July 26, 2012 - 12:57pm
ಭಾವನೆಗಳ ಹೂದೋಟದಲ್ಲಿ ಬಯಕೆಯ
ಬೇಲಿಯೊಳಗೆ ವಿಹರಿಸುತಿರುವೆ ನಾನು
ಮಕರಂದ ಹೀರಲು ಬರುವ ದುಂಬಿಯಂತೆ
ಅಲೆಯುತಿರುವೆ ನೀನು
ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ
ಸಾಗುತಿರುವೆ ನಾನು
ನೆನಪುಗಳ ಕಡಲಿನಲಿ
ಅಲೆಗಳಂತೆ ಅಪ್ಪಳಿಸುತಿರುವೆ ನೀನು
ಪಯಣದ ಹಾದಿಯಲಿ ಸಂಚಾರಿಯಂತೆ
ಸಾಗುತಿರುವೆ ನಾನು
ದಾರಿಯಲಿ ಸಿಗುವ ಝರಿಯಂತೆ
ಬಂದು ಹೋಗುತಿರುವೆ ನೀನು
ಎಲೆಯ ಮೇಲಿರುವ
ಇಬ್ಬನಿಯಾಗಿರುವೆ ನಾನು
ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅಲೆದಾಟ
ಸುಂದರವಾದ ಕಲ್ಪನೆ ಚೇತನ್ ರವರೇ
...ಸತೀಶ್
ಉ: ಅಲೆದಾಟ
ಧನ್ಯವಾದ ಸತೀಶವ್ರೆ
ಉ: ಅಲೆದಾಟ: @ ಚ್ಹೇತನ್
"ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು"
ಚ್ಹೆನ್ನಾಗಿದೆ...
ಹೌದು 'ನೀನು' ?????
\|/
ಉ: ಅಲೆದಾಟ: @ ಚ್ಹೇತನ್
ಉತ್ತಮವಾಗಿದೆ.
ಉ: ಅಲೆದಾಟ: @ ಚ್ಹೇತನ್
ಹೌದು 'ನೀನು' ?????
ಚೇತನ ಪಾಪ ಈ ಪ್ರಶ್ನೆಗೆ ಉತ್ತರಿಸಲು ಕಷ್ಟ ಅಲ್ಲವೆ !
ಸಪ್ತಗಿರಿ ಮದುವೆಯಾದವರಿಗೆಲ್ಲ ಇಂತ ಪ್ರಶ್ನೆ ಕೇಳಬಾರದು ಅಂತ ತಿಳಿಯದೆ !
ಉ: ಅಲೆದಾಟ: @ ಚ್ಹೇತನ್
ಹೌದು ಏನ್ರೀ ಸಗಿಯವ್ರೆ ಅವೆಲ್ಲ ಕೇಳ್ಬಾರ್ದು!!!!!
ಧನ್ಯವಾದ ಸಗಿಯವ್ರೆ, ಪ್ರೇಮಾವ್ರೆ, ಪಾರ್ಥವ್ರೆ (ಸಹಾಯಕ್ಕೆ!)
ಉ: ಅಲೆದಾಟ
<<ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು>>
ಏಕೆ ಚಿಕ್ಕೂ ಕೈಕೊಟ್ಟಳೇ ಅಥವಾ ಹಿಡಿಯಲಿಲ್ಲವೇ :))
ಉ: ಅಲೆದಾಟ
:) :)
ಹಿಡಿದಾಗಿದೆ ಶ್ರೀಧರವ್ರೆ
ಉ: ಅಲೆದಾಟ
ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು
" ಅಲೆದಾಟ " ಒಂದು ಸರಳ ಸುಂದರ ಅರ್ಥಪೂರ್ಣ ಕವನ, ಧನ್ಯವಾದಗಳು..