ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ನಯಸೇನ, ದಿನಬದುಕಿನಲ್ಲಿ ತುಂಬ ಪಳಗಿದ ಹಯ್ದ ಅಂತ ತಿಳಿಸೋಕೆ ಈ ಕೆಳಗಿನ ಸಾಲುಗಳು ಮಾದರಿ
ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?
ಗಮನಿಕೆ:
೧) ಮತ್ತೆ ಮೇಲಿನ ಪದ್ಯ ತುಂಬಾ ಸಲೀಸಾದ ಸಾಲುಗಳು
೨) ಕೇರಿಲ್ಲದ ಮನೆಯುಂ ..ಅಕ್ಕಿ ಕೇರುವುದು ಅಂತ ನಮ್ಗಳ ಮನೆಗಳಲ್ಲಿ ಹೆಂಗಸರು ಹೇಳುತ್ತಿರುತ್ತಾರೆ... ನೆನಪಿಸಿಕೊಳ್ಳಿ. ಇಲ್ಲಿ 'ಕಸ ಗುಡಿಸದ ಮನೆ' ಅಂತ ಅರಿತುಕೊಳ್ಳಬಹುದು
೩) ತುಪ್ಪವಿಲ್ಲದೂಟಂ: ನಾವು ಕನ್ನಡಿಗರು ತುಪ್ಪ ತುಂಬ ಬಳಸ್ತಿವಿ ಅಂತ ನನ್ನ ತಮಿಳು ಒಡಕೆಲಸಗಾರರು ಹೇಳುತ್ತಿರುತ್ತಾರೆ. ಕನ್ನಡಿಗರು ತುಪ್ಪವಿಲ್ಲದ ಊಟವನ್ನು ಊಹಿಸಿಕೊಳ್ಳಲಾರರು ಅನ್ಸುತ್ತೆ.
೪) ಕೊನೆಸಾಲಿನಲ್ಲಿ ದರುಮದ ಬಗ್ಗೆ ಯಾವುದೆ ತೀರ್ಪನ್ನೀಯದೆ(ಸಮಱಿದರುಸನ=ಸಮ್ಯಗ್ದರ್ಶನ) ಕೇಳ್ಮೆಯಾಗಿ ಇಟ್ಟಿರುವುದು ನಯಸೇನನ ಜಾಣ್ಮೆಗೆ ಕಯ್ಗನ್ನಡಿ.
ಸಮಱಿದರುಸನ ಅಂದ್ರೇನು?

- ವೈಭವ ರವರ ಬ್ಲಾಗ್
- Login or register to post comments
- 198 hits
- Email this blog





RSS:
ಪ್ರತಿಕ್ರಿಯೆಗಳು
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
samaṟu, savaṟu to make proper, fit, neat or beautiful, trim; n. trim, decoration;
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಅದೇ ಪ್ರಾಪರ್ ದರುಸನ ಅಂದ್ರೇನು?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಸಮ್ಯಗ್ದರ್ಶನ -> ಇದರ ಬಳಕೆ ವಿವೇಕಚೂಡಾಮಣಿಯಲ್ಲಿ ಆಗಿದೆ. ಬೆನಕ ಅವರು ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬಲ್ಲರು ಅನ್ನಿಸತ್ತೆ. ನಯಸೇನ ಇದನ್ನು ಸಮರಿದರುಸನ ಅಂತ ಬಳಸಿರುವುದನ್ನು ನೋಡಿ ಅಚ್ಚರಿಯಾಯಿತು. ಏಕೆಂದರೆ ನಾನು ಓದಿದ್ದ ಪುಸ್ತಕದಲ್ಲಿ, "ಸಮ್ಯಗ್ದರ್ಶನ ನಿಷ್ಠಯಾ" ಎಂಬುದನ್ನು, "ಸಮ್ಯಕ್ ದರ್ಶನ ನಿಷ್ಠೆಯಿಂದ" ಎಂಬುದಾಗಿ ಅನುವಾದ ಮಾಡಿದ್ದರು.
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಸಮಱಿದರುಸನ - ಸಮ್ಯಗ್ದರ್ಶನವೇ ಆಗಿದ್ದರೆ, ಇದಕ್ಕೆ ಇದೇ ಅರ್ಥ ಎಂಬುದು ಇರಲಾರದು. ಏಕೆಂದರೆ, ವೈದಿಕರೂ ಇದರ ಬಳಕೆ ಮಾಡಿದ್ದಾರೆ, ಜೈನರೂ ಇದರ ಬಳಕೆ ಮಾಡಿದ್ದಾರೆ. ಭರತೇಶವೈಭವದಲ್ಲಿ ಇದನ್ನು ನೋಡಿದ್ದೇನೆ.
ಬಹುಶಃ ಇದನ್ನು "ನಂಬುಗೆಯ ಅರಿವು" - ಸೈದ್ಧಾಂತಿಕ ಅನುಭೂತಿ ( ಸ'ಕ್ಕು'ದಿಸಿದ ಕನ್ನಡ ) = doctrinal empathy ಎನ್ನಬಹುದೋ ಏನೋ.
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ನಯಸೇನ ಇಷ್ಟು ಸರಳವಾಗಿ ಬರೆದಿದ್ದಾನಾ.
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಒಳ್ಳೆಯ ಸಾಲುಗಳು.
ಭಕ್ತಿಯಿಲ್ಲದ ಕೊಂಡಾಟಮಂ ಎನ್ನುವ ಪ್ರಯೋಗ ವಿಶಿಷ್ಟವಾಗಿದೆ. ಇಂದಿನ ಕನ್ನಡದಲ್ಲಿ ಕೊಂಡಾಡು - ಅನ್ನುವುದನ್ನು ಕೇವಲ praise ಎನ್ನುವ ಅರ್ಥದಲ್ಲಿ ಕೇಳಿದ್ದೆ. ಇಲ್ಲಿ ಅದನ್ನು ಆಚರಣೆ ಎನ್ನುವ ಅರ್ಥದಲ್ಲಿ ಬಳಸಿದ್ದಾನೆ ಕವಿ. ತಮಿಳಿನಲ್ಲಿ ಈಗಲೂ ಅದೇ ಅರ್ಥ (celebrate) ಇರುವುದನ್ನು ಗಮನಿಸಬಹುದು ( ಉದಾ: ಪೊಂಗಲ್ ವಿೞಾ ಕೊಂಡಾಡಲ್ಪಟ್ಟದು - ಸಂಕ್ರಾಂತಿ ಉತ್ಸವವನ್ನು ಆಚರಿಸಲಾಯಿತು; ಅದು ಪೆರಿಯ ಕೊಂಡಾಟ್ಟಂ - ಅದು ಬಹಳ ವಿಜೃಂಭಣೆಯ ಆಚರಣೆ ಇತ್ಯಾದಿ).
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ನನ್ನಿ,
ನಾವು ಹೇಳಬಹುದು 'ಹೆಕ್ಕೊಂಡಾಟ' (ಪೆರ್+ಕೊಂಡಾಟ) ಅಂತ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ತುಪ್ಪದ ವಿಚಾರ ಮಾತ್ರ ಎತ್ತಲೇ ಬೇಡಪ್ಪಾ
ಸೋಮೇಶ್ವರ ಶತಕದಲ್ಲಿಯೂ ಇದು ಬೆಳಕಿಗೆ ಬಂದಿದೆ.
ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
ಹ್ಹ ಹ್ಹ
ಪುರಂದರದಾಸರ ಕೃತಿಗಳೊಂದಷ್ಟನ್ನು ಈಗ ನೋಡಿದೆ - ಹಲವಾರು ಕಡೆ ತುಪ್ಪದ ಪ್ರಸ್ತಾಪ ಆಗಿದೆ. ಕೆಲವು ಅಚ್ಚರಿ ತರಿಸುವ ಹಾಡುಗಳೂ ಕಂಡವು. ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/