಯಿತು”
ಎಂದು ಹಾಡಿಕೊಂಡರು. ನೋವಿನನುಭವ ಸಾಕು. ಇನ್ನು ಕೆಲವು ನಲಿವಿನನುಭವಗಳ ಕಡೆ ಗಮನ ಹರಿಸೋಣ.
ದ.ರಾ.ಬೇಂದ್ರೆಯವರ ಬುದ್ಧಿ ಬಹಳ ಚುರುಕು. ಮಾತು ಬಹಳ ಪ್ರಿಯ. ಸ್ನೇಹ ಪ್ರೀತಿಗಳಿಗ ಬಹಳ ಬೆಲೆ ಕೊಡುತ್ತಿದ್ದರು. ಎನ್.ಕೆ. ಎಂದೇ ಪ್ರಸಿದ್ದರಾಗಿರುವ ಸಾಹಿತಿ ನಾರಾಯಣ್ ರವರು ಇವರ ಆಪ್ತ ಗೆಳೆಯರು. ಇಬ್ಬರೂ ಮಾತನಾಡುವಾಗ ಪದಗಳನ್ನು ಚಮತ್ಕಾರದಿಂದ ಬಳಸುತ್ತಿದ್ದರು. ಒಮ್ಮೆ ದ.ರಾ.ಬೇಂದ್ರೆಯವರು ಎನ್ಕೆಯವರ ಮನೆಗೆ ಹೋದಾಗ ಹೊಸಲು ತುಳಿಯುವಾಗಲೇನೇ, “ಎನ್ಕೇ ನಿನ್ನ ಅರೀಲಿಕ್ಕೆ ಬಂದೀನಿ ನಾನು” ಅಂದರು. ಅದಕ್ಕೆ ಎನ್ಕೇಯವರು ನಗುತ್ತಲೇ, “ಬರ್ರಿ ಮಾಸ್ತರೇ ನಾನೂ ನಿಮ್ಮನ್ನು ಅರೀಲಿಕ್ಕೆ ಕೂತೀನಿ” ಅಂದರು. ಇಲ್ಲಿ ಇಬ್ಬರೂ ಅರೀಲಿಕ್ಕೆ ಎಂಬ ಪದದ ಎರಡು ಅರ್ಥಗಳೂ ಹೊಂದುವಂತೆ pun ಮಾಡಿ ಬಳಸಿರುವುದು ಮನಸ್ಸಿಗೆ ಮುದ ಕೊಡುವ ವಿಚಾರ. ಹೀಗೇನೇ ಒಮ್ಮೆ ಕೆಲವು ಗೆಳೆಯರು ಬೇಂದ್ರೆಯವರನ್ನು ಎನ್ಕೇಯವರ ಮನೆಯಲ್ಲಿ ಬಿಟ್ಟು ಬೇರೆ ಎಲ್ಲೋ ಸ್ವಲ್ಪ ಕೆಲಸ ಮುಗಿಸಿ ಬರುತ್ತೇವೆ ಎಂದು ಹೇಳಿ ಹೋದರು. ಆಗ ಎನ್ಕೇಯವರ ಪತ್ನಿಯವರು ಇವರಿಗೆ ತಂಬಿಟ್ಟು ತಂದುಕೊಟ್ಟರಂತೆ. ಗೆಳೆಯರು ಬಂದಾಗ, “ನೀವು ನನ್ ಬಿಟ್ಟು ಹೋದ್ರಿ, ನಾನು ತಂಬಿಟ್ಟು ತಿಂದೆ” ಅಂತ ಹೇಳಿದರು. ಇಲ್ಲಿ ತಂಬಿಟ್ಟು ಎಂದರೆ ತಮ್ಮನ್ನು ಬಿಟ್ಟು ಎಂಬ ಇನ್ನೊಂದು ಅರ್ಥವೂ ಕಂಡು ಗೆಳೆಯರು, “ಈಗ ನಾವೂ ತಂಬಿಟ್ಟು ತಿಂತೇವೆ” ಎಂದು ನಕ್ಕರಂತೆ. ಹೀಗೆ ಪದಗಳನ್ನು ಚಮತ್ಕಾರದಿಂದ ಬಳಸಿ pun ಮಾಡಿ ಮಾತಾಡೋದ್ರಲ್ಲಿ ನಿಪುಣರು ಬೇಂದ್ರೆಯವರು. ಇವರಿಗೆ ಮೈಸೂರು ವಿಶ್ವ ವಿದ್ಯಾನಿಲಯ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಕೊಟ್ಟು ಗೌರವಿಸಿದವು. ಆಗ ಅಲ್ಲಲ್ಲಿ ಅಪಸ್ವರದ ಮಾತುಗಳು ಎದ್ದವಂತೆ. ಅದನ್ನು ಗಮನಿಸಿದ ಬೇಂದ್ರೆಯವರು, “ ಈ universityಯವರು ಕೊಡಕ್ಕೆ ಮುಂಚೆ ನಮ್ಮ ತಂದೆ ತಾಯಿನೇ ನಾನು ಹುಟ್ಟುವಾಗಲೇ ಡಾಕ್ಟರೇಟ್ ಕೊಟ್ಟಿದಾರೆ. ಹೇಗೇಂತೀರಾ? ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದ್ರೆ DR ಬೇಂದ್ರೆ. ನೀವು ಡಾಕ್ಟರ್ ಅನ್ನಲಿಕ್ಕೂ DR ಹಾಕ್ತೀರಿ ಹೌದಲ್ಲೋ?” ಅಂತ ಕೇಳಿದರಂತೆ. ಹೀಗೆ ಪದಗಳ ಶ್ಲೇಷೆ ಚಮತ್ಕಾರದ ಮಾತುಗಳ ಜೊತೆಗೆ spontaneous ಆಗಿ ಆಕ್ಷಣದಲ್ಲಿ ನಗೆಚಟಾಕಿ ಹಾರಿಸಿ ಮಾತನಾಡುವುದರಲ್ಲೂ ನಿಸ್ಸೀಮರು. ಅವರ ಕವಿತಗಳಲ್ಲಿ ಹಾಸ್ಯ, ವಿಡಂಬನೆಯೊಂದಿಗೆ ಗಹನವಾದ ವಿಚಾರಗಳ ಮಾಲೆಯೂ ಇರುತ್ತವೆ. ಬದುಕಿನ ಬವಣೆಗಳಿವೆ. ಪ್ರೀತಿ, ಪ್ರೇಮ ವಿರಹ ಗೀತೆಗಳೂ ಇವೆ. ಅವರ ಪ್ರಕ್ರುತಿಯ ವರ್ಣನೆಯ ಸೊಬಗಂತೂ ದಂಗು ಬಡಿಸುವಂತಹುದು.
’ಕುಣಿಯೋಣು ಬಾರಾ’ ಬೇಂದ್ರೆಯವರ ಜನಪ್ರಿಯ ಗೀತೆ. ಕುಣಿಯುವುದಕ್ಕೆ ಅಂದರೆ ಸಂತೋಷವಾಗಿರುವುದಕ್ಕೆ ಮನಸ್ಸು ಬೇಕು ಅಷ್ಟೆ. ಎಂತಹಾ ತಾಪತ್ರಯವಿದ್ದರೂ ಕುಣಿದು ಎಲ್ಲಾ ಮರೆಯೋಣ. “ತಾಳ್ಯಾಕಾ ತಂತ್ಯಾಕಾ ರಾಗಾದ ಚಿಂತ್ಯಾಕಾ ಹೆಜ್ಯಾಕಾ ಗೆಜ್ಯಾಕಾ ಕುಣಿಯೋಣು ಬಾ.” ಇದರರ್ಥ ಇಲ್ಲ ಸಲ್ಲದ Rules regulationsನ್ನು ಹಾಕಿ ನಮ್ಮ ಮನಸ್ಸಿಗೆ ಬೇಲಿ ಹಾಕಿಕೊಂಡು ಗಂಭೀರ ಮುದ್ರೆ ಹಾಕಿಕೊಂಡು ಸಂತೋಷವನ್ನು ಹಾಳು ಮಾಡಿಕೊಳ್ಳಬಾರದು ಅಂತಾನೇ ಅಲ್ವೇ? ಬಡತನದ ಬಗ್ಗೆ ಒಂದು ವ್ಯಂಗ್ಯ ನುಡಿ ಹೀಗಿದೆ ನೋಡಿ,
ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ
ಇದ್ರೆ ಒಂದು ಬ್ರೆಡ್ ತಾ
ಮ್ಯಾಲೆ ಅದಕೆ ಬೆಣ್ಣೆ ತಾ
ಇಲ್ಲಾ? ಹೋಗ್ಲಿ ಎಣ್ಣೆ ತಾ
ಹಾಕು ಮೇಲೆ ಖಾರದಪುಡಿ
ಹೊಟ್ಟೆ ತುಂಬಾ ಅದನ್ನು ಜಡಿ!
ಒಮ್ಮೆ ಒಂದು ನಾಟಕ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದರು. ಇಂಟರ್ವೆಲ್ ನಲ್ಲಿ ಹೊರಗೆ ಹೋಗಿದ್ದ ಅವರು ಮತ್ತೆ ಥಿಯೇಟರ್ ಒಳಗೆ ಹೋಗುವಾಗ ಅವರನ್ನು ಬಾಗಿಲು ಕಾಯುವವನು ಅಲ್ಲೇ ತಡೆದು ನಿಲ್ಲಿಸಿಬಿಟ್ಟನಂತೆ. ನಾನು ಬೇಂದ್ರೆ ಕಣಪ್ಪಾ ಅಂದ್ರೂ ಬಿಡಲಿಲ್ಲವಂತೆ. ಅವರು ಹಾಗೆಂದಾಗ ಆ ಬಾಗಿಲು ಕಾಯುವವ, “ನಿನ್ನ ಗಡ್ಡ ಏನು? ನಿನ್ನ ಮುಖಏನು? ಬೇಂದ್ರೆಯವರೆಲ್ಲಿ? ನೀನೆಲ್ಲಿ?” ಎಂದು ಹೇಳಿದಾಗ ಬೇಂದ್ರೆಯವರು ಅವಾಕ್ಕಾದರು. ಅವರು ಹೊರಗೆ ಹೋದಾಗ ಇದ್ದ ವ್ಯಕ್ತಿ ಹೋಗಿ ಅವರು ಒಳಗೆ ಬರುವ ಹೊತ್ತಿಗೆ ಬೇರೆ ವ್ಯಕ್ತಿ ಬಂದಿದ್ದ. ಅವನಿಗೆ ಬೇಂದ್ರೆಯವರ ಮುಖ ಪರಿಚಯ ಇರಲಿಲ್ಲ. ತಕ್ಷಣ ಬೇಂದ್ರೆಯವರು, “ಇಲ್ಲಪ್ಪಾ ನಾ ಬೇಂದ್ರೆಯವರ ಪೈಕಿ ಜನ..” ಅಂತ ರಾಗ ಎಳೆದರಂತೆ. ಇವರು ಬೇಂದ್ರೆ ಕಡೆಯವರು ಎಂದು ಇನ್ನೂ ಯಾರೋ ಹೇಳಿದರಂತೆ ಆಗ ಆವ್ಯಕ್ತಿ ಇವರನ್ನು ಗೌರವದಿಂದ ಒಳಗೆ ಬಿಟ್ಟನಂತೆ. “ನೀನ್ ಯಾಕೋ ನಿನ್ನ ಹಂಗ್ಯಾಕೋ? ನನ್ನ ನಾಮದ ಬಲವೊಂದಿದ್ದರೆ ಸಾಕೋ” ಪುರಂದರ ದಾಸರು ಹಾಡಿದಂತೆ ತನ್ನ ನಾಮ ಬಲದಿಂದ ಬೇಂದ್ರೆಯವರು ಒಳಗೆ ಹೋಗಲು ಸಾಧ್ಯವಾಯಿತು.
’ಬೆಂದ್ರೆ ಬೇಂದ್ರೆ ಆದಾನು’ ಎಂಬ ನುಡಿ ಇದೆ. ಆದ್ರೆ ಬೆಂದವರೆಲ್ಲಾ ಬೇಂದ್ರೆ ಆಗಲು ಸಾಧ್ಯವೇ? ನೊಂದು ಬೆಂದವರ ಪ್ರತಿನಿಧಿಯಾಗಿ ಬೇಂದ್ರೆಯವರು ನಿಂತು ಬದುಕಿನ ಬಗ್ಗೆ ಸಾರಿದ ನುಡಿಗಳು,
“ರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ”
ಎಂಬ ಸಾರ್ವ ಕಾಲಿಕ ಸಂದೇಶ ನಮ್ಮ ಮುಂದಿದೆ.
73ನೇ ಸಾಹಿತ್ಯ ಸಮ್ಮೇಳನ ಶಿವಮೊಗ್ಗೆಯಲ್ಲಿ ನಡೆದಾಗ ನಾನು ಬೇಂದ್ರೆಯವರ ಎಲ್ಲಾ ಕವನ ಸಂಕಲನಗಳ volumes ಔದುಂಬರ ಗಾಥೆ ಕೊಂಡುಕೊಂಡೆ. ಅದನ್ನು ಮನೆಗೆ ಹೊತ್ತು ತಂದ ನನ್ನವರು “ಬೇಂದ್ರೆಯವರ ಕವನಗಳು ಒಳ್ಳೆ ವಜನು ಇವೆ” ಎಂದು ಬೇಂದ್ರೆಯವರಂತೆ pun ಮಾಡಿ ಹೇಳಿ ಬೆವರು ಒರೆಸಿಕೊಂಡಾಗ ನನಗೆ ಬೇಂದ್ರೆಯವರೇ ಎದುರಿಗೆ ಬಂದು ನಿಂತಂತೆ ಭಾಸವಾಯಿತು.

~.~
  • Login or register to post comments
  • 122 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮನ ತುಂಬಿದ ಕವಿ
  • ಬೇಂದ್ರೆಯವರ ಹಾಸ್ಯ ಮನಸ್ಸು
  • ನೀನು ಹಾಡುತ್ತಿರುವ ತನಕ ನೀನೇ ಒಂದು ಹಾಡು
  • ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ
  • ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?
  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator