ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 20, 2023
ಉದಯೋನ್ಮುಖ ಕಾದಂಬರಿಗಾರ್ತಿ ರಂಜನೀ ಕೀರ್ತಿ ಅವರ ಸಂಗೀತಾತ್ಮಕ ಥ್ರಿಲ್ಲರ್ ಕಾದಂಬರಿ ‘ಪಸಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಕಾದಂಬರಿಯು ಅತ್ಯಂತ ರೋಚಕವಾಗಿ ಸಾಗುತ್ತಾ, ಎಲ್ಲಿಯೂ ಬೋರ್ ಹೊಡೆಸದೇ ಮುಂದುವರಿಯುತ್ತದೆ. ಈ ಕಾದಂಬರಿಯ ಕುರಿತಾಗಿ ನಾಡಿನ ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮತ್ತು ಈ ಕೃತಿಗೆ ಬೆನ್ನುಡಿಯನ್ನು ಬರೆದು ಲೇಖಕಿಯ ಬೆನ್ನು ತಟ್ಟಿದ್ದಾರೆ. ಅವರು ಬೆನ್ನುಡಿಲ್ಲಿ ಬರೆದ ವಾಕ್ಯಗಳು ನಿಮ್ಮ ಓದಿಗಾಗಿ… ‘ಪಸಾ' ರಂಜನೀ ಕೀರ್ತಿ ಅವರ ರೋಚಕ…
ಲೇಖಕರು: Kavitha Mahesh
ವಿಧ: ರುಚಿ
November 19, 2023
ಮೊದಲು ಸೋಯಾ ಚಂಕ್ಸ್ ಗಳನ್ನು ಬಿಸಿನೀರಿನಲ್ಲಿ ಸ್ವಲ್ಪ ಹೊತ್ತು ಕುದಿಸಿ, ನಂತರ ನೀರನ್ನು ಬಸಿದು, ಹಿಂಡಿ ಬದಿಗಿಡಿ. ಒಂದು ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸ್ವಲ್ಪ ಸಾಸಿವೆ, ಒಂದು ಚೂರು ಜೀರಿಗೆ ಹಾಕಿ ಸಿಡಿಸಿ. ಇದಾದ ಬಳಿಕ ಈರುಳ್ಳಿ. ಅರಶಿನ, ಶುಂಠಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.  ನಂತರ ಮೆಣಸಿನ ಕಾಯಿ ಸ್ವಲ್ಪ ಪನೀರ್ ಹಾಕಿದ ಮೇಲೆ ಸೋಯಾ ಚಂಕ್ಸ್ ಹಾಕಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 17, 2023
ಪ್ಲಾಸ್ಟಿಕ್ ಎಂಬ ವಸ್ತು ನಮ್ಮ ಪರಿಸರವನ್ನು ಪೆಡಂಭೂತದಂತೆ ಕಬಳಿಸುತ್ತಾ ಹೋಗುತ್ತಿದೆ. ಮಣ್ಣಿನಲ್ಲಿ, ನೀರಿನಲ್ಲಿ ಕರಗದ ಈ ಪ್ಲಾಸ್ಟಿಕ್ ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ. ಈ ಬಗ್ಗೆ ಹಲವಾರು ಕೃತಿಗಳು ಹೊರಬಂದಿದ್ದರೂ ಪ್ಲಾಸ್ಟಿಕ್ ಮಾಡುವ ಹಾನಿಯ ಬಗ್ಗೆ ಹೇಳುವುದು ಇನ್ನೂ ಉಳಿದಿದೆ. ಈ ಕೃತಿಯಲ್ಲಿ ಪ್ಲಾಸ್ಟಿಕ್ ಕಸವನ್ನು ಹೆಕ್ಕುವವರ ಬಗ್ಗೆ ಲೇಖಕಿ ಎಚ್ ಎಸ್ ಅನುಪಮಾ ಅವರು ಮಾಹಿತಿ ನೀಡುತ್ತಾ ಹೋಗಿದ್ದಾರೆ. ಅವರು ಈ ಕೃತಿಯ ಬಗ್ಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 15, 2023
ಸದಾಶಿವ ಸೊರಟೂರು ಅವರ ನೂತನ ಕವನ ಸಂಕಲನ “ನಿನ್ನ ಬೆರಳು ತಾಕಿ" ಬಿಡುಗಡೆಯಾಗಿದೆ. ಭರವಸೆಯ ಕವಿಯಾಗಿರುವ ಸದಾಶಿವ ಸೊರಟೂರು ಅವರ ಈ ೧೧೮ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಲಕ್ಸ್ಮಣ ವಿ ಎ. ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ...‘“ನಿನ್ನ ಬೆರಳು ತಾಕಿ' ಸದಾಶಿವ ಸೊರಟೂರರ ಪ್ರೇಮ ಕವನ ಸಂಕಲನ. ಸೃಷ್ಟಿಯ ಆದಿಯಿಂದಾಗಿ ಇಲ್ಲಿಯ ತನಕ ಭಾಷೆಯ ಹಂಗಿಲ್ಲದೆ ಸಂವಹನ ಸಾಧ್ಯವಾಗಿದ್ದು ಈ ಪ್ರೇಮಕ್ಕೆ ಮಾತ್ರ. ಪ್ರೇಮ ಸರಳವೆಂದುಕೊಂಡಷ್ಟೂ ಜಟಿಲ. ಕ್ಲಿಷ್ಟಕರ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
November 15, 2023
ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.” ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ…
ಲೇಖಕರು: Kavitha Mahesh
ವಿಧ: ರುಚಿ
November 13, 2023
ಮೊದಲು ನಾನ್ ಸ್ಟಿಕ್ ಪ್ಯಾನಿನಲ್ಲಿ ಹಾಲು ಹಾಕಿ ಮಂದ ಉರಿಯಲ್ಲಿ ಕುದಿಸಿ. ಮಧ್ಯೆ ಮಧ್ಯೆ ಸೌಟಿನಿಂದ ಬುಡ ಹಿಡಿಯದಂತೆ ಕೈಯಾಡಿಸುತ್ತಿರಿ. ಇದಕ್ಕೆ ಮಿಲ್ಕ್ ಮೇಡ್ (ಕಂಡೆನ್ಸಡ್ ಮಿಲ್ಕ್) ಹಾಕಿ ಕದಡುತ್ತಿರಿ. ಹಾಲು ಹದಿ ಕಟ್ಟಿದ ಹಾಗಿ ಆದಾಗ ಆ ಹದಿಯನ್ನು ಬದಿಗೆ ಸರಿಸುತ್ತಿರಿ. ಹೀಗೆ ಹಾಲು ಮೂರನೇ ಒಂದು ಭಾಗದಷ್ಟು ಆಗುವವರೆಗೂ ಮಾಡುತ್ತಿರಿ. ಇದಕ್ಕೀಗ ಕೇಸರಿ, ಏಲಕ್ಕಿ ಹುಡಿ ಹಾಕಿ ಕದಡಿ. ಸಿಹಿ ಇಷ್ಟಪಡುವವರು ಒಂದೆರಡು ಚಮಚ ಸಕ್ಕರೆ ಹಾಕಬಹುದು. ಈಗ ಬದಿಗೆ ಸರಿಸಿದ ಹದಿಯನ್ನೂ ಸೇರಿಸಿ ಸರಿಯಾಗಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 10, 2023
ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ, ರಾಜ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಇವರ ಈ ಸೃಜನಶೀಲ ವ್ಯಕ್ತಿತ್ವವನ್ನು ಗುರುತಿಸಿ ಕೇಂದ್ರ ಸರಕಾರವು ಯಾಕೂಬ್ ಅವರಿಗೆ ೨೦೨೦ರಲ್ಲಿ ದೇಶದ ಅತ್ಯುನ್ನತ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಯಾಕೂಬ್ ಅವರು ಒಬ್ಬ ಉತ್ತಮ ಶಿಕ್ಷಕರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 08, 2023
ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ. ಪಾರ್ವತಿ ಜಿ ಐತಾಳ್. ಇವರು ತಮ್ಮ ಮುನ್ನುಡಿಯಲ್ಲಿ ಈ ಕಥಾ ಸಂಕಲನದ ಬಗ್ಗೆ ಬಹಳ ಸೊಗಸಾದ ಮಾಹಿತಿ ನೀಡಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ… “ಜಾಗತೀಕರಣಗೊಂಡ ಈ ಜಗತ್ತಿನಲ್ಲಿ ಸಾವಿರಾರು ಭಾಷೆಗಳ ನಡುವೆ  ಸಂವಹನದ ಅಗತ್ಯವು ಎಂದಿಗಿಂತ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
November 06, 2023
‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ... “ಸ್ನಾತಕೋತ್ತರ ಕನ್ನಡ ಎಂ.ಎ ಮಾಡುವಾಗ ದಾವಲಸಾಬ ನರಗುಂದ ಅವರು ನನ್ನ ವಿದ್ಯಾರ್ಥಿ ಅಂತಿಮ ವರ್ಷದಲ್ಲಿ ಆಂಶಿಕ ಅಂಕಗಳಿಗಾಗಿ ಸಿದ್ಧಪಡಿಸುವ ಕಿರುಪ್ರಬಂಧ ರಚನೆಯ ಸಂದರ್ಭದಲ್ಲಿ ನಾನು ಇವರಿಗೆ ಮಾರ್ಗದರ್ಶಕ, 'ಮುಳಗುಂದ ಪರಿಸರದ ಜಾನಪದ ಅಧ್ಯಯನ' ಎಂಬ ಇವರ…
ಲೇಖಕರು: Kavitha Mahesh
ವಿಧ: ರುಚಿ
November 06, 2023
ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿರಿ. ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಹುಡಿ, ಗರಂ ಮಸಾಲಾ, ಕಾಳುಮೆಣಸು ಹುಡಿ, ಕೊತ್ತಂಬರಿ ಹುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಬೇಯಿಸಿದ ಮೂಲಂಗಿಗೆ ಒಗ್ಗರಣೆ ಮಾಡಿ ಬೇಯಿಸಿ.  ಗೋಧಿ ಹಿಟ್ಟನ್ನು ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು  ಉಪ್ಪು ಹಾಕಿ ಕಲಸಿ. ಅಗಲವಾಗಿ ಇದನ್ನು ಲಟ್ಟಿಸಿ. ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ…