September 10, 2011 - 12:35am
೧. ಒಂದು ಹಿಡಿ
ಪ್ರೀತಿ ಮತ್ತು ಅನ್ನಕ್ಕಾಗಿ
ಈ ಬದುಕು- ನವರಸ.
ಕೊನೆಗೆ ಕಾಣದ
ಊರಿನ ಕನಸು.
ಸುಮ್ಮನೆ ಮುಗಿದು
ಹೋಗುವ ಸಾಲು, ದಾರಿ, ಬಂಧ.
೨. ಮಾತಿನ ಶವ
ಬಿದ್ದ ಮನದಂಗಳದಲಿ
ನೆನಪುಗಳೇ
ಸಂಗಾತಿಗಳು.
೩. ಉಸಿರ ಲಾಲಿಯ
ಹಾಡಲಾಗದ
ಮೂಕಿ ನಾನು.
ಬಾ ಮತ್ತೊಮ್ಮೆ
ಎದೆಗೂಡಿಗೆ
ನನ್ನೆದೆಯ ಪ್ರೀತಿಯ
ಮಂದ್ರ ಸ್ವರ
ಕೇಳಿಸುವೆ.
೪. ಮುಖವಾಡಗಳ
ಸಂತೆಯಲಿ
ಆಂತರ್ಯದ ಕನ್ನಡಿಯ
ಮುಂದೆ ನಿಂತ
ಜೋಗಿ ನಾನು.
೫. ಸುಮ್ಮನೇ ಬದುಕುವ
ಹಾಗೇ ಪ್ರೀತಿಸುವ
ಕಾರ್ಯ- ಕಾರಣದ
ಹಂಗಿಲ್ಲದಿರುವ ಜಾಗದಲ್ಲಿ
ಬಿದ್ದ ನವಿಲು ಗರಿಯಲಿರುವ
ನಿನ್ನ ಜೇನು ಕಂಗಳ
ಕನಸಾಗಿದೆ ಇಂದು.
೬. ದಿನವೂ ಹುಟ್ಟು
ಸಾವಿನ ಶಾಪಗ್ರಸ್ಥ
ಸೂರ್ಯ.
ಬೆಳೆಯುವ ಕುಗ್ಗುವ
ಚಂದ್ರ.
ಧುಮ್ಮಿಕ್ಕುವ
ಮೌನ ತಾಳುವ
ಸಮುದ್ರ.
ಅಚ್ಚರಿಗಳ
ಸಂತೆಯಲಿ ತಿರುಗುತ್ತಲೇ
ಇರುವ ಭೂಮಿ
ಮತ್ತು..... ಕವಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮತ್ತೊಂದಿಷ್ಟು....
ಸೊಗಸಾದ ಹನಿಗಳು... ಮೊದಲನೆಯ ಹಾಗೂ ಕೊನೆಯ ಹನಿಗಳು ಮನಸ್ಸನ್ನು ತೀವ್ರವಾಗಿ ತಟ್ಟಿದವು.. ಹೀಗೆ ಮತ್ತೊ೦ದಿಷ್ಟು ... ಹರಿಯುತ್ತಿರಲಿ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಮತ್ತೊಂದಿಷ್ಟು....
ವಂದನೆಗಳು ರಾಘು ಸರ್.
ಉ: ಮತ್ತೊಂದಿಷ್ಟು....
ಚೆನ್ನಾಗಿವೆ.
ಉ: ಮತ್ತೊಂದಿಷ್ಟು....
ಚೇತನ್ ಮೆಚ್ಚಿದ್ದಕ್ಕೆ ನಮನ.
ಉ: ಮತ್ತೊಂದಿಷ್ಟು....
ಸು0ದರವಾಗಿದೆ ನಿಮ್ಮ ಭಾಷಾ ಜ್ನಾನ.ಕವಿತೆ ಚೆನ್ನಾಗಿದೆ ಸರ್
ಉ: ಮತ್ತೊಂದಿಷ್ಟು....
ಪ್ರತಿಕ್ರಿಯೆಗೆ ನಮನಗಳು.
ಉ: ಮತ್ತೊಂದಿಷ್ಟು....
ಅರ್ಥಪೂರ್ಣ ಕಿರು ಸಾಲುಗಳು ಕು೦ಬಾರರೆ, ಆದರೂ ೨ನೆಯದು ಬಹುವಾಗಿ ಕಾಡಿತು!
ಉ: ಮತ್ತೊಂದಿಷ್ಟು....
ಅನಿಸಿಕೆಗಳಿಗೆ ಧನ್ಯವಾದಗಳು ಮಂಜು ಸಾರ್.
ಉ: ಮತ್ತೊಂದಿಷ್ಟು....
ರವಿ ಅವರೇ, ಎಲ್ಲ ಭಾವಗಳು ಚೆನ್ನಾಗಿವೆ. ಐದನೆಯದ್ದು ಸೂಪರ್ !!!
ಉ: ಮತ್ತೊಂದಿಷ್ಟು....
ನಮಸ್ಕಾರಗಳು ವೆಂಕಟೇಶ್ ರಿಗೆ. ತುಂಬಾ ದಿನಗಳ ನಂತರ ಬರೆದ ಸಾಲುಗಳು ಇವು.