ಬರಡಾದ ಮನಕ್ಕೆ ಸಾಂತ್ವನ ಕೊಟ್ಟು ನೀ ಜಿನುಗುತ್ತಿದ್ದಿಯೋ
ನವಿರಾದ ದುಃಖಕ್ಕೆ ಆಹ್ವಾನ ಇಟ್ಟು ನೀ ಛೇಡಿಸುತ್ತಿದ್ದಿಯೋ
ಕಾರಣ ಕೊಟ್ಟು ಜಾರಬಾರದೆ ಕಣ್ಣೀರಿಗೆ ಜೊತೆಯಾದ ಹನಿಯೇ
ಮಡುಗಟ್ಟುವ ಎದೆಯ ಭಾರಕೆ ಗುಡುಗುಟ್ಟುವ ಮೇಘವೇ ಇನಿಯ
ಒಂಟಿ ಬೀದಿಯಲಿ ವಿರಹದ ಮಳಿಗೆಯ ಬಾಗಿಲು ತೆರೆದಾಗಿದೆ
ಜಂಟಿ ದಾರಿಯಲಿ ಸವೆದ ಗಳಿಗೆಯ ನೆನಪ ಜೋಡಿಸಿಡಲಾಗಿದೆ
ನಡೆಯದ ವ್ಯವಹಾರಕ್ಕೆ ಕಾಯುವ ನಾಲ್ಕು ಗಳಿಗೆಯ ವರ್ತಕ
ಬಿಡದೆ ನೀ ಹೀಗೆ ಸುರಿದರೆ ನಿಲ್ಲದ ಪ್ರಯತ್ನ ಆಗವುದೆಂದು ಸಾರ್ಥಕ
ಹರೆಯದ ಉತ್ಸಾಹಕೆ ಸ್ಪೂರ್ತಿಯಾದ ಹನಿಯು ಬೇಕಾಗಿದೆ ಇಂದು
ಮರೆಮಾಡಲು ನಲ್ಲನ ವಿಯೋಗದ ಹನಿಯ ನಡುವಯಸ್ಸಿನೋಳು
ಒಡಲಲ್ಲಿ ಕುರುವ್ಹಿಟ್ಟು,ತನ್ನ ಅಸ್ತಿತ್ವ ಮರೆಮಾಡಿ,ವಿಧವೆಯ ಪದವಿಯು
ಹಣೆಯಲ್ಲಿ ಬೊಟ್ಟಿಟ್ಟು,ಹೊಸ ವ್ಯಕ್ತಿತ್ವ ತರೆಯಲು ಬೇಕಿದೆ ಆಸರೆಯು
ಕಿಟಕಿಯ ಹೊರ ಮಳೆ ನಿಂತರೂ ಒಳಗೆ ಇನ್ನೂ ಸುರಿಯುತ್ತಿದೆ
ಹೊರಗಿನ ಹನಿ ಸೇರಿ ಕವನದಂಚಿನಲಿ ಸಿಹಿ ಮತ್ತು ಪೇರಿಸಿದೆ
ಒಳಗಿನ ಹನಿ ಹರಿದ ಸೇರಗಿನಂಚಿನಲಿ ಮಣಿಮುತ್ತು ಪೋಣಿಸಿದೆ
ಕಾಮತ್ ಕುಂಬ್ಳೆ
ಸಾಹಿತ್ಯ ಸ್ವಂತದ್ದು, ಚಿತ್ರ ಕದದ್ದು.










ಪ್ರತಿಕ್ರಿಯೆಗಳು
ಉ: ಮಳೆ
ವೆಂಕಟೇಶ್,
ಫೋಟೊಕ್ಕೆ ಸೂಕ್ತ ಕ್ರೆಡಿಟ್ಸ್ ಕೊಡಬಹುದೆ ?
ಉ: ಮಳೆ
google ಕೃಪೆ :P :P
ಉ: ಮಳೆ
ಕಮ್ತಿಯವರೇ ಸುಂದರ ಅನಿಸಿಕೆ
ಅದು ಸಾಂತ್ವನ ಅಲ್ಲವೇ?
ಚಂದದ ಚಿತ್ರ,
ಉ: ಮಳೆ
ಗೋಪಿನಾಥ್ ಸರ್ ಬದಲಾಯಿಸಿದ್ದೇನೆ. ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು .
ಉ: ಮಳೆ
ಚಿತ್ರ ಕವನ ತುಂಬಾ ಚೆನ್ನಾಗಿದೆ.
ಉ: ಮಳೆ
ನಂದೀಶ್ ಅವರೇ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು .
ಉ: ಮಳೆ
ಚಿತ್ರ ಸಹ ಸೊಗಸಾಗಿದೆ. ವ್ಯಕ್ತಿಯ ಮುಖ ಕಾಣದಿದ್ದರೂ ನಿರೀಕ್ಷೆಯ ಭಾವ ವ್ಯಕ್ತವಾಗುತ್ತದೆ. ಚಿತ್ರ ಮತ್ತು ಕವನಕ್ಕಾಗಿ ಅಭಿನಂದನೆ.
ಉ: ಮಳೆ
ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ವಂದನೆಗಳು
ಉ: ಮಳೆ
ಕಾಮತರವರೆ,
ಸುಂದರ ಕವನ. ಇಷ್ಟವಾಯ್ತು
ಉ: ಮಳೆ
+1
ಉ: ಮಳೆ
ಮೆಚ್ಚಿ ಪ್ರತಿಕ್ರಿಯಿಸಿದ ಚಿಕ್ಕು ಮತ್ತು ಭಾಗ್ವತ್ ರವರಿಗೆ ವಂದನೆಗಳು.
ಉ: ಮಳೆ
ಕಾಮತರವರೆ,
ಚಂದದ ಚಿತ್ರ ಮತ್ತು ಸುಂದರ ಕವನ. ಇಷ್ಟವಾಯ್ತು.
ಉ: ಮಳೆ
ಹಳೆಯ ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ ಕವಿತಾ ಅವರೇ ವಂದನೆಗಳು.