23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹುಣ್ಣಿಮೆ...

August 22, 2011 - 10:17pm
prasannakulkarni
 
ಶಿಶಿರದ ರಾತ್ರಿ,
ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು,
ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,
ನಡುನಡುವೆ ಏರುತ್ತಿತ್ತು ತಡೆತಡೆದು...
 
ಪಚ್ಚೆಹಸಿರು ಎಲೆಗಳ ಮಧ್ಯೆ ಮೊಗತೂರಿ
ಕಣ್ಣಿಟ್ಟು ನೋಡುತ್ತಿದ್ದಾನೆ ನೆಲಕ್ಕೆ,
ಇಳಿದಿಳಿದು ಕಾಲ್ತೊಟ್ಟು ಹರಿದಾಡುತ್ತಿದ್ದಾನೆ
ತಳಕ್ಕೆ, ಮರದ ಬುಡಕ್ಕೆ...
 
ಹಾಲು ಬೆಳಕು ಇಳಿಯಿತು ಭೂಗರ್ಭದೊಳಗೆ,
ತಂಪು ಮೈ ಒಳಒಳಗೆ ಬಿಸಿಯಾಯಿತು ಸ್ಪರ್ಶಕ್ಕೆ,
ಅಂಗುಲ, ಅಡಿ, ಇಡಿಇಡಿಯಾಗಿ ಆವರಿಸಿತು ಮೈತುಂಬ,
ಬುವಿಯಾಗಿತ್ತು ಪ್ರತಿಚಂದ್ರ ಕ್ಷೀರಸ್ನಾನಕ್ಕೆ...
 
ಗ್ರಹತಾರೆಗಳೆಲ್ಲವು ಭಣಗುಡುತ್ತಿದ್ದವು ತಂತಮ್ಮ ಕಾಂತಿಕಳೆದು,
ರೋಹಿಣಿ ಮಾತ್ರ ಮಿನಿಗುತ್ತಿದ್ದಳು ಶಶಿಯ ಕೈ ಹಿಡಿದು,
ತಿಂಗಳ ರಾತ್ರಿ ತಮ್ಮದೆಂದು, ಸಿಂಗರಿಸಿಕೊಂಡಿದ್ದಳವಳು ಬೀಗಿ,
ಹೌದು, ಮೆರೆಯುತ್ತಿದ್ದ ಕಾಮ ಅವರಿಬ್ಬರ ಕಣ್ಗಳಲ್ಲಿ ಕುಣಿದು...
 
ಯೋಚಿಸುತ್ತಿದ್ದೆ, ಪ್ರತಿ ತಿಂಗಳ ರಾತ್ರಿಯ ಬೆಳಕಿನ ಧಾರೆಯ ಗುಟ್ಟು...
ಬುವಿಯ ಸಾಗರದ ಕನ್ನಡಿಯಲಿ ತನ್ನ
ಪೂರ್ಣಬಿಂಬವ ಕಂಡು ನಕ್ಕು ಬಿಡುವ ಶಶಿ -
ರೋಹಿಣಿ ಅಂದಳು, ಅಂದು ಹುಣ್ಣಿಮೆಯಿತ್ತು...
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Jayanth Ramachar on

ಪ್ರಸನ್ನ ಅವರೇ ಉತ್ತಮವಾದ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಧನ್ಯವಾದಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು ಜಯ೦ತ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.