ಗಾಯ
ಹೂವಿಗಾಗಿ ಕೈ ಮಾಡಿದೆ
ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ
ಹಣ್ಣಿಗಾಗಿ ಮರವೇರ ಹೋದೆ
ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ
ಹಾಲು ಕೊಡೆಂದು ಹಸುವ ಕೇಳಿದೆ
ಸಿಕ್ಕಿದ್ದು ಬರೀ ಅದರ ಒದೆತದ ಗಾಯ
ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ
ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

- ಸಂಗನಗೌಡ ರವರ ಬ್ಲಾಗ್
- Login or register to post comments
- 388 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಗಾಯ
ಇಂತಹ ಸಮಯದಲ್ಲಿ ಬೇಕು ಡೆಟಾಲ್ ಆಂಟೀಸೆಪ್ಟೀಕ್ ಲೋಶನ್. ಗಾಯ ಮಾಯಲು ಸಹಕಾರಿ. ನಂಜಾಗದಂತೆ ಕಾಪಾಡುತ್ತದೆ.
------- ತಪ್ಪು ತಿಳಿಬೇಡಿ ತಮಾಷೆಗೆ ಹೇಳಿದೆ. ಕವನದ ಸಾಲುಗಳು ಕಣ್ಣನ್ನು ತೇವಗೊಳಿಸುತ್ತದೆ.
ಉ: ಗಾಯ
ಅಯ್ಯಪ್ಪ.... ನಿಮ್ಮ ಕಣ್ಣು ತೇವ ಮಾಡುವಸ್ಟು ಚೆನ್ನಗಿದೆಯಾ ಕವನ? .... ಸುಮ್ಮನೆ ಮನದ ನೋವಿನ ಅನಿಸಿಕೆಗೆ ಒಟ್ಟು ಕೊಟ್ಟು ಬರೆದಿದ್ದು ಅಸ್ಟೆ .....
ಉ: ಗಾಯ
ಎಷ್ಟು ನೊಂದಿದ್ದೀಯಲ್ಲೋ, ಸಂಗನ. ಸಮಾಧಾನಪಟ್ಟುಕೋ.
ನಲವಿನಗೆಳೆಯರ ಒಡನಾಟದೊಡ ನೀನಿರಲು,
ಗೀರೋದೆತವರಚುವಸಿಗಾಯವೆಲ್ಲವು ಮಾಗಿ,
ಮನವುಲ್ಲಾಸದಿಂ ಬೆಳಗಿ ಹುರುಪು ಮೈಗೂಡವುದು.
ಉ: ಗಾಯ
ಸುನಿಲ್, ಕೆಲಸದ ಒತ್ತಡಕ್ಕೆ,ಯಾಕೋ ನೋವಿನ ಅನಿಸಿಕೆಯನ್ನು ಕವನದ ಬಗೆಯಲ್ಲಿ ಹೊರಹಾಕಬೇಕೆನಿಸಿ ಇದನ್ನು ಬರೆದೆ