ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?

July 3, 2008 - 11:29am — harshavardhan v...

ನಾವೇಕೆ ಹೀಗೆ?

‘ಧಾರವಾಡ ಬಳಿಯ ಸುತಗಟ್ಟಿಯ ‘ಡಾನ್ ಬಾಸ್ಕೋ’ ಅಕಾಡೆಮಿಗೆ ಮಕ್ಕಳನ್ನು ಹೊತ್ತು ತರುತ್ತಿದ್ದ ಶಾಲಾ ಬಸ್ಸನ್ನು ಬೆನ್ನಟ್ಟಿ ಬಂದ ಪ್ರತಿಭಟನಾಕಾರರು ಎಡೆಬಿಡದೆ ಕಲ್ಲು ತೂರಿ ಎಲ್ಲ ಗಾಜು ಪುಡಿಗೊಳಿಸಿ, ಬಸ್ ಜಖಂಮಾಡಿದ್ದರೆ. ಬಿ.ವಿ.ಬಿ.ಇಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವಿ.ಟಿ.ಯು. ಸೆಮೆಸ್ಟರ ಪರೀಕ್ಷೆ ಬರೆಯಲಾಗದೇ ಸಾವಿರಾರು ವಿದ್ಯಾರ್ಥಿಗಳು ಬಾಗಿಲು ಕಾಯುತ್ತಿದ್ದಾರೆ’.

ಇದೀಗ ಬಂದ ಸುದ್ದಿ ಇದು.

ಕೊಲೆ ಮಾಡಿದವನ ಕೃತ್ಯದ ಹಿಂದಿನ ಉದ್ದೇಶವನ್ನು ಸಹ ನ್ಯಾಯಾಲಯ ಕೇಳದೇ ಶಿಕ್ಷೆ ವಿಧಿಸುವುದಿಲ್ಲ. ಆದರೆ ಪ್ರತಿಭಟನಾಕಾರರ ಉದ್ದೇಶ ವಿಚಾರಿಸುವವರ ಯಾರು? ಇವರು ಮಾಡಿದ್ದನ್ನೆಲ್ಲ ಪುರಸ್ಕರಿಸಬೇಕೆ? ಬಂದ್ ಕರೆ ನೀಡಿದವರಿಗೆ, ಸಂಘಟನೆಗಳ ತಲೆಗೆ ಆ ಜವಾಬ್ದಾರಿ ಕಟ್ಟುವ ಕೆಲಸ ಮೊದಲಾಗಬೇಕು. ಶಿಕ್ಷೆ ಸಹ ವಿಧಿಸುವಂತಾಗಬೇಕು. ಆಗ ಬಂದ್ ಗಳಿಗೆ ಮೌಲ್ಯ ಬಂದರೂ ಬರಬಹುದು.

ಇಲ್ಲದಿದ್ದರೆ,

ಬಡ ಕೂಲಿಕಾರರನ್ನು ಉಪವಾಸಕ್ಕೆ ತಳ್ಳಿ, ರೈತ ಮಹಿಳೆಯರನ್ನು ಅವರ ‘ಜೀವಾಂಮೃತ’ ಕಾಯಿಪಲ್ಲೆ ಸಮೇತ ಇಕ್ಕಟ್ಟಿನಲ್ಲಿ ಸಿಕ್ಕಿಸಿ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಪೀಕಲಾಟಕ್ಕೆ ಇಳಿಸಿ, ಪರೀಕ್ಷೆ ನಡೆಸ ಬೇಕಿರುವ ಪ್ರಾಧ್ಯಾಪಕರನ್ನು ದ್ವಂದ್ವದಲ್ಲಿ ಕೆಡವಿ, ರಸ್ತೆ ಬದಿಯ ಸಣ್ಣ-ಪುಟ್ಟ ವ್ಯಾಪಾರಸ್ಥರ ಹಾಗು ಅವರ ಮನೆಯವರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಸಿ, ಅಂದೇ ದುಡಿದು ಉಣ್ಣ ಬೇಕಿರುವ ರಟ್ಟೆಯ ಬಲದ ಕಾಯಕವೇ ಕೈಲಾಸ ಮಾಡಿಕೊಂಡಿರುವವರಿಗೆ ನರಕದ ದರ್ಶನ ಮಾಡಿಸಿ, ನನ್ನಂತಹ ದಿನಗೂಲಿ ಪ್ರಾಧ್ಯಾಪಕರ ನೌಕರಿಗೆ ಕುತ್ತು ತಂದು, ಜಮ್ಮು-ಕಾಶ್ಮೀರದ ಮುಖ್ಯ ಮಂತ್ರಿಗೆ ಇಲ್ಲಿಂದ ಚುರುಕು ಮುಟ್ಟಿಸುವ ಹೆಬ್ಬಯಕೆಯ ಜಾಣರಿಗೆ ಏನೆನ್ನುವುದು?

‘ಹಿಂದಿನ’ ವಿಶ್ವ ಹಿಂದು ಪರಿಷತ್ ನ ‘ಇಂದಿನ’ ಸಂಪೂರ್ಣ ಬಂದ್ ಕರೆ ಅದೆಷ್ಟು ಜನರ ರೊಟ್ಟಿ ಕಸಿಯಲಿಕ್ಕಿಲ್ಲ. ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲಿಕ್ಕಿಲ್ಲ. ಬೆಲೆ ಏರಿಕೆಯಿಂದ ಮೊದಲೇ ತತ್ತರಿಸಿರುವ ಮಧ್ಯಮ ವರ್ಗದ ನನ್ನಂತಹ ಲಕ್ಷಾಂತರ ಜನರ ಗಾಯಗಳ ಮೇಲೆ ಇದು ಅಕ್ಶರಶ: ಬರೆ. ಇದು ಸಾಂಕೇತಿಕವಾಗಿದ್ದರೆ ಗತ್ಯಂತರವಿಲ್ಲ. ನನ್ನ ಅಭ್ಯಂತರವೂ ಇಲ್ಲ. ಮಾಧ್ಯಮಗಳಲ್ಲಿ ಕೆಲವರು ಸುದ್ದಿಯಾಗಬೇಕು. ರಾಜ್ಯವ್ಯಾಪಿ, ರಾಷ್ಟ್ರವ್ಯಾಪಿ. ವಿದ್ಯುನ್ಮಾನ ಮಾಧ್ಯಮಗಳ ‘ಟಿಆರ್ ಪಿ’ ಕೂಡ ಹೆಚ್ಚಬೇಕು ಇಂತಹವರ ಪ್ರತಿಭಟನೆಗಳಿಂದ!ಸಂತೋಷ. ಸುದ್ದಿ ಮನೆಗಳಿಗೂ ಮುಖಪುಟ ತುಂಬಿಸಲು ಇಂತಹ ಸುದ್ದಿ-ಓದುಗನಿಗೆ ಗುದ್ದು ಇರಲೇಬೇಕು. ಇದರಿಂದ ಸಮಸ್ಯೆಗೆ ಪರಿಹಾರ ದೊರಕುವಂತಿದ್ದರೆ ಸುಂದರ. ಕೇವಲ ತೀಟೆ ತೀರಿಸಿಕೊಂಡಂತಾದರೆ.

ಉದಾಹರಣೆಗೆ ನಮ್ಮ ಧಾರವಾಡದಲ್ಲಿ ಪ್ರತಿಭಟನೆಗಳನ್ನೆ ವೃತ್ತಿಯನ್ನಾಗಿ ಸ್ವೀಕರಿಸಿದವರ ದೊಡ್ಡ ಮಿಲಿಟರಿ ಇದೆ. ಕೆಲವೊಮ್ಮೆ ಮಾಧ್ಯಮದವರ ಮಾರ್ಗದರ್ಶನವೂ ಅವರಿಗೆ ಲಭ್ಯ ಎನ್ನುವುದು ಈಗ ಗೌಪ್ಯವಾಗಿ ಉಳಿದಿಲ್ಲ! ಉದಾಹರಣೆಗೆ- ಧಾರವಾಡದ ಆಲೂರು ವೆಂಕಟರಾವ್ ವೃತ್ತ, ಕರ್ನಾಟಕದ ಕುಲಪುರೋಹಿತರ ಹೆಸರಿರುವ ಈ ‘ಜ್ಯುಬಿಲಿ ಸರ್ಕಲ್’ ಸದಾ ಧರಣಿ ಮಂಡಲ ಮಧ್ಯದೊಳಗೆ ಕಂಗೊಳಿಸಿತ್ತಿರುತ್ತದೆ! ಕಾರಣಗಳು ಸಾವಿರಾರು. ನೆಪಗಳು ನೂರಾರು. ಪರಿಣಾಮ ಸೊನ್ನೆ! ಶ್ರೀ ಸಾಮಾನ್ಯ ಅನುಭವಿಸಿದ್ದು ಅಯ್ಯೋ ನರಕ ಯಾತನೆ. ಇತ್ತೀಚಿನ ಹೊಸ ಬೆಳವಣಿಗೆ ಎಂದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗಿನ ಪ್ರತಿಭಟನಾಕಾರರಿಗಾಗಿಯೇ ಮೀಸಲಿರುವ ಖಾಯಂ ‘ಟೆಂಟ್’! ಸೋಮವಾರದಿಂದ ಭಾನುವಾರದ ವರೆಗೆ ಸರದಿಯ ಮೇಲೆ ಈ ಟೆಂಟ್. ಬಹುಶ: ಬಾಡಿಗೇಗೂ ಲಭ್ಯವಿದೆ ಎಂದು ಸುದ್ದಿ. ಆ ಟೆಂಟ್ ಮಾಲೀಕ ಕಳೆದ ತಿಂಗಳು ಕಾರು ಖರೀದಿಸಿದ್ದಾನೆ ಎಂಬುದು ಅನ್ ಆಫಿಸಿಯಲ್!

ಒಟ್ಟಾರೆ ಹೋರಾಟದ ಉದ್ದೇಶಗಳೇನು? ಪಾಲ್ಗೊಂಡ ಕೆಲವರಿಗಾದರೂ ಉದ್ದೇಶ ತಿಳಿದಿದ್ದರೆ ಪುಣ್ಯ. ಸುಖಾ ಸುಮ್ಮನೆ ಮಕ್ಕ್ಳನ್ನು, ಅವರ ಪಾಲಕರನ್ನು ಪೀಕಲಾಟಕ್ಕೆ ತಳ್ಳಿ, ರಾಜ್ಯ ವ್ಯಾಪಿ, ರಾಷ್ಟ್ರವ್ಯಾಪಿ ಸುದ್ದಿಯಾಗಿಸಲು, ಬಸ್ಸಿಗೆ ಬೆಂಕಿ ಹಚ್ಚಿ, ಪೊಲೀಸರನ್ನು ಪ್ರಚೋದಿಸಿ ದಾರಿಹೋವುಕನನ್ನು ಬಲಿಯಾಗಿಸಿ, ಅಮಾಯಕ ಸತ್ತು, ಜಾತಿ, ಅಧಿಕಾರ, ಹಿತಾಸಕ್ತಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರಿಗೆ ಇದರಿಂದ ಲಾಭವಿದೆ ಹೊರತು ಸಾರ್ವಜನಿಕ ಹಿತ ಸಾಧನೆ ಎಲ್ಲಿದೆ ಹೇಳಿ?

ಪ್ರತಿಭಟನೆ ಸಂವಿಧಾನಾತ್ಮಕವಾಗಿರಬೇಕು. ನ್ಯಾಯಯುತವಾಗಿರಬೇಕು. ಶಾಂತ ರೀತಿಯಿಂದ ನಡೆಯಬೇಕು. ಪ್ರಜಾಪ್ರಭುತ್ವ ಮಾದರಿಯಲ್ಲಿರಬೇಕು. ಸಾಂಕೇತಿಕವಾಗಿರಬೇಕು. ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ, ವಯೋ ವೃಧ್ಧರಿಗೆ, ಜ್ನಾನವೃಧ್ಧರಿಗೆ, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನಮ್ಮಿಂದ ತೊಂದರೆಯಾಗಬಾರದು. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆಯಾಗಬಾರದು. ಶಾಲಾ ಮಕ್ಕಳು ಭಯಭೀತರಾಗಿ ಅಪಾಯಕ್ಕೆ ಒಡ್ಡಿಕೊಳ್ಳುವಂತಾಗಬಾರದು. ಮೇಲಾಗಿ ಪ್ರತಿಭಟನೆ ನಡೆಸುವವರು ನಾಗರಿಕ ಸಮಿತಿಗಳ ಮುಂದೆ ವಿಷಯಗಳನ್ನು ಪ್ರಸ್ತಾಪಿಸಿ ಸಮುದಾಯದ ಬಲ, ಪರವಾನಿಗೆ ಪಡೆಯುವಂತಾಗಬೇಕು. ಸಾರ್ವಜನಿಕರ ಸಹಭಾಗಿತ್ವವಿಲ್ಲದೇ, ಜನಾಂದೋಲನವಾಗಿ ರೂಪುಗೊಳ್ಳದೇ, ಸ್ಫಷ್ಟ ರೂಪು-ರೇಷೆಗಳು ಸಿದ್ಧಗೊಳ್ಳದೇ ಪ್ರತಿಭಟನೆಗಳು ನಿಷ್ಚಿತ ಗುರಿ ತಲುಪಲು ಸಾಧ್ಯವಿಲ್ಲ. ಹೋರಾಟದ ನೇತೃತ್ವ ವಹಿಸುವ ಮುಂದಾಳುಗಳು ಸಾಮಾಜಿಕ ಜವಾಬ್ದಾರಿ ಹೊತ್ತು, ನೈತಿಕವಾಗಿ ಪ್ರಶ್ನಾತೀತರಾಗಿ ಮುನ್ನಡೆಸಬೇಕು.

ಇಲ್ಲದ್ದಿದ್ದರೆ.. ಎಲ್ಲವನ್ನೂ ಸಹಿಸಿರುವ, ಸಹಿಸುತ್ತಿರುವ..೬ಕ್ಕೆ ಏರದೇ ೩ಕ್ಕೆ ಇಳಿಯದೇ ಒದ್ದಾಡುತ್ತಿರುವ ಮಧ್ಯಮ ವರ್ಗದ ನನ್ನಂತಹ ‘ಸೆಕೆಂಡ್ ಕ್ಲಾಸ್ ಸಿಟಿಜನ್’ ನೀಯತ್ತಿನಿಂದ ದುಡಿದು ದೇಶದಲ್ಲಿ ಚಾಲ್ತಿಇರುವ ಎಲ್ಲ ‘ಟ್ಯಾಕ್ಸ್’ ಕಟ್ಟಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ..ಬಹುಶ: ಯಡಿಯೂರಪ್ಪನವರ ಸರಕಾರ, ಸರಕಾರಿ/ಅರೆ ಸರಕಾರಿ/ಖಾಸಗಿ/ಅನುದಾನಿತ/ಅನುದಾನ ರಹಿತ/ಶಾಶ್ವತ ಅನುದಾನರಹಿತ/ದಿನಗೂಲಿ/ಖಾಯಂ/ ಇತ್ಯಾದಿ..ಘೋಷಿತ/ಅಘೋಷಿತ ನೌಕರರಿಗೆ ಪರಿಹಾರ ಘೋಷಿಸಬೇಕಾದೀತು!

  • ಚಿಂತನೆ
~.~
  • Login or register to post comments
  • 249 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಘ್ನಸಂತೋಷಿಗಳ ಉಪಟಳ; ಪ್ರಜ್ವಲಿಸದ ದೀಪಗಳು!
  • ಬಂದ್
  • ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು
  • ಬೆತ್ತಲೆ ಪ್ರತಿಭಟನೆಯಲ್ಲ, Dog-Walk ಅಭ್ಯಾಸ !
  • ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.
Syndicate content

ಲೇಖಕರು

harshavardhan v.sheelavant's picture

ಪೂರ್ಣ ಹೆಸರು
harshavardhan v. sheelavant

ಪರಿಚಯ

Assistant Professor, Institute of Mass Communication and Research, Hubli. Freelance Journalist. a netizen having own blog- 'arivinamarevu.blogspot.com.' Karnataka Media Academy awardee. AIR grade artist. Centre for Agricultural Media (CAM) Fellow. Love to contribute feature articles, farm crisis, rural and agri life. Happy to teach journalism, to promote citizen journalism.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೇತುವೆ: ಕಾಫ್ಕಾ ಕಥೆ
  • ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
  • ’ಕಿಂಗ್ ಕತೆ’
  • ಅನರ್ಥಕೋಶ ೬
  • ನಾವು ಅದೆಷ್ಟು ಬಡವರು!
  • ಓ ಮನಸ್ಸೆ ನೀ ಏಕೆ ಇಷ್ಟು ಕಲ್ಲಾಗುವೆ ?....................
  • ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:11am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 151 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator