~
ಅಷ್ಟಾವಧಾನದ ೩ನೇ ಭಾಗ - ದತ್ತಪದಿ
ಈ ಅಷ್ಟಾವಧಾನ ಮಾಲಿಕೆಯ ಪೀಠಿಕೆಯ ಕಂತು ಇಲ್ಲಿದೆ
ಮೊದಲ, ನಿಷೇಧಾಕ್ಷರದ ಕಂತು ಇಲ್ಲಿದೆ
ಎರಡನೆಯ ಸಮಸ್ಯೆಯ ಕಂತು ಇಲ್ಲಿದೆ
ಈಗ ಮೂರನೇ ವಿಭಾಗ – ದತ್ತಪದಿ
ವಿವರಣೆ – ಇಲ್ಲಿ ಪೃಚ್ಛಕರು ಕೆಲವು ನಿರ್ದಿಷ್ಟ ಪದಗಳನ್ನು(ಅಥವಾ ಅಕ್ಷರಗಳನ್ನು) ನೀಡುತ್ತಾರೆ. ವಿದ್ವಾಂಸರು ತಮ್ಮ ಪದ್ಯದ ಸಾಲುಗಳಲ್ಲಿ ಈ ಪದಗಳನ್ನು ಬಳಸಬೇಕು. ಇಂಥ ಸಾಲುಗಳಲ್ಲಿ ಇಂಥ ಪದ ಇರಬೇಕು ಎಂಬ ನಿಯಮ. ಅಷ್ಟಲ್ಲದೆ, ಪದ್ಯ ಇಂಥ ಛಂದಸ್ಸಿನಲ್ಲಿ ಇರಬೇಕು ಎಂದೂ ಸಹ ನಿಯಮ ಹಾಕಬಹುದು.
ದತ್ತಪಡಿಯಲ್ಲಿ ನೀಡಲಾದ ಸಮಸ್ಯೆ ಮತ್ತು ನಿಯಮಗಳು
ಆ ದಿನ ಸರೋಜಾಕೃಷ್ಣಮೂರ್ತಿಯವರ ಸ್ಮರಣಾರ್ಥವಾಗಿ ಅವಧಾನ ನಡೆಯುತ್ತಿದ್ದುದು. ಸರೋಜಾ ಎಂದರೆ – ನೀರಿನಲ್ಲಿ ಹುಟ್ಟಿದವಳು – ಅಂದರೆ ಕಮಲ. ಸರೋಜೆಗೆ ಅಧಿಪತಿಯಾದವನು ಸೂರ್ಯ. ಸೂರ್ಯನ ಮೇಲೆ ಕವಿತೆಯನ್ನು ಕಟ್ಟಬೇಕು. ಕವನ ಕನ್ನಡದಲ್ಲಿ ರಚನೆಯಾಗಬೇಕು ಹಾಗು ಈ ಕವನ ಶಾರ್ದೂಲವಿಕ್ರೀಡ ಛಂದಸ್ಸಿನಲ್ಲಿರಬೇಕು.
ಕವನದ ಸಾಲುಗಳಲ್ಲಿ ಕೆಳಗಿನ ಪದಗಳು ಇರಬೇಕು.
| ಸಾಲು | ಪದ |
| ೧ | Loss |
| ೨ | Mike |
| ೩ | Luck |
| ೪ | Note |
ಬಗೆಹರಿದ ರೀತಿ
| ಸುತ್ತು | ಸಾಲು | ಪದ | ಮೂಡಿದ ಕವಿತೆಯೆ ಸಾಲು |
| ೧ | ೧ | Loss | ಭಾಸೋಲ್ಲಾಸವಿಹಾಸಿತಂ ಮುಖಮದೇಂ ಮೇಣಂಧಕಾರಂಗಳೊಳ್ |
| ೨ | ೨ | Mike | ಲೇಸೆಂದಿರ್ಪ ಸಮೈಕ್ಯ ಲೋಕನ ಫಲಂ ಮಾಧೂಕರೀವೃತ್ತಿಯಿಂ |
| ೩ | ೩ | Luck | ಹ್ರಾಸಂಗೊಳ್ಳದೆ ಸತ್ಕಲಾರುಚಿಗಳಿಂ ಲಕ್ಷ್ಮೀಮಹಾಮಂದಿರ |
| ೪ | ೪ | Note | ಶ್ವಾಸೀಭೂತಮೆನಲ್ಕೆ ಜೀವನಧನಂ ನೇರರ್ಗ್ಯ ಮುನ್ನೋಟಮೇ |

- Login or register to post comments
- 739 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಅಷ್ಟಾವಧಾನದ ಮೂರನೆ ಭಾಗ
ಅಷ್ಟಾವಧಾನದ ನಾಲ್ಕನೇ ಕಂತು(ಮುನ್ನಡಿಯೂ ಸೇರಿದಂತೆ) ಇಗೋ ನಿಮ್ಮ ಮುಂದಿದೆ. ಸಾಧ್ಯವಾದಲ್ಲಿ ಮುಂದಿನ ಸುತ್ತುಗಳ ವಿವರಗಳನ್ನೂ ತಿಳಿಸುವಾಸೆ.