ಎಲೆ ಮರಗಳೇ ಕೇಳಿ
ಎಲೆ ಗಿಡಗಳೇ ಕೇಳಿ
ಕೊಲೆಗಡುಕ ಮಾನವರು
ಕರುಣೆ ಇಲ್ಲದ ಕಾಡು
ಕಲ್ಲೆದೆಯ ಜನರು
ಕಡಿಯುತಿಹರಲ್ಲಿ
ನಿಮ್ಮದೇ ಬಂಧುಗಳು
ಎಷ್ಟು ದಿನ ಈ ಮೌನ
ಎಷ್ಟ ದಿನ ಈ ಧ್ಯಾನ
ಬಾಯಿ ಇಲ್ಲದ ಜೀವ
ಬದುಕುವುದು ಬಲು ದುರಳ
ಬಾಯಿತೆರೆಯಿರಿ ನೀವು
ಬೆದರಿಕೆಯ ಹಾಕಿ
ನಿಮ್ಮಿಂದಲೇ ಉಂಡು
ನಿಮ್ಮಿಂದಲೇ ಬೆಳೆದು
ನಿಮ್ಮನ್ನೇ ಇಂದು
ನುಂಗುತಿಹರವರು
ಅರಿಯದಾದರು ಏಕೆ?
ಆ ಮೂರ್ಖ ಜನರು
ಅವರಂತೆ ನಿಮ್ಮದೂ
ಒಂದು ಬದುಕೆಂದು
ಅವರಂತೆ ನಿಮ್ಮದೂ
ಒಂದು ಬಾಳೆಂದು
ನಿಮ್ಮ ಬೆಲ್ಲದ ಬದುಕ
ಮುರಿದು ಮೆರೆದವರನ್ನು
ಶಪಿಸದಲೆ ನೀವುಗಳು
ಸುಮ್ಮನಿರುವಿರಿ ಏಕೆ?
ಎಂತೋ ಕಾದಿರಿ ನೀವು
ಒಂದಲ್ಲ ೊಂದು ದಿನ
ಇಂದಲ್ಲ ಮುಂದೊಮ್ಮೆ
ಬಂದೆ ಬರುವುದು ಈ
ಮಾನವಗೆ ಬುದ್ಧಿಯೆಂದು
ಸಾಕಿನ್ನು ಈ ಮೌನ
ಸಾಕಿನ್ನು ಈ ಧ್ಯಾನ
ಸಿದ್ಧರಾಗಿರಿ ನೀವು
ಕೊನೆಯ ಕದನಕ್ಕೆ
ನಿಮ್ಮದಿದು ನಿಮ್ಮದಿದು
ನಿಮ್ಮದೀ ಲೋಕ
ನಿಮ್ಮಿಂದಲೆ ನಿಮ್ಮಿಂದಲೆ
ನಿಮ್ಮಿಂದಲೇ ನಾಕ.
ಜಯಪ್ರಕಾಶ ನೇ ಶಿವಕವಿ.

- Login or register to post comments
- 245 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಜಯಪ್ರಕಾಶ ನೇವಾರ ಶಿವಕವಿ
ಪರಿಚಯ
ನನ್ನ ಹೆಸರು ಜಯಪ್ರಕಾಶ ನೇವಾರ ಶಿವಕವಿ, ಊರು ಬಳ್ಳಾರಿ ಜಿಲ್ಲೆಯಲ್ಲಿರುವ ಉಜ್ಜೈನಿ ಗ್ರಾಮ, ವಾಸ ಬೆಂಗಳೂರೆಂಬ ಬೆಂದಕಾಳೂರು, ಝೈಲೋಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಅನ್ನೊ ಸಂಸ್ಥೆಯಲ್ಲಿ ತಂತ್ರಾಂಷ ತಂತ್ರಜ್ಞನಾಗಿ ಕೆಲಸ, ಕವನ ಬರೆಯುವ ಮತ್ತು ಅನುವಾದಮಾಡುವುದು ನನ್ನ ಹವ್ಯಾಸ, ನನ್ನ ಜಿಮೈಲ್ ವಿಳಾಸ. jp [dot] nevara [at] gmail [dot] com
ಇದಿಷ್ಟು ನನ್ನ ಸ್ವ ಪುರಾಣ.
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am



RSS: