August 7, 2012 - 5:45pm
ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು
ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು |
ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು
ನಿತ್ಯನೂತನ ಶಕ್ತಿ ಭಕ್ತಿ ಮೂಢ || ..309
ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |
ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ || ..310
**************
-ಕ.ವೆಂ.ನಾಗರಾಜ್.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮೂಢ ಉವಾಚ - 155
(((ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ )))
ಸಂಚಲನ ಮೂಡಿಸುವ ನುಡಿಗಳಿವು. ಧನ್ಯವಾದಗಳು
ಉ: ಮೂಢ ಉವಾಚ - 155
ಆತ್ಮೀಯ ನಾಗರಾಜ್
ಅಂತರಂಗದಲ್ಲಿ ಘನ ತಪಸ್ಸಿದ್ದರೆ ಬಹಿರಂಗದಲ್ಲಿ ಮಹತ್ಕಾರ್ಯಗಳು ಸಾಧ್ಯವಾಗುತ್ತದೆ. ಈ ಸತ್ಯವನ್ನು ಸರಳವಾದ ಮಾತುಗಳಲ್ಲಿ ಹೇಳಿದ್ದಿರ. ಉತ್ತಮವಾದ ಉವಾಚ.
ಉ: ಮೂಢ ಉವಾಚ - 155
ಸುಂದರ ಪ್ರತಿಕ್ರಿಯೆಗೆ ವಂದನೆ, ಪ್ರಕಾಶರೇ.
ಉ: ಮೂಢ ಉವಾಚ - 155
ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ನಂಜುಂಡರೇ.
ಉ: ಮೂಢ ಉವಾಚ - 155
ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |
ನಿಜವೆ ನಿಜವಾದ ಶ್ರದ್ದೆ ನೀತಿ ಸ್ವಯಂಶಿಸ್ತು ಇದ್ದಲ್ಲಿ ಎಲ್ಲಿಯು ಕಟ್ಟುಪಾಡುಗಳ ಅವಶ್ಯಕತೆ ಇಲ್ಲ.
ಉ: ಮೂಢ ಉವಾಚ - 155
+1, ಪಾರ್ಥಸಾರಥಿಗಳೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಏಕೆಂದರೆ ಬೇಡರ ಕಣ್ಣಪ್ಪನಂತಹ ಭಕ್ತರಿಗೆ ಯಾವುದೇ ಕಟ್ಟುಪಾಡುಗಳನ್ನು ಅನುಸರಿಸದಿದ್ದರೂ ಶಿವನು ಒಲಿದನು. ಆದ್ದರಿಂದ ನಿಜವಾದ ಭಕ್ತಿ ಮುಖ್ಯ; ಇದನ್ನೆ ಕವಿಗಳ ಮೂಢ ಬಹಳ ಚೆನ್ನಾಗಿ ಬಿಂಬಿಸಿದ್ದಾನೆ.
ಉ: ಮೂಢ ಉವಾಚ - 155
ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ಶ್ರೀಧರರೇ..
ಉ: ಮೂಢ ಉವಾಚ - 155
ನಿಜ, ಪಾರ್ಥರೇ. ವಂದನೆಗಳು.
ಉ: ಮೂಢ ಉವಾಚ - 155
ಚೆನ್ನಾಗಿದೆ ಸರ್
ಉ: ಮೂಢ ಉವಾಚ - 155
ವಂದನೆ, ಚಿಕ್ಕೂ.
ಉ: ಮೂಢ ಉವಾಚ - 155
ನಿಜಭಕ್ತನಿಗೆ ಯಾವುದೆ ಕಟ್ಟುಪಾಡುಗಳಿರುವುದಿಲ್ಲ ಸತ್ಯವಾದ ಮಾತು. ಭಕ್ತಿಯ ಮುಂದೆ ಮಿಕ್ಕಿದ್ದೆಲ್ಲವೂ ಗೌಣ
>> ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ << ಸೊಗಸಾದ ಸಾಲುಗಳು
ಧನ್ಯವಾದಗಳು
...ಸತೀಶ್
ಉ: ಮೂಢ ಉವಾಚ - 155
+1
ಉ: ಮೂಢ ಉವಾಚ - 155
"ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ
ನಿಜಭಕ್ತನಾದವಗೆ ಕಟ್ಟುಪಾಡುಗಳಿಲ್ಲ |
ಚಂಚಲಿತ ಮನಕಿರಲಿ ರೀತಿನೀತಿಗಳು
ನಡೆದದ್ದೆ ದಾರಿ ಸಾಧಕಗೆ ಮೂಢ ||"
=====================
+1(ಸತೀಶ್)
ಹಿರಿಯರೇ
ಧನ್ಯವಾದಗಳು
\|/
ಉ: ಮೂಢ ಉವಾಚ - 155
ಮೆಚ್ಚುಗೆಯ ನುಡಿಗಳಿಗೆ ವಂದನೆಗಳು, ಸತೀಶ, ಚಿಕ್ಕೂ, ಸಪ್ತಗಿರಿವಾಸಿ ಮತ್ತು ಪ್ರೇಮಾರವರೇ.