ಈಗಿನಂತೆ 2 ಸದಸ್ಯರು ಮತ್ತು 67 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಗೂದೆ ಹಣ್ಣು ಮತ್ತು ನೆರಳಚ್ಚು
abdul's picture
ಅಬ್ದುಲ್ ಲತೀಫ್ ಸಯ್ಯದ್
27
Jan
2011
ಲೇಖನ

ಗೂದೆ ಹಣ್ಣು ಮತ್ತು ನೆರಳಚ್ಚು...ಇವೆರಡೂ ಪದಗಳಿಗೆ ಇರುವ ಸಂಬಂಧವೇನು ಎಂದು ತಲೆ ಕೆರೆದು ಕೊಳ್ಳಬೇಡಿ. ಪ್ರೊ. ಜಿ. ವೆಂಕಟಸುಬ್ಬಯ್ಯ ನವರ ಸಾಮಾಜಿಕ ನಿಘಂಟು “ಇಗೋ ಕನ್ನಡ”...

ಪ್ರತಿಕ್ರಿಯೆಗಳು: 16
ಹಿಟ್ಸ್ : 791
ಮನಸುಖರಾಯನ ಮನಸು - ಭಾಳ ಛಲೋ ಪುಸ್ತಕ , ಓದ್ರಿ , ಬಿಡಬ್ಯಾಡ್ರಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
02
Sep
2006
ಬ್ಲಾಗ್ ಬರಹ
ಭಾಳ ದಿವಸದಿಂದ ಈ ಪುಸ್ತಕದ ಬಗ್ಗೆ ಬರೀಬೇಕು ಅಂದ್ಕೊಂಡಿದ್ದೆ. ಈಗ ವ್ಯಾಳ್ಯಾ ಕೂಡಿ ಬಂತು. ಈ ಪುಸ್ತಕದ ಬಗ್ಗೆ ಹೀಂಗ ಬರದರs ಛಲೋದು. ಯಾಕಂದರ 'ಇಂಗ್ಲೀಷಿನ್ಯಾಗ BONEY M...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,264
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
24
Apr
2006
ಪುಟ
ಭಾರತದಲ್ಲಿ 'ಬೀ.ಟಿ. ಹತ್ತಿ,' -ಒಂದು ಸಮೀಕ್ಷೆ * ! ಸಾರಾಂಷ : ಕೃಷಿ- ವಿಷ್ವದ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದು ! ೧೮ ನೇ ಶತಮಾನದಲ್ಲಿ, ಇಂಗ್ಲೆಂಡಿನಲ್ಲಾದ, 'ಔದ್ಯೋಗಿಕ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,414
ಸುಬ್ಬುವಿನ ಸಂಪದ ಪರ್ಯಟನೆ !
bhalle's picture
ಶ್ರೀನಾಥ್ ಭಲ್ಲೆ
12
Jan
2011
ಲೇಖನ

ನನಗೆ ಒಂದು ಅಭ್ಯಾಸವಿದೆ .... ಎಷ್ಟೋ ಇವೆ, ಅದರಲ್ಲಿ ಇದೂ ಒಂದು ...

 

ಅದೇನಪ್ಪಾ ಅಂದರೆ, ನಾನು ಬರೆದು, ಸಂಪದದಲ್ಲಿ ಪ್ರಕಟಿಸಿದ ಬರಹವನ್ನು ನನ್ನ...

ಪ್ರತಿಕ್ರಿಯೆಗಳು: 28
ಹಿಟ್ಸ್ : 979
ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ
summer_glau's picture
summer_glau
17
Mar
2010
ಪುಟ

ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ)....

ಪ್ರತಿಕ್ರಿಯೆಗಳು: 10
ಹಿಟ್ಸ್ : 1,253
ಮಳೆಗಾಲದ ಒಂದು ಸಂಜೆ - ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
16
Aug
2011
ಬ್ಲಾಗ್ ಬರಹ

 

 

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ...

ಪ್ರತಿಕ್ರಿಯೆಗಳು: 8
ಹಿಟ್ಸ್ : 444
ಸಚಿನ್ ರಮೇಶ್ ತೆಂಡೂಲ್ಕರ್
Jayanth Ramachar's picture
ಜಯಂತ್ ರಾಮಾಚಾರ್
20
Dec
2010
ಲೇಖನ

ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 877
ಮರೆಯಾದ 'ಎವರ್ ಗ್ರೀನ್ ಹೀರೋ' ದೇವ ಆನಂದ
H A Patil's picture
ಹನುಮಂತ ಪಾಟೀಲ
04
Dec
2011
ಲೇಖನ

     2011 ರ ಡಿಸೆಂಬರ್ 4 ರ ಬೆಳಗು ವಿಷಾದದ ರಾಗವೊಂದನ್ನು ಹೊತ್ತು ತಂದ ಬೆಳಗು ಆಯಿತು. ಮಾಮೂಲಿನಂತೆ ಇಂದು ಬೆಳಿಗ್ಗೆ ಟೆಲಿವಿಜನ್ ಆನ್ ಮಾಡಿದಾಗ ಚಾನಲ್...

ಪ್ರತಿಕ್ರಿಯೆಗಳು: 8
ಹಿಟ್ಸ್ : 133
ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
naasomeswara's picture
ನಾ.ಸೋಮೇಶ್ವರ
10
Jun
2010
ಬ್ಲಾಗ್ ಬರಹ

ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ!
    ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ...

ಪ್ರತಿಕ್ರಿಯೆಗಳು: 53
ಹಿಟ್ಸ್ : 2,756
ಛಂದದ ಪುಸ್ತಕಗಳು
hpn's picture
ಹರಿ ಪ್ರಸಾದ್ ನಾಡಿಗ್
09
Apr
2012
ಲೇಖನ

ಕಳೆದ ಶುಕ್ರವಾರ ಛಂದ ಪುಸ್ತಕದ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇತ್ತು. ಆ ದಿನದ ಕೆಲವು ಚಿತ್ರಗಳು ಇಲ್ಲಿವೆ:

...

ಪ್ರತಿಕ್ರಿಯೆಗಳು: 1
ಹಿಟ್ಸ್ : 309

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

 

 

 

 

 ಈ ಜನರೇಕೆ ಹೀಗೆ?

 

ಮಾಡಿದ್ದ ಮರೆಯುವರು ಮಾಡಲಿಲ್ಲೆನ್ನುವರು

ಕೂಡಿ ಬಾಳಿದರೂ ಕೊರತೆಯ ಹುಡುಕುತ

ರೂಢಿಯೊಳು ಕಪಟ ನಾಟಕಗಳನೆ ಮೆಚ್ಚುವರು

ನಾಡಿನೊಳು ಗುಣಕಿಲ್ಲ ಹಣಕಿಹುದು ಬೆಲೆಯು

ತಿಳಿದರೂ ನಮ್ಮವರೆ ನಮ್ಮೆದೆಯ ಸುಡುವರು

ಬಳಲಿಸುತ ಶುದ್ಧಹೃದಯಿಗಳನು

ಕಳವಳದಿ ಬಳಲಿದರು ಬೆನ್ನು ತೋರಿಸಿ ನಡೆದು

ತಿಳಿಮನವ ಕಲಕಿ ತಳಮಳವೀವರು

ನಮಗೇಕೆ ಬಾರದೋ ಒಳಗೊಂದು ಹೊರಗೊಂದು

ನಮಗಿಲ್ಲಿ  ನೇರ ನಡೆ ನುಡಿಯದೇಕೊ?

ಮೋಸ ವಂಚನೆ ಬರದು ಸೋಗಿನಾ ನಡೆ ಬರದು

ದೋಷವಿದು ಕಲಿಯುಗದಿ ನಿಜದ ನಡೆಯು

 

ಇಲ್ಲಿ ನೀ ನಗಬೇಕು ಎದೆ ಕುದಿಯುತಿದ್ದರೂ

ಇಲ್ಲಿ ಧೂರ್ತಗು ಕೈ ಮುಗಿಯಬೇಕು

ಇಲ್ಲಿ ತೋರಿಕೆಯಾಟ ತೋರಲೇ ಬೇಕಲ್ಲ!

ಇಲ್ಲಿ ಸಜ್ಜನಿಕೆಗೆ ಬೆಲೆ ಅತಿವಿರಳವೂ

ನಿನ್ನ ಜೀವನವನ್ನೆ ನೀ ಕೊಟ್ಟರೇನಾಯ್ತು

ನೀನೇನು ಮಾಡಿರುವಿ ಎನ್ನುವವರದೋ!

ನಿನ್ನ ತ್ಯಾಗಕೆ ಇಲ್ಲಿ ಯಾವ ಬೆಲೆ ಇಲ್ಲವೈ

ನಿನ್ನವರು ನಿನ್ನ ಮೆಚ್ಚರು ದಿಟವಿದು

 

ಗೀತೆಯಲಿ ರಂಗನಾಡಿದ ಮಾತ ನೆನಪಿಸಿಕೊ

ಕರ್ಮವನು ಮಾಡು ಫಲದಾಸೆ ಮರೆತು

ನಿನ್ನ ಕರ್ತವ್ಯವನು ನೀನು ಮಾಡುತ ಸಾಗು

ಇಹಕುಂಟು ಪರಕುಂಟು ನಿನಗೆ ಸುಖವುಂಟು

 

ಯಾರು ಹೊಗಳಿದರೇನು ಯಾರು ತೆಗಳಿದರೇನು

ಆತ್ಮಸಾಕ್ಷಿಯ ದಾರಿ ದೀಪವಾಗಿರಿಸಿ

ಸಂಸಾರ ನಿಸ್ಸಾರ ನೀರಮೇಳಣ ಗುಳ್ಳೆ

ತತ್ವ ಪದ ನೆನಪಿಸುತ ಮುಂದೆ ಸಾಗು

 

ಕರ್ಮದಲಿ ಅನುರಕ್ತಿ ಧರ್ಮದಲಿ ಆಸಕ್ತಿ

ಧರ್ಮ ಕರ್ಮಗಳ ಸಂಗಮದಿ ರಕ್ತಿ

ಮರ್ಮವನು ತಿಳಿ ಜಗದಿ ನಿರ್ಮಲ ಮನಸ್ಕನೇ

ಕರ್ಮ ಫಲತ್ಯಾಗದಲ್ಲಿರೆಲಿ ಆಸಕ್ತಿ

 

 

Average: 4 (4 votes)
134 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
sathishnasa's picture
06
Feb
2012
12:48

ಉ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಪ್ರಶ್ನೆ ಹಾಗೂ ಉತ್ತರ ಎರಡು ನಿಮ್ಮ ಪಧ್ಯ(ಗೀತೆ)ದಲ್ಲಿಯೇ ಇದೇ
>> ಯಾರು ಹೊಗಳಿದರೇನು, ಯಾರು ತೆಗಳಿದರೇನು ಆತ್ಮ ಸಾಕ್ಷಿಯ ದಾರಿ ದೀಪವಾಗಿರಿಸಿ<< ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ ಸಾಲುಗಳು
ಸೊಗಸಾದ ಪದ್ಯ(ಗೀತೆ/ಕವನ) ನಾಗರತ್ನ ರವರೇ
.....ಸತೀಶ್

nagarathnavinayakajoshi's picture
06
Feb
2012
1:39
venkatb83's picture
06
Feb
2012
2:14

ಉ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ನಮಗೇಕೆ ಬಾರದೋ ಒಳಗೊಂದು ಹೊರಗೊಂದು

ನಮಗಿಲ್ಲಿ ನೇರ ನಡೆ ನುಡಿಯದೇಕೊ?

ಯಾರು ಹೊಗಳಿದರೇನು ಯಾರು ತೆಗಳಿದರೇನು

ಆತ್ಮಸಾಕ್ಷಿಯ ದಾರಿ ದೀಪವಾಗಿರಿಸಿ

ಸಂಸಾರ ನಿಸ್ಸಾರ ನೀರಮೇಳಣ ಗುಳ್ಳೆ

ತತ್ವ ಪದ ನೆನಪಿಸುತ ಮುಂದೆ ಸಾಗು

-------------------------------------

ನಾಗರತ್ನ ಅವ್ರೆ- ಕವನ ಅರ್ಥಪೂರ್ಣವೂ ಸಕಾಲಿಕವೂ ಆಗಿದೆ..
ನಂಗೆ ಬಹು ಹಿಡಿಸಿತು ನಮ್ಮ ಮನದ ಭಾವನೆಗಳಿಗೂ ನೀವು ಅಕ್ಚರ ರೂಪ ಕೊಟ್ಟಿದೀರಾ..

ಶುಭವಾಗಲಿ

ವಂದನೆಗಳು

nagarathnavinayakajoshi's picture
06
Feb
2012
2:45

ಉ: ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಧನ್ಯವಾದಗಳು ಸಪ್ತಗಿರಿವಾಸಿಯವರೇ