June 4, 2010 - 12:11am
" ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ"
_ಅರ್ಕಿಮಿಡಿಸ್
ಆದರೆ..........................
ಬ್ರಷ್ಟಾಚಾರದಲ್ಲಿ ಮುಳುಗಿದರೂ
ಅವರು.......!
ಕಳೆದುಕೊಂಡಿಲ್ಲ ತಮ್ಮ ಹುದ್ದೆಯ ತೂಕ..
ಬೆಳೆಯುತ್ತಲೇ ಇದೆ...
ಅವರ ಆಸ್ತಿ ಅಂತಸ್ತುಗಳ ಮೊಟ್ಟೆ
ಸತ್ತಾಗ ಬೇಕಲ್ಲವೇ ?
ಹೆಣಕ್ಕೆ ಮುಚ್ಚಲು ಬಂಗಾರದ ಬಟ್ಟೆ !
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಹ ಹ್ಹಾ.. ಒಳ್ಳೆಯ ಹೋಲಿಕೆ.. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿರುವವರು ಅತಿ ಮುಖ್ಯವಾದ ತಮ್ಮತನವನ್ನೇ ಕಳಕೊಂಡಿದ್ದಾರೆ. ಈ ವಿಷಯದಲ್ಲಿ ಆರ್ಕಿಮಿಡಿಸ್ ಸರಿ ಇರೋ ಹಾಗಿದೆ :-)
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಅನಿಸಿಕೆಗೆ ನಮನಗಳು
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಯೋಚಿಸಿ ನೋಡಿದರೆ ಭ್ರಷ್ಟಾಚಾರಿಗಳು ನಿಜವಾಗಿಯೂ ಕಳೆದುಕೊಳ್ಳುತ್ತಾರೆ
ಭ್ರಷ್ಟಾಚಾರದಲ್ಲಿ ಮುಳುಗಿ ತೂಕ ಹೆಚ್ಚಿಸಿಕೊಂಡು ಬೆಲೆ ಕಳೆದುಕೊಳ್ಳುತ್ತಾರೆ
ನಿಜವಾಗಿಯೂ ಗೊತ್ತಿಲ್ಲ ಬಿಡಿ ಈ ಭ್ರಷ್ಟಾಚಾರಿಗಳು ಸತ್ತಾಗ ಬೇಕೋ ಬೇಡವೋ ಬಂಗಾರದ ಬಟ್ಟೆ
ಯಾಕೆಂದರೆ ಆಸ್ತಿಗಾಗಿ ಜಗಳಾಡುವ ಸಂಬಂದಿಕರಲ್ಲಿ ಮಾಡ್ತಿರ್ತಾರೆ ಅವರ ಮರ್ಯಾದೆ ಮೂರಾಬಟ್ಟೆ
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಧನ್ಯವಾದಗಳು ಅಸು ಹೆಗ್ಡೆಯವರೆ
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಅವರ ತೂಕ, ಘನತೆ, ಮಾನ, ಮರ್ಯಾದೆಯನ್ನು ಕಾಪಾಡುತ್ತಿರುವುದು ನಾವಲ್ಲವೆ. ನಾವು ಪ್ರಶ್ನಿಸುತ್ತಿಲ್ಲ, ಅವರು ಉತ್ತರಿಸುವುದೆ ಇಲ್ಲ.