ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

June 30, 2008 - 11:38pm — ರೇಖಾ

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ.

ಸ್ವಲ್ಪ ಹೊತ್ತಿನ ನಂತರ ಕೋಪ ಇಳಿದಿರುತ್ತದೆ. ಮಾಡಿದ ಕೆಲಸ ನೆನೆದು ಮನಸ್ಸು ಮರುಗುತ್ತದೆ. ಎಂಥಾ ದಡ್ಡತನದ ಕೆಲಸ ಮಾಡಿದೆನಲ್ಲ ಎಂದು ಪಶ್ಚಾತ್ತಾಪ ಉಂಟಾಗುತ್ತದೆ. ಮಗುವನ್ನು ರಮಿಸುತ್ತೇವೆ. ಮಗುವೇನೋ ಬೇಗ ಮರೆತು ಮತ್ತೆ ನಗುತ್ತದೆ. ಆದರೆ ನಮಗೆ ಹಾಗೆ ತಕ್ಷಣ ಮನಸ್ಸು ಬದಲಾಯಿಸಿಕೊಳ್ಳಲು, ಮಾಡಿದ್ದ ತಪ್ಪನ್ನು ಮರೆತುಬಿಡಲು ಸಾಧ್ಯವಾಗುವುದಿಲ್ಲ.

ಏಕೆ ತಾಳ್ಮೆಗೆಡುತ್ತೇವೆ? ಮಗು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಲಿಲ್ಲ ಎಂಬ ಅಸಮಾಧಾನಕ್ಕೋ ಅಥವಾ ಅದು ನಾನು ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೋ? ಒಟ್ಟಿನಲ್ಲಿ ನಮ್ಮ ವಿವೇಕ ಕೈಕೊಟ್ಟಿರುತ್ತದೆ.

ಆದರೆ, ಇಂಥದೇ ಅಸಮಾಧಾನವನ್ನು ನಮಗಿಂತ ದೊಡ್ಡವರು ಅಥವಾ ನಮ್ಮ ಜೊತೆಗಿರುವವರು, ಅವರು ಬಂಧುಗಳಾಗಲಿ, ಗೆಳತಿಯರಾಗಲಿ ತೋರಿಸಿದರೆ ನಮ್ಮ ಮನಃಸ್ಥಿತಿ ಹೇಗಿರುತ್ತದೆ? ಮಕ್ಕಳಂತೆ ಅನಿಸಿಕೊಂಡಿದ್ದನ್ನು, ಬೈಸಿಕೊಂಡಿದ್ದನ್ನು ನಾವು ತಕ್ಷಣ ಮರೆಯಲಾರೆವು. ಹಾಗಾದರೆ, ಮಕ್ಕಳಿಗಿಂತ ನಾವು ಚಿಕ್ಕವರಾದ ಹಾಗೆ ಅಲ್ಲವೆ?

ಎಷ್ಟೋ ಸಾರಿ ಹೀಗೆ ಅಂದುಕೊಂಡಿದ್ದೇನೆ. ಮಕ್ಕಳ ಮೇಲೆ ರೇಗಬಾರದು. ಹಾಗಂತ, ಅವು ತೀರಾ ಮೊಂಡುತನದಿಂದ ವರ್ತಿಸಿದರೆ ಶಿಕ್ಷೆ ಕೊಡಬಾರದು ಎಂದಲ್ಲ. ಆದರೆ ನಮ್ಮ ಶಿಕ್ಷೆ ಸಿಟ್ಟಿನಿಂದ ಮೂಡಿರಬಾರದು. ಅದಕ್ಕೆ ವಿವೇಕದ ಕಡಿವಾಣ ಇರಬೇಕು. ಯೋಚಿಸಿ ಶಿಕ್ಷಿಸಿದರೆ ಅದರ ಫಲಿತಾಂಶ ಉತ್ತಮವಾಗುತ್ತದೆ.

ನನ್ನ ಉದ್ದೇಶ ಇಷ್ಟೇ, ನಮ್ಮ ಮಕ್ಕಳ ನಡವಳಿಕೆಗಳ ಬಗ್ಗೆ ತಾಳ್ಮೆಯ ಪ್ರತಿಕ್ರಿಯೆ ಇದ್ದಷ್ಟೂ ಒಳ್ಳೆಯದು. ಇದನ್ನು ಅಭ್ಯಾಸ ಮಾಡಿಕೊಂಡರೆ, ದೊಡ್ಡವರ ಜೊತೆಗೂ ನಾವು ಸಮಾಧಾನದಿಂದ ವರ್ತಿಸುವುದು ಸಾಧ್ಯವಾಗುತ್ತದೆ. ಆಗ ನಮ್ಮ ಮನಸ್ಸು ಹಿಡಿತಕ್ಕೆ ಬಂದು, ವಿವೇಕದಿಂದ ವರ್ತಿಸುವುದು ಸುಲಭವಾಗುತ್ತದೆ. ನಮ್ಮ ಮಕ್ಕಳು ನಮ್ಮ ಗುರುವಾಗುವುದು ಹೀಗೆ. ಮಕ್ಕಳು ಎಷ್ಟೇ ಚಿಕ್ಕವರಿರಲಿ, ಅವುಗಳಿಂದ ಕಲಿಯುವುದು ತುಂಬ ಇರುತ್ತದೆ.

ಅನುಮಾನ ಬಂದರೆ ಪರೀಕ್ಷಿಸಿ ನೋಡಿ. ಮುಗ್ಧ ಮಕ್ಕಳು ಕಲಿಸಿದಂತೆ ಪ್ರಬುದ್ಧ ವ್ಯಕ್ತಿ ಕಲಿಸಲಾರ. ಆದರೆ, ನಮಗೆ ಕಲಿಯುವ ಮನಸ್ಸಿರಬೇಕಷ್ಟೇ.

- ರೇಖಾ ಚಾಮರಾಜ

  • ಚಿಂತನೆ
~.~
  • Login or register to post comments
  • 293 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???
  • ಕೋಚ್ ಬೇಕೇ?
  • ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ
  • ಅಸೂಯೆ ಎಂಬ ತಡೆಗೋಡೆ...
Syndicate content

ಲೇಖಕರು

ರೇಖಾ's picture

ಪೂರ್ಣ ಹೆಸರು
ಗೌರಿ ಬ್ಲಾಗ್

ಪರಿಚಯ

ನನ್ನ ಮಗಳ ಹೆಸರಿನಲ್ಲಿ ಬರೆಯುತ್ತಿರುವ ಬ್ಲಾಗ್ ಇದು. ಇಲ್ಲಿ ಬರಲಿರುವ ಕೆಲವು ಬರಹಗಳು ತುಂಬ ಜನ ತಂದೆ-ತಾಯಿಗಳಿಗೆ ಸಹಾಯವಾಗಲಿ ಎಂಬುದು ನನ್ನ ಆಸೆ. ನನ್ನ ಮಗಳೊಂದಿಗೆ ಕಂಡ ಹೊಸ ಜಗತ್ತಿನ ಕುರಿತ ಬರವಣಿಗೆ ನನ್ನ ಉದ್ದೇಶ.

- ರೇಖಾ ಚಾಮರಾಜ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾರಂತರ ಜೀವಂತ ಪಾತ್ರಗಳು ೧೩ (೨)
  • ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
  • LTTE ಭಯೋತ್ಪಾದಕ ಸಂಘಟನೆಯಲ್ಲವೇ?
  • ಚಂದ್ರಮೌಳೇಶ್ವರ ದೇವಾಲಯ - ಹುಬ್ಬಳ್ಳಿ
  • ಗು೦ಡ ಮತ್ತು ಕತ್ತೆ!!!!!
  • ಕಾರಂತರ ಜೀವಂತ ಪಾತ್ರಗಳು ೧೩ (೧)
  • ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 498 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator