ಸಾಹಿತ್ಯಪ್ರಿಯರ ಅನಿವಾರ್ಯ ಸಂಗಾತಿ
ಲಂಕೇಶ್ ವಾರವಾರವೂ ಬರೆಯುತ್ತಿದ್ದ ಟೀಕೆ-ಟಿಪ್ಪಣಿ ಮತ್ತು ಮರೆಯುವ ಮುನ್ನ ಕಲಂನ ಲೇಖನಗಳದೇ ಒಂದು ವೈಶಿಷ್ಟ್ಯವಿದೆ. ಲೇಖನದ ತಲೆಬರಹ ನೋಡಿದರೆ ಅದು ಯಾವುದೋ ರಾಜಕಾರಣಿಯ ಬಗ್ಗೆಯೋ, ವಿಜ್ಞಾನಿಯ ಕುರಿತೋ, ಧರ್ಮಗುರುವಿನ ಮೇಲೋ, ಕ್ರೀಡಾಪಟುವಿನ ವಿಷಯವೋ ಬರೆದಿದ್ದಾರೆ ಎನಿಸುವಾಗಲೇ ಅದು ಸಾಹಿತ್ಯ, ಮನುಷ್ಯನ ಆಳದ ವ್ಯಾಮೋಹಗಳು, ಅವನ ದುಗುಡ-ಆತಂಕಗಳು, ಭಾವುಕ ಕ್ಷಣಗಳು, ಭವಿಷ್ಯದ ಲೆಕ್ಕಾಚಾರಗಳು ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡು ಮನಸ್ಸಿಗೆ ತೆರೆಯುತ್ತಿದ್ದ ವಿಚಿತ್ರವಾದ ಒಂದು ವಿನ್ಯಾಸವೇನಿದೆ, ಅದು ಲಂಕೇಶ್ಗೆ ವಿಶಿಷ್ಟವಾದದ್ದು. ಲಂಕೇಶರ ವ್ಯಾಪಕವಾದ ಓದು, ಅವರು ಮನುಷ್ಯನ ಕುರಿತು ಇರಿಸಿಕೊಂಡಿದ್ದ ಸಮಗ್ರವಾಗಿದ್ದ ನಿಲುವು, ಅಪ್ಪಟವಾಗಿದ್ದ ಅಭಿರುಚಿ, ಪ್ರತಿಯೊಂದನ್ನೂ ತುಸು ಅನುಮಾನದಿಂದಲೇ ಸಮೀಪಿಸುವ ಪರೀಕ್ಷಕನ ದೃಷ್ಟಿ ಮತ್ತು ತಾನೇನೂ ಪರಿಪೂರ್ಣ ಪುರುಷೋತ್ತಮನಲ್ಲ ಎಂಬ ಆತ್ಮಜ್ಞಾನದೊಂದಿಗೇ ತಕ್ಷಣಕ್ಕೆ ಅನಿಸಿದ್ದನ್ನು ದಾಖಲಿಸುತ್ತಿದ್ದೇನೆ ಎನ್ನುವ ಪರಿಜ್ಞಾನ ನೀಡಿದ ಸರಳತೆ ಈ ಲೇಖನಗಳ ಹಿಂದಿರುತ್ತಿದ್ದುದೇ ಇದಕ್ಕೆ ಕಾರಣವಿರಬೇಕು.
ಸಾಹಿತಿ ಸಾಹಿತ್ಯ ವಿಮರ್ಶೆ
ಪಿ. ಲಂಕೇಶ್ (ಸಂಯೋಜನೆ: ಡಾ.ವಿ.ಎಸ್.ಶ್ರೀಧರ)
ಲಂಕೇಶ್ ಪ್ರಕಾಶನ, ನಂ.9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು-560004. (ಪೋ:26676427)
ಪುಟಗಳು: 472+xxiii ಬೆಲೆ: ಮುನ್ನೂರು ರೂಪಾಯಿ.

- Login or register to post comments
- 225 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: