ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಶತಾವಧಾನಿ ಆರ್. ಗಣೇಶ್ ರವರ ಅಷ್ಟಾವಧಾವ

May 22, 2006 - 10:22am — Sunil Jayaprakash

ಅಷ್ಟಾವಧಾನ ಎಂದರೇನು - ಅಷ್ಟಾವಧಾನ ಒಂದು ಕಲೆ. ಭಾಷಾ ಪಂಡಿತರ, ಸಾಮರ್ಥ್ಯವನ್ನು, ಭಾಷೆಯ ಮೇಲೆ ಅವರಿಗಿರುವ ಹಿಡಿತವನ್ನು ಒರೆಗೆ ಹಚ್ಚುವಂತಹ ಕಲೆ. ೮ ಜನ ಒಟ್ಟಿಗೇ, ಭಾಷಾ ಪಂಡಿತರಿಗೆ ಸವಾಲುಗಳನ್ನು ಎಸೆಯುವರು, ಅಷ್ಟಾವಧಾನಿಗಳು ಅವರೆಲ್ಲರಿಗೂ, ಉತ್ತರವನ್ನು ಅಲ್ಲಿಯೇ ಕಾವ್ಯದ ಮೂಲಕ ಕೊಡಬೇಕು. ಅದು ಸಂಸ್ಕೃತದಲ್ಲಿಯೂ ಇರಬಹುದು ಅಥವಾ ಕನ್ನಡದಲ್ಲಿಯೂ ಇರಬಹುದು. ಅದು ಪೃಚ್ಛಕರಿಗೆ(ಪ್ರಶ್ನೆ ಕೇಳುವವರಿಗೆ ಬಿಟ್ಟದ್ದು). ಆದರೆ ಇಲ್ಲಿ ಸಾಕಷ್ಟು ನಿಯಮಗಳುಂಟು. ಇಂತಹ ವಿಷಯದ ಮೇಲೆ, ಇಂತಹ ಛಂದಸ್ಸಿನಲ್ಲಿ, ಇಂತಹ ಅಕ್ಷರಗಳನ್ನು ಉಪಯೋಗಿಸದೆ, ಇಂತಹ ಭಾಷೆಯಲ್ಲಿ ಕಾವ್ಯ ರಚಿಸಬೇಕು ಎಂದು ಕೇಳಬಹುದು. ಕಾವ್ಯದಲ್ಲಿ ಇಂತಹ ಅಲಂಕಾರಗಳು ಇರಬೇಕು ಎಂದೂ ಕೂಡ ನಿಯಮ ಹಾಕಬಹುದು. ಅಷ್ಟಾವಧನ ಎಂದರೆ ಎಂಟು ಪೃಚ್ಛಕರಿರುತ್ತಾರೆ ಮತ್ತು ನಾಲ್ಕು ಸುತ್ತುಗಳಿರುತ್ತವೆ. ಹೀಗೆಯೇ ಶತಾವಧಾನ ಎಂದರೆ ನೂರು ಜನರು ಸೇರಿ ಒಟ್ಟಿಗೇ ಅವಧಾನಿಗೆ ಪ್ರಶ್ನೆಗಳು ಕೇಳುವರು. ಶತಾವಧಾನದ ಬಗ್ಗೆ ನನಗೆ ಹೆಚ್ಚುಿ ತಿಳಿದಲ್ಲ.

ಅಂತಹದೊಂದು ಒಳ್ಳೆಯ ಕಾರ್ಯಕ್ರಮವನ್ನು ಕಳೆದ ಶನಿವಾರ, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದಲ್ಲಿ ಏರ್ಪಡಿಸಲಾಗಿತ್ತು. ಅದು ಸರೋಜಾ ಕೃಷ್ಣಮೂರ್ತಿ ಎಂಬುವರ ಶ್ರದ್ಧಾಂಜಲಿ ಕಾರ್ಯಕ್ರಮ. ಆದರೆ ಎಲ್ಲರೀತಿಯ ಶ್ರದ್ಧಾಂಜಲಿ ಕಾರ್ಯಕ್ರಮ ಇದಾಗಿರಲಿಲ್ಲ. ನಾನು ಸರೋಜಾ ಕೃಷ್ಣಮೂರ್ತಿಯವರನ್ನು ನೋಡಿಲ್ಲ. ಆದರೆ ಅವರು ಮೆಟ್ಟಿದ (ಮದುವೆಯಾಗಿ ಸೇರಿದ) ನಾಡು ಕೋಲಾರ, ಸಾಂಸ್ಕೃತಿಕವಾಗಿ ಮೇಲೇರಲು ಪೂರಕವಾದ ಪ್ರಯತ್ನಗಳನ್ನು ನಡೆಸಿದ್ದರು ಎಂಬುದು ತಿಳಿದುಬಂತು. ಶತಾವಧಾನಿ, ಡಾ|| ಆರ್. ಗಣೇಶ್ ರವರ ಮೊದಲ ಅವಧಾನ ಕಾರ್ಯಕ್ರಮ ಕೋಲಾರದಲ್ಲೇ ಆಗಬೇಕು ಎಂದು ಅವರ ಮನವೊಲಿಸಿ ಡಾ||ಗಣೇಶರವರ ಮೊದಲ, ನೂರನೆಯ, ಮತ್ತು ಇನ್ನೂರನೆಯ ಅವಧಾನ ಕಾರ್ಯಕ್ರಮಗಳನ್ನು ಕೋಲಾರದಲ್ಲಿಯೇ ಏರ್ಪಡಿಸುವುದರಲ್ಲಿ ಸಫಲರಾಗಿದ್ದವರು. ಹಾಗಾಗಿ ಅವರ ನೆನಪಿಗಾಗಿ, ಅವರ ಹತ್ತಿರವರು, ಸಾಂಸ್ಕೃತಿಕವಾಗಿ ಅವರೊಡನೆ ಕಲೆತವರೆಲ್ಲ ಸೇರಿ ಅವರ ನೆನಪಿನಲ್ಲಿ, ಶತಾವಧಾನಿ ಡಾ|| ಆರ್. ಗಣೇಶ್ ಅವರ ಒಂದು ಅಷ್ಟಾವಧಾನ ಕಾರ್ಯಕ್ರಮವನ್ನೇ ಏರ್ಪಡಿಸಿದ್ದರು. ಅವರ ಸ್ಮರಮಾರ್ಥವಾಗಿ ನಡೆದ ಈ ಅಷ್ಟಾವಧನ ಕಾರ್ಯಕ್ರಮವಂತೂ ನನಗೆ ಬಹಳ ಸಂತಸವನ್ನುಂಟುಮಾಡಿತು. ಈ ಸಂತಸವನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಲೇಖನ ಬರೆಯುತ್ತಿರುವೆ.

ಶನಿವಾರದ ಅಷ್ಟಾವಧಾನ "ಶತಾವಧಾನಿ ಡಾ|| ಆರ್. ಗಣೇಶ್" ರವರ ೬೦೧ನೇ ಅಷ್ಟಾವಧಾನ ಕಾರ್ಯಕ್ರಮ.

ಈ ಮಾಲಿಕೆಯನ್ನು ಇದೂ ಸೇರಿ ೯ ಭಾಗಗಳಾಗಿ ಹಾಕುವೆ. ನಮ್ಮೆ ನಿಮ್ಮೆಲ್ಲರ ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ ಮತ್ತು ಕಾವ್ಯಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳೋಣ.

ಸವಿಯೊದಗೆ.

  • ಜ್ಞಾನವಾಹಿನಿ
~.~
  • Login or register to post comments
  • 1023 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೈರಪ್ಪ ನವರ ಕಾದ೦ಬರಿಗಳಲ್ಲಿನ ನೆಲೆ ಮತ್ತು ಕಲೆ - ಶತಾವಧಾನಿ ಗಣೇಶ್
  • ಅಷ್ಟಾವಧಾನದ ೩ನೇ ಭಾಗ - ದತ್ತಪದಿ
  • ಭಗವದ್ಗೀತೆ ಜ್ಞಾನಯೋಗದ ಬಗ್ಗೆ ಉಪನ್ಯಾಸ
  • ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ
  • ತ್ಯಾಗರಾಜ ಸ೦ಗೀತದಲ್ಲಿ ಅಧ್ಯಾತ್ಮ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 7, 2008 - 3:08pm
  • girish.rajanal
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 7, 2008 - 3:06pm
  • mahesha
    ಉ: ತೋಡು ಮತ್ತು ಮೊಗೆ
    October 7, 2008 - 3:03pm
  • harsha.st
    ಉ: ತೋಡು ಮತ್ತು ಮೊಗೆ
    October 7, 2008 - 2:48pm
  • girish.rajanal
    ಉ: ಹೀಗೆ ಒಂದು ಮಾತುಕತೆ(ಹೆಂಗಳೆಯರ)
    October 7, 2008 - 2:45pm
  • createam
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:42pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
ಇನ್ನಷ್ಟು


ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator