ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಆಸು ಹೆಗ್ಡೆಯವರ ಅಪ್ಪಯ್ಯ ಹೇಳಿದ ಕತೆ - ೧೧ (ಈ ಕೊಂಡಿಯನ್ನು ನೋಡಿ : http://sampada.net/b... ) ಓದುತ್ತಿರಬೇಕಾದರೆ ನೆನಪಾದದ್ದೇ ಮಿತ್ರನೊಬ್ಬನಿಂದ ಕೇಳಿದ್ದ ಇನ್ನೊಬ್ಬ ಸ್ವಾಮೀಜಿಯ ಸ್ವಾರಸ್ಯಕರವಾದ ಈ ಕೆಳಗಿನ ಕಥೆ.
ಒಂದು ಊರಿಗೆ ಸ್ವಾಮಿಗಳೊಬ್ಬರು ಭೇಟಿ ಇತ್ತರಂತೆ, ಎರಡು ದಿನ ಕಳೆದರೂ ಇವರಿಗೆ ಅನ್ನ ನೀರು ಕೊಡುವುದಿರಲಿ ಅವರನ್ನು ಮಾತನಾಡಿಸುವ ಗೋಜಿಗೇ ಆ ಊರಿನವರ್ಯಾರೂ ಹೋಗಲಿಲ್ಲವಂತೆ. ಆಗ ಆ ಸ್ವಾಮಿಗಳು, ಈ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಲಿ, ಈ ಊರಿನವರಾರಿಗೂ ರೋಗ-ರುಜಿನಗಳು ಭಾದಿಸದೇ ಇರಲಿ ಎಂದು ಆಶೀರ್ವದಿಸಿ ಮುಂದಿನ ಊರಿಗೆ ಹೊರಟರಂತೆ. ಮುಂದೆ ಸಿಕ್ಕ ಊರಿನ ಜನ ಇವರನ್ನು ಚೆನ್ನಾಗಿ ಮಾತನಾಡಿಸಿ ಗೌರವಿಸಿದ್ದೇ ಅಲ್ಲದೆ ಒಳ್ಳೇ ಊಟ-ಉಪಚಾರಗಳನ್ನೂ ಒದಗಿಸಿ ತಮ್ಮ ಊರಿನಲ್ಲಿ ಇನ್ನೂ ನಾಲ್ಕಾರು ದಿವಸ ಇದ್ದು ಹೋಗುವಂತೆ ಬೇಡಿಕೊಂಡರಂತೆ. ಆಗ ಈ ಸ್ವಾಮಿಗಳು, ಆ ಊರಿನವರಿಗೆ ಒಂದು ಶಾಪ ಹಾಕಿ ಹೊರಟರಂತೆ, ಅದೇನೆಂದರೆ, "ಈ ಊರಿನಲ್ಲಿ ಸರಿಯಾಗಿ ಮಳೆ-ಬೆಳೆಯಾಗದೆ ಬರ ಬಿದ್ದು ಹೋಗಲಿ ಮತ್ತು ಈ ಊರಿನ ಜನ ಜಡ್ಡು-ಜಾಪತ್ರೆಗಳಿಂದ ತೊಳಲಾಡುವಂತಾಗಲಿ". ಇದನ್ನೆಲ್ಲಾ ಗಮನಿಸುತ್ತಿದ್ದ ಅವರ ಶಿಷ್ಯನೊಬ್ಬ ಗುರುಗಳ ಈ ವಿಚಿತ್ರ ವರ್ತನೆಗೆ ಕಾರಣವೇನೆಂದು ಕೇಳಿದ? ಆಗ ಗುರುಗಳು, "ಮೊದಲನೇ ಊರಿನವರು ಬಹಳ ಕೆಟ್ಟ ಜನ, ಅವರು ಎಲ್ಲಿಗೇ ಹೋದರೂ ಕೆಟ್ಟದ್ದನ್ನೇ ತಮ್ಮೊಂದಿಗೆ ಒಯ್ಯುತ್ತಾರೆ ಹಾಗಾಗಿ ಅವರು ಎಲ್ಲಿಗೂ ಹೋಗದೆ ಇದ್ದ ಊರಲ್ಲೇ ಇರಬೇಕೆಂದರೆ ಅವರ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕು. ಅದೇ ಇನ್ನೊಂದೂರಿನ ಜನ ಮಳೆ-ಬೆಳೆಯಾಗದೇ, ರೋಗ-ರುಜಿನಗಳಿಗೆ ತುತ್ತಾದರೆ ಅವರು ಬೇರೆ-ಬೇರೆ ಊರುಗಳಿಗೆ ಹೋಗುತ್ತಾರೆ; ಹಾಗೆ ಬೇರೆ ಬೇರೆ ಕಡೆ ಹೋದ ಆ ಎರಡನೇ ಊರಿನ ಜನ ಅಲ್ಲೆಲ್ಲಾ ಒಳ್ಳೆಯ ತನವನ್ನು ಪಸರಿಸುತ್ತಾರೆ" ಎಂದರಂತೆ.
(ಯಾರಾದರೂ ನಮಗೆ ಇನ್ನು ಮುಂದೆ ಶಾಪ ಹಾಕಿದರೆ ಬೇಸರಿಸುವುದು ಬೇಡ ಬಹುಶಃ ಅವರು ನಮ್ಮ ಒಳ್ಳೆಯತನವನ್ನು ನೋಡಿ ಅವರು ಹಾಗೆ ಹೇಳಿದ್ದಾರೆಂದು ಕೊಂಡರೆ ಆಯಿತಲ್ಲವೆ. )









ಪ್ರತಿಕ್ರಿಯೆಗಳು
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಆದದೆಲ್ಲ ಒಳಿತೆ ಆಯಿತು, ಆಗೋದೆಲ್ಲ ಒಳ್ಳೆಯದಕ್ಕಾಗಿ ಎಂಬ ಮಾತು ಇಲ್ಲಿ ಪ್ರಸ್ತುತ. ಕಥೆ ಚಿಕ್ಕದಾದರೇನು? ನೀತಿ ದೊಡ್ಡದು.
ಪ್ರಕಾಶ್
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ನಿಮ್ಮ ಅನಿಸಿಕೆಗೆ ಧನ್ಯವಾದಗಳು ಪ್ರಕಾಶ್ ಅವರೆ.
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ನಿಜ ಶ್ರೀಧರವ್ರೆ, ಒಂದು ಒಳ್ಳೆಯ ಶಾಪ !
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ಚಿಕ್ಕುರವರೆ,
ಇದು ಒಳ್ಳೆಯ ಶಾಪವಲ್ಲ; ಒಳ್ಳೆಯವರಿಗೆ ಶಾಪ ಅಲ್ಲವೇ :))
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
>> (ಯಾರಾದರೂ ನಮಗೆ ಇನ್ನು ಮುಂದೆ ಶಾಪ ಹಾಕಿದರೆ ಬೇಸರಿಸುವುದು ಬೇಡ ಬಹುಶಃ ಅವರು ನಮ್ಮ ಒಳ್ಳೆಯತನವನ್ನು ನೋಡಿ ಅವರು ಹಾಗೆ ಹೇಳಿದ್ದಾರೆಂದು ಕೊಂಡರೆ ಆಯಿತಲ್ಲವೆ. )<< ...ಇದು ಸಾಧ್ಯವಾದಲ್ಲಿ ಮನಸ್ಸು ನಮ್ಮ (ಬುದ್ದಿಯ) ಹಿಡಿತಕ್ಕೆ ಬಂದಂತೆ ಆದರೆ ಇದಕ್ಕೆ ಅಭ್ಯಾಸ ಬೇಕು ಅಲ್ಲವೆ?
ಒಳ್ಳೆಯ ನೀತಿಯುಕ್ತ ಕಥೆ ಶ್ರೀಧರ್ ರವರೇ
....ಸತೀಶ್
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ನೀತಿ ಕಥೆ ಚೆನ್ನಾಗಿದೆ..........ಅಭಿನಂದನೆಗಳು.
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
.ಧನ್ಯವಾದಗಳು ವೀಣಾ ಅವರೆ.
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ
ನಿಮ್ಮ ಮಾತು ನಿಜ ಸತೀಶ್, ಎಲ್ಲದಕ್ಕೂ ಅಭ್ಯಾಸ ಬೇಕು. ಬರಹ ನಿಮಗೆ ಇಷ್ಟವಾಗಿದ್ದು ನನಗೂ ಸಂತಸ ತಂದಿತು.
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ:@ಶ್ರೀಧರ್ ಜೀ-
"ಮೊದಲನೇ ಊರಿನವರು ಬಹಳ ಕೆಟ್ಟ ಜನ, ಅವರು ಎಲ್ಲಿಗೇ ಹೋದರೂ ಕೆಟ್ಟದ್ದನ್ನೇ ತಮ್ಮೊಂದಿಗೆ ಒಯ್ಯುತ್ತಾರೆ ಹಾಗಾಗಿ ಅವರು ಎಲ್ಲಿಗೂ ಹೋಗದೆ ಇದ್ದ ಊರಲ್ಲೇ ಇರಬೇಕೆಂದರೆ ಅವರ ಊರಿನಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕು. ಅದೇ ಇನ್ನೊಂದೂರಿನ ಜನ ಮಳೆ-ಬೆಳೆಯಾಗದೇ, ರೋಗ-ರುಜಿನಗಳಿಗೆ ತುತ್ತಾದರೆ ಅವರು ಬೇರೆ-ಬೇರೆ ಊರುಗಳಿಗೆ ಹೋಗುತ್ತಾರೆ; ಹಾಗೆ ಬೇರೆ ಬೇರೆ ಕಡೆ ಹೋದ ಆ ಎರಡನೇ ಊರಿನ ಜನ ಅಲ್ಲೆಲ್ಲಾ ಒಳ್ಳೆಯ ತನವನ್ನು ಪಸರಿಸುತ್ತಾರೆ"
====================================================
ಶ್ರೀಧರ್ ಜೀ-
ಬರಹ ಮತ್ತು ಅದರ ತಿರುಳು ಸಖತ್...
ಶಾಪದ ಹಿನ್ನೆಲೆ ಮತ್ತು ವಿವರಣೆ ಸತ್ಯವೂ ಸರಳವೂ ಆಗಿದೆ...
ಉತ್ತಮ ಬರಹಕ್ಕಾಗಿ
ನನ್ನಿ
ಶುಭವಾಗಲಿ...
\|/
ಉ: ಹೀಗೂ ಉಂಟೇ...ಶಾಪ! - ಚುಟುಕು ನೀತಿ ಕತೆ:@ಶ್ರೀಧರ್ ಜೀ-
ಸಪ್ತಗಿರಿಯವರೆ,
ಅಲ್ಲಲ್ಲಿ ಕಂಡ ಮತ್ತು ಕೇಳಿದ ಒಳ್ಳೆಯದು ಮತ್ತು ಸ್ವಾರಸ್ಯಕರವಾದದ್ದನ್ನು ಸ್ಪಂಜಿನಂತೆ ಹೀರಿ ಸಂಪದದಲ್ಲಿ ಹಿಂಡಿ ಬರಿದು ಮಾಡುವುದು ನನ್ನ ಕಾಯಕವಷ್ಟೇ. ಆದ್ದರಿಂದ ಅದರ ಕ್ರೆಡಿಟ್ ಮೂಲ ಲೇಖಕರಿಗೇ ಸಲ್ಲುತ್ತದೆ. ನಿಮ್ಮ ನಿರಂತರ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.