ನಮ್ಮ ಬೆಂದಕಾಳೂರು
ರಾಜ್ಯ ಕೊಲ್ಲೋ ರಾಜಕಾರಣಿಗಳಿಗೆ ರಾಜ್ಯಭಾರಿ ದೇವಸ್ಥಾನ
ಲಂಕೆ ಸುಟ್ಟ ದೇವರಿಗಿಲ್ಲಿ ಪಾದ ತಾನೆ ಕಾದೆ ಮೌನ
ವಿಸ್ಮಯ ಜಾದೂ ನಗರಿ
ಇದಕ್ಕೆ ಭುವಿಯು ಚಾಟಿ ಇಲ್ಲದ ಬುಗರಿ
ಕೆಂಪೇಗೌಡರ ವೀದಿಯ ಮೇಲೆ ನಮ್ಮ ಗೌಡರ ಚಿತ್ರ ಮೇಳ
ಬೇಸರ ವೆತ್ತ ಮಕ್ಕಳಿಗೋ ದೂಮಪಾನದ ನಶೆಯ ಶೀಲ
ವಿಸ್ಮಯ ಜಾದೂ ನಗರಿ
ಇದಕ್ಕೆ ಭುವಿಯು ಚಾಟಿ ಇಲ್ಲದ ಬುಗರಿ
ಸೂರ್ಯನ ಮುಂಚೆ ಮೆಲ್ಲನೆ ಹುಟ್ಟಿ ಪರದಾಡೋ ಜನಗೊಳ
ದಿನದ ಮಡಿಲಲ್ಲೋ ಜೋರನೆ ವಾಹನಗಳ ಕೋಲಾಹಲ
ವಿಸ್ಮಯ ಜಾದೂ ನಗರಿ
ಇದಕ್ಕೆ ಭುವಿಯು ಚಾಟಿ ಇಲ್ಲದ ಬುಗರಿ
- ಸುಬ್ಬಿ

- Login or register to post comments
- 148 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: