July 26, 2012 - 8:36pm
ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು ಕೂಗಿ ಕರೆದು ಮತ್ತೆ ಚಂಬಿನಲ್ಲಿ ನೀರು ತರಿಸಿಕೊಂಡು ತನ್ನ ಕಾರ್ಯಕ್ರಮವನ್ನು ಮುಗಿಸುತ್ತಿದ್ದ. ಇದೇ ಕ್ರಮ ದಿನಾಲೂ ಪುನರಾವರ್ತನೆಯಾಗುತ್ತಿತ್ತು. ಅದೊಂದು ದಿವಸ ಗಂಡ ಬಹಿರ್ದೆಶೆಗೆ ಕುಳಿತುಕೊಂಡು ಅಷ್ಟೊತ್ತಾದರೂ; ತನ್ನ ಹೆಂಡತಿಯನ್ನು ನೀರಿಗಾಗಿ ಕೂಗಿ ಕರೆಯಲೇ ಇಲ್ಲ. ಹೆಂಡತಿ ಆಶ್ಚರ್ಯಗೊಂಡು ಹೊರಗೆ ಬಂದು, ಈ ದಿನವೇಕೆ ನೀರಿಗಾಗಿ ತನ್ನನ್ನು ಕೂಗಿ ಕರೆಯಲಿಲ್ಲವೆಂದು ಕೇಳಿದಳು. ಆಗ ಗಂಡ, " ಆ ಕಾಗೆ ದಿನಾಲೂ ಬಂದು ಚೊಂಬು ಉರುಳಿಸುತ್ತಿತ್ತಲ್ಲ, ಅದಕ್ಕೇ ಅದಕ್ಕೊಂದು ಪಾಠ ಕಲಿಸಬೇಕೆಂದು, ಮೊದಲೇ ತೊಳೆದುಕೊಂಡು ಬಂದು ಕೂತ್ಕೊಂಡೆ!"
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಪಾಪ ! ಕಾಗೆಗಳ ಕಾಟ !!!
:)))
ಪಾರ್ಥಸಾರಥಿ
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಪಾರ್ಥಸಾರಥಿಗಳೆ,
ಅದಕ್ಕೇ ಅವನು ಕಾಗೆಗೆ ಹಾಗೆ ಪಾಠ ಕಲಿಸಿದ್ದು :))
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಇದು ಅತಿಯಾದ " ಬುದ್ದಿವಂತಿಕೆ" ...!!
...ಸತೀಶ್
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಬುದ್ಧಿವಂತಿಕೆಯನ್ನು ತೋರಿಸ ಹೋಗಿ ಅವನು ಮಡಿವಂತಿಕೆಯನ್ನು ಮರೆತ :))
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
:) :) :)
ಬಕೆಟ್ ತಗೊಂಡು ಹೋಗಿದ್ರೆ ಆಗ್ತಿತ್ತು!!!
ಉ: ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯
ಹ್ಹ...ಹ್ಹ...ಹ್ಹಾ! ಒಳ್ಳೆಯ ಐಡಿಯಾ ಚಿಕ್ಕೂ!
ಆಗಿನ ಕಾಲದಲ್ಲಿ ಬಕೆಟ್ ಇರಲಿಲ್ಲ; ಒಂದು ವೇಳೆ ಇದ್ದರೂ ಅಷ್ಟೊಂದು ನೀರು ಇರುತ್ತಿರಲಿಲ್ಲ. ಏನೇ ಆಗಲಿ ಐಟಿ....ಬಿಟಿ, ಜಮಾನಾದ ಈ ಬುದ್ಧಿವಂತಿಕೆ ಆಗಿನವರಿಗೆ ಖಂಡಿತ ಇರಲಿಲ್ಲ ಬಿಡಿ. ಇದ್ದಿದ್ದರೆ ಟಾಯ್ಲೆಟ್ ಪೇಪರ್ ಒಯ್ಯುತ್ತಿದ್ದನೇನೋ? :)))