ಹಣದುಬ್ಬರ - ಕೆಲವೊಂದು ಕಿವಿ ಮಾತು
ಗೆಳೆಯರೇ, ನಿಮಗೀಗಾಗಲೇ ತಿಳಿದಿರುವಂತೆ, ಇನಫ್ಲೇಶನ್ ಎರಡಂಕಿಯನ್ನು ದಾಟಿದೆ. ಇದಕ್ಕೆ ಹಲವು ಕಾರಣಗಳಿದೆ. ದೇಶದ ಈ ಆರ್ಥಿಕ ಸಂಕಷ್ಟದ ಸಮಯದಲ್ಲಿ ಕೆಲವೊಂದಷ್ಟು ಸರಳ ಸೂತ್ರಗಳನ್ನು ಪಾಲಿಸೋಣ.(*)
ಈ ಹಣದುಬ್ಬರ ಜಾಸ್ತಿಯಾದಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಮುಖ್ಯವಾಗಿ ಎಣ್ಣೆ, ಬೇಳೆ ಕಾಳುಗಳು, ದಿನಸಿಗಳು. ಇದರ ಬಿಸಿ ಮೊದಲು ತಟ್ಟೋದು ಹೊಟೇಲುಗಳಿಗೆ ಮತ್ತು ಬೇಕರಿಗಳಿಗೆ. ಹಾಗಾಗಿ, ಹೊಟೇಲುಗಳು, ಖರ್ಚನ್ನು ಸರಿದೂಗಿಸಲು, ಕಳಪೆ(**) ಗುಣಮಟ್ಟದ ವಸ್ತುಗಳನ್ನು ಬಳಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಮುಂದಿನ ಕೆಲವು ವಾರಗಳು (ಅಥವಾ ತಿಂಗಳುಗಳು ???, ಹಾಗಾಗದಿರಲಿ ಅಂತ ಆಶಿಸೋಣ) ಮನೆಯ ಹೊರಗಡೆ ತಿನ್ನುವಾಗ ಸ್ವಲ್ಪ ಜಾಗರೂಕರಾಗಿರೋಣ.
೧. ತೆರೆದಿಟ್ಟ ತಿನಿಸುಗಳಿಗಿಂತ ಆದಷ್ಟು ಪ್ಯಾಕ್ ಮಾಡಿದ ಒಣತಿನಿಸುಗಳು ಉತ್ತಮ.
೨. ಎಣ್ಣೆ ಪದಾರ್ಥಗಳಾದ ಗೋಬಿ ಮಂಚೂರಿ, ಬೋಂಡ, ಪೂರಿ, ದೋಸೆಗಳನ್ನು, ಚನ್ನಾ ಬತೂರಾಗಳನ್ನು ಆದಷ್ಟು ದೂರವಿಡೋಣ.
೩. ಮುಖ್ಯವಾಗಿ ಬೇಕರಿ ತಿನಿಸುಗಳಾದ, ಪಪ್ಸು, ಪಲ್ಯ ಬನ್, ಬ್ರೆಡ್ ಟೋಸ್ಟ್ ಇವುಗಳನ್ನು ಅವಾಯ್ಡೋಣ.
೪. ಹೊಟೇಲುಗಳಲ್ಲಿ ಸಿಹಿತಿನಿಸುಗಳನ್ನು ಮೆಲ್ಲುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು. ಸಕ್ಕರೆ ಪಾಕವನ್ನು ಯಾವ ರೀತಿ ಮಾಡಿರುತ್ತಾರೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ.
೪. ಗೆಳೆಯರು/ಕೊಲೀಗ್ಸು ಒಂದೇ ಕಡೆ ಕೆಲಸಕ್ಕೆ ಹೋಗುವುದಿದ್ದರೆ, ಆದಷ್ಟು ಒಟ್ಟಿಗೇ ಹೋಗುವ, ಬರುವ ಸಮಯಗಳನ್ನು ರೂಢಿಮಾಡಿಕೊಳ್ಳೋಣ. ಇದರಿಂದ ತುಂಬಾ ಮುಖ್ಯವಾದ ಪೆಟ್ರೋಲ್ ಉಳಿತಾಯವಾಗುತ್ತದೆ. ತೈಲಬೆಲೆ ೧೪೦ ಡಾಲರ್/ಬ್ಯಾರೆಲ್ ಆಸುಪಾಸಿನಲ್ಲಿದೆ.
೫. ಮಹಾನಗರಗಳಲ್ಲಿರುವ ಈಗಿನ ಒಟ್ಟಾರೆ ಮಧ್ಯಮವರ್ಗ ಅಗತ್ಯಕ್ಕಿಂತ ಹೆಚ್ಚಿನ ಖರ್ಚುಮಾಡುತ್ತಿರುವುದು ಹಣದುಬ್ಬರಕ್ಕೆ ಮತ್ತೊಂದು ಕಾರಣವಿರಬಹುದು. ಕಡೇಪಕ್ಷ ಈಗಲಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು, ಅಗತ್ಯವಿಲ್ಲದ ಖರ್ಚುಗಳನ್ನು ಮಾಡುವುದು ಬೇಡ. ಇನಫ್ಲೇಶನ್ ೧೧ರ ಆಸುಪಾಸಿನಲ್ಲಿರುವುದು ಎಂಥದ್ದೇ ದೇಶದ ಪ್ರಗತಿಗಾದರೂ ಮಗ್ಗುಲಮುಳ್ಳೇ.
* - ಈ ಸೂತ್ರಗಳನ್ನು, ಯಾವಾಗಲೂ ಪಾಲಿಸಬೇಕು. ಆದರೆ ಈಗ ಇವುಗಳ ಪ್ರಸ್ತುತತೆ ತುಂಬಾ ಹೆಚ್ಚಿದೆ.
** - ಎಲ್ಲ ಹೊಟೇಲುಗಳೂ, ಬೇಕರಿಗಳೂ ಈ ರೀತಿ ಇರುತ್ತವೆ ಅಂತಲ್ಲ. ಸಾರ್ವಜನಿಕರಾಗಿ ನಾವು ನಮ್ಮ ಎಚ್ಚರಿಕೆಯಲ್ಲಿರಬೇಕು ಅಂತ ಅಷ್ಟೇ.

- Login or register to post comments
- 501 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಹಣದುಬ್ಬರ - ಕೆಲವೊಂದು ಕಿವಿ ಮಾತು
ಕಿವಿಮಾತು ಛಂದೈತಿ..
ನನ್ನಿ ಸುನಿಲ.
-ಸುಶೀಲ್.
ಜಗದಲಿ ಎಲ್ಲವ ತಿಳಿಯುತಲಿ ನಾವು ತಿಳಿಯದಾದೆವು ನಮ್ಮನ್ನೆ!!
ಉ: ಹಣದುಬ್ಬರ - ಕೆಲವೊಂದು ಕಿವಿ ಮಾತು
http://www.indianexpress.com/res/i/mediumImages/M_Id_29377.gif
*ಅಶೋಕ್