July 22, 2012 - 12:50pm
ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12
ಜೀವನ ಒಂದು
ಸಂಕೀರ್ಣ ಕೋಟೆ
ಮುಗಿಯದ ಚಕ್ರವ್ಯೂಹ
ಅದು ದಾರಿ ಬಿಟ್ಟು
ಕೊಡುವುದು
ಅಸಮಾನ್ಯ ಶೂರರಿಗೆ
ಧೀರರಿಗೆ
ಈ ಜೀವನ ಗೆಲ್ಲಲು
ಅನೇಕರು ರಕ್ತತರ್ಪಣ
ಕೊಟ್ಟು ನೆಲಕ್ಕೊರಗಿದ್ದಾರೆ
***
ಅಂಗವಿಕಲರೂ
ಸುಂದರ ದಾಂಪತ್ಯ
ನಡೆಸಬಲ್ಲರು
ವಿಕಲತೆ
ನೋಡುವ ಕಣ್ಣುಗಳಲ್ಲಿದೆಯೆ
ಹೊರತು ಪ್ರೀತಿಸುವ
ಹೃದಯಗಳಲ್ಲಿ ಅಲ್ಲ
***
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: 'ಚುಟುಕುಗಳು' : @ಹಿರಿಯರೇ.....???
"ವಿಕಲತೆ ನೋಡುವ
ಕಣ್ಣುಗಳಲ್ಲಿದೆಯೆ
ಹೊರತು ಪ್ರೀತಿಸುವ
ಹೃದಯಗಳಲ್ಲಿ ಅಲ್ಲ"
+1
ಹಿರಿಯರೇ
ಅನ್ಯಥಾ ಭಾವಿಸದಿದ್ದರೆ ನಾ ಒಂದು ಕೇಳುವೆ...
ಅದೊಮ್ಮೆ ನೀವು ಮತ್ತು ಇನ್ನೊಬ್ಬ ಹಿರಿಯರಾದ ಪಾಟೀಲ್ರು ಒಂದೇ ಸಿಸ್ಟಂ ಉಪಯೋಗಿಸುವುದು ಅಂತ ಹೇಳಿದ್ದೀರಿ.. ಆದಾಗಲೇ ಪಾಟೀಲರು ಬಹು ಚುಟುಕಗಳನ್ನು ಬರೆದಿರುವುದರಿಂದ, ಈ ಚುಟುಕವನ್ನು ಅವರು(ಪಾಟೀಲರು) ಬರೆದು ಮತ್ತು ನೀವು ಆಕಾಸ್ಮಾತ್ತಾಗಿ ನಿಮ್ಮ ಲಾಗ್ ಇನ್ ಐ ಡಿ ಮೂಲಕ ಸೇರಿಸಿದಿರಾ?
ಈ ಹೊರತಾಗಿ ಚುಟುಕ ಅಪಾರ ಅರ್ಥ ಹೊಂದಿದೆ.. ಮತ್ತು ಅರ್ಥಪೂರ್ಣವಾಗಿದೆ...ಹಿಡಿಸಿತು....
೨ ನೇ ಚುಟುಕ ಅಂತ್ಯ ನನಗೆ ಸೌಂದರ್ಯ ನೋಡುಗರ ಕಣ್ಣಲಿದೆ ಎಂಬ ಆಂಗ್ಲ ಉಕ್ತಿ ನೆನ್ಪಿಸ್ತು...!!
ಶುಭವಾಗಲಿ..
ಉ: 'ಚುಟುಕುಗಳು' : @ಹಿರಿಯರೇ.....???
ಸಪ್ತಗಿರಿ ಅವರೆ ನಮಸ್ಕಾರಗಳು
ಖಂಡಿತವಾಗಿ ನಿಮ್ಮ ಅನಿಸಿಕೆ ಸರಿ,ಅವಸರದಲ್ಲಿ ಅವರ ಪೆನ್ ಡ್ರೈವ್ ನಿಂದ ಕಾಪಿ ಮಾಡಿ ಸಂಪದಕ್ಕೆ ಹಾಕುವಾಗ ಅವರ ಹೆಸರಿಗೆ ಲಾಗ್ ಇನ್ ಆಗದೆ ಈ ಅಚಾತುರ್ಯ ವಾಯಿತು,
ಎಷ್ಟಾದರೂ ಕಾಗೆ ಕಾಗೆಯೆ ಹೊರತು ಕೋಗಿಲೆ ಆಗಲು ಸಾದ್ಯವೆ?
ವಿಶಯ ಗಮನಕ್ಕೆ ಬಂದಾಕ್ಷಣ ಪಾಟೀಲರ ಹೆಸರನ್ನು ಮೇಲೆ ಸೇರಿಸಿದ್ದೇನೆ.
ಉ: 'ಚುಟುಕುಗಳು' : @ಹಿರಿಯರೇ.....???
ಕಾಮತರೆ ಇಂತವೆಲ್ಲ ಆಗುತ್ತೆ ಬಿಡಿ ಅವಸರದಲ್ಲಿ
ನಾನು ಒಮ್ಮೆ ಬೇರೆ ಐಡಿಯಲ್ಲಿ ಹಾಕಿ ನಗುವಿಗೆ ಒಳಗಾಗಿದ್ದೆ
ಪಾರ್ಥಸಾರಥಿ
ಉ: 'ಚುಟುಕುಗಳು' : @ಹಿರಿಯರೇ.....???
ಪಾರ್ಥ ಅವರೆ,
ತಮ್ಮ ಹಾಗೂ ಶ್ರೀಧರ ಬಂಡ್ರಿ .ಸಪ್ತಗಿರಿ ಮತ್ತು ಪಾಟೀಲರ ಪ್ರತಿಕ್ರಿಯೆಗಳಿಂದ ನನ್ನ ಕ್ಷೋಭೆ ಗೊಂಡ ಮನಸ್ಸಿಗೆ ಕೊಂಚ ಸಮಾಧಾನ ವಾಯಿತು.
ವಂದನೆಗಳು
ಉ: 'ಚುಟುಕುಗಳು' : @ಹಿರಿಯರೇ.....???
ಎನ್ ರಮೇಶ ಕಾಮತರಿಗೆ ವಂದನೆಗಳು
' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಅಚಾತುರ್ಯ ಎಲ್ಲರಿಗೂ ಆಗುವಂತಹುದೆ, ನೀವು ಬಹಳ ಸೂಕ್ಷ್ಮ ಮತಿಗಳು ನನಗೆ ಗೊತ್ತು, ಆದರೆ <<< ಎಷ್ಟಾದರೂ .........ಆಗಲು ಸಾಧ್ಯವೆ ? >>> ಎಂದು ನೀವು ಬರೆದುದನ್ನು ನೋಡಿ ವಿಷಾದ ವಾಯಿತು. ನೀವು ಅಷ್ಟು ಬೇಸರಪಟ್ಟುಕೊಳ್ಳಬೇಕಾದ ಪ್ರಮೇಯವಿಲ್ಲ. ನೀವು ಆ ವಿಷಾದ ರಾಗದಿಂದ ಹೊರಬನ್ನಿ, ಧನ್ಯವಾದಗಳು.
ಉ: 'ಚುಟುಕುಗಳು' : @ಹಿರಿಯರೇ.....???
ಪಾಟೀಲರಿಗೆ ನಮಸ್ಕಾರಗಳು
ತಾವು ಬರೆದ ಸಮಾಧಾನದ ನುಡಿಗಳಿಂದ ವಿಕ್ಷಿಪ್ತ ಗೊಂಡ ಮನಸ್ಸು ತಿಳಿಯಾಯಿತು.
ವಂದನೆಗಳು
ಉ: 'ಚುಟುಕುಗಳು' : @ಹಿರಿಯರೇ.....???
ಸಪ್ತಗಿರಿಯವರಿಗೆ ವಂದನೆಗಳು
' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಬಗ್ಗೆ ಕಾಮತರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ್ದೇನೆ. ಇದು ತಾಂತ್ರಿಕ ದೋಷದಿಂದಾದುದು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು,
ಉ: 'ಚುಟುಕುಗಳು' (12):@ಹಿರಿಯರೆ 2
ಹಿರಿಯರೆ ಅನ್ಯಥ ಭಾವಿಸದಿರಿ...
ನೀವೆನೂ ಸಾಮನ್ಯರಲ್ಲ , ಅಪರೂಪದ ಛಿತ್ರ ಮತ್ತು ಮಾಹಿತಿ ನೀಡುವಿರಿ..
ಅವರು(ಪಾಟೀಲರು) ಕವನ ಕ್ಛೆತ್ರ್ದಲ್ಲಿ ನೀವ್ ಈ ಛಿತ್ರ ಬರಹ ಕ್ಛೆತ್ರದಲಿ ಪ್ರವೀಣರು...
\|/
ಉ: 'ಚುಟುಕುಗಳು' (12):@ಹಿರಿಯರೆ 2
ಸಪ್ತಗಿರಿಯವರಿಗೆ ವಂದನೆಗಳು
ಕಾಮತರಿಗೆ ನೀವು ಬರೆದ ಪ್ರತಿಕ್ರಿಯೆ ಓದಿದೆ, ಅವರು ಒಳ್ಳೆಯ ಬರಹಗಾರರು ಕೂಡ, ಅವರು ಕವನ ಲೇಖನಗಳನ್ನು ಬರೆಯಬಲ್ಲ ಸಾಮರ್ಥ್ಯ ಅವರಿಗಿದೆ, ಬರೆಯಲು ಮನಸು ಮಾಡೆಬೇಕಷ್ಟೆ. ಧನ್ಯವಾದಗಳು.
ಉ: 'ಚುಟುಕುಗಳು' (12):@ಹಿರಿಯರೆ 2
ನಿಮ್ಮ ಅಭಿಮಾನದ ಮಾತಿಗೆ ನನ್ನ ನಮನಗಳು ಸಪ್ತಗಿರಿ ಅವರೆ.
ವಂದನೆಗಳು
ಉ: 'ಚುಟುಕುಗಳು' (12)
ಚೆನ್ನಾಗಿದೆ ಸರ್
ಉ: 'ಚುಟುಕುಗಳು' (12)
ಚೇತನ ಕೋಡುವಳ್ಳಿಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು..
ಉ: 'ಚುಟುಕುಗಳು' (12)
ಕಾಮತ್ ಸರ್ ಮತ್ತು ಹನುಮಂತ ಪಾಟೀಲ್ ಸರ್,
ಯಾರು ಪ್ರಕಟಿಸಿದರೇನು, ಕವಿತೆಗಳು ಒಳ್ಳೆಯ ಸಂದೇಶವನ್ನು ಸಾರುತ್ತಿವೆ.
ಇಬ್ಬರೂ ಹಿರಿಯರಿಗೆ ವಂದನೆಗಳು,
ಶ್ರೀಧರ್ ಬಂಡ್ರಿ
ಉ: 'ಚುಟುಕುಗಳು' (12)
ನಿಜ ಶ್ರೀಧರ ಅವರೆ,ಪಾಟೀಲರ ಚುಟುಕು ಗಳಾಗಲಿ,ಕವನಗಳಾಗಲಿ ಅರ್ಥಪೂರ್ಣವಾಗಿರುತ್ತವೆ.
ವಂದನೆಗಳು