August 3, 2012 - 10:13pm
ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬದನೆ ಕಾಯಿಯ ಖಾದ್ಯದ ಬಗ್ಗೆ ತನ್ನ ಆಸ್ಥಾನದಲ್ಲಿಯೂ ವರ್ಣಿಸಲಾರಂಭಿಸಿದ. ಇಷ್ಟು ಹೇಳಿದ ಮೇಲೆ ಸುಮ್ಮನಿರುತ್ತಾರೆಯೆ ಹೊಗಳು ಭಟ್ಟರು. ಅವರೂ ಬದನೆಯ ಬಗ್ಗೆ ತಮ್ಮ ಪ್ರಶಂಸೆಯನ್ನು ಹೇಳಲಾರಂಭಿಸಿದರು, "ಹೌದು ಮಹಾಸ್ವಾಮಿ ಈ ಬದನೇಕಾಯಿ ಎಂಬ ತರಕಾರಿ ಬ್ರಹ್ಮನಿಗೂ ಬಹಳ ಪ್ರಿಯವಾದದ್ದು, ಅದಕ್ಕೇ! ಬ್ರಹ್ಮ ಅದರ ತಲೆಯ ಮೇಲೊಂದು ಕಿರೀಟವಿಟ್ಟಿದ್ದಾನೆ". ರಾಜ ಆ ತರಕಾರಿಯನ್ನು ಬಹಳ ಚೆನ್ನಾಗಿದೆಯೆಂದು ಹೊಟ್ಟೆ ಬಿರಿಯುವಷ್ಟು ತಿಂದಿದ್ದ, ಹಾಗಾಗಿ ಸಹಜವಾಗಿಯೇ, ಸಂಜೆಯ ಹೊತ್ತಿಗೆ ರಾಜನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು, ಆಗ ರಾಜ ಅದೇ ಬದನೇಕಾಯಿಯ ಬಗ್ಗೆ ಹಿಡಿ ಹಿಡಿ ಶಾಪ ಹಾಕಲಾರಂಭಿಸಿದ. ಆಗ ಈ ಭಟ್ಟಂಗಿಗಳು ಪುನಃ ತಮ್ಮ ವರಾತ ಷುರು ಹಚ್ಚಿಕೊಂಡರು, "ಮಹಾಸ್ವಾಮಿ, ಈ ತರಕಾರಿಯನ್ನು ಕಂಡರೆ ಬ್ರಹ್ಮನಿಗೂ ಇಷ್ಟವಿಲ್ಲ, ಅದಕ್ಕೇ ಅದರ ತಲೆಯ ಮೇಲೆ ಮುಳ್ಳನ್ನಿರಿಸಿದ್ದಾನೆ!".
(ವಿ.ಸೂಃಈಗಿನ ಬದನೆಕಾಯಿಗಳಿಗೆ ಮುಳ್ಳೇ ಇರುವುದಿಲ್ಲ, ಆಗ ಬದನೇಕಾಯಿಗಳಿಗೆ ಖಚಿತವಾಗಿ ಮುಳ್ಳುಗಳಿರುತ್ತಿದ್ದವು, ಹಾಗಾಗಿ ಈಗಲೂ ಹಲವಾರು ಪ್ರಾಂತಗಳಲ್ಲಿ ಬದನೆಯನ್ನು ಮುಳ್ಳುಗಾಯಿಯೆಂದೇ ಕರೆಯುತ್ತಾರೆ)
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
ಹೌದು ಇಂತವರನ್ನು ಭಟ್ಟಂಗಿಗಳು ಅಂತಲೂ ಕರೆಯುತ್ತಾರೆ ಸಮಯಕ್ಕೆ ತಕ್ಕಂತೆ ಬದಲಾಗುತ್ತ ಇರುವ ಇವರು ಕೆಲವೊಮ್ಮೆ ಚಮಚಾಗಳು ಅಂತಲು ಕರೆಯಲ್ಪಡುತ್ತಾರೆ,
ಕತೆಯಂತು ಚೆನ್ನಾಗಿದೆ
ಪಾರ್ಥಸಾರಥಿ
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
ನಿಮ್ಮ ಮಾತು ನಿಜ ಪಾರ್ಥಸಾರಥಿಗಳೆ, ಇಂತಹವರ ಸಂತತಿ ಇಂದು ಬಹಳಷ್ಟಿದೆ. ಅವರನ್ನೇ ಕೆಲವೊಮ್ಮೆ, ಛತ್ರಿಗಳು, ಪಾಕಡಾ, ಚಾಲೂ, ಬಲ್ ನನ್ಮಗ ಮುಂತಾದ ಹೆಸರುಗಳಿಂದ ಇಂದಿನ ಜಮಾನದಲ್ಲಿ ಕರೆಯುತ್ತೇವೆ.
ಈ ಕಥೆಯನ್ನು ಬಹುಶ: ನಾನು 70ರ ದಶಕದಲ್ಲಿ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ ನೆನಪು ಮತ್ತು ಇದನ್ನು ಬರೆದವರು ಪ. ರಾಮಕ್ರುಷ್ಣ ಶಾಸ್ತ್ರಿ ಇರಬಹುದೆಂದುಕೊಳ್ಳುತ್ತೇನೆ.
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - @ಶ್ರೀಧರ್ ಜಿ....
ಶ್ರೀಧರ್ ಜಿ....
ಸಚಿನ್ ಜಾಹೀರಾತು ಒಂದರಲ್ಲಿ ನನ್ ಶಕ್ತಿ ರಹಸ್ಯ - ಬೋರ್ನ್ ವಿಟಾ ಅಂದ ಹಾಗೆ ನೆನಪು..(ಜಾಹೀರಾತು ರಗಳೆ ಕಾರಣ ನಾ ಟೀವಿ ನೋಡೋದೇ ಇಲ್ಲ.. ಹಾಗೆಯೇ ಈ ಜಗತ್ತಿನಲ್ಲಿ ಟೀವಿ ಇದ್ದು ಕೇಬಲ್ ಇಲ್ಲದ- (ವೈರ್ -ವೈರ್ ಲೆಸ್ ಯಾವುದೂ ಇಲ್ಲದ ) ಮನೆ ನಮ್ಮದು ಅನ್ಸುತ್ತೆ..! ಟೀವಿ ಗೆ ಕಮ್ಪ್ಯುಟರ್ ಸಂಪರ್ಕ ಕೊಟ್ಟಿರುವೆವು..
ಈಗ ಈ ಪೀಠಿಕೆಗೆ ಕಾರಣ - ನೀವು ಬಹು ಸಕ್ರಿಯರಾಗಿ ಒಂದರ ಹಿಂದೆ ಒಂದು ಸಖತ್ ಬರಹ ಸೇರಿಸುತಿರುವುದು...!!
ಅಂದ್ ಹಾಗೆ ನಾವ್ ಮೀಟ್ ಆಗಿ ೨ ತಿಂಗಳು ಕಳೆಯಿತು....!
ಈ ಭಟ್ಟಂಗಿಗಳು- ಚಮಚಾಗಳು- ಬಗ್ಗೆ ಬಹು ಹಿಂದೆ ಯಾರೋ ಒಬ್ಬರು ಕನ್ನಡದ ಕವಿವರ್ಯರು ಈ ರೀತಿ ಬರೆದ ಹಾಗೆ ಮತ್ತು ನಾ ಓದಿದ ಹಾಗೆ ನೆನಪು
ಹೌದು ಅಂದ್ರೆ ಹೌದು ಅನ್ನುವರು- ಹೌದಪ್ಪಗಳು
ಅಲ್ಲ ಅಂದ್ರೆ ಅಲ್ಲ ಎನ್ನುವರು- ಅಲ್ಲಪ್ಪಗಳು -ಇಲ್ಲಪ್ಪಗಳು
ನನಗೆ ಅನ್ನಿಸುವ ಹಾಗೆ ಈ ತರಹದವರು ಈಗ ಜಾಸ್ತಿ ರಾಜಕೀಯ ನಾಯಕರ ಹಿಂದೆ ಇರುವರು..... (ಇತ್ತೀಚೆ ಅವರಲ್ಲಿ ಹಲವರು- ನಮ್ ರಾಜ್ಯದಲ್ಲಿ ೩-೪ ಬಣದಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕಾಣಿಸಿಕೊಂಡಿದ್ದರು ..!!)
ಮುಳ್ಳು ಬದನೆ ಕಾಯಿ ಈಗಲೂ ಸಿಗುವುದು-
ಬೆಳೆಯುವರು
ನಾಟಿ ಮುಳ್ಳು ಬದನೆ ತಿಂದವರಿಗೆ ಗೊತ್ತು ಅದರ ರುಚ್ಹೀ....ಈಗಲೂ ಕೆಲವು ಜನ ಆ ತಳಿಯನ್ನು ಕಾಪಾಡುತ್ತಿರ್ವರು.. ಅಂತವರ ಸಂಖ್ಯೆ ಹೆಚ್ಚ್ಹಲಿ..
ಹೈಬ್ರಿಡ್ ಬಂದು ನಾಟಿ ಗೆ ಕುತ್ತು ಬಂತು...
ನಾಟಿ ಮುಳ್ಳು ಬದನೆ ಕಿತ್ತಲು ಹೋಗಿ ಕೈಗೆ ಮುಳ್ಳು ಚುಚ್ಚಿಸಿಕೊಂಡದ್ದು ಇನ್ನು ಮೊನ್ನೆ ಮೊನ್ನೆ ಹಾಗೆ ನೆನಪಿದೆ..
\|/
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - @ಶ್ರೀಧರ್ ಜಿ....
ಸಪ್ತಗಿರಿಗಳೆ,
ನಿಮ್ಮ ಪ್ರತಿಕ್ರಿಯೆಗೆ ಮತ್ತು ಬದನೆಕಾಯಿ ಇನ್ನೂ ಮುಳ್ಳು ರೂಪದಲ್ಲಿ ಅಲ್ಲಲ್ಲಿ ಇರುವ ವಿಶೇಷ ಸಮಾಚಾರ ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂಚೆಯೇ ಪ್ರತಿಕ್ರಿಯೆಯೊಂದರಲ್ಲಿ ತಿಳಿಸಿದ್ದಂತೆ ಈಗ ಸಧ್ಯ ಹೆಚ್ಚು ಬಿಡುವಾಗಿದ್ದೇನೆ; ಅದನ್ನು ಈ ರೀತಿ ಸಂಪದಿಗರೊಂದಿಗೆ ವಿಚಾರ ವಿನಿಮಯ ಮಾಡೊಕೊಂಡು ಸದ್ವಿನಿಯೋಗ ಮಾಡಿಕೊಳ್ಳೋಣವೆಂದಿದ್ದೇನೆ. ಶುಭರಾತ್ರಿ ಅಲ್ಲಲ್ಲಾ ಶುಭದಿನ ಏಕೆಂದರೆ ನಿಮಗೆ ಹಾಗೂ ಗಣೇಶ್.ಜಿಯವರಿಗೆ ದಿನ ಪ್ರಾರಂಭವಾಗುವುದು ಈಗಿನಿಂದಲೇ ಅಲ್ಲವೆ?
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
+1. :))
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
.ಧನ್ಯವಾದಗಳು, ಕವಿಗಳೆ.
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
:) :) :)
ನಮ್ಮಲ್ಲಿ ಮುಳುಗಾಯಿ ಅಂತೀವಿ, ನೀವು ಹೇಳಿದ ಮೇಲೆ ತಿಳಿಯಿತು
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
ಕಡೇ ಪಕ್ಷ ಮಲೆನಾಡ ಸೀಮೆಯಲ್ಲಾದರೂ ಮುಳುಗಾಯಿಗೆ ಮುಳ್ಳಿರುತ್ತವೆ ಅಂದು ಕೊಂಡರೆ ಅಲ್ಲಿಯೂ ಮುಳ್ಳಿಲ್ಲದ ಮುಳುಗಾಯಿಗಳೆ :((
ಹೋಗಲಿ ಬಿಡಿ, ಕಾಲಾಯ ತಸ್ಮೈ ನಮ: .
ಜೋಕನ್ನು ಓದಿ ಆನಂದಿಸಿದ್ದಕ್ಕೆ ನನಗೂ ಸಂತೋಷವಾಯಿತು, ಚಿಕ್ಕೂ :))
ಉ: ಬದನೇಕಾಯಿಯ ಘರಿಮೆ! - ಜಮನಾದ ಜೋಕುಗಳು - ೧೧
:) :)