ವಿಧ: ಪುಸ್ತಕ ವಿಮರ್ಶೆ
March 18, 2024
“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಯಾವುದೇ ಕನ್ನಡ ಪಂಡಿತರಿಗೆ ಕಡಿಮೆಯಿಲ್ಲದ ಸಾಹಿತ್ಯ ಜ್ಞಾನ…
ವಿಧ: ಪುಸ್ತಕ ವಿಮರ್ಶೆ
March 17, 2024
ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.
ಲೇಖಕರ ಮಾತಿನಲ್ಲಿ ತೇಜಸ್ವಿಯವರು ಬರೆದಿರುವ ಈ ಮಾತುಗಳು ಗಮನಾರ್ಹ: "ಇಬ್ಬರು ಕಿರಿಯ ಮಿತ್ರರು “ಕಾಡಿನ ಕಥೆಗಳು” ಪುಸ್ತಕದ ಬಗ್ಗೆ ಪ್ರಸ್ತಾಪಿಸಿ, ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಭಾರತದ ಕಾಡುಗಳ ಬಗ್ಗೆ ಹೇಳಿರುವುದೆಲ್ಲ ಸುಳ್ಳೆಂದೂ, ಅವು ಕೇವಲ ಪಾಶ್ಚಿಮಾತ್ಯ ಓದುಗರ ಮನರಂಜಿಸಲು…
ವಿಧ: ರುಚಿ
March 17, 2024
ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಕಡಲೆಕಾಯಿ ಬೀಜ, ಹುರಿಗಡಲೆಗಳನ್ನು ಸೇರಿಸಿಡಿ. ಈ ಮಿಶ್ರಣಕ್ಕೆ ಇಂಗು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು, ಮೆಣಸಿನ ಹುಡಿ, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ ಕಾಯಿಸಿದ ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಗರಿ ಗರಿ ನಿಪ್ಪಟ್ಟು ರೆಡಿ.
ವಿಧ: ಪುಸ್ತಕ ವಿಮರ್ಶೆ
March 15, 2024
ಡಾ. ಸುರೇಶ ನೆಗಳಗುಳಿ ಅವರು ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಓರ್ವ ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ನೆಗಳಗುಳಿ ಅವರ ಗಜಲ್ ಎಂದರೆ ಬಹಳಷ್ಟು ಮಂದಿಯ ಮನ ಅರಳುತ್ತದೆ. ಏಕೆಂದರೆ ಮೂಲತಃ ಉರ್ದು ಭಾಷೆಯಲ್ಲಿನ ಒಂದು ಪ್ರಕಾರವಾದ ಗಜಲ್ ಗಳನ್ನು ಯಶಸ್ವಿಯಾಗಿ ಕನ್ನಡೀಕರಣಗೊಳಿಸಿದ್ದು ಇವರ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಗಜಲ್ ನ ಮೂಲ ಆಶಯ ಮತ್ತು ನಿಯಮಾವಳಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಇವರು ಗಜಲ್ ರಚನೆ ಮಾಡುತ್ತಾರೆ. ಸಾಮಾಜಿಕ ಜಾಲ ತಾಣಗಳ ಬಳಗಗಳಲ್ಲಿ ಇವರು ತಮ್ಮದೇ…
ವಿಧ: ರುಚಿ
March 14, 2024
ಹುರುಳಿಕಾಳುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಕಣ್ಣು (ತೂತು) ಪಾತ್ರೆಯಲ್ಲಿ ಹಾಕಿದಾಗ ನೀರೆಲ್ಲ ಬಸಿದು ಹೋಗುತ್ತದೆ.(ಅಂಗಡಿಯಿಂದ ತಂದದ್ದರಲ್ಲಿ ಕಲ್ಲು ಇರುತ್ತದೆ, ನೋಡಿಕೊಳ್ಳಬೇಕು) ಪರಿಮಳ ಮತ್ತು ರುಚಿಗಾಗಿ ಸ್ವಲ್ಪ ಹುರಿಯಬೇಕು. ಕುಕ್ಕರಿನಲ್ಲಿ ಎರಡು ಕಪ್ ಕಾಳುಗಳಿಗೆ ಐದು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ಖಾರಪುಡಿ ಹಾಕಿ ಬೇಯಲಿಟ್ಟು ಐದಾರು ವಿಸಲ್ ಕೂಗಿದಾಗ ಕೆಳಗಿಳಿಸಬೇಕು. ತಣಿದ ಮೇಲೆ ಪುನಃ ಕಣ್ಣು ಪಾತ್ರೆಯಲ್ಲಿ ಹಾಕಿ ನೀರನ್ನು ಬಸಿಯಬೇಕು. ಮನೆಮಂದಿಗೆ…
ವಿಧ: ಪುಸ್ತಕ ವಿಮರ್ಶೆ
March 13, 2024
ಉದಯೋನ್ಮುಖ ಕವಿ ವಿಶ್ವನಾಥ ಅರಬಿ ಇವರು ತಮ್ಮ ನೂತನ ಕವನ ಸಂಕಲನ ‘ಒಲವ ವೃಷ್ಟಿ' ಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಈ ಸಂಕಲನಕ್ಕೆ ವಿಶ್ವನಾಥ ಅರಬಿ ಇವರು ಬರೆದ ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ...
“ಮತ್ತೆ ತಮ್ಮೊಂದಿಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಸಿದ್ಧಗೊಂಡಿರುವ ಈ ಕವನ ಸಂಕಲನವನ್ನು ಒಪ್ಪಿ, ಅಪ್ಪಿಕೊಂಡು ಓದುತ್ತಿರುವ ಕನ್ನಡ ಮನಸ್ಸುಗಳಿಗೆ ನನ್ನ ಹೃದಯಂತರಂಗದ ಅನಂತ ಕೋಟಿ ನಮನಗಳು. ತಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಇಲ್ಲಿಯವರೆಗೆ ನನ್ನೆಲ್ಲ ಆರು ಕೃತಿಗಳು…
ವಿಧ: ಪುಸ್ತಕ ವಿಮರ್ಶೆ
March 11, 2024
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ ಸಂಪಾದಕರು ಡಾ ಎ ವಿ ನರಸಿಂಹಮೂರ್ತಿ. ಪ್ರಧಾನ ಸಂಪಾದಕರಾದ ಪ್ರಧಾನ್ ಗುರುದತ್ತ ಇವರು ತಮ್ಮ ಬೆನ್ನುಡಿಯ ಬರಹದಲ್ಲಿ ಈ ಕೃತಿಗಳನ್ನು ಹೊರತಂದ ಆಶಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಭುವನ್ಸ್ ಬುಕ್…
ವಿಧ: ರುಚಿ
March 10, 2024
ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ. ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಬೀಜಗಳನ್ನು ತೆಗೆದು ರುಬ್ಬಿದ ಮಸಾಲೆಯನ್ನು ತುಂಬಿ, ಕಡಲೆ ಹಿಟ್ಟು, ಅಕ್ಕಿಹಿಟ್ಟು, ಮೈದಾ ಹಿಟ್ಟುಗಳನ್ನು ಸೇರಿಸಿ ೨ ಟೀ ಚಮಚ ಬಿಸಿ ಎಣ್ಣೆ ಹಾಕಿ ಕಲಸಿ, ಸ್ವಲ್ಪ ನೀರು ಹಾಕಿ ಇಡ್ಲಿ ಹದಕ್ಕೆ ಕಲಸಿಡಿ. ಮಸಾಲೆ ತುಂಬಿದ ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಮಿಶ್ರಣದಲ್ಲದ್ದಿ ಕಾದ ಎಣ್ಣೆಯಲ್ಲಿ…
ವಿಧ: ಪುಸ್ತಕ ವಿಮರ್ಶೆ
March 08, 2024
ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ. ಅಲ್ಲಿಯ ಜನರ ನೋವು, ಕಷ್ಟ, ಸಂಕಟಗಳ ಚಿತ್ರಣ ನಮಗೆ ಬೇರೊಂದು ಅನುಭವವನ್ನು ಕೊಡುತ್ತದೆ. ಆ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಡಾ. ಎಚ್.ಎಸ್.ಎಂ. ಪ್ರಕಾಶ್ ಅವರು ಸ್ಥಳೀಯವಾಗಿದ್ದ ಹಾಗೂ ವಿಶಿಷ್ಟವಾಗಿದ್ದ ತಮ್ಮ ಅನುಭವಗಳ ಸಹಾಯದಿಂದ ಕನ್ನಡಕ್ಕೆ…
ವಿಧ: ಪುಸ್ತಕ ವಿಮರ್ಶೆ
March 06, 2024
ಲೇಖಕ ಕಗ್ಗೆರೆ ಪ್ರಕಾಶ್ ಅವರು ತಮ್ಮ ೨೫ನೇ ಕೃತಿ ‘ಬೆವರ ಹನಿಯ ಜೀವ' ಹೊರತಂದಿದ್ದಾರೆ. ಈ ೧೨೮ ಪುಟಗಳ ಕಿರು ಪುಸ್ತಕದಲ್ಲಿ ೫೦ ಕವಿತೆಗಳನ್ನು ಪ್ರಕಟ ಮಾಡಿದ್ದಾರೆ. ಪುಸ್ತಕದ ಲೇಖಕರ ಮಾತಿನಲ್ಲಿ ಕಗ್ಗೆರೆ ಪ್ರಕಾಶ್ ಅವರು ಬರೆದ ಮಾಹಿತಿಗಳ ಆಯ್ದ ಸಾಲುಗಳು ಇಲ್ಲಿವೆ…
“ಕನ್ನಡಮ್ಮನಿಗೆ ಕಿರು ಕಾಣಿಕೆ, ಹೊನಲು, ಭುವಿಬಾಲೆ, ಭೂರಮೆ ವಿಲಾಸ ಬಳಿಕ ‘ಬೆವರ ಹನಿಯ ಜೀವ’ ನನ್ನ ೫ನೇ ಕವನ ಸಂಕಲನ. ಇದು ನನ್ನ ೨೫ನೇ ಪುಸ್ತಕ ಕೂಡ. ೨೦೨೧ ರಲ್ಲಿ ‘ಭೂರಮೆ ವಿಲಾಸ’ ಪ್ರಕಟವಾದ ನಂತರದಲ್ಲಿ ಬರೆದ ಐವತ್ತು…