22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪಂಚೇಂದ್ರಿಯಗಳ ಮಾಯೆ (ಶ್ರೀ ನರಸಿಂಹ 8)

September 20, 2011 - 10:14am
sathishnasa
ಕಣ್ಣು, ನಾಸಿಕ, ಜಿಹ್ವೆ,  ತೊಗಲು,   ಕರ್ಣಗಳು
ಪಂಚೇಂದ್ರಿಯಗಳಿವು ಹುಚ್ಚು  ತುರಗಗಳಂತೆ
ಮನಸ  ಸೆಳೆದೊಯ್ಯುವುದು   ತನ್ನಿಚ್ಛೆಯಂತೆ
ಸಾಧನೆಯ ಹಾದಿಯಲಿ ಇದುವೆ ಮುಳುವಂತೆ
 
ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ
ಮನವನಿರಿಸು  ಅದರೆದುರು ಬಂಡೆಯ  ತೆರದಿ
ಇಂದ್ರಿಯಗಳ ಇರಿಸಲೊಳಿತು ಮನಸಿನಾದೀನ
ಮನಸಿನ ಬಯಕೆಗಳಿಗೆ ಹಾಕು  ನೀ  ಕಡಿವಾಣ 
 
ಸಂಯಮದಿ ಸನ್ಮಾರ್ಗದಲಿ ನಡೆದು ನೀ ಉತ್ತಮನೆನಿಸು
ಬಿಡದೆ ಸಲಹುವನು  ಶ್ರೀ ನರಸಿಂಹ  ನಂಬಿದರೆ ಮನಸು   
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಇಂದ್ರಿಯಗಳ ಬಯಕೆಯದು ಅಲೆಗಳೋಪಾದಿ

ಮನವನಿರಿಸು ಅದರೆದುರು ಬಂಡೆಯ ತೆರದಿ

....

ಉತ್ತಮವಾದ ಸಾಲುಗಳು
‍ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghumuliya on

ಅರ್ಥಪೂರ್ಣ ಸಾಲುಗಳು . ಒ೦ದೆರಡು ಕಡೆ ಮುದ್ರಾರಾಕ್ಷಸನ ಹಾವಳಿ ಇರುವ೦ತಿದೆ.
(ತುರುಗ) ತುರಗ
(ಸಾದನೆ) ಸಾಧನೆ
(ತನ್ನಿಚ್ಚೆ) ತನ್ನಿಚ್ಛೆ
ಕವನದ ಗುಣಮಟ್ಟದ ಮು೦ದೆ ಇವೆಲ್ಲ ನಗಣ್ಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಪ್ರತಿಕ್ರಿಯೆಗೆ ಧನ್ಯವಾದಗಳು (ಮುದ್ರಾರಾಕ್ಷಸನ ಹಾವಳಿಯನ್ನು ಸರಿಪಡಿಸಿದೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಚೆನ್ನಾಗಿದೆ.
ಸಾಲುಗಳನ್ನೋದುವಾಗ ನೆನಪಾದ ಡೀ ವೀ ಜಿಯವರ ಕಗ್ಗ
ಮನವನಾಳ್ವುದು ಹಠದ ಮಗುವನಾಳುವ ನಯದೆ
ಇನಿತಿನಿತು ಸವಿಯುಣಿಸು ಸವಿಗಥೆಗಳಿಂದ I
ಅನುಕೂಲಿಸದು ಬರಿಯ ಕೂಗು ಬಡಿತೆಗಳನದು
ಇನಿತಿತ್ತು ಮರೆಸಿನಿತ ಮಂಕು ತಿಂಮ II

-ಧನ್ಯವಾದಗಳು
-ರಾಮಮೋಹನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು, ಮನಸನ್ನ ಮಗುವಿಗೆ ಹೋಲಿಸಿ ಬರೆಯಬೆಕೆಂದು ಪ್ರಾಂಬಿಸಿದೆ ಆದರೆ ಪದಗಳು ಈ ರೀತಿ ಹೊರಹೊಮ್ಮಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಚೆನ್ನಾಗಿ ಮೂಡಿಬಂದಿದೆ, ಸತೀಶರೇ. ಮನಸು, ಬುದ್ಧಿಗಳಿಗೆ ಕಡಿವಾಣ ಹಾಕಬೇಕಾದ 'ಒಡೆಯ' ಒಳಗೇ ಇಹನು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ತು0ಬಾ ಸು0ದರವಾದ ಕವಿತೆ, ಈಗಿನ ಯುವಜನತೆಯು ಅಳವಡಿಸಿಕೊಳ್ಳಬೇಕಾದುದೆ ಸರ್. : )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಒ0ದ್ ಮಾತು ಸರ್ ನಿಮ್ಮ ಹೆಸರಿಗಳವಡಿಸಿದ ಚಿತ್ರ ಯಾವ ದೇವತೆಯದು? ತು0ಬಾ ಅದ್ಭುತವಾಗಿದೆ, ನೋಡತಿದ್ರೆ ಹಾಗೆ ನೋಡತಾನೆ ಇರ್ಬೇಕು ಅನ್ಸುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

" ಮಹಿಷಾಸುರ ಮರ್ಧಿನಿ ಅಮ್ಮನವರು (ಮಸಿಯಮ್ಮ) " ಅಂತ ಮೇಡಮ್ ನಮ್ಮ ಹಳ್ಳಿಯಾದ ದೊಡ್ಡ ನಾರವಂಗಲ ಇಲ್ಲಿನ ಗ್ರಾಮ ದೇವತೆ ನನ್ನ ಆರಾಧ್ಯ ದೈವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sumangala badami on

ಒಮ್ಮೆಯಾದರು ದರುಶನ ಮಾಡಲೇಬೇಕು ಹಾಗಾದ್ರೆ. ತಿಳಿಸಿದ್ದಕ್ಕೆ ತಮಗೆ ತು0ಬಾ ಧನ್ಯವಾದಗಳು ಸತೀಶ್ ರ‌ವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಖಂಡಿತ ಬನ್ನಿ ಹಾಗೆ ಕವಿತೆ ಮೆಚ್ಚಿಗೆಗೆ ಧನ್ಯವಾದಗಳು ಸುಮಂಗಲ ಅವರೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.