26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎರಡು ಸಾಲು

June 25, 2012 - 6:26pm
Indushree

-೧-


ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು

ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ 
ಕಾಯೊಡೆದು ಚಿಗುರಿದೆ ನಾನು
ನಿನ್ನ ಸವಿಸ್ಪರ್ಶದಿಂದ

 

-೨-

ಒಮ್ಮೊಮ್ಮೆ ಕಾದಾಡಿ
ಹಿಂದಿಂದೆ ಓಡಾಡಿ
ಮತ್ತೊಮ್ಮೆ ಗುದ್ದಾಡಿ
ಮರುಕ್ಷಣವೇ ಮುದ್ದಾಡಿ
ವೈಷಮ್ಯಗಳ ನಡುವೆಯೂ
ಒಂದಾಗಿ ಬಾಳುವ
ನಾನು ನೀನು
ಅಕ್ವೇರಿಯಂ ಒಳಗಿನ
ಜೋಡಿ-ಮೀನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by maheshbakali on

ಇಂದುಶ್ರೀಯವರೇ ನಿಮ್ಮ ಕವನ ತುಂಬಾ ಚೆನ್ನಾಗಿದೆ. ಮಳೆ ನೀರಿಗಾಗಿ ಕಾಯುತ್ತಿರುವ ಬೀಜ ಹಾಗೂ ನೀರಿನಲ್ಲಿ ಸರಸ ವಿರಸಗಳ ಮಧ್ಯೆ ಜೀವಿಸುತ್ತಿರುವ ಜೋಡಿ ಮೀನುಗಳು. ಹೀಗೆ ಬರೆಯುತ್ತಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಸೊಗಸಾಗಿದೆ, ಇಂದುಶ್ರೀ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Indushree on

ಮಹೇಶ್ ಬಾಕಲಿ ಹಾಗೂ ಕವಿನಾಗರಾಜ್ ಇಬ್ಬರಿಗೂ ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಸಖತ್,....

ಸಮರಸ‍ ಸ‌ಹಬಾಳ್ವೆ ಬಗ್ಗೆ ಸಖತ್...ಬರಹ‌

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.