ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಲೇಖಕರು

jp.nevara's picture

ಪೂರ್ಣ ಹೆಸರು
ಜಯಪ್ರಕಾಶ ನೇವಾರ ಶಿವಕವಿ

ಪರಿಚಯ

ನನ್ನ ಹೆಸರು ಜಯಪ್ರಕಾಶ ನೇವಾರ ಶಿವಕವಿ, ಊರು ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜೈನಿ ಗ್ರಾಮ, ವಾಸ ಬೆಂಗಳೂರೆಂಬ ಬೆಂದಕಾಳೂರು, ಝೈಲೋಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನ್ನೊ ಸಂಸ್ಥೆಯಲ್ಲಿ ತಂತ್ರಾಂಷ ತಂತ್ರಜ್ಞನಾಗಿ ಕೆಲಸ, ಕವನ ಬರೆಯುವ ಮತ್ತು ಅನುವಾದಮಾಡುವುದು ನನ್ನ ಹವ್ಯಾಸ, ನನ್ನ ಜಿಮೈಲ್ ವಿಳಾಸ. jp.nevara@gmail.com
ಇದಿಷ್ಟು ನನ್ನ ಸ್ವ ಪುರಾಣ.

ಎಲೆ ಮರಗಳೇ ಕೇಳಿ

ಎಲೆ ಮರಗಳೇ ಕೇಳಿ
ಎಲೆ ಗಿಡಗಳೇ ಕೇಳಿ
ಕೊಲೆಗಡುಕ ಮಾನವರು
ಕರುಣೆ ಇಲ್ಲದ ಕಾಡು
ಕಲ್ಲೆದೆಯ ಜನರು
ಕಡಿಯುತಿಹರಲ್ಲಿ
ನಿಮ್ಮದೇ ಬಂಧುಗಳು

ಎಷ್ಟು ದಿನ ಈ ಮೌನ
ಎಷ್ಟ ದಿನ ಈ ಧ್ಯಾನ
ಬಾಯಿ ಇಲ್ಲದ ಜೀವ
ಬದುಕುವುದು ಬಲು ದುರಳ
ಬಾಯಿತೆರೆಯಿರಿ ನೀವು
ಬೆದರಿಕೆಯ ಹಾಕಿ

ನಿಮ್ಮಿಂದಲೇ ಉಂಡು
ನಿಮ್ಮಿಂದಲೇ ಬೆಳೆದು
ನಿಮ್ಮನ್ನೇ ಇಂದು
ನುಂಗುತಿಹರವರು

ಅರಿಯದಾದರು ಏಕೆ?
ಆ ಮೂರ್ಖ ಜನರು
ಅವರಂತೆ ನಿಮ್ಮದೂ
ಒಂದು ಬದುಕೆಂದು
ಅವರಂತೆ ನಿಮ್ಮದೂ
ಒಂದು ಬಾಳೆಂದು

ನಿಮ್ಮ ಬೆಲ್ಲದ ಬದುಕ
ಮುರಿದು ಮೆರೆದವರನ್ನು
ಶಪಿಸದಲೆ ನೀವುಗಳು
ಸುಮ್ಮನಿರುವಿರಿ ಏಕೆ?

ಎಂತೋ ಕಾದಿರಿ ನೀವು
ಒಂದಲ್ಲ ೊಂದು ದಿನ
ಇಂದಲ್ಲ ಮುಂದೊಮ್ಮೆ
ಬಂದೆ ಬರುವುದು ಈ
ಮಾನವಗೆ ಬುದ್ಧಿಯೆಂದು

ಸಾಕಿನ್ನು ಈ ಮೌನ
ಸಾಕಿನ್ನು ಈ ಧ್ಯಾನ
ಸಿದ್ಧರಾಗಿರಿ ನೀವು
ಕೊನೆಯ ಕದನಕ್ಕೆ

ನಿಮ್ಮದಿದು ನಿಮ್ಮದಿದು
ನಿಮ್ಮದೀ ಲೋಕ
ನಿಮ್ಮಿಂದಲೆ ನಿಮ್ಮಿಂದಲೆ
ನಿಮ್ಮಿಂದಲೇ ನಾಕ.

ಜಯಪ್ರಕಾಶ ನೇ ಶಿವಕವಿ.

No votes yet