Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಗೆಳೆಯರೋ, ವೈರಿಗಳೋ..?

December 30, 2007 - 12:12am — ಗಣೇಶ

- ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ. ಬಾಗಿಲು ತೆರೆದೇ ಇತ್ತು. ಹೊರಟು ರೆಡಿಯಾಗಿದ್ದ ರಾಜು ವಾಂತಿ ಮಾಡುತ್ತಿದ್ದನು. ವಿಚಾರಿಸಿದಾಗ “ಹೆಂಡತಿ ಅರ್ಜೆಂಟಿಗೆ ಪುಳಿಯೊಗರೆ ಮಾಡಿಟ್ಟು ಕೆಲಸಕ್ಕೆ ಹೋಗಿರುವಳು.ಪಿತ್ತವಾಗಿದೆ.ಅದಕ್ಕೆ ವಾಂತಿಯಾಯಿತು.ಸ್ವಲ್ಪ ಸುಧಾರಿಸಿಕೊಂಡು ಬರುವೆನು.”ಎಂದನು.ಕಪಾಟಿನಿಂದ ಜೆಲುಸಿಲ್ ತೆಗೆದು ಕುಡಿದನು.ತುಂಬಾ ಸುಸ್ತಾದವನಂತೆ ಕಾಣುತ್ತಿದ್ದುದರಿಂದ,ಅವನು ಬೇಡವೆಂದರೂ ಕೇಳದೇ ಸಮೀಪದ ಡಾಕ್ಟ್ರನ್ನು ಕಾಡಿಬೇಡಿ ಕರಕೊಂಡು ಬಂದೆನು.ಬರುವಾಗ ಅವನ ಹೆಂಡತಿಗೆ ಫೋನ್ ಮಾಡಿ ತಿಳಿಸಿದೆ. “ನಿನ್ನೆ ರಾತ್ರಿ ಬಹಳ ಹೊತ್ತು ಆಫೀಸಿನ ಕೆಲಸ ಮಾಡುತ್ತಿದ್ದರು.ನಿದ್ರೆ ಇಲ್ಲದೆ ಹಾಗಾಗಿದೆ.ಇನ್ನರ್ಧ ಘಂಟೆಯಲ್ಲಿ ಬರುವೆನು.ಸ್ವಲ್ಪ ನೋಡಿಕೊಳ್ಳಿ” ಎಂದರು.ಗೆಳೆಯರಿಗೆ ಫೋನ್ ಮಾಡಿದಾಗ “ಅವೊಮಿನ್ ಮಾತ್ರೆ ಕೊಟ್ಟು ಕರಕೊಂಡು ಬಾರೋ” ಎಂದರು. “ನಾವು ಬರುವುದಿಲ್ಲ.ನೀವು ಮುಂದುವರಿಸಿ” ಎಂದೆ.
- ಡಾಕ್ಟ್ರು ಬಂದು ಟೆಸ್ಟ್ ಮಾಡಿದವರೇ, ‘ಬಿ.ಪಿ. ಬಹಳ ಜಾಸ್ತಿಯಾಗಿದೆ.ಈ ಕೂಡಲೇ ಆಸ್ಪತ್ರೆಗೆ ಸೇರಿಸಬೇಕು’,ಎಂದರು. ಹೃದಯ ತಜ್ಞರಿಗೆ ಫೋನ್ ಮಾಡಿ ಅಪಾಯ್ಟ್ಮೆಂಟ್ ತೆಗೆದುಕೊಂಡರು. ನಾನು ಡಾಕ್ಟ್ರ ಚೀಟಿ,ಅವನ ಹಳೇ ಮೆಡಿಕಲ್ ರಿಪೋರ್ಟ್‌ಗಳನ್ನೆಲ್ಲಾ ತೆಗೆದುಕೊಂಡು,ಅವ್ನದೇ ಕಾರಲ್ಲಿ ಕರಕೊಂಡು ಹೊರಟೆ.ಅವನ ಹೆಂಡತಿಗೆ ಫೋನ್ ಮಾಡಿ ಆಸ್ಪತ್ರೆಗೆ ಬರಲು ತಿಳಿಸಿದೆ.
- ಹೌದು.ಬಹಳ ವರ್ಷಗಳಿಂದ ಗೆಳೆಯನಿಗೆ ಡಯಬಿಟಿಸ್ ರೋಗವಿದೆ.ಅವನು ಅನೇಕ ಬಾರಿ ಬೇಡ ಎಂದು ಹೇಳಿದರೂ ನಾವೆಲ್ಲಾ ಒತ್ತಾಯಿಸಿ ಟೀ,ಸ್ವೀಟ್ಸ್..,ಎಲ್ಲಾ ತಿನ್ನಿಸುತ್ತಿದ್ದೆವು. “ಅರ್ಧ ಮಾತ್ರೆ ಜಾಸ್ತಿ ತೆಗೆದುಕೊಳ್ಳೋ,ಎಲ್ಲಾ ಸರಿ ಹೋಗುತ್ತದೆ.ಡಾಕ್ಟ್ರಿಗೆ ಭಯಬೀಳಿಸುವುದೇ ಕೆಲಸ. ಇನ್ನಷ್ಟು ಟೆಸ್ಟ್ ಮಾಡಿಸಿ ಇನ್ನಷ್ಟು ಹಣ ಕೀಳುತ್ತಾರೆ” ಎನ್ನುತ್ತಿದ್ದೆವು.
- ಕೆಲ ತಿಂಗಳ ನಂತರ ‘ಶುಗರ್ ಕಂಟ್ರೋಲ್‌ಗೆ ಬರುತ್ತಿಲ್ಲ ಕಣ್ರೋ,ಇನ್ಸುಲಿನ್ ಇಂಜಕ್ಷನ್ ತೆಗೆದುಕೊಳ್ಳಲು ಹೇಳಿದ್ದಾರೆ.’ ಎಂದಾಗಲೂ “ಇನ್ಸುಲಿನ್ ತೆಗೆದುಕೊಂಡರೆ ಜೀವನಪರ್ಯಂತ ತೆಗೆದುಕೊಳ್ಳಬೇಕು. ಬೆಳಗೆದ್ದು ಮೆಂತ್ಯ ತಿನ್ನು,ಹಾಗಲ ರಸ ಕುಡಿ” ಎಂದು ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಕೊಟ್ಟೆವು. ಇನ್ನು ಕೆಲವರು ತಮ್ಮ ತಂದೆಗೆ ಈ ಮಾತ್ರೆಯಲ್ಲಿ ಶುಗರ್ ಕಂಟ್ರೋಲ್ ಇದೆ ಎಂದು ಮಾತ್ರೆಗಳನ್ನೂ ತಂದು ಕೊಟ್ಟರು.ಅವನೂ ಸಹ ಇನ್ಸುಲಿನ್ ತೆಗೆದುಕೊಳ್ಳುವುದನ್ನು ಮುಂದೆ ಹಾಕುತ್ತಾ ಬಂದನು. ಒಂದು ಸಂಜೆ “ಕಣ್ಣು ಮಂಜಾದ ಹಾಗೆ ಆಗುತ್ತಿದೆ.ರಸ್ತೆ ಡಿವೈಡರ್,ಹಂಪ್‌ಗಳ ಅಂದಾಜು ಸಿಗುತ್ತಿಲ್ಲಾ,ಕೂಡಲೇ ಬಾ” ಎಂದು ಕರೆದಲ್ಲಿಗೆ ಹೋಗಿ ಅವನನ್ನು ಮನೆಗೆ ಬಿಟ್ಟು ಬಂದಿದ್ದೆ.ಮಾರನೇ ದಿನ ಕಣ್ಣಿನ ಡಾಕ್ಟ್ರಲ್ಲಿಗೆ ಹೋದಾಗ “ ಕಣ್ಣಿನ ಒಳಗಿನ ಪ್ರೆಷರ್ ಜಾಸ್ತಿಯಾಗಿದೆ.ಕಣ್ಣಿನ ಒಳಗಡೆ ಬ್ಲೀಡಿಂಗ್ ಬೇರೆ ಆಗಿದೆ.ಶುಗರ್ ಆದಷ್ಟು ಬೇಗ ಕಂಟ್ರೋಲ್‌ಗೆ ತರಬೇಕು.