ವಿಧ: ಚರ್ಚೆಯ ವಿಷಯ
March 22, 2008
ಕಪ್ಪಗಿದ್ದರೂ ಕಂಬಳಿಯಲ್ಲ
ಹಸಿರು ಜರಿಯಿದ್ದರೂ ಸೀರೆಯಲ್ಲ
ಅಂಕುಡೊಂಕಾಗಿದ್ದರೂ ಹಾವಲ್ಲ
ಹಾಗಾದರೆ ಏನಿದು?
ವಿಧ: Basic page
March 22, 2008
ಎಚ್ಚರವಿರಲಿ".....
ಯೌವನದ ಅಮಲಿನಲ್ಲಿ - ನೀ ಜಾರಬೇಡ.....
ಪ್ರೀತಿಯಾ ಗಾಳಕ್ಕೆ - ನೀ ಸಿಲುಕಬೇಡ.....
ಕಣ್ಣಿಲ್ಲದ ಪ್ರೇಮಕ್ಕೆ - ನೀ ಕುರುಡಾಗಬೇಡ.....
ಪ್ರೀತಿಯ ಮಾತಿಗೆ - ನೀ ಮರುಳಾಗಬೇಡ.....
ಕಾಣದ ಪ್ರೇಮಕ್ಕೆ - ನೀ ಮನ ಸೋಲಬೇಡ.....
ಪ್ರೇಮ ಕುರುಡೆಂಬ - ನೀ ಮರೆಯಬೇಡ..............................................................."
ವಿಧ: ಚರ್ಚೆಯ ವಿಷಯ
March 22, 2008
ವಿಧುರ...,ವಿಧವೆಯ ಮದುವೆ...ಮುಂದೆ....?
ವಿಧ: ಚರ್ಚೆಯ ವಿಷಯ
March 22, 2008
ಅವಳು ಬಡವಿ...,ಅವನು ಬಡವ...ಮುಂದೆ ಜೀವನ.....?
ವಿಧ: ಚರ್ಚೆಯ ವಿಷಯ
March 22, 2008
ಮದುವೆ..."ಜೀವನದ ಅವಶ್ಯಕತೆಯೇ.....?ಅಥವಾ...?
ವಿಧ: Basic page
March 22, 2008
ಸಮಾಜವಾದಿಗಳ ಕಾಂಗ್ರೆಸ್ಸೀಕರಣ: ಮುಂದೇನು?
ಅಂತೂ ಎಂ.ಪಿ.ಪ್ರಕಾಶರು ಮತ್ತು ಅವರ ಬೆಂಬಲಿಗರು ತಿಂಗಳುಗಟ್ಟಲೆ ಕಾಂಗ್ರೆಸ್, ಬಿಜೆಪಿ ಎರಡೂ ಮನೆಗಳ ಬಾಗಿಲು ಕಾಯ್ದು ಈಗ ಕಾಂಗ್ರೆಸ್ ಮನೆ ಹೊಗಲು ಅರ್ಜಿ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕದ ಮಟ್ಟಿಗಾದರೂ, ಸಮಾಜವಾದಿಗಳ ಕಾಂಗ್ರೆಸ್ಸೀಕರಣ ಸಂಪೂರ್ಣವಾದಂತಿದೆ. ಬಂಗಾರಪ್ಪನವರು ಮುಲಾಯಂ ಸಿಂಗರ ರಾಷ್ಟ್ರೀಯ ನಾಯಕತ್ವದಲ್ಲಿ ಈಗ ಕೆಂಪು ಟೋಪಿ ಹಾಕಿಕೊಂಡು ಸಮಾಜವಾದಿ ವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರಾದರೂ, ತಮ್ಮ ರಾಜಕೀಯ ಜೀವನದಲ್ಲಿ ಅವರು…
ವಿಧ: ಬ್ಲಾಗ್ ಬರಹ
March 22, 2008
ನಾನು ಸುಮ್ಮನೆ ನಡೆಯುತ್ತಿದ್ದೆ. ಎಲ್ಲಿ ಹೋಗಬೇಕೆಂದು ಗೊತ್ತಿಲ್ಲದ್ದಿದ್ದರೂ ನಡೆಯುತ್ತಿದ್ದೆ. ಸುಮ್-ಸುಮ್ನೆ ನಡಕೊಂಡ್ ಎಲ್ಲೆಲ್ಲಿಗೋ ಹೋಗೋದು ನನಗೆ ಅಭ್ಯಾಸ. ಓಮ್ಮೊಮ್ಮೆ ಎಲ್ಲೆಲ್ಲೋ ಸುತ್ತಾಡಿ ಮತ್ತೆ ನಾನಿದ್ದಲ್ಲಿಗೆ ವಾಪಾಸ್ ಬರ್ತಿದ್ದೆ.
