ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಗಣೇಶ ರವರ ಬ್ಲಾಗ್

ದೃಷ್ಠಿ ವರ್ಗ ಹೋಮ

November 20, 2007 - 11:07pm — ಗಣೇಶ

ಮಧ್ಯರಾತ್ರಿ ಗೌಡ್ರ ಫೋನ್ ಬಂತೆಂದರೆ ಯಾವುದೋ ಸ್ಮಶಾನದಿಂದಲೇ.
ಕೂಡಲೇ ಗಾಡಿ ಏರಿ ಅಲ್ಲಿ ಹೋದರೆ ಜೋರಾಗಿ ಹೋಮ ನಡೆಯುತಿತ್ತು.
ಅದಕ್ಕೂ ಜೋರಾಗಿತ್ತು ಗೌಡರ ಅಳು.
'ಮುಹೂರ್ತ ಮೀರಿ ಹೋಗುತ್ತಿದೆ.ನೀವು ಹೀಗೆ ಅಳುತ್ತಿದ್ದರೆ ಬೆಂಕಿ ಹೊತ್ತಿಸುವುದು ಹೇಗೆ?'ಎಂದು ಶ್ರೀಶ್ರೀಶ್ರೀ(ಒಟ್ಟು ೨೨ಶ್ರೀ)ಜ್ಯೋತಿಷಿ ಹೇಳುತ್ತಿದ್ದರು.ಓಡಿ ಹೋಗಿ ಗೌಡ್ರಿಗೂ ೨೨ಶ್ರೀಗೂ ಅಡ್ಡಬಿದ್ದೆ.ಗೌಡ್ರು ಅಳು ನಿಲ್ಲಿಸಿದರು.
'ಇವನೇ ಏನ್ರೀ, ಗ ಅಕ್ಷರದಿಂದ ಸುರುವಾಗುವ ಗಮಾರ'ಅಂದರು ೨೨ಶ್ರೀಗಳು.'ಗಮಾರ ಅಲ್ಲ ಸಾರ್,ಗಣೇಶ'ಅಂದೆ.
"ಸರಿ,ಸರಿ,ನೋಡು,ಶನಿ ಗೌಡರ ೮ನೇ ಮನೆಯಲ್ಲಿ ನಿಂತು ೩ನೇ ಮನೆ ಕಡೆ ವಕ್ರವಾಗಿ ನೋಡುತ್ತಿದ್ದಾನೆ.ಅದಕ್ಕೇ ಇಷ್ಟೆಲ್ಲಾ ನಡೆಯಿತು.ಈಗ'ದೃಷ್ಠಿ ವರ್ಗ'ಹೋಮದ ಮೂಲಕ ಶನಿ ದೃಷ್ಠಿಯನ್ನು ನಿನ್ನ ಕಡೆಗೆ ಹಾಯಿಸುತ್ತೇನೆ.ನೀನು ಗೌಡರ ಹಿಂದೆ ನಿಂತು ಈ ದರ್ಬೆಯಿಂದ ಅವರ ಬೆನ್ನನ್ನು ಮುಟ್ಟಿಕೊಂಡಿರು"ಎಂದರು.ಶನಿ ದೃಷ್ಠಿಯನ್ನಾದರೂ ಸಹಿಸಬಹುದು,ಗೌಡ್ರ ವಕ್ರದೃಷ್ಟಿ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಸುಮ್ಮನೆ ಹಿಂದೆ ಹೋಗಿ ಅವರು ಹೇಳಿದಂತೆ ನಿಂತೆ.
೨೨ಶ್ರೀಗಳು ಯಾಗದ ನಡುನಡುವೆ ಮೊಬೈಲ್ನಲ್ಲಿ ಮಾತನಾಡುವಾಗ ಗೌಡರ ಬಳಿ ಕೇಳಿದೆ'ಸಾರ್,ಮನೆಯಲ್ಲಿ ಹೆಂಡತಿ ಮಕ್ಕಳು ನನ್ನನ್ನೇ ನಂಬಿದ್ದಾರೆ.ಈ ಯಾಗದಿಂದ ನನಗೇನೂ ತೊಂದರೆಯಿಲ್ಲವೇ?'
'ಭಯ ಬೀಳಬೇಡ.ನಿನಗೆ ಉತ್ತಮ ಭವಿಷ್ಯ ಕಾದಿದೆ.'ಎಂದು ಹೇಳಿ ಮೌನವಾದರು.ಹರಕೆಯ ಕುರಿ ನೆನಪಾಗಿ ಕಣ್ಣು ಕತ್ತಲಾಯಿತು.
ಎಚ್ಚರವಾದಾಗ ಗೌಡರ ಮನೆಯಲ್ಲಿದ್ದೆ(ಎಷ್ಟನೆಯ ಮನೆಯೋ?).ಪಕ್ಕದಲ್ಲಿ ಮುಗುಳ್ನಗುತ್ತಾ ಗೌಡರಿದ್ದರು.'ಕರ್ನಾಟಕದ ಮುಖ್ಯಮಂತ್ರಿಗೆ ನಮಸ್ಕಾರ'ಎಂದ್ರು.ತಿರುಗಿ ನೋಡಿದರೆ ಯಡಿಯೂರಪ್ಪನವರು ಎಲ್ಲೂ ಕಾಣಿಸಲಿಲ್ಲ.
'ನೀನೆ ಕಣಪ್ಪಾ, ಮುಖ್ಯಮಂತ್ರಿ'ಎಂದು, ನಾನು ಚೇತರಿಸಿಕೊಳ್ಳುವ ಮೊದಲೇ "ನನಗೀಗ ಅರ್ಜೆಂಟ್ ದೆಹಲಿಗೆ ಹೋಗಬೇಕು.ನಾನು ಹೇಳಿದಂತೆ ಮಾಡು.ಪ್ರಶ್ನೆ ಕೇಳಬೇಡ.ಎಲ್ಲಾ ಪಕ್ಷದವರನ್ನು ಒಪ್ಪಿಸಿಯಾಗಿದೆ.ಇನ್ನು ೮-೧೦ ತಿಂಗಳು ನೀನು ಮುಖ್ಯಮಂತ್ರಿಯಾಗಿರು.ನಿನ್ನನ್ನು ಎಮ್.ಎಲ್.ಏನೋ.,ಎಮ್.ಎಲ್.ಸೀನೋ ಮಾಡುವೆ.ಮುಂದೆ ನನ್ನ ಮಗ ಮುಖ್ಯಮಂತ್ರಿಯಾಗುವವರೆಗೆ ನನ್ನ ನಂಬಿಗಸ್ತ ಒಬ್ಬ ಆ ಪ್ಲೇಸ್ನಲ್ಲಿ ಇರಬೇಕು"ಎಂದು ಮೊಬೈಲ್ ಕಿವಿಗಿಟ್ಟುಕೊಂಡು ಹೊರಟೇಬಿಟ್ಟರು.ಬಿ.ಜೆ.ಪಿ.,ಕಾಂಗೈಯವರು ಒಪ್ಪಿದ್ದಾರಾ ಎಂದು ಕೇಳಲು ಹೊರಟವನು ಗೌಡರ ತಾಕತ್ತಿನ ಅರಿವಾಗಿ ಸುಮ್ಮನಾದೆ.
ಮೆಲ್ಲನೆ ಎದ್ದು ಕನ್ನಡಿಯಲ್ಲಿ ಮುಖ್ಯಮಂತ್ರಿ ಗತ್ತಿನಲ್ಲಿ ನೋಡಿದೆ.ಸಣಕಲ ಕಡ್ಡಿ ಕೌನ್ಸಿಲರ್ ಪಟ್ಟಕ್ಕೂ ಯೋಗ್ಯನಲ್ಲ ಎಂದು ಒಳ ಮನಸ್ಸು ಹೇಳಿತು.ಗೌಡ್ರು ಬೆಂಬಲಕ್ಕಿರುವಾಗ ನನಗ್ಯಾಕೆ ಚಿಂತೆ ಎಂದು ತಿರುಗಿದಾಗ ಗೋಣಿ ತುಂಬಾ ಪೇಪರುಗಳನ್ನು ತಂದು ಒಬ್ಬಾತ ಎದುರಿಗಿಟ್ಟು 'ಗೌಡ್ರು ಸೈನ್ ಹಾಕಲು ಹೇಳಿದ್ದಾರೆ'ಎಂದು ಹೇಳಿ ಹೋದ.ತೆಗೆದು ನೋಡಿದೆ.'ಷರತ್ತು ಪತ್ರಗಳು'ಬರೀ ಓದಲಿಕ್ಕೇ ಇನ್ನು ಮೂರುದಿನ ಬೇಕಾಗಬಹುದು.'ನನ್ನಿಂದಾಗದು,ನನ್ನಿಂದಾಗದು'ಎಂದು ಕಿರುಚಿದೆ.'ಪರವಾಗಿಲ್ಲಾ,ಸುಮ್ಮನೆ ಮಲಗಿ'ಎಂದಳು ನನ್ನಾಕೆ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 238 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೌಡರ ತುಟಿಯಂಚಿನಲ್ಲಿ ತುಂಟನಗೆ?
  • ಯಾರು ಹೇಳುತ್ತಾರೆ ಇಲ್ಲಿ ಗೌಡರ ಆಡಳಿತ ಮುಗಿದಿದೆ ಎಂದು...
  • ಒಂದು ಸಣ್ಣ ಲೆಕ್ಕ
  • ತೊಟ್ಟಿಮನೆ
  • ತೊಟ್ಟಿಮನೆ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:08am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:02am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:01am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:59am
  • anil.ramesh
    ಉ: ಅರ್ಧ ಚಂದಿರ
    January 8, 2009 - 10:57am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:57am
  • anil.ramesh
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 10:56am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:54am
  • harshab
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:51am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 144 ಅತಿಥಿಗಳು ಆನ್ಲೈನ್ ಇರುವರು.


ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator