~
ಏನಿರಬಹುದು ಕಾರಣ....?
ಇತ್ತೀಚಿಗೆ ನಾನು ಅತ್ತೇಯಿಲ್ಲ
ಏನಿರಬಹುದು ಕಾರಣ?
ಕಂಬನಿ ಒರೆಸುವ ಕೈಗಳಿಲ್ಲ
ಎಂದು ಹಿಂಜರಿಯಿತೇನೋ ಮನ!
ಅದಕೇಕೆ ಯಾರದೋ ಹಂಗು?
ಮನಸ್ಸೇ ಹೀಗೆ ಮಾತೇ ಕೇಳುವುದಿಲ್ಲ
ಸದಾ ಇಲ್ಲದರದ್ದೇ ಗುಂಗು. ಕಣ್ಣೀರಿಗೂ ಗೊತ್ತಾಗಿರಬೇಕು
ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು,
ಸಮಯ ಸಾಧಿಸಿ ತುಳುಕಿಬಿಡುತ್ತದೆ
ಕೆಲವೊಮ್ಮೆ ಎಲ್ಲರ ಮುಂದೂ. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ
ಭಾವನೆಗಳಿಗೆ ನಿರಂತರ ಪೆಟ್ಟು,
ಇದಾವುದರ ಗೊಡವೆ ಬೇಡವೆಂದು
ಓಡಿ ಹೋಗಿದೆ ಬುದ್ಧಿ ಕೈಕೊಟ್ಟು. ಹೇಗಾದರು ಮಾಡಬೇಕಿದೆ ಬೇಗ
ಇವರ ನಡುವೆ ಸಂಧಾನ,
ಒಂದಷ್ಟು ಹೊಂದಾಣಿಕೆಗಳಾದ ಮೇಲೆ
ಆಗಬಹುದೇನೋ ಸಮಸ್ಯೆ ಶಮನ.

- ವಲ್ಲರಿ ರವರ ಬ್ಲಾಗ್
- Login or register to post comments
- 327 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಏನಿರಬಹುದು ಕಾರಣ....?
ಮನದ೦ಗಳದಲ್ಲಿ ಕಣ್ನಿನ ಕನಸು ಕ೦ಡ೦ಗಾಯಿತು.
ತು೦ಬಾ ಚೆನ್ನಾಗಿ ಮೂಡಿದೆ.
ಅಜಿತ.
ಉಸಿರಾಡಲು ಮರೆತಿಲ್ಲಾ,
ಮರೆತು ಉಸಿರಾಡುತಿರುವೆನು.
ಉ: ಏನಿರಬಹುದು ಕಾರಣ....?
ನಮಸ್ಕಾರ ವಲ್ಲರಿ
ಕವನ ತುಂಬಾ ಚೆನ್ನಾಗಿದೆ, ಕವನದ ಸ್ವಾರಸ್ವವೂ ಸುಂದರ,
ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್