ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ರೇಖಾ ರವರ ಬ್ಲಾಗ್

ಗೌರಿ ಬ್ಲಾಗ್

ನನ್ನ ಮಗಳು ಗೌರಿ ನನಗೆ ತೋರಿದ ಹೊಸ ಜಗತ್ತಿನ ಬಗ್ಗೆ ಈ ಬ್ಲಾಗ್. ಕಳೆದ ಆರು ವರ್ಷಗಳಿಂದ ವಿಶಿಷ್ಠಚೇತನಳಾಗಿರುವ ಮಗಳೊಂದಿಗೆ ನಾವೂ ಬೆಳೆಯುತ್ತಿದ್ದೇವೆ. ಈ ಅನುಭವ, ಇಂತಹ ಮಕ್ಕಳನ್ನು ಹೊಂದಿದ ತಂದೆತಾಯಿಗಳಿಗೆ ಹಾಗೂ ಮಕ್ಕಳ ಬೆಳವಣಿಗೆ ಬಗ್ಗೆ ಆಸಕ್ತರಾಗಿರುವ ಎಲ್ಲರಿಗೂ ಸಹಾಯವಾದೀತು ಎಂಬ ನಂಬಿಕೆ ನನ್ನದು. ಅದೇ ರೀತಿ, ಅಂಥ ಮಹನೀಯರ ಅನುಭವ ನಮಗೂ ಸಹಕಾರಿಯಾದೀತು ಎಂಬ ಆಸೆಯಿಂದ ಈ ಬ್ಲಾಗ್‌ ಪ್ರಾರಂಭಿಸಿದ್ದೇನೆ.

ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

June 30, 2008 - 11:37pm — ರೇಖಾ

ಮಕ್ಕಳು ರಚ್ಚೆ ಹಿಡಿದಾಗ, ಅವರ ಮೇಲೆ ಎಷ್ಟೇ ಪ್ರೀತಿ ಇದ್ದರೂ ಎಲ್ಲ ತಾಯಂದಿರೂ ತಾಳ್ಮೆ ಕಳೆದುಕೊಳ್ಳುತ್ತಾರೆ. ಏಟು ಸಹಿಸುವಷ್ಟು ದೊಡ್ಡ ಮಗುವಲ್ಲದಿದ್ದರೆ, ಚೆನ್ನಾಗಿ ಬೈಯುತ್ತೇವೆ. ಒರಟಾಗಿ ಎತ್ತಿಳಿಸುತ್ತೇವೆ. ಅವು ಅತ್ತಾಗ, ಮತ್ತೆ ತಾಳ್ಮೆ ಕೆಡುತ್ತದೆ.

ಸ್ವಲ್ಪ ಹೊತ್ತಿನ ನಂತರ ಕೋಪ ಇಳಿದಿರುತ್ತದೆ. ಮಾಡಿದ ಕೆಲಸ ನೆನೆದು ಮನಸ್ಸು ಮರುಗುತ್ತದೆ. ಎಂಥಾ ದಡ್ಡತನದ ಕೆಲಸ ಮಾಡಿದೆನಲ್ಲ ಎಂದು ಪಶ್ಚಾತ್ತಾಪ ಉಂಟಾಗುತ್ತದೆ. ಮಗುವನ್ನು ರಮಿಸುತ್ತೇವೆ. ಮಗುವೇನೋ ಬೇಗ ಮರೆತು ಮತ್ತೆ ನಗುತ್ತದೆ. ಆದರೆ ನಮಗೆ ಹಾಗೆ ತಕ್ಷಣ ಮನಸ್ಸು ಬದಲಾಯಿಸಿಕೊಳ್ಳಲು, ಮಾಡಿದ್ದ ತಪ್ಪನ್ನು ಮರೆತುಬಿಡಲು ಸಾಧ್ಯವಾಗುವುದಿಲ್ಲ.

ಏಕೆ ತಾಳ್ಮೆಗೆಡುತ್ತೇವೆ? ಮಗು ನಮ್ಮ ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಲಿಲ್ಲ ಎಂಬ ಅಸಮಾಧಾನಕ್ಕೋ ಅಥವಾ ಅದು ನಾನು ಹೇಳಿದ ಹಾಗೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೋ? ಒಟ್ಟಿನಲ್ಲಿ ನಮ್ಮ ವಿವೇಕ ಕೈಕೊಟ್ಟಿರುತ್ತದೆ.

ಆದರೆ, ಇಂಥದೇ ಅಸಮಾಧಾನವನ್ನು ನಮಗಿಂತ ದೊಡ್ಡವರು ಅಥವಾ ನಮ್ಮ ಜೊತೆಗಿರುವವರು, ಅವರು ಬಂಧುಗಳಾಗಲಿ, ಗೆಳತಿಯರಾಗಲಿ ತೋರಿಸಿದರೆ ನಮ್ಮ ಮನಃಸ್ಥಿತಿ ಹೇಗಿರುತ್ತದೆ? ಮಕ್ಕಳಂತೆ ಅನಿಸಿಕೊಂಡಿದ್ದನ್ನು, ಬೈಸಿಕೊಂಡಿದ್ದನ್ನು ನಾವು ತಕ್ಷಣ ಮರೆಯಲಾರೆವು. ಹಾಗಾದರೆ, ಮಕ್ಕಳಿಗಿಂತ ನಾವು ಚಿಕ್ಕವರಾದ ಹಾಗೆ ಅಲ್ಲವೆ?

ಎಷ್ಟೋ ಸಾರಿ ಹೀಗೆ ಅಂದುಕೊಂಡಿದ್ದೇನೆ. ಮಕ್ಕಳ ಮೇಲೆ ರೇಗಬಾರದು. ಹಾಗಂತ, ಅವು ತೀರಾ ಮೊಂಡುತನದಿಂದ ವರ್ತಿಸಿದರೆ ಶಿಕ್ಷೆ ಕೊಡಬಾರದು ಎಂದಲ್ಲ. ಆದರೆ ನಮ್ಮ ಶಿಕ್ಷೆ ಸಿಟ್ಟಿನಿಂದ ಮೂಡಿರಬಾರದು. ಅದಕ್ಕೆ ವಿವೇಕದ ಕಡಿವಾಣ ಇರಬೇಕು. ಯೋಚಿಸಿ ಶಿಕ್ಷಿಸಿದರೆ ಅದರ ಫಲಿತಾಂಶ ಉತ್ತಮವಾಗುತ್ತದೆ.

ನನ್ನ ಉದ್ದೇಶ ಇಷ್ಟೇ, ನಮ್ಮ ಮಕ್ಕಳ ನಡವಳಿಕೆಗಳ ಬಗ್ಗೆ ತಾಳ್ಮೆಯ ಪ್ರತಿಕ್ರಿಯೆ ಇದ್ದಷ್ಟೂ ಒಳ್ಳೆಯದು. ಇದನ್ನು ಅಭ್ಯಾಸ ಮಾಡಿಕೊಂಡರೆ, ದೊಡ್ಡವರ ಜೊತೆಗೂ ನಾವು ಸಮಾಧಾನದಿಂದ ವರ್ತಿಸುವುದು ಸಾಧ್ಯವಾಗುತ್ತದೆ. ಆಗ ನಮ್ಮ ಮನಸ್ಸು ಹಿಡಿತಕ್ಕೆ ಬಂದು, ವಿವೇಕದಿಂದ ವರ್ತಿಸುವುದು ಸುಲಭವಾಗುತ್ತದೆ. ನಮ್ಮ ಮಕ್ಕಳು ನಮ್ಮ ಗುರುವಾಗುವುದು ಹೀಗೆ. ಮಕ್ಕಳು ಎಷ್ಟೇ ಚಿಕ್ಕವರಿರಲಿ, ಅವುಗಳಿಂದ ಕಲಿಯುವುದು ತುಂಬ ಇರುತ್ತದೆ.

ಅನುಮಾನ ಬಂದರೆ ಪರೀಕ್ಷಿಸಿ ನೋಡಿ. ಮುಗ್ಧ ಮಕ್ಕಳು ಕಲಿಸಿದಂತೆ ಪ್ರಬುದ್ಧ ವ್ಯಕ್ತಿ ಕಲಿಸಲಾರ. ಆದರೆ, ನಮಗೆ ಕಲಿಯುವ ಮನಸ್ಸಿರಬೇಕಷ್ಟೇ.

- ರೇಖಾ ಚಾಮರಾಜ

  • ತಾಳ್ಮೆ
  • ಮಗು
  • ಸಿಟ್ಟು
~.~
  • ರೇಖಾ ರವರ ಬ್ಲಾಗ್
  • Login or register to post comments
  • 188 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2008 - 12:58pm — veena

ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

veena's picture

veena.

ನೀವು ಹೇಳಿದ್ದು ಸರಿ ರೇಖಾ. ನಾನು ಪ್ರತಿ ಸಾರಿ ನನ್ನ ಮಗನಿಗೆ ಹೊಡೆದಾಗಲೂ ಅಂದು ಕೊಳ್ಳುತ್ತೇನೆ, ಅವನಿಗೆ ಅಷ್ಟು ಜೋರಾಗಿ ಹೊಡೆಯಬಾರದಿತ್ತು ಅಂತ. ಅವನು ಅದನ್ನು ಮರೆತು ಮತ್ತೆ ನನ್ನತ್ತ ನಗುತ್ತಾ ಬಂದಾಗ ನನ್ನ ಬಗ್ಗೆ ನನಗೇ ನಾಚಿಕೆಯೆನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 11:03pm — ರೇಖಾ

ಉ: ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?

ರೇಖಾ's picture

ಅದಕ್ಕೆ ಅಲ್ವೆ ವೀಣಾ ಮಕ್ಕಳ ಮನಸ್ಸು ಶುದ್ಧ ಅನ್ನೋದು. ಆದರೂ, ತಾಯಂದಿರು ಮಕ್ಕಳನ್ನು ಹೊಡೆಯೋದನ್ನು ಮಾಡಬಾರದು. ತಿಳಿಸಿ ಹೇಳುವ ಪ್ರಯತ್ನ ಮೊದಲು. ನಂತರ, ಹೊಡೆತದ ಹೆದರಿಕೆ ಹಾಕೋದು.

- ರೇಖಾ ಚಾಮರಾಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಎತ್ತ ಸಾಗುತಿಹೆವು ಸಂಸ್ಕೃತಿಯ ಹೊರತು???
  • ಕೋಚ್ ಬೇಕೇ?
  • ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ
  • ಅಸೂಯೆ ಎಂಬ ತಡೆಗೋಡೆ...
Syndicate content

ಲೇಖಕರು

ರೇಖಾ's picture

ಪೂರ್ಣ ಹೆಸರು
ಗೌರಿ ಬ್ಲಾಗ್

ಪರಿಚಯ

ನನ್ನ ಮಗಳ ಹೆಸರಿನಲ್ಲಿ ಬರೆಯುತ್ತಿರುವ ಬ್ಲಾಗ್ ಇದು. ಇಲ್ಲಿ ಬರಲಿರುವ ಕೆಲವು ಬರಹಗಳು ತುಂಬ ಜನ ತಂದೆ-ತಾಯಿಗಳಿಗೆ ಸಹಾಯವಾಗಲಿ ಎಂಬುದು ನನ್ನ ಆಸೆ. ನನ್ನ ಮಗಳೊಂದಿಗೆ ಕಂಡ ಹೊಸ ಜಗತ್ತಿನ ಕುರಿತ ಬರವಣಿಗೆ ನನ್ನ ಉದ್ದೇಶ.

- ರೇಖಾ ಚಾಮರಾಜ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator