June 25, 2012 - 6:26pm
-೧-
ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು
ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ
ಕಾಯೊಡೆದು ಚಿಗುರಿದೆ ನಾನು
ನಿನ್ನ ಸವಿಸ್ಪರ್ಶದಿಂದ
-೨-
ಒಮ್ಮೊಮ್ಮೆ ಕಾದಾಡಿ
ಹಿಂದಿಂದೆ ಓಡಾಡಿ
ಮತ್ತೊಮ್ಮೆ ಗುದ್ದಾಡಿ
ಮರುಕ್ಷಣವೇ ಮುದ್ದಾಡಿ
ವೈಷಮ್ಯಗಳ ನಡುವೆಯೂ
ಒಂದಾಗಿ ಬಾಳುವ
ನಾನು ನೀನು
ಅಕ್ವೇರಿಯಂ ಒಳಗಿನ
ಜೋಡಿ-ಮೀನು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಎರಡು ಸಾಲು
ಇಂದುಶ್ರೀಯವರೇ ನಿಮ್ಮ ಕವನ ತುಂಬಾ ಚೆನ್ನಾಗಿದೆ. ಮಳೆ ನೀರಿಗಾಗಿ ಕಾಯುತ್ತಿರುವ ಬೀಜ ಹಾಗೂ ನೀರಿನಲ್ಲಿ ಸರಸ ವಿರಸಗಳ ಮಧ್ಯೆ ಜೀವಿಸುತ್ತಿರುವ ಜೋಡಿ ಮೀನುಗಳು. ಹೀಗೆ ಬರೆಯುತ್ತಿರಿ.
ಉ: ಎರಡು ಸಾಲು
ಸೊಗಸಾಗಿದೆ, ಇಂದುಶ್ರೀ.
ಉ: ಎರಡು ಸಾಲು
ಮಹೇಶ್ ಬಾಕಲಿ ಹಾಗೂ ಕವಿನಾಗರಾಜ್ ಇಬ್ಬರಿಗೂ ಧನ್ಯವಾದಗಳು :)
ಉ: ಎರಡು ಸಾಲು
ಸಖತ್,....
ಸಮರಸ ಸಹಬಾಳ್ವೆ ಬಗ್ಗೆ ಸಖತ್...ಬರಹ
\|/