ಈಗಿನಂತೆ 4 ಸದಸ್ಯರು ಮತ್ತು 60 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚಿತ್ರರಚನೆಯು ತರ್ಕವೆಂಬ ನಂಬಿಕೆ ರೂಪದ ತರ್ಕದೊಳಗಿನ ನಂಬಿಕೆಯೆ? -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೯
anilkumar's picture
ಎಚ್.ಎ. ಅನಿಲ್ ಕುಮಾರ್
24
Jun
2010
ಪುಟ

(೫೮)

     "ಚಿತ್ರಕಲೆ ಕಲಿಸುವುದೆಂದರೆ...

ಪ್ರತಿಕ್ರಿಯೆಗಳು: 1
ಹಿಟ್ಸ್ : 851
ಮನೆ ಮದ್ದು (೨) - ಅಮೃತ ಬಳ್ಳಿ
rajalaxmi's picture
ರಾಜಲಕ್ಷ್ಮಿ
18
Oct
2011
ಲೇಖನ

       ...

ಪ್ರತಿಕ್ರಿಯೆಗಳು: 9
ಹಿಟ್ಸ್ : 397
ಗಿಳಿಯು ಪಂಜರದೊಳಿಲ್ಲ
uday_itagi's picture
ಉದಯ್ ಇಟಗಿ
29
Dec
2009
ಪುಟ

ಪ್ರೀತಿಯ ಅಶ್ವತ್ಥ್ ಅವರೆ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,020
ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’
ramaswamy's picture
ಡಿ.ಎಸ್.ರಾಮಸ್ವಾಮಿ
08
Aug
2010
ಪುಟ

ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ...

ಪ್ರತಿಕ್ರಿಯೆಗಳು: 1
ಹಿಟ್ಸ್ : 758
ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?
uniquesupri's picture
ಸುಪ್ರೀತ್.ಕೆ.ಎಸ್
16
Nov
2011
ಲೇಖನ

ಪರಮಾತ್ಮ ನೋಡಿದ ತರುವಾಯ ಸಿನೆಮಾ ಹೇಗಿತ್ತು ಎಂದರೆ ಸಿನೆಮಾದ ಪ್ರಭಾವದಲ್ಲಿಯೇ "ಯಾವನಿಗೊತ್ತು..." ಎಂದು ಉಡಾಫೆಯಲ್ಲಿ ಹೇಳಿಬಿಡಬಹುದಿತ್ತು. ಇಲ್ಲವೇ ಭಟ್ಟರು ತಮ್ಮ ಸಿನೆಮಾದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 591
ಕೋಲಾಹಲ
kesari's picture
28
Dec
2006
ಬ್ಲಾಗ್ ಬರಹ

"ಈ ಹೊಸ ವರ್ಷದ ಬರುವಿಕೆಯನ್ನು ತಂಪು ಪಾನೀಯ ಕುಡಿಯದೆ ಆಚರಿಸಿ"

ಕೋಲಾದಂತಹ ತಂಪು ಪಾನೀಯಗಳನ್ನು ಕುಡಿಯದಿರಲು ಕಾರಣಗಳು-


* ಕಾರ್ಬೋನೇಟೆಡ್ ತಂಪು...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,283
ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
23
Dec
2005
ಪುಟ
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ...
ಪ್ರತಿಕ್ರಿಯೆಗಳು: 4
ಹಿಟ್ಸ್ : 1,986
೧. ಬಂದಿಳಿದೆ!
benaka's picture
ಬೆನಕ
25
Apr
2006
ಬ್ಲಾಗ್ ಬರಹ

ನನ್ನ ಜಪಾನ್ ಪ್ರವಾಸ : ೧. ಬಂದಿಳಿದೆ!

------------------------------

...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,827
ಪಟ್ಟಣಿಗರ ಮಣ್ಣಿನ ನಂಟು
palachandra's picture
ಪಾಲಚಂದ್ರ
26
Jul
2011
ಲೇಖನ

ಬೆಂಗಳೂರಿನ ಇವರ ಮನೆಯ ಸುತ್ತ ಹಕ್ಕಿಗಳು ಸದಾ ಬ್ಯುಸಿ 

...
ಪ್ರತಿಕ್ರಿಯೆಗಳು: 4
ಹಿಟ್ಸ್ : 548
ಆದಿಶಂಕರ ಪ್ರತಿಪಾದಿತ ಜೀವನತತ್ತ್ವ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
18
May
2010
ಪುಟ

  ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.
...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,183

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಒಮ್ಮೊಮ್ಮೆ ಅನ್ಸುತ್ತೆ..

ಒಮ್ಮೊಮ್ಮೆ ಅನ್ಸುತ್ತೆ..

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.
ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತ
ಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮಲ್ಲಿ ಕಳ್ರೆ ಜಾಸ್ತಿ ಆಗ್ಬಿಟ್ರ ಅಂತ, ಸುಮ್ನೆ ಊರಿಗೊಂದು ಜೈಲು ಕಟ್ಟೊ ಬದ್ಲು,
ನಾಡಿಗೆ, ಗೋಡೆ ಕಟ್ಸಿಬಿಟ್ರೆ, ಕರ್ಚಾದ್ರು ಉಳಿಯುತ್ತೆ.

ಒಮ್ಮೊಮ್ಮೆ ಅನ್ಸುತ್ತೆ..
ಎಲ್ಲರು ಈ ಹೊಸ ಟೆಕ್ನಾಲಜಿ, ಕ್ಯಾಮ್ರ , ಎಲ್ಲದ್ರು ಬಗ್ಗೆ ಹುಷಾರಿರಬೇಕು. ಅಂತ.
ನೋಡಿ ವಿರೋದ ಪಕ್ಷವೆಲ್ಲ ಸೇರಿದ್ರು ಮಾಡಕ್ಕಾಗದ ಕೆಲ್ಸಾನ ,
ಒಂದು ಕ್ಯಾಮ್ರ ಕಣ್ಣು ಮಾಡ್ಬಿಡ್ತು, ಮೂರು ಮೂರು ಜನ ಮಿನಿಷ್ಟ್ರನ್ನ ಒಟ್ಟೊಟ್ಗೆ
ರಾಜ್ನಾಮೆ ಕೊಡೊ ಹಾಗೆ ಮಾಡ್ಬುಡ್ತು!!

 

Average: 4.2 (6 votes)
163 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
H A Patil's picture
09
Feb
2012
6:33

ಉ: ಒಮ್ಮೊಮ್ಮೆ ಅನ್ಸುತ್ತೆ..

ಪಾರ್ಥ ಸಾರಥಿ ಯವರೆ ವಂದನೆಗಳು

' ಒಮ್ಮೊಮ್ಮೆ ಅನ್ಸತ್ತೆ ' ಒದಿದೆ ಎಷ್ಟು ಖಚಿತವಾಗಿ ಕಡಿಮೆ ಶಬ್ದಗಳಲ್ಲಿ ವರ್ತಮಾನದ ಸತ್ಯಗಳನ್ನು ದಾಖಲಿಸಿದ್ದೀರಿ. ಹೌದು ಬಿಳಿ ಕೂದಲಿಗೆ ಕರಿ ಬಣ್ಣ ಹಚ್ಚೊಕಿಂತ ಕರಿ ಕೂದಲಿಗೆ ಬಿಳಿ ಬಣ್ಣ ಹಚ್ಚಿ ಬಿಟ್ಟರೆ ಶ್ರಮ ಹಾಗೂ ಬಣ್ಣದ ಖರ್ಚಿನ ಉಳಿತಾಯ, ಅದರೆ ಮನುಷ್ಯನ ಯೌವನದ ಚಿರಂತನದ ಆಶೆಗೆ ಏನು ಹೇಳುತ್ತೀರಿ? ನನಗೆ ಒಮ್ಮೊಮ್ಮೆ ಅನಿಸುತ್ತೆ ಒಳ್ಳೆಯವರನ್ನು ಜೇಲಿನಲ್ಲಿ ಇಟ್ಟು ಕಳ್ಳ ಕಾಕರನ್ನು ಸಮಾಜ ವಿರೋಧಿ ಗಳನ್ನು ಹೊರಗೆ ಬಿಟ್ಟು ಬಿಡುವುದು ಕಡಿಮೆ ಖರ್ಚಿನ ಕೆಲಸವೆಂದು, ಇನ್ನು ಮೂರನೆಯ ವಿಷಯ ಕೆಮರಾ ಕಣ್ಣುಗಳು ಜಾಗೃತವಾಗಿವೆ ಎಂಬ ಪ್ರಜ್ಞೆಯೂ ಇಲ್ಲದ ಈ ಎಚ್ಚರಗೇಡಿ ನೀತಿಗೆಟ್ಟ ನಡವಳಿಕೆಗೆ ಏನು ಹೇಳಬೇಕು ಮೇಲಾಗಿ ಇವರನ್ನು ಬೆಂಬಲಿಸುವವರಿಗೆ, ಈ ಅಪರಾಧಿ ಪ್ರಜ್ಞೆ ಮತದಾರರಾದ ನಮ್ಮನ್ನು ಕಾಡದೇ ಹೋದರೆ ಈ ದೇಶಕ್ಕೆ ಭವಿಷ್ಯವಿಲ್ಲ, ಉತ್ತಮ ಬರಹ ಧನ್ಯವಾದಗಳು.

partha1059's picture
10
Feb
2012
10:01

ಉ: ಒಮ್ಮೊಮ್ಮೆ ಅನ್ಸುತ್ತೆ..

ದನ್ಯವಾದಗಳು ಪಾಟೀಲರೆ ತಮ್ಮ ಒಳ ದ್ಱುಷ್ಟಿಗೆ

kavinagaraj's picture
09
Feb
2012
7:18

ಉ: ಒಮ್ಮೊಮ್ಮೆ ಅನ್ಸುತ್ತೆ..

:)) ಒಮ್ಮೊಮ್ಮೆ ಅಲ್ಲ, ಹಲವಾರು ಸಲ ಅನ್ನಿಸುತ್ತೆ!!!

partha1059's picture
10
Feb
2012
10:02

ಉ: ಒಮ್ಮೊಮ್ಮೆ ಅನ್ಸುತ್ತೆ..

ನಿಜ ಅನ್ನಿಸುತ್ತೆ.. ಆದರೆ...

bhalle's picture
09
Feb
2012
7:24

ಉ: ಒಮ್ಮೊಮ್ಮೆ ಅನ್ಸುತ್ತೆ..

ತಪ್ಪು ಮಾಡೋದನ್ನೇ ಅಭ್ಯಾಸ ಮಾಡಿಕೊಂಡು ಅದನ್ನೇ ಸರಿ ಎಂದು ಎಂದು ಸಾಧಿಸೋ ಇವರನ್ನು ಕಂಡಾಗ‌
ಒಮ್ಮೊಮ್ಮೆ ಅನ್ನಿಸುತ್ತೆ, ನಾನೇ ಸ‌ರಿ ಇಲ್ವೇನೋ ಅಂತ‌ !!

partha1059's picture
10
Feb
2012
10:03

ಉ: ಒಮ್ಮೊಮ್ಮೆ ಅನ್ಸುತ್ತೆ..

ಅನ್ನಿಸೊದೇನು .... ' ಸರಿ ಇಲ್ಲ

makara's picture
09
Feb
2012
7:57

ಉ: ಒಮ್ಮೊಮ್ಮೆ ಅನ್ಸುತ್ತೆ..

ಬೆತ್ತಲೆ ಇರುವವರ ಸಾಮ್ರಾಜ್ಯದಲ್ಲಿ ಬಟ್ಟೆ ಹಾಕಿಕೊಂಡವನದೇ ನಾಚಿಕೆಗೇಡಿನ ವಿಷಯ ಅಂತ ಅನ್ನಿಸುತ್ತೆ ಹಾಗೆಂದು ನಾವೂ ಅವರಂತೆ ಇರಲಾಗುತ್ತದೆಯೇ ಪಾರ್ಥ ಸರ್?! ನಾವು ನಾವೇ ಅವರು ಅವರೇ :))

venkatb83's picture
10
Feb
2012
3:05

ಉ: ಒಮ್ಮೊಮ್ಮೆ ಅನ್ಸುತ್ತೆ..

+1
ಶ್ರೀ ಧರ್ ಅವ್ರೆ- ಬಹು ದಿನಗಳ ನಂತರ ಸಂಪದಕ್ಕೆ ಮರಳಿದೀರಾ..

ಸಂತೋಷ..

ಸಕ್ರಿಯರಾಗಿರಿ..

ಶುಭ ದಿನ...

makara's picture
11
Feb
2012
8:22

ಉ: ಒಮ್ಮೊಮ್ಮೆ ಅನ್ಸುತ್ತೆ..

ಸಪ್ತಗಿರಿಯವರೇ,
ನನ್ನದು ರಿಲಯನ್ಸ್ ಲ್ಯಾಂಡ್ ಕನೆಕ್ಷನ್ನು ನಾನು ಸುಮಾರು ಹತ್ತು ದಿವಸಗಳಷ್ಟು ಪ್ರವಾಸದಲ್ಲಿದ್ದಾಗ ನನ್ನ ಸರ್ವೀಸ್ ಡಿಸ್ ಕನೆಕ್ಟ್ ಮಾಡಿದ್ದಾರೆ; ಗಲಾಟೆ ಮಾಡಿದ ನಂತರ ಎರಡು ಸಾರಿ ರೀ ಕನೆಕ್ಟ್ ಮಾಡಿದ್ರು ಮತ್ತೆ ಅದೇನೋ ನನ್ನ ಪೇಮೆಂಟ್ ಅಪ್‍ಡೇಟ್ ಆಗಿಲ್ಲವಂತೆ ಅದನ್ನೇ ಸುಮಾರು ಇಪ್ಪತ್ತು ದಿವಸದಿಂದ ಹೇಳ್ತಾ ಇದ್ದಾರೆ. ಅವ್ರು ಹೇಳಿದಂತೆ ನನ್ನ ರಸೀದಿಯನ್ನು ಸ್ಕ್ಯಾನ್ ಮಾಡಿ ಅವರು ಹೇಳಿದ ಈ‍‍ ಮೇಲ್ ಐಡಿಗೂ ಕಳುಹಿಸಿ ಆಯ್ತು ಆರು ದಿನ ಆಯ್ತು ಆದರೂ ಏನೇನೋ ಕಾರಣ ಹೇಳಿ ನನ್ನ ಸರ್ವೀಸ್ ಅನ್ನ ಅಪ್ ಡೇಟ್ ಮಾಡ್ತಾ ಇಲ್ಲ. ಅದಕ್ಕೆ ಸಂಭಂದಪಟ್ಟವರನ್ನೆಲ್ಲಾ ಫೋನಿನಲ್ಲಿ ಭೇಟಿ ಮಾಡಿದ್ದಾಯಿತು. ಅನಿಲ್ ಅಂಬಾನಿಯೊಬ್ಬರನ್ನು ಬಿಟ್ಟು. ಇದನ್ನು ಯಾವ ರೀತಿ ಟ್ಯಾಕಲ್ ಮಾಡಬೇಕೋ ಅರ್ಥ ಆಗ್ತಾ ಇಲ್ಲ. ಸಂಪದಿಗರ್ಯಾರಾದರೂ ಸಲಹೆ ಕೊಟ್ಟರೆ ಅದರಂತೆ ನಡೆದು ಕೊಳ್ಳುತ್ತೇನೆ. ನಾನೂ ಎಲ್ಲ ಸಂಪದಿಗರನ್ನು ಬಹಳ ಕಾಲದಿಂದ ಮಿಸ್ ಮಾಡ್ಕೋತಾ ಇದೇನೆ. ಇದು ನಮ್ಮ ಕ್ಲಯಿಂಟಿನ ಆಫೀಸಿನಲ್ಲಿ ಓದಿ ಸ್ಪಂದಿಸ್ತಾ ಇದ್ದೇನೆ. ಬೇಗನೇ ನನ್ನ ಸಮಸ್ಯೆ ಸರಿಹೋಗ ಬಹುದೆಂದು ಆಶಿಸುತ್ತಿದ್ದೇನೆ. ಶ್ರೀಕರ್ ಅವರು ಕಳುಹಿಸಿದ ಒಂದು ರಸಮಯ ಮೇಲ್ ಅನ್ನು ಕನ್ನಡಕ್ಕೆ ಅನುವಾದಿಸಿ ನನ್ನ ಸರ್ವಿಸ್ ಪುನರಾರಂಭಗೊಂಡ ನಂತರ ಅಪ್ ಲೋಡ್ ಮಾಡುತ್ತೇನೆ. ಅಲ್ಲಿಯವರೆಗೂ ಎಲ್ಲ ಸಂಪದಿಗರಿಗೂ ನನ್ನ ಶುಭ ಹಾರೈಕೆಗಳು.

partha1059's picture
10
Feb
2012
10:04

ಉ: ಒಮ್ಮೊಮ್ಮೆ ಅನ್ಸುತ್ತೆ..

:)))

ಹೌದು ಶ್ರೀದರೆ ನಾನು ನಾವೆ ಅವರು ಅವರೆ....
ಅವರ ಪಾಡಿಗೆ ಅವರು ನಮ್ಮ ಪಾಡಿಗೆ ನಾವು.

Jayanth Ramachar's picture
09
Feb
2012
9:28

ಉ: ಒಮ್ಮೊಮ್ಮೆ ಅನ್ಸುತ್ತೆ..

ಒಮ್ಮೊಮ್ಮೆ ಮಾತ್ರ ಅನಿಸುವುದರಿ೦ದಲೇ ನಾವು ಹೀಗೇ ಇರುವುದು. ಯಾವಾಗಲೂ ಅನ್ನಿಸಿದರೆ ಎಲ್ಲಾ ಬದಲಾಗುತ್ತಿತ್ತೇನೋ...

partha1059's picture
10
Feb
2012
10:06

ಉ: ಒಮ್ಮೊಮ್ಮೆ ಅನ್ಸುತ್ತೆ..

ಜಯಂತ್ , ಶ್ರೀಕರ್, ಮಂಜುನಾಥ್
ಎಲ್ಲವು ಸರಿ ಹೋಗಿ ಬಿಟ್ಟರೆ ... ಆಮೇಲೆ ಎಲ್ಲ ಏನು ಮಾಡೋದು
ಇದು ಹೀಗೆ ಇರುತ್ತೆ...
ನಾವು ಹೀಗೆ ಇರ್ತೇವೆ..
ನೋಡಿ ಸ್ವಾಮಿ... ನಾವಿರೋದೆ ಹೀಗೆ..

ಪಾರ್ಥಸಾರಥಿ

venkatb83's picture
10
Feb
2012
3:02

ಉ: ಒಮ್ಮೊಮ್ಮೆ ಅನ್ಸುತ್ತೆ..

--------------------------------------------------------------------------------

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮ ಕೆಲಸ ಯಾವಾಗಲು ಸುಲಭ ಮಾಡ್ಕೋಬೇಕು. ಅಂತ.
ಸುಮ್ಮನೆ ಎಷ್ಟೊಂದು ಬಿಳಿಕೂದಲಿಗೆ ಕರಿಬಣ್ಣ ಹಚ್ಚೊಕಿಂತ
ಅಲ್ಲೊಂದು ಇಲ್ಲೊಂದು ಇರೊ ಕರಿ ಕೂದಲಿಗೆ ಬಿಳಿಬಣ್ಣ ಹಚ್ಚೊದು ಸುಲಭ ಅಲ್ವೆ?

ಒಮ್ಮೊಮ್ಮೆ ಅನ್ಸುತ್ತೆ..
ನಮ್ಮಲ್ಲಿ ಕಳ್ರೆ ಜಾಸ್ತಿ ಆಗ್ಬಿಟ್ರ ಅಂತ, ಸುಮ್ನೆ ಊರಿಗೊಂದು ಜೈಲು ಕಟ್ಟೊ ಬದ್ಲು,
ನಾಡಿಗೆ, ಗೋಡೆ ಕಟ್ಸಿಬಿಟ್ರೆ, ಕರ್ಚಾದ್ರು ಉಳಿಯುತ್ತೆ.

------------------------------------------------------------------------

ಗುರುಗಳೆ
ವಾಹ್ವ್!!
ಸೂಪರ್ ....

ಇಡೀ ಕವನವೇ ಹಿಡಿಸಿತು ..
ಸಕತಾಗಿ ಬರ್ದಿದೀರಾ...
ವಾಹ್ವ್!!
ಮೊದಲ ಮಾತು ಕೊನೇ ಸಾಲುಗಳು :()))))೦ ಶುಭ ದಿನ...

partha1059's picture
10
Feb
2012
10:06

ಉ: ಒಮ್ಮೊಮ್ಮೆ ಅನ್ಸುತ್ತೆ..

ವಂದನೆಗಳು ಸಪ್ತಗಿರಿಯವರೆ
ಹೇಗೆ ಸಾಗಿದೆ ಓದು ಬಿಕಾಂ ನದು

venkatb83's picture
11
Feb
2012
1:17

ಉ: ಒಮ್ಮೊಮ್ಮೆ ಅನ್ಸುತ್ತೆ..

ಗುರುಗಳೆ
ಓದು ಚೆನ್ನಾಗಿಯೇ ಸಾಗುತ್ತಿದೆ..

ಏನಾರಾ ನನ್ನ ಓದಿನ ಸಂಬಂಧಿ ಸಂಶಯ ಇದ್ರೆ
ನಿಮಗೆ ಕೇಳುವೆ!