ಹೀಗೆ ಒಮ್ಮೆ ಸುಮ್-ಸುಮ್ನೆ ಹೋಗ್ತಿದ್ದಾಗ, ಒಂದು ದೊಡ್ಡ ಮರ ಕಾಣ್ತು. ಮರದ ಕೆಳಗೆ ಅವ್ಳು ನಿಂತಿದ್ಲು. ಬಹುಶ: ಯಾರಿಗೋ ಕಾಯ್ತಿದ್ಲು ಅನ್ಸುತ್ತೆ. ನನ್ನನ್ನ ಒಮ್ಮೆ ನೋಡೀದ್ರೂ ನೋಡದ-ಹಾಗೆ ಇದ್ಲು. ಸ್ವಲ್ಪ ಬೇಜಾರಾಯ್ತು, ಆದ್ರು ನಡಿಯುತ್ತೆ.(ಜನ…
ವಿಧ: Basic page
March 22, 2008
ಗುಂಡ ಮನೆಗೆ ಬಂದವನೇ "ಗುಂಡೀ . . ." ಎಂದು ಹೆಂಡತಿಗೆ ಜೋರಾದ ಕೂಗು ಹಾಕಿದ. ಮನೆ ಕೆಲಸದಲ್ಲಿ ಮುಳುಗಿಹೋಗಿದ್ದ ಗುಂಡಿ "ಏನ್ರೀ ಅದೂ ಸೂರು ಹಾರಿ ಹೋಗೋಹಾಗೆ ಕಿರುಚಿಕೋತಿದೀರಿ, ರಸ್ತೆಯಲ್ಲಿ ಏನಾದರೂ ಹುಚ್ಚು ನಾಯಿ ಕಚ್ಚಿತೇನು? ಎಷ್ಟು ಸಾರಿ ಹೇಳಿದ್ದೀನಿ, ಒಬ್ಬೊಬ್ರೆ ರಸ್ತೇಲಿ ಓಡಾಡಬೇಡೀಂತ. ಯಾರಾದರೂ ಗಂಡಸರನ್ನು ಜೊತೇಲಿ ಕರ್ಕೊಂಡು ಹೋಗಬಾರದೇ? ಇದೇ ಆಯ್ತು ನಿಮ್ಮ ಗೋಳು . . ." ಅವಳ ವಾಗ್ಝರಿ ಹರಿಯುತ್ತಲೇ ಇತ್ತು, ಆದರೆ ಆಗಮನವಾಗಲಿಲ್ಲ.
ಗುಂಡ "ಲೇ ಗುಂಡೀ . . ಗುಂಡಮ್ಮಾ . . .…
ವಿಧ: Basic page
March 22, 2008
"ಈ ಹ್ರದಯಗಳ COMMUNICATION ದಲ್ಲಿ,ಪ್ರೀತಿಯೇ ಒಂದು message ಆಗಿ, ಅದಿರಲಿ DIGITAL ನಲ್ಲಿ ON ಆಗಿ,
ನಾ ಕಾಯುತಿರುವೆ ಅದಕ್ಕೆ riceiver ಆಗಿ"
ವಿಧ: ಬ್ಲಾಗ್ ಬರಹ
March 22, 2008
ಒಂದು ಮನೆಯಲ್ಲಿ ಅಜ್ಜಿ ಒಬ್ಬಳಿದ್ದಳು ಬಹಳ ಕಿಲಾಡಿ .
ಒಮ್ಮೆ ಮನೆಯಲ್ಲಿ ರವೆ ಊಂಡೆ ಮಾಡಿದ್ದರು. ಅದರಲ್ಲಿ ಕೆಲವು ರವೆ ಉಂಡೆಗಳು ಕಾಣೆಯಾದವು.
ಮನೆಯವರು ಅಜ್ಜಿಯನ್ನು ಕೇಳಿದರು
ಅಜ್ಜಿ ಅದಕ್ಕೆ ಉತ್ತರಿಸಿದಳು
"ಅದನ್ನ
ಪ್ರಾಣ ತೆಗೆಯೋನ ಮಗನ ಹೆಂಡತಿ ಮಾನ ಉಳಿಸಿದವನ ಮಗನ್ನ ಹಿಂದಿನ ಜನ್ಮದಲ್ಲಿ ಬೂದಿ ಮಾಡಿದವನ ಮಗನ್ನ ಹೊತ್ಕೊಂಡೋನು ತಿಂದುಬಿಟ್ಟ. "
ಅದು ಯಾರು ಅಂತ ಹೇಳ್ತೀರಾ?
ರೂಪ