ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಹೀಗೇ ಎಂದು ಬರಿ

July 4, 2008 - 11:19pm — ganeshpur

ತುಂಬ ದಿನಗಳ ನಂತರ ಬರೆಯಲು ಪ್ರಯತ್ನಿಸಿದರೆ ಬರೆಯಬೇಕು ಎಂದು ಅನ್ನಿಸುವ ವಿಷಯಗಳು ಮತ್ತು ಬರೆಯಬಾರದು ಎಂದು ಅನ್ನಿಸುವ ವಿಷಯಗಳ ನಡುವೆ ತಾಕಲಾಟ ಶುರುವಾಗುತ್ತದೆ. ಈ ತಾಕಲಾಟದಲ್ಲಿ ನಾವು ಎಷ್ಟು ಆತ್ಮವಂಚನೆ ಮಾಡಿಕೊಳ್ಳುತ್ತೇವೆ... ಇಂಥದ್ದನ್ನು ಬರೆಯಬಾರದು ಎಂದು ನಮ್ಮನ್ನು ನಾವು ನಿರ್ಬಂಧಿಸಿಕೊಳ್ಳುತ್ತೇವೆ... ಇಂಥದ್ದನ್ನು ಬರೆಯಲು ಹೋಗಿ ಅಂಥದ್ದನ್ನು ಬರೆದು ಮತ್ತೆ ಅದನ್ನು ಅಳಿಸಿಹಾಕಿ ಇಂಥದ್ದನ್ನೋ ಅಂಥದ್ದನ್ನೋ ಬರೆಯುತ್ತೇವೆ. ಈ ಪ್ರಕ್ರಿಯೆಯನ್ನು ತುಂಬ ಜನ `ಸೆಲ್ಫ್‌ ಎಡಿಟಿಂಗ್‌' ಎಂದೋ ಅಥವಾ ಇನ್ನೂ ಏನೇನೋ ಕರೆಯಬಹುದು.
ಆದರೆ `ಇಂಥದ್ದು' ಎಂಬುದನ್ನು ಹಾಗೇ ಒಪ್ಪಿಕೊಳ್ಳುವುದರಲ್ಲಿ ಇರುವ ಸಾರ್ಥಕತೆ `ಹೀಗಲ್ಲದಿದ್ದರೆ ಹೀಗೆ' ಎಂದು ಹೇಳುವುದರಲ್ಲಿ ಇಲ್ಲ. ಏಕೆಂದರೆ ಹೀಗಲ್ಲದಿದ್ದರೆ ಹೀಗೆ ಅಥವಾ ಹೀಗಾದರೆ ಹೀಗೆ ಎಂಬಂಥವುಗಳೆಲ್ಲ ಬೇಯಿಸಿದ ಆಲೂಗಡ್ಡೆಯಂಥವು. ಹೆಚ್ಚು ಹೆಚ್ಚು ಬೆಂದಂತೆ ರುಚಿ ಹೆಚ್ಚು ಎಂಬ ಭ್ರಮೆ ನಮ್ಮ ಆತ್ಮವನ್ನು ವ್ಯಾಪಿಸಿದೆ. ನಮ್ಮ ಜೀರ್ಣಾಂಗ ಬೇಯಿಸಿದ ಹೊಲಸಿಗೆ ಅಡಾಪ್ಟ್‌ ಆಗಿರುವಂತೆ ಮನಸ್ಸು ಅರೆಬೆಂದ, ಸರಿಯಾಗಿ ಬೆಂದ ಮತ್ತು ತೀರಾ ಹೆಚ್ಚು ಬೆಂದ ಚಿಂತನೆಗಳಿಗೆ ಮನಸ್ಸು ಹೊಂದಿಕೊಂಡಿದೆ.
ಬೇಯಿಸಿದ್ದನ್ನು ಪಕ್ವ ಎಂದುಕೊಳ್ಳುವವರೆಗೂ ಈ ಬೇಯಿಸುವ ಕ್ರಿಯೆ ಮುಂದುವರಿಯುತ್ತದೆ. ಇದು ಹೇಗಾಗುತ್ತದೆ ಎಂದರೆ ಗದ್ದೆ ಉಳುವುದೇ ಕೃಷಿ ಎಂಬಂತೆ-ಎಡಿಟಿಂಗ್‌ ಮಾಡುವುದೇ ಜರ್ನಲಿಸಂ ಎಂದ ಹಾಗೆ.
ನನಗೆ ಎಡಿಟ್‌ ಆಗದ ಕಂಟೆಂಟ್‌ ಬೇಕಾಗಿದೆ. ಅದು ಯಾವ ವಿಷಯಕ್ಕೂ ಇರಬಹುದು. ಬೇಕಾದರೆ ನಾನು ರಸ್ತೆ ಅಂಚಿಗೆ ಯಾರೂ ಇಲ್ಲದ ಸಮಯ ನೋಡಿ ಉಚ್ಚೆ ಹೊಯ್ದೆ ಎಂಬ ಸರಳ ವಿಷಯವೇ ಇರಬಹುದು. ಬಹುಶಃ ನಾನೇ ಬರೆದದ್ದಾದರೂ ಇರಬಹುದು. ಈ ವಿಷಯದಲ್ಲಿ ನನಗೆ ಬೇರೆಯವರ ಮೇಲೆ ವಿಶ್ವಾಸ ಕಡಿಮೆ.
ಯೋಚಿಸದೇ ತಕ್ಷಣ ಬರುವ ವಿಷಯಗಳನ್ನು ಒಂದು ಚಿಂತನೆಯ ರೂಪಕ್ಕೆ ತರಲು ಪ್ರಯತ್ನಿಸಬೇಡಿ. ಅದು ಮೂಲ ಸ್ವರೂಪದಲ್ಲಿ ಇರುವಂತೆ ಅದನ್ನು ಮನಸ್ಸಿನ ಮೇಲಕ್ಕೆ ತನ್ನಿ ಮತ್ತು ಅದನ್ನು ಹಾಗೇ ನೋಡಿ. ಆಕಾರ, ಗಾತ್ರ, ಡಿಗ್ರಿ ಆಫ್‌ ಸರ್ಟನಿಟಿ, ಅದರ ಹಿಂದಿನ ಮತ್ತು ಮುಂದಿನ ತರ್ಕ ಎಲ್ಲವೂ ಹಾಗೇ ಇರುವಂತೆ ನೋಡಿಕೊಳ್ಳಿ... ಮತ್ತು ಅದನ್ನು ನಿಮ್ಮೊಳಗೇ ಇಟ್ಟುಕೊಳ್ಳಿ. ಅದು ನಿಮ್ಮನ್ನು ನಿಮ್ಮಲ್ಲಿ ಪ್ರತಿಫಲಿಸಿ ನಿಮ್ಮಲ್ಲೇ ಹೂತುಹೋಗುವ ಮೊದಲು ಅದನ್ನು ಬರೆದುಬಿಡಿ.
ತುಂಬ ಹೊತ್ತಿನಿಂದ ಮೂತ್ರ ಕಟ್ಟಿಕೊಂಡು ಒಮ್ಮೆಲೇ ಮೂತ್ರ ಮಾಡಿದಾಗ ಆಗುವ ತೃಪ್ತಿ ನಿಮಗೆ ಬಂದರೆ ಅದನ್ನು ಬ್ರಹ್ಮಜ್ಞಾನಿಗಳು ಬ್ರಹ್ಮವೆಂತಲೂ ನ್ಯೂಸ್‌ ಪೇಪರ್‌ನಲ್ಲಿರುವವರು ಸ್ಕೂಪ್‌ ಎಂತಲೂ ಶಿಕ್ಷಕರು ರ್ಯಾಂಕ್‌ ಎಂತಲೂ ಟಿವಿ ನೈನ್‌ನವರು ಹಾಫ್‌ ಎನ್‌ ಆವರ್‌ ಪ್ರೋಗ್ರಾಂ ಎಂತಲೂ ಕರೆಯುತ್ತಾರೆ.
ಇರಲಿ,
ಇದು ಎಂದು ಅನ್ನಿಸಿದ್ದನ್ನು
ಇದು ಎಂದು ಗುರುತಿಸಿ

ಅದು ಎಂದು ಅನ್ನಿಸದೇ ಇರುವುದನ್ನು
ಅದು ಎಂದು ಬಿಂಬಿಸಬೇಡಿ
ಅದು ಅದಾಗಿದ್ದರೂ ಕೂಡ!

ಇದು ಮತ್ತು ಅದು
ಇದೇ ಆಗಲಿ ಅದೇ ಆಗಲಿ
ಆಗಿರುವುದಿಲ್ಲ
ಆದರೆ ನಿಮ್ಮೊಳಗಿನ
ನಿಜವಾದ ಸಂಘರ್ಷವಾಗಿರುತ್ತದೆ

ಹೀಗಾಗಿ-
ಇದನ್ನು ಇದಾಗಲು
ಅದನ್ನು ಅದು ಆಗದೇ ಇರಲು
ಬಿಡುವ ಮೂಲಕ-

ನೀವು ಏನನ್ನಾದರೂ ಸಾಧಿಸುತ್ತೀರಿ ಎಂದುಕೊಂಡರೆ ತಪ್ಪು.
ಏಕೆಂದರೆ- ಉಗುರು ಕಚ್ಚುವುದು ಎಂದಾದರೂ ಧ್ಯಾನವಾಗಿದ್ದರೆ, ನಾನು ಎಂದೋ ಝೆನ್‌ ಮುನಿಯಾಗಿಬಿಡುತ್ತಿದ್ದೆ!

  • ಝೆನ್ ಕಥೆಗಳು (ಕಥಾ ಮಾಲಿಕೆ)
~.~
  • Login or register to post comments
  • 202 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್
  • ನ|ನ|ಗೆ|ಗೊ|ತ್ತಿ|ಲ್ಲ|
  • ವಚನ ಚಿಂತನ: ೬: ಮನಸ್ಸು ಕೋತಿ
  • ಪತಂಜಲಿಯ ಯೋಗ : ಭಾಗ ೨
  • (ಆಲೋಚನೆ-ಭಾವನ-ಭಾಷೆ) ಇನ್ನೊಂದು ಒಬ್ಬೆ
Syndicate content

ಲೇಖಕರು

ganeshpur's picture

ಪರಿಚಯ

I am an experienced Journalist by proffession.
I have the experience of working with Vijaya karnataka, Udayawani and some other newspapers in kannada.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕಾಡುಕೋಳಿಯ ಜಾಡು ಹಿಡಿದು...
  • ಅನ್ ಸೈಕ್ಲೋಪೀಡಿಯಾ - (ವಿಷಯ)ಮುಕ್ತ ವಿಶ್ವಕೋಶ
  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
  • D.S.NAGABHUSHANA
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 8:37pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator