ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು

June 1, 2006 - 9:53am — Sunil Jayaprakash

ಈ ಅಷ್ಟಾವಧಾನ ಮಾಲಿಕೆಯ ಪೀಠಿಕೆಯ ಕಂತು ಇಲ್ಲಿದೆ
ಮತ್ತು ಮೊದಲ, ನಿಷೇಧಾಕ್ಷರದ ಕಂತು ಇಲ್ಲಿದೆ

ಈಗ ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು

ಸಮಸ್ಯೆ – ಗೌರಿ ಪಚತಿ ಗೋಮಾಂಸಂ - ಗೌರಿ ಗೋಮಾಂಸವನ್ನು ಬೇಯಿಸುತ್ತಾಳೆ.


ಶಾಂತಂ ಪಾಪಂ ಇದು ಹೇಗೆ ಸಾಧ್ಯ. ಮಾಂಸವನ್ನು ತಿಂದರೂ ಹಸುವಿನಲ್ಲಿ ಕಾಮಧೇನುವನ್ನು ಕಂಡು ಹಸುವಿನ ಮಾಂಸವನ್ನು ತ್ಯಜಿಸಿದ ಎಷ್ಟೋ ಹಿಂದು ಹಾಗು ಅನ್ಯ ಧರ್ಮೀಯರ ಕುಟುಂಬಗಳು ನಮಗೆ ಉದಾಹರಣೆಯಾಗಿ ಸಿಗುವುದು. ಹೇಳಿ ಕೇಳಿ, ಗೌರಿ ಹಿಂದುಗಳ ದೇವತೆ. ಅಂತಹುದರಲ್ಲಿ, “ಗೌರಿ ಗೋಮಾಂಸವನ್ನು ಬೇಯಿಸುವಳು” ಎಂದರೆ ಏನು ಕರ್ಮ ಬಂತಪ್ಪಾ,

ಸಮಸ್ಯೆ ನೀಡಿದವರು – ಸುಧೀರ್ ಎನ್ನುವವರು. ಆದರೆ ಇವರ ಕಿರು ಪರಿಚಯ ನನಗೆ ಸಿಗಲಿಲ್ಲ

ಸುತ್ತು ರಚಿತವಾದ ಕಾವ್ಯದ ಸಾಲು
೧ ಪಂಚಮೋ ಜಾರಜೋ ಯತ್ರ
೨ ಪೌಶಾಸಕ್ ತತ್ರ ಸರ್ವಥಾ
೩ ಗೌರಿ ಪಚತಿ ಗೋಮಾಂಸಂ
೪ ಗೌರೋ ಭುಂಕ್ತೆ ಭುಭುಕ್ಷಿತಃ


ಅರ್ಥ ಹೀಗಿದೆ

ಗೌರಿ ಎಂದರೆ ದೇವತೆ ಮಾತ್ರವಲ್ಲ, ಬಿಳಿಯ ಹೆಂಗಸು ಎಂದು ಕೂಡ ಅರ್ಥವಿದೆ. white lady.
ಬಿಳಿಯಳಾದ, ದೊರೆ ೫ನೇ ಜಾರ್ಜ್ ನ ಹೆಂಡತಿ ತನ್ನ ಗಂಡನಿಗೆ (ಇನಿಯನಿಗೆ) ಗೋಮಾಂಸವನ್ನು ಬೇಯಿಸಿ ಹಾಕುವಳು, ಅವಳು ಬೇಯಿಸಿ ಕೊಟ್ಟಿದ್ದನ್ನು ಅವನ್ನು ತಿನ್ನುವನು – ಇಷ್ಟೇ, ನಿಮ್ಮ ಸಮಸ್ಯೆಗೆ ಉತ್ತರ ಸಿಕ್ಕಿತೇ.


ಸಮಸ್ಯೆ ನೀಡಿದವರು ಕೊಟ್ಟ ಉತ್ತರ

ಅವಧಾನದಲ್ಲಿ ಭಾಗವಹಿಸುವ ಪೃಚ್ಛಕರೂ ಕೂಡ ತಿಳಿದುಕೊಂಡಿರುವವರಾಗಿರಬೇಕು. ಹಾಗೆಯೇ ಅವರು ಕೇಳುವ ಪ್ರಶ್ನೆಗೆ ಅವರು ಮನೆಯಲ್ಲಿಯೇ ಒಂದು ಉತ್ತರ ಕಂಡುಕೊಂಡಿರಬೇಕು. ಇಲ್ಲಿ ಪೃಚ್ಛಕರು ನೀಡಿದ ಉತ್ತರ ಈ ರೀತಿಯಿದೆ.

ಗೌಡೀತು ಪಚತಿ ಮೀನಂ
ದ್ರಾವಿಡಂ ಪಚತಿ ಶಾಕಂ
ಗೌರೀತು ಪಚತಿ ಗೋಮಾಂಸಂ
ನೂನಂ ಲೋಕೋ ಭಿನ್ನರುಚಿಃ


ಅರ್ಥ ಹೀಗಿದೆ


ಗೌಡೀ - ಬಂಗಾಲದ ಹೆಂಗಸು ಮೀನನ್ನು ಬೇಯಿಸುವಳು
ದ್ರಾವಿಡಂ – ದಕ್ಷಿಣ ಭಾರತ, ದಕ್ಷಿಣದ ಹೆಂಗಸು ತರಕಾರಿಗಳನ್ನು ಬೇಯಿಸುವಳು
ಗೌರಿ – ಬಿಳಿಯ ಹೆಂಗಸು, ಬಿಳಿಯ ಹೆಂಗಸು ಹಸುವಿನ ಮಾಂಸವನ್ನು ಬೇಯಿಸುವಳು
ಹೀಗೆಯೇ ಲೋಕದಲ್ಲಿ, ಜನರ ಅಭಿರುಚಿಗಳು ಬೇರೆಬೇರೆಯಾಗಿರುತ್ತದೆ, ಒಂದೇ ರೀತಿಯದ್ದಾಗಿರುವುದಿಲ್ಲ.
  • ಕಾವ್ಯ ಮತ್ತು ಕವನ
~.~
  • Login or register to post comments
  • 1032 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2006 - 12:32pm — ahoratra

ಪತ್ರಕರ್ತರಾಗಬಹುದು.

ahoratra's picture

ಇಷ್ಟು ಸುಂದರವಾಗಿ ಕೇಳಿದ್ದನ್ನು ಬರೆದಿರುವ ನೀವು ಹವ್ಯಾಸಿ ಸ್ವತಂತ್ರ ಪತ್ರಕರ್ತರಾಗಬಹುದು ಸುನಿಲರೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 6:07pm — Sunil Jayaprakash

ಸ : ಪತ್ರಕರ್ತರಾಗಬಹುದು

Sunil Jayaprakash's picture

ಜೇನೊದಗು ನಿಮಗೆ. ನೀವು ಹುರಿದುಂಬಿಸಿದ ಮೇಲೆ ಪ್ರಯತ್ನಿಸುತ್ತೇನೆ. ಆದರೂ ವೃತ್ತಿನಿರತ ಪತ್ರಕರ್ತರೇ ಸಮಾಜದ ನೈಜ ಧ್ವನಿಗಳು.
ಅಥವಾ ಈಗ ಅದು ಬದಲಾಗುತ್ತಿದೆಯೇನೋ ಗೊತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 2:38pm — benaka

ಕಾವ್ಯಕೌಶಲ್ಯ

benaka's picture

ಸುನಿಲರೇ,

ಪಂಚಮೋ ಜಾರಜೋ ಯತ್ರ ಎಂಬುದು ಅತಿ ಸೂಕ್ಷ್ಮ ಪ್ರಯೋಗ!
ಐದನೇ ಜಾರ್ಜ್ ದೊರೆಯನ್ನೇ ಗೊತ್ತಾಗದಂತೆ ಕೆಟ್ಟದಾಗಿ ಬೈದಂತಿದೆ!
ಪಂಚಮ = ಐದನೆಯ, ಹೊಲೆಯ, ಹೀನಕುಲದವ!
ಜಾರಜ = ಜಾರ್ಜ್ ದೊರೆ, ಜಾರ/ಜಾರಿಣಿಯ ಮಗ!

ಠಾಗೋರರು ಅವನನ್ನೇ ಭಾರತಭಾಗ್ಯವಿಧಾತಾ ಎಂದಿದ್ದು!? ಗಣೇಶರ ಕಾವ್ಯಕೌಶಲ್ಯ ಮೆಚ್ಚಬೇಕಾದದ್ದು!

ನಿಮ್ಮವ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 3:10pm — ಮಹೇಶ ಭೋಗಾದಿ

ಗೌಡದೇಶ

ಮಹೇಶ ಭೋಗಾದಿ's picture

ಭೋಜ ಪ್ರಬಂಧದ ಶ್ಲೋಕ.

ಪಂಚಾಷತ್ಪಂಚವರ್ಷಾಣಿ ಸಪ್ತಮಾಸದಿನತ್ರಯಂ
ಭೋಜರಾಜೇನ ಭೋಗ್ತವ್ಯಂ ಸಗೌಡದಕ್ಷಿಣಾಪಥಂ||

ಐವತ್ತೈದು ವರುಷಗಳು, ಏಳುತಿಂಗಳು, ಮೂರುದಿನಗಳು ಭೋಜರಾಜನಿಂದ ಭೋಗಿಸಬೇಕು, ಗೌಡದೇಶ ಮತ್ತು ದಕ್ಷಿಣಾಪಥದ ಜೊತೆಗೆ.

ಈ ಶ್ಲೋಕವನ್ನು ಹೇಳುವಾದ ನಮ್ಮ ಸಕ್ಕದದ ಗುರುಗಳು, ಗೌಡದೇಶವೆಂದರೆ ವಂಗದೇಶ(ಈಗಿನ ಬಂಗಾಳ) ಎಂದು ಹೇಳಿದಂತೆ ನನಗೆ ನೆನಪು. ಅಲ್ಲೂ ಮಿನಾಹಾರವು ಅತಿಪ್ರಿಯ ಮತ್ತು ಪ್ರಸಿದ್ಧಿ.

ಸಂಸ್ಕೃತದಲ್ಲಿ ೫೦ = ಪಂಚಾಷತ್ ಅಥವಾ ಪಂಚಷತ್?. ನನಗೆ ಮರೆತೇ ಹೋಗಿದೆ. Sad

ಇರಲಿ... ಈ ವಿವರಣೆಗಳಿಗೆ ....

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 6:10pm — Sunil Jayaprakash

ಉ : ಗೌಡ ದೇಶ

Sunil Jayaprakash's picture

ಮಹೇಶ ಭೋಗಾದಿ wrote:

ಈ ಶ್ಲೋಕವನ್ನು ಹೇಳುವಾದ ನಮ್ಮ ಸಕ್ಕದದ ಗುರುಗಳು, ಗೌಡದೇಶವೆಂದರೆ ವಂಗದೇಶ(ಈಗಿನ ಬಂಗಾಳ) ಎಂದು ಹೇಳಿದಂತೆ ನನಗೆ ನೆನಪು. ಅಲ್ಲೂ ಮಿನಾಹಾರವು ಅತಿಪ್ರಿಯ ಮತ್ತು ಪ್ರಸಿದ್ಧಿ.

ಹೌದೇ, ಈ ವಿಷಯವಾಗಿ ತಿಳಿದವರಿಂದ ಹೆಚ್ಚಿನ ಮಾಹಿತಿ ಖಂಡಿತವಾಗಿ ಪಡೆಯಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 1, 2006 - 9:51pm — ಮಹೇಶ ಭೋಗಾದಿ

ಗೌಡದೇಶ - ಮಧ್ಯ ಮತ್ತು ಪಶ್ವಿಮ ಬಂಗಾಳ

ಮಹೇಶ ಭೋಗಾದಿ's picture

ನಮ್ಮ ಬಂಗಾಳಿ ಸಂಸ್ಕೃತ ಪಂಡಿತರು ಹೀಗೆ ಹೇಳುವರು.

ಗೌಡ-ದೇಶ = ಈಗಿನ ಮಧ್ಯ ಮತ್ತು ಪಶ್ವಿಮ ಬಂಗಾಳದ(ಬಾಂಗ್ಲ ದೇಶವನ್ನು ಸೇರಿಸಿಕೊಂಡು) ಪ್ರದೇಶ. ನಂತರವದು ವಂಗದೇಶದ ಜೊತೆ ಸೇರಿಹೋಯಿತಂತೆ.
ಬರೇನ್ದ್ರ/ಬಾರೇಂದ್ರ = ಉತ್ತರ ಬಂಗಾಳ
ಸಮತಟ = ದಕ್ಷಿಣ ಪೂರ್ವ ಬಂಗಾಳ.

ಈ ನೈರುತ್ಯ, ಈಶಾನ್ಯಗಳಾವುವು ಎಂದು ಹೇಳಲು ನನಗೆ ಬರದು.

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2006 - 6:46am — benaka

ಬಂಗಾಳ - ದ್ರಾವಿಡ

benaka's picture

ಹೌದ್ರೀ, ಗೌಡ ದೇಶವೆಂದರೆ ಬಂಗಾಳವೇ; ಅಂದರೆ ಹಿಂದಿನ 'ವಂಗ' ದೇಶ.
ಗೌಡೀಯ ಗ್ರಂಥಮಂದಿರ ಎಂಬ ವಂಗಕವಿಗಳ ಸಂಸ್ಕೃತ ಸಾಹಿತ್ಯ ಅಂತರ್ಜಾಲ ತಾಣವೂ ಇದೆ. ನೋಡಿ:
http://www.granthamandira.org/

ಆಮೇಲೆ "ದ್ರಾವಿಡಂ ಪಚತಿ ಶಾಖಂ" ಎಂದರೆ ದ್ರವಿಡ ಮಹಿಳೆಯ ಕತೆಯಲ್ಲ; ದ್ರಾವಿಡ ದೇಶವನ್ನು ಬಿಸಿಲು ಸುಡುತ್ತದೆ ಎಂದರ್ಥ!
ದ್ರಾವಿಡಂ = ದ್ರಾವಿಡ ವನ್ನು
ಪಚತಿ = ಬೇಯಿಸುತ್ತದೆ
ಶಾಖಂ = ಬಿಸಿಲು, ಸೆಕೆ ; --> 'ತರಕಾರಿ' ಯಲ್ಲ!
ಶಾಕಂ = ತರಕಾರಿ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2006 - 7:20am — ಮಹೇಶ ಭೋಗಾದಿ

ದ್ರಾವಿಡ

ಮಹೇಶ ಭೋಗಾದಿ's picture

ನಿಮ್ಮ ಮಾತು ಸರಿಯಾಗಿದೆ.

ಶಾಖಾ ಎಂದೆ ರೆಂಬೆ/ಕೊಂಬೆ ಎಂದು. ಶಾಖಾಹಾರ ವೆಂದರೆ ಸಸ್ಯಾಹಾರವೆ.

ಅವರು ಶಾಖಾ(ಶಾಖೆ) ಮತ್ತು ಶಾಖದ ನಡುವೆ ಗೊಂದಲ ಮಾಡಿಕೊಂಡಿರಬೇಕು

ಶಾಕ ಎಂದರೆ ತರಕಾರಿ, ಅದೂ ಕೂಡ ಸರಿಯೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2006 - 9:23am — Sunil Jayaprakash

ಸವಿ : ನನ್ನನ್ನು ಪಾರುಮಾಡಿದಿರಿ

Sunil Jayaprakash's picture

ಬೆನಕ ಮತ್ತು ಮಹೇಶರವರಿಗೆ ಸವಿಯೊದಗೆಗಳು. ಇಲ್ಲದಿದ್ದರೆ ನಾನು ತಪ್ಪು ಮಾಹಿತಿಯನ್ನು ರವಾನಿಸಿದ ಪಾಪಕ್ಕೆ ಗುರಿಯಾಗುತ್ತಿದ್ದೆ.

ಹಾಗಾದರೆ ಗೌಡೀ ಪದವನ್ನು ಬಂಗಾಲದ ಹೆಂಗಸು ಎಂದುಕೊಳ್ಳೋಣವೇ. ಶಾಖಂ ಪದವನ್ನು ಶಾಕಂ ಮಾಡುತ್ತೇನೆ.
ಸರಿಯಾದ ಅರ್ಥ ತಿಳಿಸಿದ ಬೆನಕ ಮತ್ತು ಮಹೇಶರಿಗೆ ಮತ್ತೊಮ್ಮೆ ಕೃತಜ್ಞತೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2006 - 9:40am — ಮಹೇಶ ಭೋಗಾದಿ

ದ್ರಾವಿಡಂ = ದ್ರಾವಿಡವನ್ನು

ಮಹೇಶ ಭೋಗಾದಿ's picture

ಸುನಿಲರೆ,

ಬೆನಕರು ಹೇಳಿದಂತೆ
ದ್ರಾವಿಡಂ ಎಂದರೆ ದ್ರಾವಿಡವನ್ನು, ದ್ರಾವಿಡ ಹೆಂಗಸಲ್ಲ.

ಮತ್ತೊಂದು

ಗೌಡೀ ತು. ಗೌಡೀತು ಅಲ್ಲ.
ಗೌಡೀ ತು ಅಂದರೆ , "ಗೌಡೀಯಾದರೋ" ಎನ್ನವ ಅರ್ಥ ಬರುತ್ತದೆ.

ಉದಾ: ಖಾದ ತು = ತಿಂದು ಆದರು
ಖಾದತು = ತಿನ್ನಲಿ.

ಈ ತರಹದ ಯಾವುದೋ ಉದಾಹರಣೆ ಕೊಡಬಹುದು, ಅರ್ಥ ವ್ಯತ್ಯಾಸಕ್ಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 26, 2007 - 12:29am — hamsanandi

ಉ:

hamsanandi's picture

ಈ ಸೂತ್ರವನ್ನು ಈಗ ಕೆಲದಿನಗಳ ಹಿಂದೆ ಓದಿದೆ. ಬಹಳ ಚೆನ್ನಾಗಿದೆ ಎನ್ನಿಸಿ, ಕೆಲವು ಮಿತ್ರರೊಡನೆ ಹಂಚಿಕೊಂಡೆ. ಅಲ್ಲಿ, ನನ್ನ ಇಬ್ಬರು ಗೆಳೆಯರಿಂದ ಈ ಸಮಸ್ಯೆಗೆ ಇನ್ನೆರಡು ಹೊಸ ಉತ್ತರಗಳು ಸಿಕ್ಕವು. ಇಲ್ಲಿನ ಓದುಗರಿಗೂ ಇಷ್ಟವಾಗಬಹುದೆಂದು ಇಲ್ಲಿ ಬರೆಯುತ್ತಿದ್ದೇನೆ.

೧. ಸಿಲಿಕಾನ್ ಕಣಿವೆಯ ಕನ್ನಡಿಗ ಮಿತ್ರರೊಬ್ಬರ ಪಾದ ಪೂರಣ ಹೀಗಿದೆ.

ಮಮ ಗೇಹ ಸಮೀಪಸ್ಥೇ ಮೆಕ್‍ಡೊನಾಲ್ಡ್ ಭೋಜನಾಲಯೇ

ಗೌರೀ ಪಚತಿ ಗೋಮಾಂಸಂ ಕೃಷ್ಣಸ್ತಂ ಭಕ್ಷಯಿಷ್ಯತಿ!

मम गेहसमीपस्थे मॆक्डॊनाल्ड् भोजनालये|

गौरी पचति गोमांसं  कृष्णस्तं भक्षयिष्यति||

(ನನ್ನ ಮನೆಯ ಬಳಿಯ ಮೆಕ್‍ಡೊನಾಲ್ಡ್ಸ್ ನಲ್ಲಿ, ಬಿಳಿಯಳೊಬ್ಬಳು ಅಟ್ಟ ದನದ ಮಾಂಸದ ತಿನಿಸನ್ನು, ಕರಿಯನೊಬ್ಬ* ತಿನ್ನುತ್ತಿರುವನು)

 *ಕರಿಯ -> african american

೨. ನನ್ನ ಇಂಗ್ಲೆಂಡಿನ ಮಿತ್ರರೊಬ್ಬರ ಉತ್ತರ ಹೀಗಿದೆ:

ತ್ರಿಲೋಕಜನನೀ ಕಾ ಭೋ? ಸೂಪಕೃತ್ ಕಿಂ ಕರೋತಿ ಭೋ?

ಕಿಮ್ ಖಾದಂತಿ ತುರುಷ್ಕಾಃ ಭೋ? ಗೌರೀ ಪಚತಿ ಗೋಮಾಂಸಂ!

त्रिलोकजननी का भो? सूपक्ऱ्त् किम् करोति भो?
किम् खादन्ति तुरुष्काः भो? गौरी पचति गोमाम्सम्.

(ಮೂರು ಲೋಕಗಳ ತಾಯಿ ಯಾರು? ಅಡಿಗೆಯವ ಏನು ಮಾಡುವನು? ಮುಸಲ್ಮಾನರು ಏನನ್ನು ತಿನ್ನುವರು? ಗೌರಿ. ಅಡುವನು. ದನದ ಮಾಂಸ. 

ಇದರಲ್ಲಿ, ಕಾಳಿದಾಸನದೆನ್ನಲಾದ ಕುಂತೀ ಸುತೋ ರಾವಣ ಕುಂಭಕರ್ಣಃ ಎನ್ನುವ ಪದ್ಯದಂತೆ, ಚಮತ್ಕಾರವಾಗಿ ಮೊದಲ ಮೂರು ಪಾದಗಳಲ್ಲಿ ಮೂರು ಪ್ರಶ್ನೆಗಳನ್ನು ತುಂಬಿಸಿ, ಕೊನೆಯ ಪಾದದಲ್ಲಿ ಅದರ ಉತ್ತರಗಳನ್ನು ಬರುವಂತೆ ಮಾಡಿದ್ದಾರೆ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 3:21pm — mahesha

ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು

mahesha's picture

ಟಯ್ಪುತಪ್ಪು

"ಗೌರೀ ಪಚತಿ ಗೋಮಾಂಸಮ್" ಇರಬೇಕು!

ಆದ್ರೆ ತೆಂಕಣಿಂಡಿದೋರೇ ಬಡಗಿಂಡಿಯದೋರಿಗಿಂತ ಬಾಡು ಹೆಚ್ಚು ತಿನ್ನೋದಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 23, 2008 - 1:48pm — Sunil Jayaprakash

ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು

Sunil Jayaprakash's picture

ತೆಂಕಣಿಂಡಿದೋರೇ -- ಅಂದ್ರೇನು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಷ್ಟಾವಧಾನದ ೩ನೇ ಭಾಗ - ದತ್ತಪದಿ
  • ಸಮಸ್ಯೆ
  • ಕಣ್ಣು ನೋಡೇ ಗೌರಿ
  • ಕಣ್ಣು ನೋಡೇ ಗೌರಿ
  • ಅಷ್ಟಾವಧಾನ ಭಾಗ ೨
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator