ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ಮಂಗಳೂರಿನ ಪಬ್ ಮೇಲೆ ದಾಳಿ, ಯುವತಿಯರ ಮೇಲೆ ಥಳಿತ ಎಲ್ಲ ಖಂಡನೀಯ. ಆದರೆ ಮಾಧ್ಯಮಗಳು ಅದಕ್ಕೆ ಕೊಟ್ಟ ಪ್ರಾಮುಖ್ಯತೆ ಮಾತ್ರ ಅತಿಯಾಯಿತೆಂದು ಅನ್ನಿಸುವುದಿಲ್ಲವೇ?
- ಈ ಹಿಂದೆ ರಕ್ಷಾಣಾ ವೇದಿಕೆಯವರು ನಡೆಸಿದ ಇದೇ ರೀತಿಯ ದಾಳಿಗಳನ್ನು ಟಿವಿ೯ ಪ್ರಸಾರ ಮಾಡಿರುವುದನ್ನು ನಾನು ನೋಡಿದ್ದೇನೆ. ಅದು ಟಿವಿ೯ ಬಿಟ್ಟು ಇನ್ನೆಲ್ಲೂ ಪ್ರಸಾರವಾದಂತಿಲ್ಲ. ಎನ್ ಡಿ ಟಿ ವಿ, ಸಿ ಎನ್ ಎನ್ ಐಬಿಎನ್ ಗಳು ಅದನ್ನು ತಾಲಿಬಾನೀಕರಣವೆಂದು ಪರಿಗಣಿಸಿಲ್ಲ, (ಯಾಕೆಂದರೆ ಅವರ ಕ್ಯಾಮರಾ ಮೆನ್ ಅಲ್ಲಿರಲಿಲ್ಲ?) http://thatskannada....
http://kannada.webdu...
- ಅಷ್ಟೊಂದು ವೀಡಿಯೋ ತೆಗೆದ ಮಾಧ್ಯಮದವರ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಪ್ರಸ್ನಿಸಿದ್ದಕ್ಕೆ ಸಿಕ್ಕಾಪಟ್ಟೆ ಉಗೀತಿದ್ರು ಅವರು.
- ತಡೆಯಲು ಸಾದ್ಯವಾಗದಿದ್ದರೆ ಇರಲಿ, ಕಡೇ ಪಕ್ಷ ಪೋಲಿಸಿಗೆ ತಿಳಿಸುವುದು ಮಾಧ್ಯಮದ ಕರ್ತವ್ಯವಲ್ಲವೇ?
- ರಾಮಸೇನೆ ಸಂಘಪರಿವಾರದ್ದೇ ಎಂಬ ಥರ ಎಲ್ಲಾ ಮಾಧ್ಯಮದವರೂ ಬಿಂಬಿಸುತ್ತಿದ್ದಾರೆ. ಭಜರಂಗದಳದ ’ಮೃದುತ್ವ!’ವನ್ನು ವಿರೋಧಿಸಿ ಮುತಾಲಿಕ್ ಹೊಸ ಪಕ್ಷ, ಸಂಘಟನೆ ಕಟ್ಟಿರುವುದು ಮಾಧಮದವರಿಗೆ ತಿಳಿಯುವಷ್ಟು ಅವರ ನೆಟ್-ವರ್ಕ್ ಇಲ್ಲವೇ?
- ಸರಕಾರ ಘಟನೆಗೆ ಕಾರಣವಾದವರನ್ನು ಬಂಧಿಸಲು ತಿಳಿಸಿದೆ, ಪೋಲಿಸರೂ ಸಾಕಷ್ಟು ಜನರನ್ನು ಬಂಧಿಸಿದ್ದಾರೆ. ಸರಕಾರ ಇನ್ನೇನು ಮಾಡಬೇಕಿತ್ತು? ಕುಮಾರ ಮುಖ್ಯಮಂತ್ರಿಯಾಗಿದ್ದರೆ ಈಗ ರಾಜೀನಾಮೆ ಕೊಡುತ್ತಿದ್ದರೇ?
- ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

Rakesh Shetty's picture

ರಮ್ಯ

ರಾಮಸೇನೆಯವರು ಮಾಡಿದ ಕೃತ್ಯ ಖಂಡನೀಯ.ಆದರೆ ನಮ್ಮ ಮಾಧ್ಯಮಗಳು ಅರ್ಧ ನಿದ್ದೆಯಲ್ಲಿ ಎದ್ದವರಂತೆ ಬಡ ಬಡಿಸುತ್ತಿರುವುದು ತಮ್ಮ TRP ಹೆಚ್ಚಿಸಿಕೊಳ್ಳುವುದಕ್ಕೊಸ್ಕರ ಮಾತ್ರ, ಈ ಕೆಟ್ಟ ಸುದ್ದಿಯ ಅತಿಯಾದ ವೈಭವಿಕರಣದಿಂದ ಸಮಾಜದ ಸ್ವಾಸ್ಥ್ಯ ಹಾಳಗುವುದೆಂಬ ಹಾಗು ರಾಷ್ಟ್ರಕ್ಕೆ ಅಪಕೀರ್ತಿ ಬರುತ್ತದೆಯೆಂಬ ಕಳಕಳಿ ಕಾಣಿಸುತ್ತಿಲ್ಲ. ಎಲ್ಲ ಪಕ್ಷಗಳು ಈ ಕೃತ್ಯವನ್ನು ರಾಜಕೀಯ ದಾಳವನ್ನಾಗಿ ಪರಿವರ್ತಿಸಿಕೊಳ್ಳುತಿದ್ದಾರೆ ಅಷ್ಟೆ. ಕುಮ್ಮಿ,ರೇಣುಕ,ಖರ್ಗೆ ಸುಮ್ಮನೆ ಬೊಬ್ಬೆ ಹಾಕುವುದು ಬಿಟ್ಟು ಸರ್ಕಾರದ ಜೊತೆ ನಿಂತು ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡಿಸಬಹುದಲ್ಲವೇ?

ರಾಕೇಶ್ ಶೆಟ್ಟಿ :)

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

vikashegde's picture

ನಿಜ. ಇದು ಮಾಧ್ಯಮಗಳ ಸುದ್ಧಿ ಹಾದರ !

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

Shribgm's picture

ಹೌದು..... ನನಗೂ ಹಾಗೇ ಅನ್ನಿಸ್ತು..... :( ಯಾವುದೇ ವಿಷಯವನ್ನು ವೈಭವಿಕರಿಸುವುದೇ ಇತ್ತೀಚಿನ ಮಾಧ್ಯಮದ ಗುರಿಯಾಗಿಬಿಟ್ಟಿದೆ.....

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

ranjith's picture

TRPಗಾಗಿಯೇ ರೆಪ್ಪೆ ತೆರೆದಿರುತ್ತದೆ ಮಾಧ್ಯಮಗಳು.

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

umeshhubliwala's picture

ಮುತಾಲಿಕ್ ಸಾಹೇಬ್ರಿಗೆ ಇದು ಬಹಳ ಅವಶ್ಯ ಇತ್ತು ಈ ndtv, cnnibn, aajtak ದಲ್ಲಿ ಅವರ
ಛಾಪು ಈಗೀಗ ಬಹಳ ಅದ. ೨೬/೧೧ ಆಗಿಂದ ಮೀಡಿಯಾ ಮತ್ತ ಭೂರಿ ಭೋಜನ ಸಿಕ್ಕೇದ ಹೊಟ್ಟಿ ತುಂಬುವ ತನಾ ಉಣ್ಣಲಿ ಬಿಡ್ರಿ.....

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

uniquesupri's picture

ಮಾಧ್ಯಮಗಳ ಅತಿರೇಕ ಹಳೆಯ ಚರ್ಚೆಯ ಸಂಗತಿ. ಆದರೆ ಈ ರೀತಿ ನಾವು ಬೆಂಬಲಿಸುವ ವಿಚಾರವನ್ನು ಖಂಡಿಸಿ ನಡೆದ ವರದಿಯನ್ನು ಮಾತ್ರ ನಾವು ಸೆಲೆಕ್ಟ್ ಮಾಡಿ ಅದಕ್ಕೆ ಸಿಟ್ಟಿನಿಂದ ಹೀಗೆ ಪ್ರತಿಕ್ರಿಯೆ ಬರೆಯುವುದು ಯಾಕೋ ಎಂದು ನನಗೆ ಸೋಜಿಗವೆನಿಸುತ್ತದೆ :)
ನನಗಂತೂ ಶ್ರೀ ರಾಮಸೇನೆ ಎಂಬ ಎಲಿಮೆಂಟ್ ತಾಲಿಬಾನ್ ನಂತೆಯೇ ವರ್ತಿಸುತ್ತಿದೆ ಎನ್ನಿಸುತ್ತಿದೆ.

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

Aravind M.S's picture

Quote:
- ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?

ಮುಖ್ಯ ವಿಷಯ ಗಮನಿಸಿದ್ದೀರಿ ! ಆರೋಪಿ ಶ್ರೀಮಂತ ..... ಪ್ರಚಾರ ಕಡಿಮೆ !!!!

ಅಪಘಾತಕ್ಕೆ ಪ್ರಚಾರ ಕಡಿಮೆ!

ASHOKKUMAR's picture

>>ಕುಡಿದು ವಾಹನ ಚಲಾಯಿಸಿ ನಾಲ್ಕು ಜನರನ್ನು ಕೊಂದ ಘಟನೆ ಎಷ್ಟು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ?
ಮಂಗಳೂರು ಘಟನೆಗೆ ಪ್ರಚಾರ ಅತಿಯಾಯ್ತು ಒಪ್ಪೋಣ.
ಆದರೆ ಅಪಘಾತ ಘಟನೆಗೂ, ಮಂಗಳೂರು ಘಟನೆಗೂ ಹೇಗೆ ಹೋಲಿಕೆಯಿದೆಯೋ?

ಉ: ಅಪಘಾತಕ್ಕೆ ಪ್ರಚಾರ ಕಡಿಮೆ!

uniquesupri's picture

ಹೌದು ಅಪಘಾತವನ್ನು ದೇಶದ ಸಂವಿಧಾನದ ಮೇಲೆ ನಡೆದ ದುರಾಕ್ರಮಣ, ಕಾನೂನು ಕೈಗೆ ತೆಗೆದುಕೊಂಡ ಘಟನೆ ಎಂದು ರಾಷ್ಟ್ರೀಯ ಮಾಧ್ಯಮಗಳು ಪ್ರಚಾರ ಕೊಡಬೇಕಿತ್ತು. :)

ಉ: ಅಪಘಾತಕ್ಕೆ ಪ್ರಚಾರ ಕಡಿಮೆ!

Rakesh Shetty's picture

ಸಂಬಂಧ ಹೀಗಿರಬಹುದು
ಅತ್ತ ಮಂಗಳೂರಿನಲ್ಲಿ ದಾಳಿಯಾಗಿದ್ದು ಕುಡಿದು ತೇಲಾಡುವವರ ಮೇಲೆ.
ಇತ್ತ ಬೆಂಗಳೂರಿನಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಪ್ರಾಣ ತೆಗೆದವನು. ಎರಡರಲ್ಲೂ ಕಾಮನ್ ಆಗಿರೋದು 'ಕುಡಿತ' ;)

ಉ: ಅಪಘಾತಕ್ಕೆ ಪ್ರಚಾರ ಕಡಿಮೆ!

uniquesupri's picture

ಹಾಗೇ ನನ್ನ ಕೆಲವು ಜನರಲೈಸೇಶನ್‌ಗಳಿವೆ ಒಪ್ಪಿಸಿಕೊಳ್ಳಿ:
> ಮಂಗಳೂರಿನ ಪಬ್ಬಿನ ಮೇಲೆ ದಾಳಿ ಮಾಡಿದವರು ಗಂಡಸರು(?)
ಕಾರು ಚಲಾಯಿಸಿ ಅಪಘಾತ ಮಾಡಿದವನು ಗಂಡಸು
ಎರಡರಲ್ಲೂ ಗಂಡಸು ಕಾಮನ್ನು

> ಪಬ್ಬಿನಲ್ಲಿ ಒದೆ ಕೊಟ್ಟವರು ಮನುಷ್ಯರು(?)
ಕುಡಿದು ನಾಲ್ಕು ಮಂದಿಯನ್ನು ಕೊಂದವನು ಮನುಷ್ಯ (?)
ಎರಡರಲ್ಲೂ ಕಾಮನ್ನು ಮನುಷ್ಯ :)

ಉ: ಅಪಘಾತಕ್ಕೆ ಪ್ರಚಾರ ಕಡಿಮೆ!

Aravind M.S's picture

ಹೋಲಿಕೆ ಏನೆಂದರೆ ಎರಡೂ ಅತ್ಯಾಚಾರಗಳೇ. ನಮ್ಮಲ್ಲಿ ವಾರ್ಷಿಕವಾಗಿ ಸುಮಾರು ೮೦೦೦೦ ಸಾವುಗಳಾಗುತ್ತಿವೆ ಅಪಘಾತಗಳಲ್ಲಿ. ಇವುಗಳಲ್ಲಿ ಹೆಚ್ಚಿನವು ಚಾಲಕನ ಅಜಾಗರೂಕತೆಯವು. ಈ ಎರಡು ಅತ್ಯಾಚಾರಕ್ಕೆ ಮಾಧ್ಯಮದವರದು ವ್ಯತಿರಿಕ್ತ ಧೋರಣೆ ಎನ್ನುವುದು ವಿಷಯ.

ಉ: ಮಂಗಳೂರು ಪಬ್ ದಾಳಿ ಮತ್ತು ಮಾಧ್ಯಮ

bhasip's picture

ನಿಜ,,
ಮಾಧ್ಯಮಗಳು ಸೆಲೆಕ್ಟೀವ್ ಆಗಿದ್ದಾರೆ.. ಇಲ್ಲಿ ಒಂದು ಕೊಂಡಿ ಕೊಟ್ಟಿದ್ದೇನೆ ನೋಡಿ..
http://www.haindavak...

ಇ ರೀತಿ ಘಟನೆಗಳು ಎಲ್ಲೂ ಬರುವುದೆ ಇಲ್ಲ.. ಇ ಮಾಧ್ಯಮಗಳಿಗೆ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳುವುದೊಂದೇ ಗುರಿ.. ಸೈನಿಕರ ಕಾರ್ಯಾಚರಣೆಯನ್ನೂ ನೇರವಾಗಿ ಪ್ರಸಾರ ಮಾಡಲು ಹೇಸದ ಇವರು. ಮಂಗಳೂರಿನ ಘಟನೆಯನ್ನು ಈ ರೀತಿ ಪ್ರಚಾರ ನೀಡುತ್ತಿರುವುದು ಅತಿಶಯೋಕ್ತಿ ಅಲ್ಲ..

ಮಂಗಳೂರಿನಲ್ಲಿ ನಡೆದಿದ್ದು ಅನ್ಯಾಯ ನಿಜ.. ಎಲ್ಲರೂ ಅದನ್ನು ಖಂಡಿಸಬೇಕು.. ಆದರೆ ಅದನ್ನೇ ಈ ರೀತಿ ಮನಸ್ಸಿಗೆ ಬಂದಂತೆ ಪ್ರಚಾರ ನೀಡುತ್ತಿರುವುದು ಹೇಯಕರ..
ನಮ್ಮ ರಾಜಕೀಯ ಪಕ್ಷಗಳು ಕಮ್ಮಿ ಇಲ್ಲ.. ಘಟನೆಯಿಂದ ಎಷ್ಟು ಸಾಧ್ಯವೋ ಅಷ್ಟು ಬೇಳೆ ಬೇಯಿಸಿಕೊಳ್ಳಲು ನೋಡುತ್ತಾ ಇದ್ದಾರೆ,