19
June
2013

ಎನುವನೇನೋ

July 10, 2012 - 9:59am
Premashri

ದೇವರೆಂದರೆ  ಭಾರೀ ಭಕ್ತಿ  ಕೆಲವರಿಗೆ
ನಸುಕಿನಲ್ಲೇ ಯಾರದೋ ಮನೆಯ
ಆವರಣದೊಳಗಿನ  ಹೂಗಳನು
ಕಿತ್ತು  ತಂದು ಪೂಜಿಸುವರು

" ನೀರು ಹಾಕಿ  ಕಷ್ಟಪಟ್ಟು ಸಾಕುವುದು ನಾವು,
ಹೂವ ಕೊಯ್ಯುವವರು ಯಾರೋ "
ಗಿಡಗಳಲರಳಿ ನಳನಳಿಸುತ
ಕಂಪ ಬೀರುತಿರಲಿ
ಒಂದಷ್ಟು ದೇವರ ಪೂಜೆಗಿರಲಿ
ಎನ್ನುವ ಅಕೆಯ ಸಂಕಟದ ನುಡಿಗಳು
 
" ಅಲ್ಲಿಯಾದರೂ  ದೇವರಿಗೇ
ಅರ್ಪಿತವಾಗುವುದು ತಾನೇ "
ನಿಟ್ಟುಸಿರಿನೊಂದಿಗೆ ಆತನ
ಸಾಂತ್ವನದ ನುಡಿಗಳು

ಮೂಡಲಿ ಭಾವ
‘ ಮೊದಲು ಮನಗಳ ತಂಪಾಗಿಸು ’
ಎನುವನೇನೋ ಆ ದೇವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

>>" ನೀರು ಹಾಕಿ ಕಷ್ಟಪಟ್ಟು ಸಾಕುವುದು ನಾವು,
ಹೂವ ಕೊಯ್ಯುವವರು ಯಾರೋ "<<
>> "ಅಲ್ಲಿಯಾದರೂ ದೇವರಿಗೇ
ಅರ್ಪಿತವಾಗುವುದು ತಾನೇ "<< ...+1
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಧನ್ಯವಾದಗಳು ಸತೀಶ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಬೆಳೆಸಿದ್ದು ಒಬ್ಬರು ಕೊಯ್ದುಕೊಂಡು ಹೋದದ್ದು ಮತ್ತೊಬ್ಬರು;
ಹಾಗೆಯೇ ಪೂಜೆ ಒಬ್ಬರದು ಅದರ ಫಲ ಮತ್ತೊಬ್ಬರದು = ಹೀಗೆ ದೇವರು ಬ್ಯಾಲೆನ್ಸ್ ಮಾಡುತ್ತಾನೆ.
ಆಲೋಚಿಸಬೇಕಾದಂತಹ ವಿಚಾರವನ್ನು ಸರಳವಾಗಿ ಮಂಡಿಸಿದ್ದೀರ. ಅಭಿನಂದನೆಗಳು, ಪ್ರೇಮಾ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಶ್ರೀಧರ್ ಬಂಡ್ರಿಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.