23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅರಸನ ಮೆರವಣಿಗೆ.....

May 2, 2012 - 9:26pm
kamala belagur

 ಹತ್ತೂರ ಸರದಾರ ಪತ್ತು ಪೀತಾಂಬರ

  
ತೊಟ್ಟು   ಗತ್ತಾಗಿ  ಕುದುರೆ ಹತ್ತಿ ..

.
ಬಾಣ ಬಿರುಸಿನ ಜೊತೆಯಾಗಿ


ಗೆಲುವಿನ ನಗೆ ಬೀರುತ್ತಾ  ಹೊರಟಿರಲು......

.
ದಾರಿಯಲಿ ಸುತ್ತೂರ ಜನ ನೆರೆದಿದ್ರು


ನೋಡಾಲು ಅರಸನ ಮೆರವಣಿಗೆ...


ಕಹಳೆಕೊಂಬು, ಬಾಜಭಜಂತ್ರಿ ಜೊತೆ


ಬಹುಪರಾಕ್ ಹೇಳುತ್ತಾ ನಡೆದಿದ್ರು


ಬಾಲ ಬಡುಕರು ಜೊತೆಯಾಗಿ ......


ಇಂತಿಪ್ಪ ದೊಂಬರಾಟ ಚಿತ್ತೈಸಿರಲು ,


ಅರಸನ ವೈಭೋಗ 


ಕಂಡ  ದೈವ  ನಾಚಿತ್ತು...


ನಲುಗಿತ್ತು ಜನಹಿತ ಅರಸೊತ್ತಿಗೆಯ ಹಿಡಿತದಲ್ಲಿ .....


ಕಮಲಬೆಲಗೂರ್.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಅಂದಿಗೂ (ಅರಸ) ಇಂದಿಗೂ(ಜನ ನಾಯಕರು) ಅದೇ ಸ್ಥಿತಿ ಅದೇ ವ್ಯಥೆ...:((

ಆದರೆ ಇಂದು ಬಾಲ ಬಡುಕರು ಎಲ್ಲಿ ಹಸಿರು ಕಾಣಿಸುತ್ತೋ ಅಲ್ಲಿಗೆ ಸ್ಥಳ ಬದಲಾಯಿಸುವರು ನಾಮ ಬದಲು ಘೋಷಣೆ ಮಾತ್ರ ಅದೇ ಸವಕಲು..:(((

ಪುಟ್ಟ ಬರಹದಲಿ ಚೆನ್ನಾಗಿ ಬರೆದಿರುವಿರಿ ಪ್ರಜೆಗಳ ದೌರ್ಭಾಗ್ಯವನ್ನ.

ಕೆಲವೇ ಘಂಟೆಗಳ ಅಂತರದಲ್ಲಿ ಎಸ್ಟೆಲಾ ಬರಹ ಬರ್ವಿರಿ ನೀವು.,..

ಅದು ನನಗೆ !!!..??
>>> ಜಾಸ್ತಿ ಕೆಲ್ಸಾ ಒಟ್ಟಿಗೆ ಅಥವಾ ಒಂದರ ಹಿಂದೆ ಒಂದು ಶುರು ಹಚ್ಚಿಕೊಂಡಾಗ ಪ್ರತಿಭೆ ಮಂಕು ಆಗ ಬಹುದು ಎನ್ನವುದೂ ನನ್ನ ಭಾವನೆ..
ನೀವ್ ಏನಂತೀರಾ?...
ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamala belagur on

ತಮ್ಮ ಅತ್ಯಮೂಲ್ಯ ಸಲಹೆಗಳಿಗೆ ಸ್ವಾಗತ .ಸಂಪದ ಬ್ಲಾಗ್ನಲ್ಲಿ ನನ್ನ ಆಲೋಚನೆಗಳಿಗೆ ಸಾಕಾರ ರೂಪ ಕೊಡುವ ಆತುರದಲ್ಲಿ ಈ ಬಗ್ಗೆ ಗಮನಹರಿಸಲಾಗಿಲ್ಲ ಕ್ಶಮೆ ಇರಲಿ . ವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಕಮಲಾ ಅವರೆ,
ನಿಮ್ಮ ಕವಿತೆ ಚೆನ್ನಾಗಿ ಮೂಢಿ ಬಂದಿದೆ. ಸಪ್ತಗಿರಿಯವರ ಪ್ರತಿಕ್ರಿಯೆಯನ್ನು ಓದಿದ ಮೇಲೆ ನನಗೆ ಜಿ.ಎಸ್. ಶಿವರುದ್ರಪ್ಪನವರ "ನುಡಿ‍ ಕಿಡಿ" ಕವನ ಸಂಕಲನದ ಒಂದು ಚುಟುಕು ನೆನಪಿಗೆ ಬಂತು.

ಜನ ಸ್ವಾತಂತ್ರ್ಯಕ್ಕಾಗಿ ಎಷ್ಟೇ ಹೋರಾಡಿದರೂ,
ಹೊಸ ನಾಯಕನನ್ನಲ್ಲದೆ ಬೇರೇನನ್ನೂ ಪಡೆಯುವುದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamala belagur on

ಧನ್ಯವಾದಗಳು . ತಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಅರ್ಥವತ್ತಾದ ಕವನ ಚೆನ್ನಾಗಿದೆ ಕಮಲ ಅವರೆ,
ರಾಮಮೋಹನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಕವನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamala belagur on

ಧನ್ಯವಾದಗಳು ಪ್ರೇಮ ಅವರೇ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamala belagur on

ಧನ್ಯವಾದಗಳು ರಾಮಮೋಹನ ರವರೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ashoka_15 on

ಅರಸನಿಗೆಕೊ ಕಳವಳ‌
ನಿಮ್ಮ ಕವನ ಕಂಡು,

ಸುಪರ್,
ಪದಗಳ ಜೊಡಣೆ ಚೆನ್ನಾಗಿದೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamala belagur on

ವಂದನೆಗಳು ಅಶೋಕ್ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.