ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Sampada Blogs

ಮಹಾರಾಜ ಸ್ವಾತಿತ್ತಿರುನಾಳ್

ಇತ್ತೀಚೆಗೆ ಮಹಾರಾಜ ಸ್ವಾತಿತ್ತಿರುನಾಳ್ ಅವರ ಬಗ್ಗೆ ಲೇಖನ ಮಾಲೆಯನ್ನು ಬರೆದಿದ್ದೆ.

ಆ ಲೇಖನಗಳ ಕೊಂಡಿ ಇಲ್ಲಿವೆ.

ಮಹಾರಾಜ ಸ್ವಾತಿತ್ತಿರುನಾಳ್ - ೧

ಮಹಾರಾಜ ಸ್ವಾತಿತ್ತಿರುನಾಳ್ - ೨

ಮಹಾರಾಜ ಸ್ವಾತಿತ್ತಿರುನಾಳ್ - ೩  ಮುಂದೆ ಓದಿ »

ಫೇಸ್ ಬುಕ್ ಮುಸ್ಲಿಂ ವಿರೋಧಿ?

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ "ಫ್ಯಾಷೆನ್ ಟ್ರೆಂಡ್" ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ.   ಮುಂದೆ ಓದಿ »

ಬಿ.ಟಿ ಬದನೆಗೆ ಕೇಂದ್ರದಿಂದ ಅನುಮತಿ ನಿರಾಕರಣೆ!

ಬಿ.ಟಿ. ಬದನೆಗೆ ಭಾರತದಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ. ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆಯೆಂದು ಪರಿಸರ ಸಚಿವ ಜೈರಾಮ್ ರಮೇಶ್ ಬದನೆಯ ಈ ತಳಿಯನ್ನು ತಳ್ಳಿಹಾಕಿದ್ದಾರೆ! ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ.


 ಸಧ್ಯದ ಮಟ್ಟಿಗೆ ಪರಿಸರದ ಮೇಲೆ ಒದಗಿದ್ದ ಗಂಡಾಂತರವೊಂದು ದೂರ ಸರಿದಿದೆ. ದೂರ ಸರಿದಿದೆಯಷ್ಟೇ ಹೊರತು ಇನ್ನು ಪೂರ್ಣವಾಗಿ ಅಪಾಯ ತೊಲಗಿಲ್ಲ. ಸರಿಯಾದ ಅಧ್ಯಯನ ನಡೆದು ವಿಜ್ಞಾನಿಗಳು, ವೈದ್ಯರ ಸಹಾಯದಿಂದ ಇದನ್ನು ನೆಲದ ಮೇಲಿಂದ ವಿನಾಶಗೊಳಿಸಿದಾಗ ಮಾತ್ರ ನೆಮ್ಮದಿ.


 ಬಿಟಿ ಬದನೆಯ ಬಗ್ಗೆ ಕೆಲ ಸಮಯದ ಹಿಂದೆ ನಾನು ಬರೆದ ಬರಹವೊಂದು ಇಲ್ಲಿದೆ.   ಇನ್ನೊಮ್ಮೆ ಎಲ್ಲರ ಗಮನಕ್ಕಾಗಿ.

ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು

ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ ತಿಳಿದೆನು. ಇದನ್ನು ಮಾತ್ರ ತಪ್ಪಿಸಿಕೊಳ್ಳಬಾರದು ಎನಿಸಿತು.  ಅದಕ್ಕೆಂದೇ ಕಾದಿದ್ದು ಭಾನುವಾರ, ೭.೨.೨೦೦೯ ರಂದು ಹೋಗಿದ್ದೆ. ಇದು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇತ್ತು.

ವೈಪಿಎಸ್‌ ನವರ ಕಾರ್ಯವೈಖರಿಯು ಛಾಯಾಚಿತ್ರಗಳ ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ಮಾಡಿಸಿತ್ತು.  ನನಗೊಂದು ಆಲೋಚನೆ ಬಂತು. ಇಲ್ಲಿ ಎಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿರಬಹುದು? ಎಂದು.  ಮತ್ತೊಂದು ಸುತ್ತು ಚಿತ್ರಗಳನ್ನು ಬರಿದೇ ಎಣಿಸುತ್ತಾ ಹೋದೆ. ಅಲ್ಲಿದ್ದದ್ದು ೩೧೯. ಇಷ್ಟೂ ಚಿತ್ರಗಳನ್ನು ಸುಂದರವಾಗಿ, ಪ್ರಮಾಣ ಬದ್ಧವಾಗಿ ಪ್ರದರ್ಶನಕ್ಕೆ ಅಣಿಮಾಡಿದ್ದರು.  ಕಪ್ಪು-ಬಿಳುಪು, ಬಣ್ಣ, ಪ್ರವಾಸೀ ಹಾಗೂ ವನ್ಯಜೀವಿಗಳು ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಚಿತ್ರಗಳನ್ನು ಪ್ರದರ್ಶಿಸಿದ್ದರು.
 ಮುಂದೆ ಓದಿ »

ಶಿಲ್ಪ ಕೌಶಲ

ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾರಗಳನ್ನು ತೂರಿಸಿ ನೋಡಿದ್ದೇವೆ. ಏಕ ಶಿಲೆಯ ಗೊಮ್ಮಟ, ಒಂದೇಕಲ್ಲಿನಲ್ಲಿ ಕೆತ್ತಿದ ಸರಪಳಿ ಹೀಗೆ ಅನೇಕ ಅಧ್ಬುತಗಳನ್ನು ಶಿಲ್ಪಿಗಳು ಸೃಷ್ಟಿಸಿದ್ದಾರೆ. ಹಾಗೆ ಹೈದರಾ ಬಾದಿನ ಸಾಲರ್ ಜಂಗ್‌  ಮ್ಯೂಸಿಯಂನಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಮುಸುಕು ಧಾರಿ ಮಹಿಳೆಯನ್ನು ಕಂಡಿದ್ದೇವೆ. ಇವೆಲ್ಲವುಗಳೂ ಕಲಾವಿದರ ನೈಪುಣ್ಯತೆಯ ಸಂಕೇತಗಳು ಅಂತೆಯೇ ನಮ್ಮ ಬಳಿಯಲ್ಲಿರುವ ಈ ಅಧ್ಬುತವನ್ನು ತಮ್ಮ ಮುಂದಿಟ್ಟಿದ್ದೇನೆ. ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿನ ಉಮಾಮಹೇಶ್ವರ ದೇವರ ಲಿಂಗ. ಈ ಲಿಂಗದ ಶಿರೋ ಭಾಗದಲ್ಲಿ ಕೆಂಪಾದ ಒಂದು ಚಿತ್ತಾರ ಕಂಡು ಬರುತ್ತಿದೆ.  ಮುಂದೆ ಓದಿ »

Syndicate content