July 3, 2012 - 11:33am
ಹೃದಯ ಬಗೆದರೂ
ನೋವು
ಬಗೆಯದಿದ್ದರೂ ನೋವು
ಅದು
ಜೀವ ಸಂವೇದನೆಯ
ನಿರಂತರ ಪ್ರಕ್ರಿಯೆ
***
ಆಗಾಗ ನೆನಪಿಗೆ
ಬಂದು ಕಾಡುತ್ತದೆ
ನನ್ನೂರು
ನಮ್ಮಿಬ್ಬರದು
ಧೀರ್ಘ ಕಾಲದ
ಅಗಲಿಕೆಯ ನೋವು
ನಾವಿಬ್ಬರೂ ಕೂಡಿ
ಅತ್ತು ಹಗುರಾಗುತ್ತೇವೆ
***
ಎಲ್ಲಿಯವರೆಗೆ
ಈ ಜೀವನದ ವನವಾಸ
ಅಜ್ಞಾತವಾಸ
ಮುಗಿಯುವ ವರೆಗೆ
***
ಸರಣಿ:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಚುಟುಕಗಳು_(6)
ಹನುಮಂತ ಪಾಟೀಲರಿಗೆ ವಂದನೆಗಳು,
>>ಎಲ್ಲಿಯವರೆಗೆ
ಈ ಜೀವನದ ವನವಾಸ
ಅಜ್ಞಾತವಾಸ
ಮುಗಿಯುವ ವರೆಗೆ<< ಈ ಸಾಲುಗಳು ಮೇಲ್ನೋಟಕ್ಕೆ ಸಾಧಾರಣವೆನಿಸಿದರೂ ಅದರೊಳಗೆ ಆಧ್ಯಾತ್ಮದ ಹೂರಣವೇ ಅಡಗಿದೆ. ತನ್ನ ತಾನರಿಯುವವರೆಗೆ ತಪ್ಪದು ಈ ವನವಾಸ, ಒಮ್ಮೆ ನಮ್ಮ ನಿಜ ಸ್ವರೂಪ ಗೊತ್ತಾದರೆ ಈ ವನವಾಸವೇ ಮುಗಿಯುತ್ತದೆ. ಬಹಳ ಅರ್ಥಪೂರ್ಣ ಸಾಲುಗಳು.
ಉ: ಚುಟುಕಗಳು_(6)
ಚುಟುಕುಗಳು ಚೆನ್ನಾಗಿವೆ.
ಉ: ಚುಟುಕಗಳು_(6)
ಮೇಡಂ ವಂದನೆಗಳು , ಚುಟುಕುಗಳನ್ನು ಮೆಚ್ಚಿದ್ದೀರಿ ಧನ್ಯವಾದಗಳು.
ಉ: ಚುಟುಕಗಳು_(6)
ಶ್ರೀಧರ ಬಂಡ್ರಿಯವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ, ನಿಮ್ಮ ಗ್ರಹಿಕೆಯ ಆಳ ವಿಸ್ತಾರವಾದುದು, ನಮ್ಮ ಶ್ಲೋಕಗಳು ವಚನಗಳು ಚಿಕ್ಕವಾದರೂ ಬಹಳ ಗೂಢಾರ್ಥವನು ಹೊಂದಿದಂತಹವು, ಅವುಗಳಲ್ಲಿಯ ಒಳನೋಟ ಗ್ರಹಿಸಿದರೆ ಉಂಟು ಇಲ್ಲದಿದ್ದರೆ ಇಲ್ಲ. ಧನ್ಯವಾದಗಳು.
ಉ: ಚುಟುಕಗಳು_(6)
+1.
ಉ: ಚುಟುಕಗಳು_(6)
ಕವಿ ನಾಗರಾಜ ರವರಿಗೆ ವಂದನೆಗಳು,
ಚುಟುಕುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದೀರಿ, ಧನ್ಯವಾದಗಳು,
ಉ: ಚುಟುಕಗಳು_(6)
ಹನುಮಂತ ಅನಂತ ಪಾಟೀಲರವರಿಗೆ ವಂದನೆಗಳು, ಚುಟುಕುಗಳು ತುಂಬಾ ಚನ್ನಾಗಿವೆ, ಹೃದಯದ ಸಂವೇದನೆಯ ನೋವುಗಳು, ದೂರದ ಊರಿನ ನೆನಪಿನ ಬುತ್ತಿಯನ್ನು ಬಿಚ್ಚಿದಾಗ ಕಳೆದುಕೊಂಡ ನೋವು ಕಣ್ಣಿರಾಗುವ ಪರಿ, ಜೀವನವು ಇರುವವರೆಗೂ ಸಂವೇದನಾ ಶೀಲಗಾಗಿ ಬದುಕಿನುದ್ದಕ್ಕೂ ಕಾಡುತ್ತವೆ, ಹಾಗೆಯೇ ಜೊತೆಗಾರನಾಗಿಯೂ ಇರುತ್ತವೆ ಎನ್ನುವ ಚುಟುಕುಗಳು ಅರ್ಥಗರ್ಭಿತ. ಉತ್ತಮ ಚುಟುಕುಗಳನ್ನು ನೀಡಿದ ತಮಗೆ ಧನ್ಯವಾದಗಳು
ಉ: ಚುಟುಕಗಳು_(6)
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು, ಚುಟುಕುಗಳ ಬಗ್ಗೆ ಮೆಚ್ಚಿ ಬರೆದಿದ್ದೀರಿ ಧನ್ಯವಾದಗಳು.
ಉ: ಚುಟುಕಗಳು_(6):ಹಿರಿಯರೇ ...
ಹಿರಿಯರೇ
ಚುಟುಕಗಳಲ್ಲಿ ಜೀ ಅವರು ಹೇಳಿದ ಹಾಗೆ ಅಪರಿಮಿತ ಅರ್ಥವೇ ತುಂಬಿದೆ....
ನೀವ್ ಬರಹಗಳ ಎಲ್ಲ ಪ್ರಕಾರಗಳಲ್ಲಿ ಒಳ್ಳೇ ಹಿಡಿತ ಹೊಂದಿರುವಿರಿ...
ನಿಮ್ಮಿಂದ 'ಒಂದು ಹಾಸ್ಯ' ಬರಹವನ್ನು ನಾ ನಿರೀಕ್ಸಿರುವೆ...
ಶುಭವಾಗಲಿ..
\|/
ಉ: ಚುಟುಕಗಳು_(6):ಹಿರಿಯರೇ ...
ಆತ್ಮೀಯ ಹನುಮಂತ ಪಾಟೀಲರೆ,
ಅರ್ಥಗರ್ಭಿತವಾದ ಚುಟುಕಗಳು. ಪದಗಳು ಕಡಿಮೆಯಾದರೇನು? ಅದರೊಳಗಿನ ಅರ್ಥ ವಿಶಾಲವಲ್ಲವೇ!ಉತ್ತಮ ಬರಹ.
ಧನ್ಯವಾದಗಳು.
ಪ್ರಕಾಶ್
ಉ: ಚುಟುಕಗಳು_(6):ಹಿರಿಯರೇ ...
ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ಉ: ಚುಟುಕಗಳು_(6):ಹಿರಿಯರೇ ...
ಸಪ್ತಗಿರಿಯವರಿಗೆ ವಂದನೆಗಳು
ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು, ನೀವು ನನ್ನಿಂದ ಒಂದು ಹಾಸ್ಯ ಬರಹವನ್ನು ನಿರೀಕ್ಷಿಸಿದ್ದೀರಿ, ಇದು ನನ್ನನ್ನು ಯೋಚನೆಗೆ ಹಚ್ಚಿದೆ, ಹಾಸ್ಯ ನನ್ನ ಬರಹ ಪ್ರಾಕಾರವಲ್ಲವೆಂದು ನನ್ನ ಭಾವನೆ, ಆದರೂ ಈ ನಿಟ್ಟಿನಲ್ಲಿ ಪ್ರಯತ್ನಿಸುವೆ, ಧನ್ಯವಾದಗಳು.
ಉ: ಚುಟುಕಗಳು_(6)
ಚೆನ್ನಾಗಿವೆ ಸರ್
ಉ: ಚುಟುಕಗಳು_(6)
ಚೇತನ ಕೋಡುವಳ್ಳಿ ಯವರಿಗೆ ನಮನಗಳು, ತಮ್ಮ ಪ್ರತಿಕ್ರಿಯೆ ಓದಿದೆ ಮೆಚ್ಚುಗೆಗೆ ಧನ್ಯವಾದಗಳು,