ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Sampada Blogs

೨.. ಕಥಿ ಹೈಲ್ ಅಯ್ತಲ್ಲ ಮರಾಯ್ರೇ!!!!



೨..ಮರನ್ನ  ಅಲ್ಲಾಡ್ಸುದು

"ಏಯ್ ಸೀನಾ!!???!!
"ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!
ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?"

ಮಂಜ್ರು ತಮ್ಮ ಕಚ್ಚೆ ಸರಿ ಮಾಡ್ತಾ ಕೇಳಿದರು, ಕುಡ್ದು ಕೆರಿ ಬದಿ ಗೋಳಿ ಮರ್ದ್  ಕೆಳಗೆ ಮಲಗಿಕೊಂಡಿರೋ ಸೀನನ್ನ.

"ಹೋಯ್ಮಂಜರೇ ನಮಸ್ಕಾರ!  ನಿವೇನ್ ಅಂದ್ಕಂಡ್ರಿ ಮರಾಯ್ರೆ?, " ಸೀನ
"ಇದೇನ್ ಸಾಧಾರ್ಣ್ ಮದ್ದ ಅಂದ್ಕಂಡ್ರ್ಯಾ!! ಇದ್ ಅಂತಿಂತದ್ದ ಅಲ್ಲ ಮರಾಯ್ರೆ, ದೇವ್ತೆಗಳೇ ಕುಡೀತಿದ್ರಂಬ್ರಲೇ?"

"ಆದೆಲ್ಲಾ ನಿನ್ನ ತಲಿಯಲ್ ಯಾರ್ ತುಂಬ್ರ ಮರಾಯಾ!! ತಕ ಹೋತತ್ತ್ ನಿಂಗೆ, ಅದೇ ಬೆರೆ, ನಿನ್ ಇದೇ ಬೇರೆ!!!" ಮಂಜರೆಂದರು.
 ಮುಂದೆ ಓದಿ »

ಕುಲದಲ್ಲಿ ಮೇಲ್ಯಾವುದೋ?

ಸತ್ಯಹರಿಶ್ಚಮ್ದ್ರ ಸಿನೆಮಾದ mp ಶಂಕರ್ ಅಭಿನಯದ ಈ ಹಾಡು ನನಗೆ ಬಹಳ ಇಷ್ಟ.

ಹಾಡು ಮತ್ತು ಅಭಿನಯ ಎರಡೂ ಸಕ್ಕತ್

ನೀವೂ ನೋಡಿ -   http://www.youtube.com/watch?v=QdjHWAuMWBk

ಜಯತೇ ಜಯತೇ

ಮೈಸೂರಿನಿಂದ ಬೆಂಗಳೂರಿಗೆ trainನಲ್ಲಿ ಬರುವುದೇ ಒಂದು ಸುಗ್ಗಿ! ಇಲ್ಲಿ ಹಳೇ ಸ್ನೇಹಿತರು ಸಿಕ್ತಾರೆ, ಮಂಡ್ಯ ದಾಟುವ ತನಕ ಹೊಲ ಗದ್ದೆ ಒಂದಿಷ್ಟು ಗಂಟೆ ಅನೇಕ ವಿಷಯಗಳ ಚರ್ಚೆ ಮತ್ತೆ ಹೊಸ ಜನರನ್ನು ಮಾತಾಡಿಸುವ ಅವಕಾಶ! ಮಹಾತ್ಮನ ದೊಡ್ಡ banner ನೋಡಿದ್ದು ಕೂಡ ಹೀಗೆಯೇ. ಯಾರು ಗುರು ಇವನು ಕೂದಲು ಬಿಟ್ಕೊಂಡು ಹಿಂಗ್ಅವನೆ ಅಂತ ನನ್ನ ಸ್ನೇಹಿತನ ಕೇಳಿದ್ರೆ "ಮಗ ನಿಂಗೆ ಗೊತಿಲ್ವಾ?? ಸ್ವಾಮೀಜಿ ಫುಲ್ ಫೇಮಸ್ ಮಗ ಒಂದ್ ಸಾರಿ ಕರ್ಕೊಂಡು ಹೋಗ್ತೀನಿ ಅಂತ ಹೇಳಿದ್ದ! ಅಷ್ಟೇ ಆಮೇಲೆ ನಾನು ಮರೆತೇ ಅವನು ಮರೆತ. ಮತ್ತೆ ಮಹಾತ್ಮ ಕಾಣಿಸಿದ್ದು ಟೀವೀಯಲ್ಲಿ! ಹೀಗೇಕೆ ಯಾಕೆ ಹಿಂಗೆ ಮಾಡ್ತಾರೆ ?? ಎಂಬ ಪ್ರಶ್ನೆ ನನ್ನಲ್ಲಿ ಬರಲಿಲ್ಲ! ಯಾಕೆಂದರೆ ಕಣ್ಣಾರೆ ಚಿಲ್ಟು ಪುಲ್ಟು ಸ್ವಾಮೀಜಿಗಳ ಮಹಾತ್ಮೆ ನೋಡಿದ್ದ ನನಗೆ ಇದು ಆಶ್ಚರ್ಯವೇನಾಗಿರಲಿಲ್ಲ!  ಮುಂದೆ ಓದಿ »

ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರದ ಸ್ಫೂರ್ತಿ

ಐಟಿ (ಅಥವಾ ಮಾಹಿತಿ ತಂತ್ರಜ್ಞಾನ) ನಮ್ಮ ದೇಶಕ್ಕೆ ಬಂದಿದ್ದು ಜ್ಞಾನವಾಗಿ ಅಲ್ಲ. ಸರಕಾಗಿ. ನಾವು ಬೆಂಗಳೂರಲ್ಲಿ ಐಟಿ ಮಠಗಳನ್ನು ಕಟ್ಟಿದ್ದೇವೆ. ಐಟಿ ಕಂಪನಿಗಳು - ಮಠಗಳು ಧರ್ಮವನ್ನು ಒಂದು ಸರಕು ಮಾಡಿದಂತೆ - ಐಟಿಯನ್ನು ಅವರಿಗೆ ಲಾಭ ಹೆಚ್ಚಿಸುವ ಒಂದು ಸರಕು ಆಗಿ ಮಾಡಿದ್ದಾರೆ. ಸ್ವತಂತ್ರ ಸಾಫ್ಟ್ ವೇರ‍್ ಚಳುವಳಿ ಭಕ್ತಿ ಚಳುವಳಿಯಂತೆ ಈ ಐಟಿ ಮಠಗಳ ವಿರುದ್ದದ ಚಳುವಳಿ ಆಗಿದೆ. ಈ ಮಾತುಗಳೊಂದಿಗೆ ಖ್ಯಾತ ಬಂಡಾಯ ಸಾಹಿತಿ ಚಿಂತಕ ಪ್ರೊಫೆಸರ‍್ ಬರಗೂರು ಚಂದ್ರಪ್ಪ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸ್ವತಂತ್ರ ಸಾಫ್ಟ ವೇರ‍್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಸಾಮಾನ್ಯವಾಗಿ ಸಭೆ ಸಮಾರಂಭಗಳು ನಡೆದಾಗಲೂ ಗಂಭೀರ ಮೌನ ತಾಳಿರುವ ಜ್ಞಾನಜ್ಯೋತಿ ಸಭಾಂಗಣ ಸ್ವಾತಂತ್ರದ ಸ್ಫೂರ್ತಿ ಸಂಭ್ರಮಗಳಿಂದ ಗಿಜಿಗಿಡುತ್ತಿತ್ತು.  ಮುಂದೆ ಓದಿ »

ಕುಂಟ ಕಾಲಿನ ಕಾಮಣ್ಣ

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹೀಗೆ "ಕಾಮಣ್ಣನ ಮಕ್ಕಳು ಕಳ್ಳ ..... ಮಕ್ಕಳು" ಎಂದು ಒದರುತ್ತ ಬೀದಿ ಬೀದಿ ಬಾಯಿ ಬಡೆದು ಕೊಳ್ಳುತ್ತಾ ತಿರುಗುವದು. ಒಂದೊಂದು ಸಲ ನಮ್ಮ ಗೆಳೆಯರ ಮನೆಯಲ್ಲಿನ ಕಟ್ಟಿಗೆಗಳನ್ನು ಕದ್ದು ತರುತ್ತಿದ್ದೆವು.

ಹೋಳಿ ದಿವಸ ಕುಡಿದು ಜನಪದ ಹಾಡು ಹಾಡುತ್ತ ತಿರುಗವ ಜನರನ್ನು ನೋಡುವದೆ ನಮಗೆ ತುಂಬಾ ತಮಾಷೆ. ಅವರು ನೇತಾಡುತ್ತಾ ಬಂದು ಗಟಾರಿನಲ್ಲಿ ಬಂದು ಹೋಳಿ ಆಡುತ್ತಿದ್ದರು. ಕೆಲ ಹಾಡುಗಳು ತುಂಬಾ ಅರ್ಥಪೂರ್ಣ ಆಗಿರುತ್ತಿದ್ದವು. ಕೆಲವು ತುಂಬಾ ಕೆಟ್ಟ ಭಾಷೆಯಿಂದ ಕೂಡಿರುತ್ತಿದ್ದವು.  ಮುಂದೆ ಓದಿ »

Syndicate content