ಇಲ್ಲದಿದ್ದರೆ ತೊಂದರೆ”ಎಂದು ಹೇಳಿದರು.ಒಂದು ವಾರ ರಜೆ ಮಾಡಿ ಕಣ್ಣಿನ ಆಪರೇಷನ್ನೋ,ಲೇಸರೋ ಏನೋ ಒಂದು ಮಾಡಿಸಿಕೊಂಡು ಬಂದಿದ್ದನು.ಆವಾಗಲೂ ಗೆಳೆಯರು,ಸಂಬಂಧಿಗಳು ತಮ್ಮ ಎಕ್ಸ್‌ಪರ್ಟ್ ಒಪೀನಿಯನ್ ಕೊಡುವುದನ್ನು ಬಿಡಲಿಲ್ಲ.ಕೆಲಸದ ಒತ್ತಡ ಜಾಸ್ತಿಯಾಯಿತು/ತಲೆಗೆ ಎಣ್ಣೆ ಹಚ್ಚಿ ಮಲಗಿಕೊ/ಸ್ನಾನಕ್ಕೆ ಮೊದಲು ನವರತ್ನ ತೈಲ ಹಾಕಿ ತಲೆಗೆ ಮಾಲೀಸ್ ಮಾಡು/ಕಣ್ಣರೆಪ್ಪೆಗೆ ಮಲಗುವಾಗ ಎಣ್ಣೆ ಹಚ್ಚಿಕೊ,ಕೆಲ ಕಣ್ಣಿನ ಡ್ರಾಪ್ಸ್‌ಗಳನ್ನೂ ಹಾಕಲು ಹೇಳಿದರು.
- ಕೆಲಸಕ್ಕೆ ಸೇರಿದ ಹೊಸತರಲ್ಲಿ ಬೆಳಗೆದ್ದು ಜಾಗಿಂಗ್ ಮಾಡಿ,ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿ,ಸೈಕಲ್‌ನಲ್ಲಿ ಕೆಲಸಕ್ಕೆ ಹೋಗಿಬಂದು,ಸಂಜೆ ಷಟ್ಲ್ ಬ್ಯಾಡ್ಮಿಂಟನ್ ಆಡಿ,ರಾತ್ರಿ ವಾಕಿಂಗ್ ಹೋಗುತ್ತಿದ್ದರೂ ಸುಸ್ತು ಎನ್ನದಿದ್ದವನು,ಈಗ ಎರಡು ಸಲ ವಾಂತಿಗೇ ಸುಸ್ತಾಗಿ ಮಲಗಿರುವವನನ್ನು ನೋಡುವಾಗ ನನ್ನ ಕಣ್ಣು ಮಂಜಾಯಿತು.ಆಸ್ಪತ್ರೆಗೆ ಹೋಗಿ ಡಾಕ್ಟ್ರ ವಶಕ್ಕೆ ಕೊಟ್ಟ ಮೇಲೆ ನನ್ನ ಗಾಬರಿ ಕಡಿಮೆಯಾಯಿತು.ಮಧ್ಯಾಹ್ನದ ವೇಳೆಗೆ ಟೆಸ್ಟ್ ರಿಪೋರ್ಟ್‌ಗಳೆಲ್ಲಾ ಸಿಕ್ಕಿ ಹೃದಯದ ಡಾಕ್ಟ್ರು ಬಂದವರು “ಹೃದಯಕ್ಕೆ ಅಷ್ಟೊಂದು ತೊಂದರೆ ಆಗಿಲ್ಲ.”ಎಂದಾಗ ಸಮಾಧಾನವಾಯಿತು. “ಆದರೆ.. ..(ಪುನಃ ಟೆನ್ಷನ್ ಸುರು) ಕಿಡ್ನಿ ತೊಂದರೆ ಸುರುವಾಗಿದೆ.ಆದರಿಂದಲೇ ಬಿ.ಪಿ. ಕಂಟ್ರೋಲ್ ಆಗುತ್ತಿಲ್ಲ.ಅದಕ್ಕೆ ಸಂಬಂಧಿಸಿದ ಡಾಕ್ಟರ್ ಬಂದಿದ್ದಾರೆ.ಇನ್ನೆರಡು ದಿನ ಆಸ್ಪತ್ರೆಯಲ್ಲಿರಬೇಕು .ಇಪ್ಪತ್ನಾಲ್ಕು ಗಂಟೆಯ ಮೂತ್ರ ಸಂಗ್ರಹಿಸಿ ಟೆಸ್ಟ್ ಮಾಡಬೇಕು.ನಾವು ಹೇಳಿದ ಡಯಟ್ ಬಿಟ್ಟು ಬೇರೆ ಕೊಡಬಾರದು” ಎಂದು ಕೆಲವು ಪಥ್ಯಗಳನ್ನು ಹೇಳಿ ಹೋದರು.
- ಕಿಡ್ನಿಗೂ, ಬಿ.ಪಿ.ಗೂ ಸಂಬಂಧ ನಮಗೆ ಹೊಸದು.ಆದರೂ ನಮ್ಮ ಉಚಿತ ಸಲಹೆ ನಿಲ್ಲಲಿಲ್ಲ-ಧ್ಯಾನ ಮಾಡಿದರಾಯಿತು. ..ಸ್ವಾಮಿಯ ಯೋಗ ಶಿಬಿರಕ್ಕೆ ಸೇರು...,
- ನನ್ನ ಗೆಳೆಯ ಪಕ್ಕಕ್ಕೆ ಕರೆದು ಕೇಳಿದ “ಸಿಗರೇಟು ಸೇದಲಿಲ್ಲ,ಕುಡಿತವಿಲ್ಲ,ಹೆಂಗಸರ ಸಹವಾಸವಿಲ್ಲ,ಎಲ್ಲರಿಗೂ ಸಹಾಯ ಮಾಡಿದ್ದೇನೆ ಹೊರತು ಕೆಟ್ಟದು ಮಾಡಲಿಲ್ಲ.ಆದ್ರೂ ನನಗೇ ಏಕೆ ಈ ಎಲ್ಲಾ ತೊಂದರೆಗಳು?”
- “ಮಾಡಬೇಕಾದುದನ್ನು ಮಾಡಲಿಲ್ಲ.ಡಯಬಿಟಿಸ್‌ನ್ನು ಬೆಳೆಯಲು ಬಿಡಬಾರದಿತ್ತು.”ಎನ್ನಬೇಕೆಂದಿದ್ದೆ.ಆತನ ಡಯಬಿಟಿಸ್ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾಲೂ ಇದೆಯಲ್ಲವೆ.ನಾವು ಆರೋಗ್ಯ ವಿಷಯದಲ್ಲಿ ಅನಗತ್ಯ ಸಲಹೆ ಕೊಡುವುದನ್ನು ನಿಲ್ಲಿಸುವುದು ಒಳಿತಲ್ಲವೆ?

Ornamental seperator
  • ಗಣೇಶ ರವರ ಬ್ಲಾಗ್
  • Login or register to post comments
  • 201 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯಾಯಾಮ್ ಹರಾಮ್ ಹೈ
  • ಕಡೆಯ ಸಲ
  • ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
  • ಪರೀಕ್ಷೆ ತಯಾರಿ.. -ಗಣೇಶ
  • ೨೬-೩-೨೦೨೦ -ಗಣೇಶ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator