23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಿವನ ಪೂಜೆಯ ಹೂ

February 20, 2012 - 8:30am
hamsanandi

ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯):

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ

ಕೊ: ಹಿಂದೆ ಈ ಪದ್ಯವನ್ನೊಮ್ಮೆ ಅನುವಾದಿಸಿದ್ದೆ. ಆದರೆ ಈ ವಾರದ ಪದ್ಯಪಾನಕ್ಕೆಂದು ಅದೇ ಅನುವಾದವನ್ನು ಬದಲಾಯಿಸಿ ಭಾಮಿನೀ ಷಟ್ಪದಿಗೆ ಅಳವಡಿಸಿದ್ದೇನೆ - ಶಿವರಾತ್ರಿಯ ಈ ದಿನದಂದು.

ಚಿತ್ರ: http://en.wikipedia....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!
------------------------------------------------------------------
>>> ಅದು ದಿಟವಾದ ಮಾತು..

ಹಂಸನ0ದಿ ಅವ್ರೆ ಶಿವರಾತ್ರಿ ಸಂದರ್ಭದಲ್ಲಿ ಒಳ್ಳೆಯ ಕವನ ರಚಿಸಿದ್ದೀರಿ..
ತುಂಬಾ ಚೆನ್ನಾಗಿದೆ...

>>>. ಆ ಮೇಲೆ ನಾ ಮರು ಛಾಪಿಸಿದ ನಿಮ್ಮ ಕವನದ ಸಾಲ್‌ಗಳು ನನಗೆ

ಬಸವಣ್ಣ ಅವ್ರ
------------------------------------------------------------------------
ಎನ್ನ ಕಾಲೇ ಕಂಬ ಶಿರವೇ ಹೊನ್ನ ಕಲಶವಯ್ಯ ..... ನೆನಪಿಸಿತು.
-----------------------------------------------------------------------

***********ನಿಮಗೆ ಮಹಾ ಶಿವರಾತ್ರಿಯ ಶುಭಾಶಯಗಳು ************

ಆ ಪರಮಾತ್ಮನು ನಿಮ್ಮೆಲ್ಲರಿಗೆ ಸಕಲ ಸನ್ ಮಂಗಳವನ್ನುಂಟು ಮಾಡಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on

ಹಂಸಾನಂದಿಯವರೆ ಆದಿಶಂಕರಾಚಾರ್ಯರ ಶಿವಾನಂದಲಹರಿಯ ಛಂದೋಬದ್ಧವಾದ ಸೊಗಸಾದ ಅನುವಾದ ಭಾವತುಂಬಾ ಚೆನ್ನಾಗಿದೆ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಧನ್ಯವಾದಗಳು, ಸಪ್ತಗಿರಿವಾಸಿ ಮತ್ತು ಪದ್ಮ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಪದ್ಯದ ಭಾವವು ಸುಂದರ ಹಾಗೆ ನಿಮ್ಮ ಅನುವಾದ ಸಹ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by indiresh on

ತುಂಬ ಸುಂದರಭಾವ -- ಸಂಸ್ಕೃತ ಮೂಲದಲ್ಲೂ ಅದರ ಅನುವಾದದಲ್ಲೂ. ಧನ್ಯ ಹಂಸಾನಂದಿಯವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಹಂಸಾನಂದಿಯವರೆ,
ಆದಿಶಂಕರಾಚಾರ್ಯರ ಕಾಲದಿಂದಲೂ ಎಷ್ಟು ಬುದ್ಧಿಮಾತು ಹೇಳಿದರೂ ಜನ ಬದಲಾಗಲಿಲ್ಲ.
ಪರ್ವತ ಏರುವ ಬದಲು ಪಕ್ಕದ ಮನೆ ಗೇಟು ಏರಿ ಹೂವಕೊಯ್ವರು ಶಿವನ ಪೂಜೆಗೆ..ಬಹುಷಃ ಮನದ ಕೊಳ ಬತ್ತಿ ಹೋಗಿಹುದು.
ಶಿವರಾತ್ರಿ ದಿನ ಜನಗಳ ನಡುವೆ ಒದ್ದಾಡಿ ಒಳಗೆ ನುಗ್ಗುತ (ದಟ್ಟ ಕಾಡಿನ)ದೇವಸ್ಥಾನ ಹೊಕ್ಕಿ ಪೂಜಿಸುವರು- ಯಾಕೆ- ಮನದಲ್ಲಿ ಮನೆಯಲ್ಲಿ ಪೂಜಿಸಲು ಶಿವನಿಗೆ ಮೆಚ್ಚಿಗೆಯಾಗದೆ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.