ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಮೌನ ಅಭಿಮಾನಿ

November 29, 2007 - 7:50am — ಗಣೇಶ

ಸಂಪದದಲ್ಲಿ ಅನೇಕ ಉತ್ತಮ ಲೇಖನಗಳು,ಕವಿತೆ,ಬ್ಲಾಗ್... ಬರುತ್ತಿವೆ.ಆದರೆ ಹೆಚ್ಚಿನವರು(ನನ್ನನ್ನೂ ಸೇರಿಸಿ) ಅದನ್ನು ಮೆಚ್ಚಿ ಒಂದು ವಾಕ್ಯವಾದರೂ ಪ್ರತಿಕ್ರಿಯೆ ಬರೆಯುವುದಿಲ್ಲ.'ವಕ್ರನಾದ ಶುಕ್ರ'ಹಂಸಾನಂದಿಯವರ ಲೇಖನ ಚೆನ್ನಾಗಿತ್ತು.'ಮೋಹನ ರಾಗದ ಬಗ್ಗೆಯೂ ಲೇಖನಗಳು ಮೋಹಕವಾಗಿತ್ತು.(ನನ್ನ ಮಗ ಸಂಗೀತ ಜೂನಿಯರ್ ಪರೀಕ್ಷೆಗೆ ಕಟ್ಟಿದಾಗ ಸಂಗೀತಕ್ಕೆ ಸಂಬಂಧಿಸಿದ ಕೆಲ ಪುಸ್ತಕಗಳನ್ನು ತಂದಿದ್ದೆ.ಅವುಗಳಲ್ಲಿ ಇಂಗ್ಲೀಷ್ ಗ್ರಾಮರ್ ಕಲಿಸಿದಂತೆ ಸಂಗೀತ ಪಾಠಗಳಿತ್ತು.)ಆ ದಿನದಿಂದ ಬೇರೆ ರಾಗಗಳ ಬಗ್ಗೆ ಅವರ ಲೇಖನ ಬರುವುದನ್ನು ಕಾಯುತ್ತಿದ್ದೇನೆ ಅಷ್ಟೆ. ಪ್ರತಿಕ್ರಿಯೆ ಬರೆಯುವ ಗೋಜಿಗೆ ಹೋಗಲಿಲ್ಲ.
ಪತ್ರಿಕೆ,ವಾರಪತ್ರಿಕೆ,ಟಿ.ವಿ.,ರೇಡಿಯೋ,ಸಿನೆಮಾದಲ್ಲೂ ಹಲವು ವಿಷಯಗಳು ಮೆಚ್ಚಿಗೆಯಾಗುತ್ತದೆ.ನಾವು ಒಂದು ಲೇಖನ/ಕಾರ್ಯಕ್ರಮವನ್ನು ಮೆಚ್ಚಿ ಪತ್ರ ಬರೆದಿದ್ದು ಇದೆಯೋ? ಈಗ ಪತ್ರಿಕೆ,ವಾರಪತ್ರಿಕೆಗಳಲ್ಲಿ ಕೊನೇ ಪುಟಕ್ಕೆ ಮಾತ್ರ ಸೀಮಿತವಾಗಿದ್ದ ಸಿನೆಮಾ ವಿಷಯ ಪ್ರತಿ ಪುಟಗಳನ್ನು ಕಬಳಿಸುತ್ತಾ ಮೊದಲ ಪುಟಕ್ಕೂ ಆಗಮಿಸಿದೆ.'ಚಂದನ' ಬಿಟ್ಟು ಉಳಿದ ಟಿ.ವಿ.ಯವರಿಗಂತೂ ಸಂಗೀತ,ಸಾಹಿತ್ಯ,ಹಾಸ್ಯವೆಲ್ಲಾ ಸಿನಿಮಾಕ್ಕೆ ಸಂಬಂಧಿಸಿದ್ದು ಮಾತ್ರ.
ಕ್ರಿಕೆಟ್,ಸಿನೆಮಾ,ರಾಜಕೀಯದ ಅಭಿಮಾನಿಗಳು ಮಾತ್ರ ಕಾರ್ಯತಹ ಅಭಿಮಾನ ತೋರಿಸುವರು.ನಮ್ಮದೇನಿದ್ದರೂ ಕೇವಲ ಮೌನಾಭಿಮಾನ.

ಮೆಚ್ಚುಗೆ ನುಡಿ ನಮ್ಮ ಹೃದಯದಲ್ಲಿರುತ್ತದೆ.ನಾಲಗೆಗೆ ಬರುವುದಿಲ್ಲ. ತಮ್ಮ ತಮ್ಮ ಮನೆಯಲ್ಲಿ ಇನ್ನೂ ಅಧ್ವಾನ.ಹೃದಯದಲ್ಲಿ ಮೆಚ್ಚುಗೆ,ಬಾಯಲ್ಲಿ ಕಿಡಿನುಡಿ .......

fair and lovelyನೋ ಸ್ನೋವನ್ನೋ ಹಚ್ಚಿ 'ಇದ್ದುದರಲ್ಲೇ'ಸಿಂಗರಿಸಿ ಹೊರಟ ಮಗಳ ಸೌಂದರ್ಯ ಮೆಚ್ಚಿಗೆಯಾದರೂ...ಹೇಳುವುದು-"ಸುಮಾರು ಅರ್ಧ ಘಂಟೆಯಿಂದ ನೋಡುತ್ತಿದ್ದೇನೆ.ಮೇಕಪ್ ಮುಗೀತಾನೇ ಇಲ್ಲಾ..ನೀನು ಕಾಲೇಜಿಗೆ ಹೋಗುವುದಾ?ಫ್ಯಾಷನ್ ಶೋಗಾ?"
ನಾವು just pass ಆಗಿರುವುದು ಗೊತ್ತಿದೆ.ಮಗ ೯೦% ಆಸುಪಾಸಿನಲ್ಲಿ ಮಾರ್ಕ್ ತೆಗೆದುಕೊಳ್ಳುತ್ತಿರುವ ಬಗ್ಗೆ ಹೆಮ್ಮೆಯಿದೆ..."ಸಂಸ್ಕೃತದಲ್ಲಿ ಮಾರ್ಕ್ಸ್ ನೋಡು..ಏನು ಓದುತ್ತಾನೋ ಕಪಿ.ನಿಮ್ಮಮ್ಮನ ಹತ್ತಿರವೇ sign ಹಾಕಿಸಿಕೊ ಹೋಗು"ಎನ್ನುತ್ತೇವೆ.
ತಂದೆಯವರ ಕಾಲು ಬಿದ್ದು ಆಶೀರ್ವಾದ ಪಡಕೊಂಡು ಕೆಲಸಕ್ಕೆ ಹೊರಡಬೇಕು ಅಂದುಕೊಳ್ಳುತ್ತೇವೆ..."ಗ್ಯಾಸ್ ಬುಕ್ ಮಾಡಿದಿರಾ? ಒಂದು ವಾರದಿಂದ ಹೇಳುತ್ತಿದ್ದೇನೆ.ಅದೊಂದು....."ಎಂದು ಮುಖಗಂಟಿಕ್ಕಿಕೊಂಡು ಹೋಗುತ್ತೇವೆ.
ಕೆಲಸದಿಂದ ಬರುವಾಗ ಒಂದು ಮೊಳ ಮಲ್ಲಿಗೆ ತೆಗೆದುಕೊಂಡು ನಮ್ಮಷ್ಟೇ ದುಡಿದು ದಣಿದಿರುವ ಹೆಂಡತಿಗೆ ಕೊಡುವ ಮನಸ್ಸು........ಬ್ಯಾಗ್ ಅವಳ ಮೇಲೆ ಬಿಸಾಕಿ 'ತಲೆ ಸಿಡೀತಾ ಇದೆ.Tea ಆಗಿದ್ಯಾ..ಇಲ್ಲಾ tea ಪುಡಿ ತರಬೇಕಷ್ಟೆಯಾ?'ಕೊಂಕು ನುಡೀತೇವೆ ಯಾಕೆ?ಮದುವೆಗೆ ಮೊದಲು ನೂರಾರು ಬಾರಿ ಹೇಳುತ್ತಿದ್ದ'I LOVE YOU' ಗೋಡ್ರೇಜ್ನೊಳಗೆ ಭದ್ರವಾಗಿಟ್ಟಿರುತ್ತೇವೆ.ಯಾಕೆ ನಾಲಗೆಗೆ ಬರುವುದಿಲ್ಲಾ?
ತಾನೇ ೨-೩ ಖಾಯಿಲೆಯಿಂದ ಬಳಲುತ್ತಿದ್ದರೂ ಮಗ 'ತಲೆಸಿಡಿತಾ ಇದೆ'ಎಂದು ಹೇಳಿದ್ದ ಮಾತು ಕಿವಿಗೆ ಬಿದ್ದಕೂಡಲೇ 'ತಲೆ ನೋವಾ ಮಗನೇ. ಹಣೆಗೆ ವಿಕ್ಸ್ ಹಚ್ಚುತ್ತೇನೆ'ಎಂದ ತಾಯಿಗೆ 'ಏನೂ ಬೇಡ.ನೀನು ಸುಮ್ಮನಿದ್ದರೆ ಸಾಕು.'ಎನ್ನುತ್ತೇವೆ. "ಅಮ್ಮಾ,ನಿನ್ನ ಸೇವೆನೇ ನಾನು ಮಾಡಬೇಕು,ಅದು ಬಿಟ್ಟು ನಿನ್ನ ಹತ್ತಿರ ನಾನು ಕೆಲಸ ಮಾಡಿಸುವುದೇ" ಎಂಬ ಮಾತು ಹೃದಯಕ್ಕೂ ಬಾಯಿಗೂ ನಡುವೆ ಎಲ್ಲೋ ಕಟ್ ಆಗುತ್ತದೆ.
ತಾಯಿಯನ್ನು ಹೃದಯದಲ್ಲಿ ಅತೀ ಪೂಜ್ಯ ಭಾವನೆಯಿಂದ ನೋಡುವೆವು.ಅವರ ಆರೋಗ್ಯ,ಆಹಾರ,ವಿಹಾರದ ಬಗ್ಗೆ ಗಮನಿಸುವುದೇ ಇಲ್ಲ.
ನಾವು ಯಾಕೆ ಹೀಗೆ?

~.~
  • ಗಣೇಶ ರವರ ಬ್ಲಾಗ್
  • Login or register to post comments
  • 534 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 29, 2007 - 8:51am — csomsekraiah

ಉ: ಮೌನ ಅಭಿಮಾನಿ

csomsekraiah's picture

ನಮ್ಮ ನಮ್ಮ ಸೋಮಾರಿತನವನ್ನು ಚನ್ನಾಗಿ ಹೇಳಿದ್ದೀರಿ , ’ಏನು ಬಂದಿರಿ, ಕುಳಿತುಕೊಳ್ಳಿರಿ, ಎಂದರೆ ನಿಮ್ಮ ನೆಲ ಕುಳಿ ಬೀಳುವುದೇ? ಎಂಬ ಅರ್ಠದ ಬಸವಣ್ಣನವರ ಒಂದು ವಚನವಿದೆ , ನಮಗೆಲ್ಲಾ ಬಂದಿರುವುದು ಔದಾರ್ಯದ ದಾರಿದ್ರ್ಯ, ಸಾಮಾನ್ಯ ಮನುಷ್ಯ ಸಹಮಾನವನಿಂದ ಒಂದು ಉದಾರತೆಯ ಮಾತನ್ನು ನಿರೀಕ್ಷಿಸುತ್ತಾನೆ, ಅದು ತೀರಾ ತಪ್ಪಲ್ಲ ಎನಿಸುತ್ತದೆ . ಒಂದು ಸಣ್ಣ ಸ್ಪಂದನ ಕುಟುಂಬಗಳಲ್ಲಿ ಮಧುರ ಭಾವನೆಗಳನ್ನು ಉಳಿಸಿ ಬೆಳಸಬಲ್ಲದು ; ಸಮಾಜದಲ್ಲಿ ವಿಶ್ವಾಸದ ಸರಣಿಯನ್ನೇ ನಿರ್ಮಿಸಬಲ್ಲದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:11am — naasomeswara

ಉ: ಮೌನ ಅಭಿಮಾನಿ

naasomeswara's picture

ಪ್ರಿಯವಾಕ್ಯ ಪ್ರಧಾನೇನ ಸರ್ವೇ ತುಷ್ಯಂತಿ ಜಂತವಃ|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಒಳ್ಳೆಯ ಮಾತುಗಳನ್ನು ಆಡುವುದರಿಂದ ಜಗತ್ತಿನ ಎಲ್ಲ ಜೀವರಾಶಿಗಳಿಗೆ ಸಂತೋಷವಾಗುತ್ತದೆ. ಹಾಗಾಗಿ ನಾವೆಲ್ಲರು ಒಳ್ಳೆಯ ಮಾತುಗಳನ್ನಾಡೋಣ. ಒಳ್ಳೆಯ ಮಾತುಗಳಿಗೆ ನಮ್ಮಲ್ಲಿ ದಾರಿದ್ರ್ಯವೆ? ಎಂದು ಹೇಳುತ್ತದೆ ಒಂದು ಸುಭಾಷಿತ. ಆದರೆ ನಮ್ಮಲ್ಲಿ ಒಳ್ಳೆಯ ಮಾತುಗಳಿಗೆ ನಿಜಕ್ಕೂ ದಾರಿದ್ರ್ಯವಿದೆ!

-ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:50am — shreekant.mishrikoti

ಉ: ಮೌನ ಅಭಿಮಾನಿ

shreekant.mishrikoti's picture

ನಾನು ಕೆಲವು ಸಾರಿ ವಿಮಾನ ಹತ್ತಿದ್ದೇನೆ; ಅನೇಕ ಬಾರಿ ಯಾಂತ್ರಿಕವಾಗಿ ನಿಮ್ಮ ಬೋರ್ಡಿಂಗ್ ಪಾಸ್ ಹರಿದು ನಿಮ್ಮನ್ನು ವಿಮಾನ ಹತ್ತಿಸುತ್ತಾರೆ . ಒಂದು ಸಲ ಆ ಅರೆಗಳಿಗೆಯಲ್ಲಿ ಬೋರ್ಡಿಂಗ್ ಪಾಸ್ ನಲ್ಲಿರೋ ಹೆಸರು ನೋಡಿಕೊಂಡು , "ವೆಲ್ಕಂ ಮಿ. ಶ್ರೀಕಾಂತ್ " ಅಂದ ವಿಮಾನದೋನು . ಆಗ ನನಗೆ ಸಮ್ತೋಷ ಆಗೋದು ಸಹಜ .

ನಾವು ಅನೇಕ ಬಾರಿ ಯಾವ್ದೋ ಕಾಲ್ ಸೆಂಟರ್ ಗೋ , ಖಾಸಗಿ ಕಂಪನಿಗೋ ಫೋನ್ ಮಾಡ್ತೀವಿ .
ಆ ಕಡೆಯಿಂದ ಫೋನು ತಕೊಂಡೋರು ಮೊದಲಿಗೆ ಸ್ವಾಗತ ಹೇಳಿ , ಗುಡ್ಮಾರ್ನಿಂಗ್ ಹೇಳಿ ತಾನು ಇಂಥೋನು , ನಿಮಗಾಗಿ ತಾನು ಏನು ಮಾಡಬಹುದು ಎಂದು ಕೇಳಿ ಸೂಕ್ತ ಉತ್ತರ ಕೊಟ್ಟು ಕೊನೆಗೆ ಮತ್ತೇನಾದರೂ ನಿಮಗೆ ಬೇಕೇ ? ಎಂದು ಕೇಳಿ ಹ್ಯಾವ್ ಎ ಗುಡ್ ಡೇ ಅಂತ ಹೇಳುವಾಗ ನಿಮ್ಮ ಹೆಸರು ಮರೆಯದೇ ಹೇಳಿ ಮಾತುಕತೆ ಮುಗಿಸುವರು .
ಈ ಸಮಯದಲ್ಲಿ ನಾವು ಅವರ ಹೆಸರು ಗಮನಿಸಿ , ನೆನಪಿಟ್ಟುಕೊಂಡಿರ್ತೀವಾ ? ಮಾತನ್ನು ಅವರಂತೆ ಮುಗಿಸುತ್ತೀವಾ ? ಇಲ್ಲವಲ್ಲ ?
ಈ ಅಭ್ಯಾಸ ನಮಗೆ ಇಲ್ಲವೇ ಇಲ್ಲ ;

ನಿನ್ನೆ ನಾನು ಈ ರೀತಿ ಫೋನ್ ಮಾಡಿದಾಗ ಅವನ ಹೆಸರು ಗಮನಿಸಿ , ನೆನಪಿಟ್ಟುಕೊಂಡು , ಕೊನೆಯಲ್ಲಿ ಹೆಸರು ಹೇಳಿ ಥ್ಯಾಂಕ್ ಯು ;
ಹ್ಯಾವ್ ಎ ಗುಡ್ ಡೇ ಎಂದು ವಿಶ್ ಮಾದಿದಾಗ ವನಿಗೆ ಸಂತೋಷ ಆದದ್ದು ಗೊತ್ತಾಯಿತು !
ನೀವೂ ಪ್ರಯತ್ನಪಡಿ ; ವಾಡಿಕೆ ಮಾಡಿಕೊಳ್ಳಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 12:55pm — Sunil Jayaprakash

ಉ: ಮೌನ ಅಭಿಮಾನಿ

Sunil Jayaprakash's picture

ವಾವ್, ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ, ಮಿಶ್ರಿಕೋಟಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 8:02am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಶ್ರೀಕಾಂತ್ ರವರೆ,
ಸುನಿಲ್ ಜಯಪ್ರಕಾಶ್ ರವರಂತೆ ನನಗೂ ತಮ್ಮ ಅಭಿಪ್ರಾಯ ಇಷ್ಟವಾಯಿತು.ಹೆಸರು ನೆನಪಿಟ್ಟುಕೊಳ್ಳುವುದು ನನಗೆ ಬಹಳ ಕಷ್ಟದ ಕೆಲಸ.ಈಗಿನಿಂದಲೇ ಪ್ರಯತ್ನಿಸುವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 8:04am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ನಾ ಸೋಮೇಶ್ವರರವರೆ,

ನಾನು 'ಚಂದನ' ಮತ್ತು ನಿಮ್ಮ ಮೌನ ಅಭಿಮಾನಿ.

ತಾವು ಸಿಟ್ಟಾಗುವುದಿಲ್ಲ ಎಂಬ ನಂಬಿಕೆಯೊಂದಿಗೆ-
ಈ ವಾಕ್ಯ ಸರಿಪಡಿಸಿ 'ಥತ್'ಅಂತ ಹೇಳಿ ನೋಡೋಣ-

"ಚಂ ನ ನ ನಾ ಸುಂ ರ ದ ದ ಲ್ಲೆ ಲ್ಲ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:32am — Sunil Jayaprakash

ಉ: ಮೌನ ಅಭಿಮಾನಿ

Sunil Jayaprakash's picture

ಸೋಮಶೇಖರಯ್ಯನವರೇ, ಈ ಬರಹ ನೋಡಿ. ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ ಇಲ್ಲಿ, ಹೆಚ್.ಎಸ್.ಆರ್.ರಾಘವೇಂದ್ರ ರಾವ್ ಅವರು, ನೀವು ಕೇಳಬಯಸಿದ ವಚನದ ಬಗ್ಗೆ ತಿಳಿಸಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 8:07am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಸೋಮಶೇಖರಯ್ಯನವರೆ,
ನೀವಂದ ಮಾತು ನೂರಕ್ಕೆ ನೂರು ಸತ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:41am — roshan_netla

ಉ: ಮೌನ ಅಭಿಮಾನಿ

roshan_netla's picture

ನಾವು ಯಾಕೆ ಹೀಗೆ ಅಂತ ಕೇಳುವ ಜೊತೆಗೆ ನಾನು ಯಾಕೆ ಹೀಗೆ ಅಂತ ಕೇಳಿ.. ಹಾಗು ಉತ್ತಮ ಲೇಕನಗಳಿಗೆ ಪ್ರತಿಕ್ರೀಯೆ ಬರೆಯಲು ಸುರು ಹಚಿಕೊಳ್ಳಿ, ನಾನು ಪ್ರಯತ್ನಿಸುತ್ತಿದೇನೆ .. Smiling)
ಸಂಪದದಲ್ಲಿ ಈಚೆಗೆ ಕನ್ನಡ ಭಾಷೆ ಬಗ್ಗೆ ಚರ್ಚೆಗೆ ಸಿಕ್ಕ ಪ್ರತಿಕ್ರೀಯೆಗಳು ಬೇರೆ ವಿಷಯಗಳಿಗೆ ಸಿಗ್ತಾಇಲ್ಲ ಅಂತ ನನ್ನ ಅನಿಸಿಕೆ. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 8:00am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ರೋಶನ್ ರವರೆ,
ಮೊದಲಿಗೆ 'ನಾನು ಯಾಕೆ ಹೀಗೆ?'ಎಂದೇ ಬರೆದಿದ್ದೆ.ಮೇಲೆ ಬರೆದಿದ್ದುದರಲ್ಲಿ ಅರ್ಧ ನನ್ನ,ಉಳಿದರ್ಧ ಅಕ್ಕಪಕ್ಕದವರ ವರ್ತನೆ ನೋಡಿ ಬರೆದಿದ್ದು.ಹಾಗಿರುವಾಗ ನಾನು ಎನ್ನುವುದು ತಪ್ಪಾಗುವುದಲ್ವಾ?
ಉತ್ತಮ ಲೇಖನಗಳಿಗೆ ಪ್ರತಿಕ್ರಿಯೆ ತಾವು ಬರೆಯುತ್ತಿರುವಿರಿ.ನಾವು(ನು) ಸುರುಹಚ್ಚಿಕೊಳ್ಳಬೇಕಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:41am — sankul

ಉ: ಮೌನ ಅಭಿಮಾನಿ

sankul's picture

ಬರಬ್ಬರೀ ಹೇಳಿದ್ರಿ ಗುರುಗಳ. ನಿಮ್ಮ ಲೇಖನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸೋದು ಮುಖ್ಯ ಅಂತ ತಿಳಿಸಿದ್ರಿ, ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 11:42am — sankul

ಉ: ಮೌನ ಅಭಿಮಾನಿ

sankul's picture

ಬರಬ್ಬರೀ ಹೇಳಿದ್ರಿ ಗುರುಗಳ. ನಿಮ್ಮ ಲೇಖನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸೋದು ಮುಖ್ಯ ಅಂತ ತಿಳಿಸಿದ್ರಿ, ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 7:57am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 29, 2007 - 12:34pm — lkanil

ಉ: ಮೌನ ಅಭಿಮಾನಿ

lkanil's picture

ಮಾನ್ಯರೆ,
ತಾವು ಬರೆದಿರುವ ವಿಷಯ ನಿಜವಾಗಿಯೂ ಚಿಂತನಾರ್ಹವಾಗಿದೆ. ಆದರೆ ದಿನನಿತ್ಯದ ಜಂಜಾಟದ ಬದುಕಿನಲ್ಲಿ ಇವೆಲ್ಲ ಸಾಧ್ಯವಿಲ್ಲ. ಅಪರೂಪಕ್ಕೊಮ್ಮೆ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸಿ ಮೆಚ್ಹುಗೆಯನ್ನೊ/ಕ್ರತಜ್ನತೆಯನ್ನೊ ವ್ಯಕ್ತಪಡಿಸಬಹುದು ಆಗ ಅದೊಂದು ವಿಶೇಷವೆನಿಸುತ್ತದೆ. ಬದಲಾಗಿ ಎಲ್ಲ ಸಮಯದಲ್ಲಿ ಮಾಡಹೋದರೆ ಕೆಲವೇ ದಿನದಲ್ಲಿ ಅದೊಂದು ಯಾಂತ್ರಿಕ ಕ್ರಿಯೆಯಾಗಿ ಸಪ್ಪೆಯೆನಿಸಿಬಿಡುತ್ತದೆ. ಅಲ್ಲವೇ?
ವಂದನೆಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 7:54am — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಅನಿಲ್ ಸರ್,
>ದಿನನಿತ್ಯದ ಬದುಕಿನಲ್ಲಿ ಇವೆಲ್ಲಾ ಸಾಧ್ಯವಿಲ್ಲ.
-ಸಾಧ್ಯವಿದೆ. ಪ್ರಯತ್ನಿಸಿ ನಂತರ ತಿಳಿಸಿ.

>ಅಪರೂಪಕೊಮ್ಮೆ ಪ್ರತಿಯೊಂದು ಕ್ರಿಯೆಗೆ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಬಹುದು.
-ಪ್ರತಿಯೊಂದು ಕ್ರಿಯೆಗೆ ಬೇಡ.ಮೆಚ್ಚುಗೆಯಾದುದನ್ನು ಕೂಡಲೆ ವ್ಯಕ್ತಪಡಿಸಿ.

>ಎಲ್ಲಾ ಸಮಯದಲ್ಲಿ ಮಾಡಹೋದರೆ ಕೆಲವೇ ದಿನದಲ್ಲಿ ಯಾಂತ್ರಿಕ ಕ್ರಿಯೆಯೆನಿಸಿ ಸಪ್ಪೆಯಾಗಬಹುದು.
- 'ಅಭಿಮಾನಿ ದೇವರು'ಶಬ್ದ ಯಾಂತ್ರಿಕ ಕ್ರಿಯೆ ಅನಿಸುತಿತ್ತೆ?
-ಸಪ್ಪೆಯಾಗುತ್ತಾ ಸಾಗುವ ಯಾಂತ್ರಿಕ ಜೀವನ ಸುಖಮಯವಾಗುವುದು.
ವಂದನೆಗಳು.ನಿಮ್ಮ ಫೊಟೊ ಸುಂದರವಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 8:13pm — muralihr

ಉ: ಮೌನ ಅಭಿಮಾನಿ

muralihr's picture

ದೊಡ್ಡ ಕಿವಿ ಸಣ್ಣ ಕಣ್ಣಿರುವ ಗಣೇಶ ,
ಸರಿಯಾಗಿ ನೋಡು...
ಮೀಸೆ ಕೂಡ ಚೆನ್ನಾಗಿದೆ ಅಲ್ವಾ ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2007 - 5:19pm — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಮುರಳಿ,
ನಿಮ್ಮ ನಗೂ ಚೆನ್ನಾಗಿದೆ.ಹೆಸರಿನಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 2:05am — kalpana

ಉ: ಮೌನ ಅಭಿಮಾನಿ

kalpana's picture

lkanil ಹೇಳೋದು ನಿಜ. ಎಲ್ಲದಕ್ಕೂ ಹೊಗಳಿದರೆ ಅದರ ಬೆಲೆ ಕಮ್ಮಿಯಾಗುತ್ತೆ. ನಮ್ಮಕ್ಕನ ಬಾಯಲ್ಲಿ "ಚೆನ್ನಾಗಿದೆ" ಅನ್ನಿಸಿಕೊಳ್ಳುವುದಕ್ಕೆ ತಿಪ್ಪರಲಾಗ ಹಾಕಬೇಕು! ಆದರೆ, ಅವಳ ಒಂದು ಚೆನ್ನಾಗಿದೆ ನೂರು ನೋಬಲ್ ಪ್ರಶಸ್ತಿಗೆ ಸಮಾನ. ಮಕ್ಕಳಿಗೆ ಬೆನ್ನು ತಟ್ಟುವುದರ ಜೊತೆಗೆ ಆಗಾಗ ತಲೆಗೂ ತಟ್ಟುವಂತೆ ತಿಳಿ ಹೇಳಬೇಕು. ಇಲ್ಲದಿದ್ದರೆ, ಬಹಳ ಬೇಗ ನಮ್ಮ ತಲೆ ಮೇಲೆ ಕೂರ್ತಾವೆ ಅವು Eye-wink

ಅಂದಾಗೆ, ಗಣೇಶ ಅವರೆ, ನಿಮ್ಮ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಮರೆತಿಲ್ಲ Smiling ನಿಮ್ಮ ಮನಸ್ಸಿಗೆ ಅನ್ನಿಸಿದ್ದು ಬರೆದಿದ್ದೀರ. ಅದು ಸರಿ. ಬಹು ಸಮಯ, number of hits ನೋಡಿದರೆ ಎಷ್ಟು ಜನಕ್ಕೆ ನಮ್ಮ ಲೇಖನ ಕಣ್ಣು ಹಾಯಿಸುವಷ್ಟು ಇಷ್ಟವಾಯಿತು ಅಂತ ತಿಳಿಯುತ್ತೆ. ಈ ಜೆಟ್ ಯುಗದಲ್ಲಿ ಅದರಿಂದಲೇ ಖುಷಿ ಪಟ್ಟುಕೋಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2007 - 6:11pm — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಕಲ್ಪನಾ,
ಮಕ್ಕಳಿಗೆ ತಪ್ಪು ಮಾಡಿದಾಗ ಹೊಡೆದ ಹಾಗೆ,ಸರಿ ದಾರಿಯಲ್ಲಿದ್ದಾಗ ಹೊಗಳುವುದನ್ನೂ ಮರೀಬೇಡಿ ಎಂದಿದ್ದೆ.ಅದನ್ನೇ ನೀವು ಉಲ್ಟಾ ಹೇಳಿದಿರಿ-'ಬೆನ್ನು ತಟ್ಟುವಂತೆ ಆಗಾಗ ತಲೆಗೂ ತಟ್ಟುವಂತೆ ತಿಳಿ ಹೇಳಬೇಕು'. ನಿಮ್ಮ ಮಾತು ಸರಿ. ಇನ್ನು ತಲೆ ಮೇಲೆ ಕೂರೋ ವಿಷಯ-ತಲೆ ಮೇಲೆ ನಮ್ಮ ಮಕ್ಕಳು,ಹೃದಯದಲ್ಲಿ ತಂದೆ,ತಾಯಿ,ಅತ್ತೆ,ಮಾವ,ಪಕ್ಕದಲ್ಲಿ ಗಂಡ/ಹೆಂಡತಿ, ಜೀವನ ಸಾಗಲಿ.
ಆದರೆ ನಿಮ್ಮ ಅಕ್ಕನ ರೀತಿ ಮೀನಾಮೇಷ ಎಣಿಸಿ ಪ್ರೀತಿಸುವ ಹೊತ್ತಿಗೆ ಮಕ್ಕಳು ಬೆಳೆದು ಗರಿಬಿಚ್ಚಿ ದೂರಕ್ಕೆ ಹಾರಿ ಹೋಗಿರುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 11:42am — hamsanandi

ಉ: ಮೌನ ಅಭಿಮಾನಿ

hamsanandi's picture

ಗಣೇಶರೆ,

ನನ್ನಂತಹವರಿಗೂ ಒಬ್ಬ ಮೌನಿ ಅಭಿಮಾನಿ ಇರುವುದು ಕೇಳಿ ನನಗೆ ನಿಜವಾಗಿಯೂ ಸಂತೋಷವಾಯಿತು Smiling ಮೋಹನರಾಗದ ಬಗ್ಗೆಯ ಲೇಖನಗಳ ಬಗ್ಗೆ ಒಳ್ಳೆ ಮಾತಾಡಿದ್ದೀರಿ. ಹೀಗೆ ನಾಕಾರು ಜನಕ್ಕೆ ಉಪಯೋಗವಾಗುವ ಹಾಗಿದ್ದರೆ, ಕೆಲವಾದರೂ ಪ್ರಮುಖ ರಾಗಗಳ ಬಗ್ಗೆ ನಾನು ಬರೆಯಬಲ್ಲೆ. ಬರೆಯುತ್ತೇನೆ. (ಒಂದಲ್ಲ ಒಂದು ದಿನ ;೦)

ನೀವು ಹೇಳಿದ ಮಾತಲ್ಲಿ ನಿಜ ಇದೆ. ಎಷ್ಟೋ ಬಾರಿ ನಾನೂ ಏನಾದರೂ ಟಿಪ್ಪಣಿ ಬರೆಯಬೇಕೆಂದುಕೊಂಡರೂ, ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸ್ವಲ್ಪ ಸೋಮಾರಿಯಾಗಿಬಿಡುತ್ತೇನೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 30, 2007 - 12:55pm — savithru

ಉ: ಮೌನ ಅಭಿಮಾನಿ

savithru's picture

>>ನನ್ನಂತಹವರಿಗೂ ಒಬ್ಬ ಮೌನಿ ಅಭಿಮಾನಿ ಇರುವುದು ಕೇಳಿ ನನಗೆ ನಿಜವಾಗಿಯೂ ಸಂತೋಷವಾಯಿತು

ಹಂಸನಂದಿಯವ್ರೆ ..
ಹಿಂಗಂದ್ರೆ ಹೆಂಗೆ... ಇಲ್ಲೂ ಒಬ್ಬ ನಿಮ್ಮ ಅಭಿಮಾನಿ ಇದಾನೆ.

ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡುವಷ್ಟು ( ನಾನು ನನ್ನನ್ನು ನಿಮ್ಮೊಂದಿಗೆ compare ಮಾಡ್ಕೊಳ್ತಾ ಇಲ್ಲ... ಅದು ಸಾಧ್ಯವೂ ಇಲ್ಲ) ಚೆನಾಗಿ ಬರೀತಿರಿ.

ಬರೀತಾ ಇರಿ... ಓದ್ತಾ ಇರ್ತೀನಿ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2007 - 7:09pm — ಗಣೇಶ

ಉ: ಮೌನ ಅಭಿಮಾನಿ

ಗಣೇಶ's picture

ಸವಿತ್ರ್ಹ್ಅವರೆ,
ನಿಮ್ಮ ಪ್ರತಿಕ್ರಿಯೆ ಓದಿ ನನಗೆ ಬಹಳ ಸಂತೋಷವಾಯಿತು(ಹಂಸಾನಂದಿಯವರಿಗಿಂತಲೂ).
ನೀವು ಬರೆದ ಲೇಖನಗಳೂ,ಅದರಲ್ಲಿ 'ಭಾರತ ಎಂದರೆ ಏನು?'ಲೇಖನ ನನಗೆ ಬಹಳ ಇಷ್ಟವಾಗಿತ್ತು.ಚರ್ಚೆ ಅರ್ಧಕ್ಕೆ ನಿಂತಂತೆ ಅನಿಸಿತು.ನೀವು,ಮಹೇಶ್ ಉಳಿದವರು ಅದನ್ನು ಮುಂದುವರಿಸುವಿರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?
  • prestige ಮೈನ್ಟೈನ್ ಮಾಡೋರು
  • ಈ ಪಾಯಿಂಟ್ಸ್ ಯಾಕೆ?
  • ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
  • ಸಂಪದಕ್ಕಾಗಿ ಒಂದು ಮಾತು
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator