"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನನ್ನ ಹಳ್ಳಿ

ನನ್ನ ಹಳ್ಳಿ

ಹಳ್ಳಿಯ ಸೌಂದರ್ಯ ಸೊಬಗು

ಹಚ್ಚ ಹಸಿರಿನ ಕಾಂತಿಯ ಮೆರಗು

ದಟ್ಟವಾದ ಮರಗಳ ಸಾಲು

ಪ್ರಕೃತಿಯ ಉಳಿವಿಗೆ ಇದರ ಸವಾಲು

 

ತಣ್ಣನೆಯ ಗಾಳಿಯ ತಂಪು

ಸೊಗಸಾದ ಹಕ್ಕಿಯ ಧ್ವನಿಯ ಇಂಪು

ಸತ್ಯ ನಿಷ್ಟತೆಗೆ ಹೆಸರಾದ ಜನ

ಮೋಸವರಿಯದ ಮುಗ್ಧ ಜನ

 

ಅಜ್ಜಿಯು ಹೇಳುವ ಚೆಂದದ ಕಥೆ

ಮಾಸಿಹೋದ ನೆನಪುಗಳ ವ್ಯಥೆ

ಜನರಾಡುವ ಕಸ್ತೂರಿ ಕನ್ನಡ

ಕೇಳಲು ನಿಂತರೆ ಮಹಾದಾನಂದ

 

ಉಳಿದಿದೆ ಸಂಸ್ಕೃತಿಯ ಬೇರು

ಸರ್ವರೂ ಒಂದಾಗಿ ಬಾಳುವ ಊರು

ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ

ಸೌಂದರ್ಯ ಸಾರುವ ಶಾಂತಿಧಾಮದಲಿ

           -* ಮಾ.ಕೃ.ಮ*

No votes yet

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