ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಕನ್ನಡ ಅಂಕಿಗಳು ಮಾಡಿದ ಪಾಪವೇನು?

July 2, 2008 - 6:30pm — ಸಂಗನಗೌಡ

ಕೆಲ ದಿನಗಳ ಹಿಂದೆ ಪುಣೆಗೆ ಹೋಗಿದ್ದೆ. ಅಲ್ಲಿ ಬಸ್ಸಲ್ಲಿ ಟಿಕೆಟ್ ಮೇಲೆ ದರ ದೇವನಾಗರಿ ಅಂಕಿಯಲ್ಲಿ ಅಚ್ಚಾಗಿತ್ತು. ಏನ್ ಬಂತಪ್ಪ ಅಂದುಕೊಂಡೆ,. ಹಂಗೂ ಹಿಂಗು ದೇವನಾಗರಿ ಅಂಕಿಗಳು ತುಸು ಗೊತ್ತಿರುವದರಿಂದ ತಿಳೀತು ಅನ್ನಿ. ಬಾಂಬೆಯಲ್ಲೂ ಅಸ್ಟೇ ಅಂತೆ,.. ಟಿಕೆಟ್ ಮೇಲಿರುವ ಒಂದೊಂದು ಪದಾನೂ ದೇವನಾಗರಿ(ಮರಾಟಿ ಬರೆಯಲು ಬಳಸುವ ಲಿಪಿ).. ಕೂಡಲೆ ಕನ್ನಡ ನಾಡಿನ ಸರಕಾರಿ ಬಸ್ಸುಗಳ ಟಿಕೆಟುಗಳ ಮೇಲೆ ಕಾಣದ ಕನ್ನಡ ಅಂಕಿಗಳ ಬಗ್ಗೆ ನೆನೆದು ಮನಸ್ಸು ಮುದುಡಿತು.

ಕೆ.ಎಸ್.ಆರ್.ಟಿ.ಸಿ ಆಗಲಿ,.ಬಿ.ಎಮ್.ಟಿ.ಸಿ ಆಗಲಿ ಬಸ್‍ಗಳ ಟಿಕೆಟ್‍ಗಳ ಮೇಲೆ ಇಂಗಳಿಸಿನಲ್ಲಿಯೇ ದರ ಬರೆದಿರುತ್ತದೆ.ಎಲ್ಲೋ ಅಲ್ಲೊಂದು ಇಲ್ಲೊಂದು ಕನ್ನಡ ಪದ ಕಂಡರೂ ದರ ಇಂಗಳೀಸಿನಲ್ಲಿಯೇ. ಯಾಕೆ? ಕನ್ನಡ ಅಂಕಿಗಳು ಕನ್ನಡಿಗರಿಗೆನೇ ಗೊತ್ತಿಲ್ಲ ಅಂತಲೋ ಇಲ್ಲ ಹೊರಗಿನವರಿಗೆ ತೊಂದರೆಯಾಗುತ್ತದೆ ಅಂತಲೋ? ಹೀಗೆ ಎಸ್ಟು ಅಂತ ಹೊರಗಿನವರಿಗೆ ಅನುಕೂಲ ಮಾಡಿ ಕೊಡಲು ನಮ್ಮ ನುಡಿಯನ್ನು ನಾವು ಹಿಂತಳ್ಳುತ್ತ ಇರುವದು?

ಈಗಿನ ಹಲವು ಪೇಪರ್‍ಗಳಾಗಲಿ,.ತಿಂಗಳೋಲೆ(ಮ್ಯಾಗಜೀನ್‍ಗಳು)ಗಳ ಪುಟಗಳ ಸಂಕೆಗಳನ್ನು ನೋಡಿ,.. ಇಂಗಳೀಸಿನಲ್ಲೇ ಇರುತ್ತವೆ ಯಾಕೆ? ಪುಣೆ,ಬಾಂಬೆಗಳಲ್ಲಿ, ತೊಂದರೆ ಆಯಿತು ಅಂತ ಏನಿಲ್ಲವೆಂದರೂ ದೇವನಾಗರಿ ಸಂಕೆಗಳನ್ನಾದರೂ ಕಲಿತುಕೊಳ್ಳುತ್ತಾರೆ. ಅಂತ ಕಲಿತುಕೊಳ್ಳಬೇಕಾದ ಪರಿಸ್ತಿತಿ ತಂದೊಡ್ಡದೇ ಹೊರಗಿನವರಿಗೆ ಕನ್ನಡ ಕಲಿಯಿರಿ ಅಂದರೆ ಹೇಗೆ ಕಲಿತಾರು?

ಇಸ್ಟಕ್ಕೆ ನನಗೆ ಬೇಸರವಾಗಲಿಲ್ಲ. ೨೦೦೮ರ ಕನ್ನಡ ಅಂಕಿಗಳಲ್ಲಿ ಮೂಡಿಸಿರುವ ಕ್ಯಾಲೆಂಡರ್ ಹುಡುಕುತ್ತಿದ್ದೆ.. ಬೆಂಗಳೂರಲ್ಲೆಲ್ಲೂ ನನಗೆ ಸಿಗಲಿಲ್ಲ.. Sad

ಯಾಕೆ ಹೀಗೆ ನಾವು ಕನ್ನಡ ಅಂಕಿಗಳನ್ನು ಮೂಲೆಗಟ್ಟುತ್ತಿದ್ದೇವೆ,.. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಿದೆ ಅಲ್ಲವೇ?

  • ಕನ್ನಡ
  • ಕನ್ನಡ ಅಂಕಿಗಳು
  • ಕನ್ನಡ ಸಂಕೆಗಳು
  • ಕನ್ನಡದುಳಿವು
  • ನುಡಿ
  • ನುಡಿಯ ಉಳಿವು
  • ಭಾಷೆ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 381 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2008 - 7:21pm — Jayalaxmi.Patil

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

Jayalaxmi.Patil's picture

ನೀವು ಹೇಳೂದು ಖರೇರಿ ಸಂಗನಗೌಡ್ರ, ನಾನೂ ಇಷ್ಟ ವರ್ಷ ಮಹಾರಾಷ್ರದಾಗ ಇದ್ದು ಬಂದಕೀನ. ಅಲ್ಲೆಲ್ಲ ತಿಕೀಟ್ ಮ್ಯಾಲೆ ಮರಾಠಿ ಸಂಖ್ಯಾನ ಇರ್ತಾವ. ನಮ್ಮಲ್ಲೇನಪಾ ಅಂದ್ರ ನಾವು, ನಮ್ಮಂಥೋರು ಬರೀ ಹಿಂಗ ಕುಂತಲ್ಲೆ ಹಂಗಾಗಬೇಕು, ಹಿಂಗಾಗಬೇಕು ಅಂತೀವಿ ಮರೀತೀವಿ. ಯಾಕಂದ್ರ ನಮ್ ಕೋತ್ ಇಷ್ಟ! ಹಾಳಿ ಮ್ಯಾಲಿನ ಹುಲಿಗೋಳು ನಾವು!
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 6:38pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

ಬರೀ ಹಾಳೆ ಮೇಲಿನ ಹುಲಿಗಳಾಗೋದು ಬೇಡ.. ನಿಮ್ಮ ಅನಿಸಿಕೆಯನ್ನು ctm@bmtcinfo.comಗೆ ಮೇಲ್ ಮಾಡಿ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 5:28am — Rajeshwari

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

Rajeshwari's picture

ಕನ್ನಡದ ಅಂಕಿಗಳು ಕನ್ನಡದವರಿಗೆ ಗೊತ್ತಾಗೊಲ್ಲ ಅಂತಿರಬಹುದು. ನಮ್ಮ ಪಠ್ಯ ಪುಸ್ತಕಗಳಲ್ಲಿಯೂ ಅದ್ರ ಬಳಕೆ ಕಡಿಮೆ. ಯಾವ ಭಾಷೆ ಮಾತನಾಡುತ್ತಾರೊ ಅವರಿಗೆ ಅಂತಹುದೇ ಭಾಷೆಯಲ್ಲಿ ಪ್ರತಿಕ್ರಿಯಿಸುವುದು. ಕನ್ನಡ ಗೊತ್ತಿಲ್ಲ ಅಂತ ಹೇಳೋದು ಅವರ ಹೆಗ್ಗಳಿಕೆ ಅಂತ ಭಾವನೆ ಬಂದಿದೆ.ನಾವು ಬಹು ಭಾಷೆಯನ್ನು ಬಲ್ಲವರು ಎಂದು ತೋರಿಸಲ್ಲಿಕ್ಕೊ ಏನೊ ಅವರು ಕನ್ನಡ ಮಾತಿಗಿಂತ ಬೇರೆ ಭಾಷೆಯನ್ನು ಮಾತನಾಡುವುದೇ ಹೆಚ್ಚು. ಈ ಸಂಸ್ಕೃತಿ ಚೆನ್ನೈ ಅಥವ ಮುಂಬೈನಲ್ಲಿ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:12am — mahesha

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

mahesha's picture

ಮರಾಟಿಗೆ ಅದರದ್ದೇ ಆದ ಲಿಪಿಯೂ ಇಲ್ಲ ಅಂಕಿಗಳೂ ಇಲ್ಲ...

ಕನ್ನಡಕ್ಕೆ ತನ್ನದೇ ಆದ ಲಿಪಿ ಮತ್ತು ಅಂಕಿ ಎರಡೂ ಇದೆ...

ನಮ್ಮ ಸರಕಾರ ಇತ್ತ ಕಡೆ ಗಮನ ಹರಿಸಬೇಕು.. ಕನ್ನಡ ಅಂಕಿಗಳನ್ನು ಬಂಡಿಗಳ ಮೇಲೆ ಹಾಕಿಕೊಳ್ತಾ ಇದ್ದಾರೆ ಹೆಚ್ಚು ಮಂದಿ ಈಗ..ಇದು ಒಂದು ನಲಿವು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 10:38am — kannadakanda

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

kannadakanda's picture

ನಾನೂ ನಿಮ್ಮ ಜತೆ ದನಿಗೂಡಿಸುತ್ತೇನೆ ಸ್ವಾಮಿ. ೦ ೧ ೨ ೩ ೪ ೫ ೬ ೭ ೮ ೯ ಕ್ರಮವಾಗಿ 0 1 2 3 4 5 6 7 8 9 ಎಂದು ಜನರಿಗೆ ಹೇೞ್ತೇನೆ ಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:01pm — vikashegde

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

vikashegde's picture

ಕ.ರಾ.ರ.ಸಾ.ಸಂ ನವರು ಮೊದಲು ಟಿಕೆಟ್ ನಲ್ಲಿ ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದರು. ಆದ್ರೆ ಬೆ.ಮ.ನ.ಸಾದಲ್ಲಿ ಇಲ್ಲ. ನಾನೊಮ್ಮೆ ಕೋಲ್ಕೋತ್ತಾಗೆ ಹೋದಾಗ ಅಲ್ಲಿನ ಸಿಟಿ ಬಸ್ಸಿನ ಟಿಕೆಟ್ಟುಗಳಲ್ಲಿ ದೇವನಾಗರಿ ಲಿಪಿಯಲ್ಲೇ ಅಂಕಿಗಳಿದ್ದವು.

ಮೊದಲು ಕನ್ನಡ ಪತ್ರಿಕೆಗಳು ಕೂಡ ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದರು. ಈಗ ಜನರಿಗೆ ಓದಲು ಕಷ್ಟವಾಗುತ್ತವೆ ಎಂಬ ಸ್ವಯಂ ನಿರ್ಧಾರದಿಂದ ಅವುಗಳ ಬಳಕೆ ನಿಲ್ಲಿಸಿ ಇನ್ನೂ ಯಾರಿಗೂ ಮುಂದೆ ಪರಿಚಯವೇ ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ!. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಗಳಲ್ಲಿ ಈಗ್ಲೂ ಕನ್ನಡ ಅಂಕಿಗಳೆ ಇರುತ್ತವೆ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 6:34pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

ಬೆಂ.ಮ.ನ.ಸಾದ ವೋಲ್ವೊ ಬಸ್ಸುಗಳ ಟಿಕೇಟ್‍ಗಳ ಮೇಲೆ ಒಂದೇ ಒಂದು ಕನ್ನಡ ಪದ ಕಾಣದು ಗೊತ್ತೇ? Sad ಕನ್ನಡವನ್ನು ಎತ್ತಿ ಹಿಡಿಯಬೇಕಾದ ಸಂಸ್ತೆಗಳೇ ಕನ್ನಡವನ್ನು ಕಡೆಗಣಿಸುತ್ತಿವೆ..
ಕ.ರಾ.ರ.ಸಾ.ಸಂನ ಟಿಕೇಟ್ ಮೇಲೆ ಕನ್ನಡ ಕಂಡರೂ ಅಂಕಿಗಳು ಕನ್ನಡದಲ್ಲಿಲ್ಲ.

Quote:
ಈಗ ಜನರಿಗೆ ಓದಲು ಕಷ್ಟವಾಗುತ್ತವೆ ಎಂಬ ಸ್ವಯಂ ನಿರ್ಧಾರದಿಂದ ಅವುಗಳ ಬಳಕೆ ನಿಲ್ಲಿಸಿ ಇನ್ನೂ ಯಾರಿಗೂ ಮುಂದೆ ಪರಿಚಯವೇ ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ!.

ಇದಕ್ಕಾಗೇ ಬೇಸರವಾಗುತ್ತಿರುವದು. ಕನ್ನಡ ಅಂಕಿಗಳನ್ನು ಓದಲು ಕನ್ನಡಿಗರಿಗೇ ಕಸ್ಟಾನೇ? ನಾಳೆ ಕನ್ನಡವನ್ನೇ ಓದಲು ಕನ್ನಡಿಗರಿಗೆ ಕಸ್ಟ ಅನ್ನುವ ಅನಿಸಿಕೆ ಬೆಳೆದೀತೇನೋ? ಆಗ ಈ ಕನ್ನಡ ಪೇಪರ್‍ಗಳು,ತಿಂಗಳೋಲೆಗಳನ್ನು ಇಂಗಳೀಸಲ್ಲೇ ಅಚ್ಚು ಮಾಡತೊಡಗುವರೇನೋ!!
Puzzled

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 12:22pm — sushil

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

sushil's picture

ನಿಜ.ಎಲ್ಲೆಲ್ಲೂ ಕನ್ನಡ ಅಂಕಿಗಳನ್ನೇ ಬಳಸುವ ಪರಿಪಾಠ ಇನ್ನಾದರೂ ರೂಢಿಯಾಗಬೇಕು.ಇಲ್ಲದಿದ್ದರೆ ಪ್ರತಿಕ್ರಿಯೆಗಳ ಮೂಲಕ ರೂಢಿ ಮಾಡಿಸೋಣ.

-ಸುಶೀಲ್.
****************************
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ..
ಜಲವೆಂದರೆ ಕೇವಲ ನೀರಲ್ಲ ಅದು ಪಾವನತೀರ್ಥ!!
****************************
ಕನ್ನಡ ನಮ್ಮ ರಕ್ತದಲ್ಲಿ ಹರಿಯುತ್ತಲೇ ಇರುತ್ತದೆ ನಾವೆಲ್ಲೇ ಹೋದರೂ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 6:37pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ctm@bmtcinfo.com ಗೆ ಮೇಲ್ ಮಾಡಿ, ದಯವಿಟ್ಟು.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 3, 2008 - 8:44pm — hpn

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

hpn's picture

ನನಗೆ ಕಂಡುಬಂದದ್ದು ಇಷ್ಟು:
೧) ಕನ್ನಡ ಸಂಖ್ಯೆಗಳು ಸುಲಭವಾಗಿ ಗುರುತು ಹಿಡಿಯಲು ಹಲವರಿಗೆ ಕಷ್ಟವಿರುವಂತಿದೆ.
೨) ತಾಂತ್ರಿಕ ಕಾರಣಗಳಿಂದ ರೋಮನ್ ಸಂಖ್ಯೆಗಳೇ ಹೆಚ್ಚಾಗಿ ಬಳಕೆಯಲ್ಲಿರುವಂತಿದೆ.

(ಸ್ವಲ್ಪ ಬೇಗ ನನಗೆ ತೋಚಿದ್ದು ಬರೆದಿರುವೆ. ಕನ್ನಡ ಸಂಖ್ಯೆಗಳು ಬಳಕೆಗೆ ತರಬೇಕೆಂಬುದಕ್ಕೆ ನನ್ನದೂ ಬೆಂಬಲವಿದೆ. ಆದರೆ ಯಾರಿಗೂ ಅದು ಹೇರಿಕೆಯಾಗಕೂಡದು)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:07am — vikashegde

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

vikashegde's picture

ಹಾಗಿದ್ದರೆ ಮುಂದೆ ಕನ್ನಡ ಅಕ್ಷರಗಳು ಗುರುತಿಸಲು ಕಷ್ಟವಾಗುತ್ತದೆ ಮತ್ತು ತಾಂತ್ರಿಕ ತೊಂದರೆಗಳಿವೆ ಎಂದು ಕನ್ನಡ ಲಿಪಿಯ ಬಳಕೆಯೂ ಕೂಡ ಕ್ರಮೇಣ ಮಾಯವಾದರೆ ಆಶ್ಚರ್ಯವೇನಿಲ್ಲ. ತೀರ ಐದು ದಶಕಗಳಿಂದ ಇಲ್ಲದ ತಾಂತ್ರಿಕ ತೊಂದರೆಗಳು ಈಗ ಇವೆ ಎಂದರೆ ಏನರ್ಥ!! ನಮಗೆ ಬೇಕಾದಂತೆ ತಂತ್ರಜ್ಞಾನವನ್ನು ಬಗ್ಗಿಸಿಕೊಳ್ಳುವುದರಲ್ಲೇ ಮನುಷ್ಯನ ಬುದ್ಧಿವಂತಿಕೆ ಎಂಬುದು ನನ್ನಭಿಪ್ರಾಯ. ಹೋಗಲಿ, ಪಕ್ಕಾ ತಾಂತ್ರಿಕ ತೊಂದರೆಗಳಿಲ್ಲದಿದ್ದ ಕಡೆಯಾದರೂ ಕನ್ನಡ ಅಂಕಿ ಧಾರಾಳವಾಗಿ ಬಳಸಬಹುದಲ್ವಾ?

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:34am — mahesha

ಉ:

mahesha's picture

ಗೆಳೆಯ ಹರಿ..

FYI ಮಯ್ಸೂರು ಸಂಸ್ತಾನದ ಆಳ್ವಿಕೆಯಲ್ಲಿ ಕನ್ನಡದ ಅಂಕಿಗಳು ಇರಲಿಲ್ಲವಂತೆ. ನಮ್ಮ ಅಜ್ಜ ಅಜ್ಜಿಯರೂ ಕೂಡ ಕನ್ನಡದ ಅಂಕಿಗಳನ್ನು ಬರೀ ಜಾತಕದಲ್ಲಿ ನೋಡಿದ್ದಾರಂತೆ.

ಅವರು ಹೇಳಿದಂತೆ ಕನ್ನಡದ ಅಂಕಿಗಳು ಮುಂಚಿನಿಂದಲೂ ತುಂಗೆಯ ಬಡಗಣದಲ್ಲಿ ಹೆಚ್ಚು ಬಳಕೆಯಲ್ಲಿ ಇತ್ತಂತೆ.. ಹಾಗಾಗಿ.. ನಮ್ಮ ಅಂಕಿಗಳು ಬಳಕೆ ತಪ್ಪಿವೆ/ಕಡಮೆಯಾಗಿವೆ.

ಆದರೆ ನಮ್ಮ ಈಗಿನ ಸರಕಾರ ತುಸು ಅಕ್ಕರೆ ತೋರಿದರೆ ಎಲ್ಲಡೆ ಬಳಸಬೋದು.. ನನಗೆ ಒಂದು(೧) ಮತ್ತು ಸೊನ್ನೆ(೦) ಎರಡೂ ಒಂದೇ ತರ ಕಾಣತ್ತೆ ಈ ಪಾಂಟಲ್ಲಿ....

ನಾನು ಕನ್ನಡ ಅಂಕಿಗಳನ್ನು ಹೀಗೆ ನೆನೆಪಿಟ್ಟುಕೊಂಡಿದ್ದೀನಿ
೧
೨
೩
೪
೫
೬
೭
೮
೯
೧೦
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:37am — mahesha

ಉ:

mahesha's picture

ಗಮನಸಿಸು

ಕನ್ನಡ ೯ ಅನ್ನು ತಲೆಕೆಳಗೆ ಮಾಡಿದರೆ ಕನ್ನಡ ೬ ಸಿಗುವುದು ರೋಮನ್ ಅಂತೆ.

೯/9 ೬/6
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 6:31pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

Quote:
ಕನ್ನಡ ಸಂಖ್ಯೆಗಳು ಬಳಕೆಗೆ ತರಬೇಕೆಂಬುದಕ್ಕೆ ನನ್ನದೂ ಬೆಂಬಲವಿದೆ. ಆದರೆ ಯಾರಿಗೂ ಅದು ಹೇರಿಕೆಯಾಗಕೂಡದು

ಅಯ್ಯೋ ಹರಿ, ನಾವು ಕನ್ನಡಿಗರ ಈ ಬಗೆಯ ಅಟಿಟ್ಯೂಡ್ ಇಂದಾಗಿಯೇ ಹೊರಗಿನಿಂದ ಬಂದವರು ನಮ್ಮನ್ನು ದಬ್ಬುತ್ತಿದ್ದಾರೆ. ಆಂದ್ರ ಮತ್ತು ಮರಾಟ ಗಡಿಗಳಲ್ಲಿ ಕನ್ನಡದ ಆಗು ಹೇಗಿದೆ ಅಂತ ನಿಮಗೆ ತಿಳಿದಿಲ್ಲ ಅನಿಸುತ್ತೆ. ಬಳ್ಳಾರಿಯಯಲ್ಲಿರುವವರಿಗೆಲ್ಲ ತೆಲುಗು ಗೊತ್ತು,.. ಆದರೆ ಅಲ್ಲಿನ ಎಲ್ಲರಿಗೂ ಕನ್ನಡ ಗೊತ್ತಾ? ಅಂತ ಕೇಳಿದರೆ ತುಸು ವಿಚಾರ ಮಾಡಿ ಉತ್ತರ ಕೊಡಬೇಕಾಗುತ್ತೆ. ಮರಾಟಿ ಗಡಿಯಲ್ಲಿನ ಕನ್ನಡಿಗರಿಗೆ ಸರಕಾರದ ನೆರವು ಕವಡೆಯಸ್ಟು ಇಲ್ಲ,.. ಅವರಲ್ಲಿ ಕನ್ನಡದ ಬಗ್ಗೆ ಹೆಮ್ಮೆ ಮೂಡಲು ಸರಕಾರ ಏನೂ ಮಾಡದೇ ಅವರಲ್ಲಿ ಅದು ಹೇಗೆ ಬಂದೀತು? ಮರಾಟಿ ಸರಕಾರ ಮರಾಟಿಗರೆ ಏನೆಲ್ಲ ಒದಗಿಸುವದನ್ನು ನೋಡಿ,,. ಮರಾಟನಾಗಿರುವದೇ ಮೇಲು ಅಂತ ಅನಿಸದಿರದೇ?.

ಕನ್ನಡ ಅಂಕಿಗಳನ್ನು ಬಳಕೆಗೆ ತಂದರೆ ಹೊರಗಿಂದ ಬಂದವರಿಗೆ ಅದು "ಹೇರಿಕೆ"ಯಾಗೇ ತೋರೀತು. ಆದರೆ ಅದು ನಮ್ಮ ನುಡಿಯನ್ನು ಕಾಯ್ದುಕೊಂಡು ಹೋಗಲು ನಾವು ತೆಗೆದುಕೊಳ್ಳುವ ಒಂದು ಮುನ್ನೆಚ್ಚರಿಕೆಯ ಕೆಲಸ. ಅದಕ್ಕೆ ನಾವು ಕನ್ನಡಿಗರು ಒಮ್ಮನಸ್ಸಿನಿಂದ ಕೈಗೂಡಿಸಬೇಕು. ನಮ್ಮ ಒಳ್ಳೆಯತನ ನಮ್ಮ ಪೊಳ್ಳುತನ(ದೌರ್ಬಲ್ಯ) ಆಗಬಾರದು ಅಲ್ಲವೇ?

-------------------------------------------------------------

"ಕನ್ನಡ ಬರುತ್ತಾ" ಅಂತ ಕೇಳಿದರೆ ಹೇಳುವೆ, ಕನ್ನಡ ನನ್ನ ನೆತ್ತರಿನಲ್ಲಿದೆ ಎಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 6:33pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

ಮರಾಟಿಗರಿಗೆ*

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 6:36pm — ಸಂಗನಗೌಡ

ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?

ಸಂಗನಗೌಡ's picture

ಬೆ.ಮ.ಸಾ.ಸಂನ ಇನ್ನೊಂದು ಮಿನ್ನೋಲೆ ಗುರುತುಪದ, ctmobmtc@gmail.com ಮಿನ್ನೋಲೆ ಕಳಿಸಿ, ಕನ್ನಡಕ್ಕಾಗಿ.
-------------------------------------------------------------

"ಕನ್ನಡ ಬರುತ್ತಾ" ಅಂತ ಕೇಳಿದರೆ ಹೇಳುವೆ, ಕನ್ನಡ ನನ್ನ ನೆತ್ತರಿನಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಿ.ಎಂ.ಟಿ.ಸಿ ವೋಲ್ವೊ ಬಸ್ಸುಗಳಲ್ಲೇಕಿಲ್ಲ ಕನ್ನಡ??
  • ನಿತ್ಯ ಕನ್ನಡ ಜ್ಯೋತಿ ಬೆಳಗಲಿ...
  • ಕನ್ನಡ, ಕನ್ನಡ, ಕನ್ನಡ ...
  • ಕನ್ನಡ ಮಾಧ್ಯಮ
  • ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸಹಾಯ ಬೇಕಾಗಿದೆ
  • Attitude
  • ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 5:31am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 13, 2008 - 5:28am
  • venkatesh
    ಉ: ಪರ್ಯಟಕ ಮಿತ್ರರ ಜೊತೆಯಲ್ಲಿ !
    October 13, 2008 - 4:54am
  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 1:37am
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 12:16am
  • anil.ramesh
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 12, 2008 - 11:59pm
  • ಗಣೇಶ
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:50pm
  • anil.ramesh
    ಉ: ಓದಿದ್ದು ಕೇಳಿದ್ದು ನೋಡಿದ್ದು 47 ವಿದ್ಯುತ್ ಉಳಿಸಲು ಕೆಲವು ಸೂತ್ರಗಳು
    October 12, 2008 - 11:27pm
  • anil.ramesh
    ಉ: ಅವರು ಯಾರಿರಬಹುದು?
    October 12, 2008 - 11:26pm
  • ಗಣೇಶ
    ಉ: ಮತಾಂತರ ಏನು ಎತ್ತ
    October 12, 2008 - 11:22pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator