ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..

July 16, 2008 - 11:50pm — ಗಣೇಶ

ರಾಜರ ಕಾಲದಲ್ಲಿ ಆನೆಗಳು ಯುದ್ಧಕ್ಕೆ, ಸರಕು ಸಾಗಿಸಲು ಬೇಕಾಗುತಿತ್ತು.
ಹಬ್ಬದ ಸಮಯದಲ್ಲಿ ಜನರಿಗೆ ತನ್ನ ಸೈನ್ಯಬಲ ತೋರಿಸಲು ಕುದುರೆ, ಆನೆಗಳೊಂದಿಗೆ ಮೆರವಣಿಗೆ ಹೋಗುವುದು ರಾಜರಿಗೆ ಹೆಮ್ಮೆಯ ವಿಷಯ.

ಅದೇ ಈಗ ವಿಜಯದಶಮಿಗೆ ಎಲ್ಲೋ ಇದ್ದ ಅರ್ಜುನ,ದ್ರೋಣ,ಬೀಷ್ಮ..ರನ್ನು ಒಟ್ಟುಗೂಡಿಸಿ ಮೆರವಣಿಗೆ ಮಾಡುವ ಅಗತ್ಯವಿದೆಯಾ?
ದೊಡ್ಡವಾಹನವನ್ನು ಸಿಂಗರಿಸಿ ದೇವಿಯ ಮೆರವಣಿಗೆ ಮಾಡಿದರಾಗದೆ? ಆನೆಯೊಂದನ್ನು ಬಿಟ್ಟು ಉಳಿದೆಲ್ಲಾ ಕುಣಿತ,ಮೆರವಣಿಗೆಗಳು ಇರಲಿ. ಬೇಕಿದ್ದರೆ ಬಿಳಿಯಾನೆಗಳನ್ನು ಮೆರವಣಿಗೆಯಲ್ಲಿ ಸೇರಿಸಲಿ.

ಆನೆಗಳು ಗುಂಪಿನಲ್ಲಿರುವ ಪ್ರಾಣಿ. ಈ ದೇವಸ್ಥಾನಗಳಲ್ಲಿ ಒಂದೊಂದನ್ನೇ ಸಾಕುವುದನ್ನು ನಿಷೇಧಿಸಬಾರದೇ? ನಾನು ಚಿಕ್ಕವನಿದ್ದಾಗ ನಮ್ಮ ಮನೆ ಸಮೀಪ ನದಿಗೆ ಸ್ನಾನಕ್ಕೆ ಆನೆಯನ್ನು ಮಾವುತ ತರುತ್ತಿದ್ದನು.ತಾಸುಗಟ್ಟಲೆ ನೀರಲ್ಲಿ ಅದು ಆಡುವುದನ್ನು ನೋಡುವುದೇ ಚಂದ. ನಂತರ ಹಿಂದಿರುಗಿ ಹೋಗುವಾಗ ನಮ್ಮ ಮನೆಯಲ್ಲಿದ್ದ- ಮಂಗಳೂರು ಸೌತೆ, ಬಾಳೆಗೊನೆ, ಬಾಳೆಗಿಡ,ಕಬ್ಬು, ಏನೂ ಸಿಗದಿದ್ದರೆ ಹಲಸಿನ ಎಲೆಗಳನ್ನಾದರೂ ಹಾಕುತ್ತಿದ್ದೆವು. ಬೀದಿಯ ಎಲ್ಲಾ ಮನೆಗಳವರೂ ಕೊಡುತ್ತಿದ್ದರು.ಅದರ ಹೊಟ್ಟೆಗೆ ಅದು ಯಾವ ಮೂಲೆಗೋ.
ಅದೇ ಈ ದೇವಸ್ಥಾನದ ಎದುರು ೧೦ ಅಡಿ ಉದ್ದಗಲದ ಸ್ಥಳದಲ್ಲಿ ನಿಂತ ಆನೆಗೆ ಭಕ್ತರು ಮಕ್ಕಳ ಕೈಯಿಂದ ಒಂದೊಂದು ಬಾಳೆಹಣ್ಣನ್ನು ಕೊಟ್ಟು ಅದರ ಆಶೀರ್ವಾದವನ್ನು ಪಡೆಯುವದನ್ನು ನೋಡುವಾಗ ಬೇಸರವಾಗುವುದು.

ಬಹಳ ಹಿಂದೆ ಉಡುಪಿ ಪರ್ಯಾಯ ನೋಡಲು ಹೋಗಿದ್ದೆ. ರಥಬೀದಿ ಸುತ್ತ ಕಾಲಿಡಲು ಸ್ಥಳವಿಲ್ಲದಷ್ಟು ಜನವೋ ಜನ. ಮುಂದೆ ಆನೆ, ಹಿಂದೆ ಪಲ್ಲಕ್ಕಿಯಲ್ಲಿ ಸ್ವಾಮಿಗಳು-ಮೆರವಣಿಗೆ ಸಾಗಿತ್ತು. ಇದ್ದಕ್ಕಿದ್ದಂತೆ ಒಂದು ಆನೆಗೆ ಮದ ಬಂತು. ಸಿಕ್ಕಾಪಟ್ಟೆ ಓಡಲು ಸುರು. ಜನ ಚಲ್ಲಾಪಿಲ್ಲಿ. ಆ ಇಕ್ಕಟ್ಟಾದ ಸ್ಥಳದಲ್ಲಿ ಬೀದಿಯುದ್ದಕ್ಕೂ ಓಡಿದರೂ ಯಾರಿಗೂ ಆನೆ ತೊಂದರೆ ಕೊಡಲಿಲ್ಲ. ಸಾಕಿದ ಆನೆ ತೀರಾ ಸಾಧು.

ಆದರೆ ಕೆಲ ತಿಂಗಳ ಹಿಂದೆ ಆನೆಯೊಂದು ಮಾವುತನನ್ನು ಎತ್ತಿ,ಎತ್ತಿ,ಬಿಸಾಕಿ ಕೊಂದು ಹಾಕಿದ ದೃಶ್ಯ ಟಿ.ವಿ.ಯಲ್ಲಿ ನೋಡಿದ್ದೆ. ತನ್ನನ್ನು ಸಾಕಿದವನ ಮೇಲೆ ಅಷ್ಟು ಕೋಪ ಬರಬೇಕಿದ್ದರೆ ಆ ಮಾವುತ ಎಷ್ಟು ಹಿಂಸೆ ಕೊಟ್ಟಿರಬಹುದು.

ಈ ಸಾಕುವವರ/ಮಾವುತರ ಹಿಂಸೆ, ವೀರಪ್ಪನ್ ಹಿಂಸೆಗಿಂತ ಕಮ್ಮಿಯೇನಲ್ಲ.
ಆನೆಯನ್ನು ಅದರ ಪಾಡಿಗೆ ಕಾಡಲ್ಲಿ ಇರಲು ಬಿಡಬಾರದೆ?

  • ದಸರಾ ಆನೆಗಳು
  • ದೇವಾಲಯದ ಆನೆಗಳು
~.~
  • ಗಣೇಶ ರವರ ಬ್ಲಾಗ್
  • Login or register to post comments
  • 162 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶೃಂಗೇರಿಯ ನದಿಯ ಸಮೀಪದಲ್ಲಿ ಮಠದ ಆನೆಗಳು, ಮಾವುತರ ಜೊತೆಗೆ ಗಾಳಿ ಸಂಚಾರದಲ್ಲಿವೆ.
  • ೭೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಸ್ವಾಗತ- ಪ್ರೊ. ಎಲ್. ಎಸ್. ಎಸ್. ರವರಿಗೆ ಅಭಿನಂದನೆಗಳು !
  • ಮೆಱವಣಿ, ಮೆಱವಣಿಗೆ
  • ನನ್ನ ನೆನಪಿನಾಳದಲ್ಲಿ ಅಣ್ಣಾವ್ರು
  • ಗೊರೂರು ರಾಮಸ್ವಾಮಿ ಅಯ್ಯ೦ಗಾರ್ ಅವರ "ಮೆರವಣಿಗೆ"
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator