ಪುಣ್ಯಕೋಟಿ ಎಂಬ ಹುಲಿಯು.....
ಪುಣ್ಯಕೋಟಿ ಕತೆ ಬರೆದ ಪುಣ್ಯಾತ್ಮನಿಗೆ ಕೋಟಿ ಪ್ರಣಾಮಗಳು.ಮಕ್ಕಳಿಗೆ ಕತೆ ಹೇಳಿ ಮಲಗಿಸುವ ಅಭ್ಯಾಸವಿರುವ ಎಲ್ಲಾ ತಂದೆ/ತಾಯಂದಿರ ಇಷ್ಟವಾದ ಕತೆಯಿದು. ಪತ್ರಿಕೆಗಳಲ್ಲಿ,ಮಕ್ಕಳ ಪುಟಗಳಲ್ಲಿರುವ ಕತೆಗಳನ್ನು ಮಕ್ಕಳು ಓದುತ್ತಾರೋ ಇಲ್ಲವೋ,ಈ ತಂದೆ/ತಾಯಿ ಖಂಡಿತ ಓದುವರು.ರಾತ್ರಿ ಅದೇ ಕತೆಗೆ ಉಪ್ಪು,ಖಾರ ಸೇರಿಸಿ ಮಕ್ಕಳಿಗೆ ಹೇಳುವರು.ಪಂಚತಂತ್ರ ಕತೆಗಳು,ರಾಜರ ಕತೆಗಳು,ರಾಮಾಯಣ,ಮಹಾಭಾರತದ ಪ್ರಸಂಗಗಳನ್ನು ಮಕ್ಕಳು ಬಹಳ ಆಸಕ್ತಿಯಿಂದ ಕೇಳುವರು.
ಕ್ರೈಂಡೈರೀನೋ,ಸ್ಟೋರೀನೋ,ಸುಡುಗಾಡುಗಳನ್ನು ತಂದೆಯೊಂದಿಗೆ ನೋಡಿ ಮಲಗುವ ಮಕ್ಕಳೂ ಇದ್ದಾರೆ.
ಪುಣ್ಯಕೋಟಿ ಕತೆಯನ್ನು ನಾನು ನನ್ನ ಮಗಳಿಗೆ ನೂರಾರು ಬಾರಿ ಹೇಳಿರಬಹುದು.ಪ್ರತೀ ಬಾರಿಯೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದಳು.ಪ್ರಥಮ ಬಾರಿಗೆ ಕತೆ ಹೇಳಿದಾಗ ಎಲ್ಲಾ ಹೇಳಿ "ಹುಲಿ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿತು"ಎಂದು ಹೇಳಿ ಮಲಗಿಸಿದ್ದೆ.
ಆದರೆ ನಂತರದ ದಿನ ಅವಳಿಗೆ ಸಮಾಧಾನವಿರಲಿಲ್ಲ."ಯಾಕೆ ಹುಲಿ ಬೆಟ್ಟದಿಂದ ಹಾರಿತು? ಪುಣ್ಯಕೋಟಿ ಆಗ ಏನು ಮಾಡಿತು?.."ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಳು. ಅವಳಿಗೆ ಪುಣ್ಯಕೋಟಿ,ಕರುವಿನ ಮೇಲೆ ಇದ್ದಷ್ಟೇ ಪ್ರೀತಿ'ಹುಲಿ' ಮೇಲೂ ಬರಲು ಸುರುವಾಯಿತು.ಆದ್ದರಿಂದ ಅದು ಸಾಯುವುದು ಅವಳಿಗೆ ಬೇಕಿರಲಿಲ್ಲ.
ಮಗಳಿಗೆ ಬೇಕಾಗಿ ಕತೆಯ ಮುಕ್ತಾಯವನ್ನು ಬದಲಾಯಿಸಿದೆ-
'ಪುಣ್ಯಕೋಟಿಯ ಸತ್ಯವನ್ನು ಮೆಚ್ಚಿ ಹುಲಿ-"ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು" ಎಂದು ಹೇಳಿ...ಬೆಟ್ಟದಿಂದ ಇಳಿದು ದೂರ ಹೋಯಿತು'ಎಂದೆ...ಉಹೂಂ..ಮಗಳಿಗೆ ಸಮಾಧಾನವಾಗಲಿಲ್ಲ.ಇನ್ನಷ್ಟು ಪ್ರಶ್ನೆಗಳು..
ಮಾರನೆಯ ದಿನ ಪುನಃ ಕತೆಯ ಮುಕ್ತಾಯ ಬದಲಾಯಿಸಿದೆ-
'ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ..."ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ.ನಾನು ನೀನು ಗೆಳೆಯರಾಗಿರುವ ಎಂದಿತು.ಪುಣ್ಯಕೋಟಿ,ಕರು ಹುಲಿ ದಿನವೂ ಸಂಜೆ ಆಟವಾಡುತ್ತಿದ್ದವು'ಎಂದೆ. ಮಗಳಿಗಾದ ಖುಶಿ ಈಗಲೂ ನಾನು ಮರೆಯಲಾರೆ.
ದೇವೇಗೌಡರೂ ಸಹ ತನ್ನ ಮಕ್ಕಳಿಗಾಗಿ ಪುಣ್ಯಕೋಟಿ(ಕರ್ನಾಟಕ)ಕತೆಯನ್ನು ಹೇಗೇಗೋ ತೆಗೆದುಕೊಂಡು ಹೋಗುತ್ತಿದ್ದಾರೆ.ಹೇಗೆ ಮುಕ್ತಾಯವಾಗುವುದೋ?

- ಗಣೇಶ ರವರ ಬ್ಲಾಗ್
- Login or register to post comments
- 497 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಪುಣ್ಯಕೋಟಿ ಎಂಬ ಹುಲಿಯು.....
ಗಣೇಶ್,
ಕತೆ ಎಂದಿಗೂ ಮಕ್ಕಳನ್ನು ಮೋಡಿ ಮಾಡಿಯೇ ಮಾಡುತ್ತದೆ.ಮೊದಲ ಬಾರಿ ಇಷ್ಟವಾಗುವ ಹಾಗೆ ಹೇಳಿ ಬರಸೆಳೆಯಬೇಕಷ್ಟೇ!
ಒಂದು ಹೊಸಬಗೆಯ ಪರ್ ಸ್ಪೆಕ್ಟಿವ್ ಕೊಟ್ಟಿದ್ದೀರಿ ಕತೆಯ ಮುಕ್ತಾಯವನ್ನ ಕರ್ನಾಟಕದ ರಾಜಕಾರಣಕ್ಕೆ ಹೋಲಿಸಿ..
ಆಸಕ್ತಿಕರವಾಗಿದೆ.
ಪುಣ್ಯಕೋಟಿ ಎಂಬುದು ಹುಲಿಯಲ್ಲ ಗೋವು.
ಚಂಡವ್ಯಾಘ್ರ ಅಂತ ಹುಲಿಯ ಹೆಸರು.
ಪ್ರೀತಿಯಿರಲಿ
ಸಿಂಧು
ಉ: ಪುಣ್ಯಕೋಟಿ ಎಂಬ ಹುಲಿಯು.....
ಸಿಂಧು,
ಚಂಡವ್ಯಾಘ್ರ ಎಂಬ ಭಯಂಕರ ಹುಲಿಯು ಕತೆಯ ಕೊನೆಯಲ್ಲಿ ಪುಣ್ಯಕೋಟಿಯಾಯಿತು.
ಪ್ರೀತಿಯೊಂದಿಗೆ
ಗಣೇಶ
ಉ: ಪುಣ್ಯಕೋಟಿ ಎಂಬ ಹುಲಿಯು.....
"ಇನ್ನು ಮೇಲೆ ನಾನು ಯಾವ ಪ್ರಾಣಿಯನ್ನೂ ತಿನ್ನುವುದಿಲ್ಲ"
ಹಾಗಾದರೆ ಹುಲಿಯ ಹೊಟ್ಟೆ ಪಾಡು? !
ಉ: ಪುಣ್ಯಕೋಟಿ ಎಂಬ ಹುಲಿಯು.....
smurthygr ಅವರಿಗೆ ಸಮಾಧಾನವಾಗಲಿಲ್ಲ.ಈಗ ಪುನಃ ಕತೆಯ ಮುಕ್ತಾಯ ಬದಲಾಯಿಸುವೆ. "ಇನ್ನು ಮೇಲೆ ನಾನು ನಿನ್ನನ್ನು ತಿನ್ನುವುದಿಲ್ಲ. ನಾನು ನೀನು ಗೆಳೆಯರಾಗಿರುವ" ಎಂದಿತು ಹುಲಿ.
ನನ್ನ ಮಗಳಿಗೆ ಮಾತ್ರವಲ್ಲ, murthyಯವರಿಗೂ ಹುಲಿ ಬಗ್ಗೆ ಪ್ರೀತಿ ಇದೆ.ಪುಣ್ಯಕೋಟಿ ಕತೆಯೇ ಅಂತಹದ್ದು.ಕತೆ ಬರೆದ ಪುಣ್ಯಾತ್ಮನಿಗೆ ವಂದಿಸುವೆನು.
ಉ: ಪುಣ್ಯಕೋಟಿ ಎಂಬ ಹುಲಿಯು.....
veena
ಪುಣ್ಯಕೋಟಿಯ ಕತೆ ನನ್ನ ಮಗನಿಗೆ ಬಹಳ ಇಷ್ಟ. ಪ್ರತಿ ದಿವಸ ನಾನು ಎಷ್ಟು ಕತೆ ಹೇಳಿದರೂ ಕೊನೆಗೆ ಅವನಿಗೆ "ಹುಲಿ ಕತೆ" ಹೇಳು ಎಂದು ಪೀಡಿಸಿ ಕೇಳುತ್ತಾನೆ. ನನಗೇ ಹೇಳೀ, ಹೇಳಿ ಬೇಜಾರಾದ ದಿವಸ ಹುಲಿ ಇನ್ನೂ ಕಾಡಿಗೆ ಬಂದಿಲ್ಲ ಎಂದು ಹೇಳಿ ಜಾರಿ ಕೊಳ್ಳುತ್ತೇನೆ. ಮರುದಿವಸ ರಾತ್ರಿ ಅವನು ಹೇಳುವ ಮೊದಲ ಮಾತು ಅಮ್ಮಾ ಹುಲಿ ಕಾಡಿಂದ ಬಂತಂತೆ ಎಂದು. ಆಗ ನನಗೆ ನಗು ಬರುತ್ತದೆ.
ಉ: ಪುಣ್ಯಕೋಟಿ ಎಂಬ ಹುಲಿಯು.....
ವೀಣಾ ಅವರೇ, ಈ ರೀತಿಯ ವೃತ್ತಾಂತಗಳನ್ನು ಕೇಳಕ್ಕೆ ಸಖತ್ತಾಗಿರತ್ತೆ. ಚಿಕ್ಕಮಕ್ಕಳು (ಚಿಕ್ಕವರೇನು, ನಮಗೂ ಕೂಡ) ಅವರಿಗೆ ಯಾವ ರೀತಿ ಕತೆ ಹೋಗಬೇಕು ಅಂತ ಇಷ್ಟವಿರುತ್ತೋ, ಆ ರೀತಿಯೇ ಮುಂದುವರಿಸಿಕೊಂಡು ಹೋಗಿಸಿಸಿಬಿಡುತ್ತಾರೆ.
ನನ್ನ ಕತೆ ಕೇಳಿ. ಈ ದಿನ ಒಂದು ಮದುವೆಗೆ ಹೋಗಿದ್ದೆ. ಸರಿ ತಿಂಡಿಯಾದಾಗಿನಿಂದ ಊಟದ ತನಕ ಏನು ಮಾಡೋದು. ಅಲ್ಲಿ ಈಗಷ್ಟೇ ೨ನೇ ಕ್ಲಾಸಿಗೆ ಸೇರಿರುವ ನನ್ನ ಕಸಿನ್ ಮಗನನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಅವನಿಗೋ ಬಾಯಿ ಬಿಟ್ರೆ, ಬರೀ ಕನ್ನಡ ಹಾಡುಗಳೇ ಬರೋದು. ಅರಮನೆ ಹಾಡುಗಳ ವೀಡಿಯೋ ತೋರಿಸ್ತೀನಿ ಅಂತ ಯೂಟ್ಯೂಬ್ ಹಾಕ್ದೆ. ಅದಾದ ಮೇಲೆ ಸುಮ್ನೆ, "ನಮ್ಮ ಮನೆ ಹತ್ರ ೬ ಅಳಿಲುಗಳು ಯಾವಾಗ್ಲೂ ಆಟ ಆಡ್ತಾ ಇರತ್ತೆ" ಅಂದ್ನಪ್ಪ. ಯಪ್ಪಾ, ಇದನ್ನು ಹೇಳಿದ್ದೇ ತಡ, ತಿಂದ, ತಿಂದ, ಅದೇನ್ ತಲೆ ತಿಂದ ಅಂತೀರಿ. ಅಳಿಲುಗಳು ಏನು ತಿನ್ನತ್ತೆ, ಏನೇನು ಆಟ ಆಡತ್ತೆ. ಎಲ್ಲೆಲ್ಲಿ ಹೋಗತ್ತೆ. ರಿಸ್ಕ್ ಮ್ಯಾನೇಜಮೆಂಟ್ ಹೇಗೆ ಮಾಡತ್ತೆ ಎಲ್ಲ ವಿಚಾರಗಳ ವಿನಿಮಯವೂ ಆಯಿತು. ಒಳ್ಳೆ ಟೈಂಪಾಸ್. ನಾನು ಅವನಿಗೆ ಅಳಿಲುಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಪ್ರತಿಯಾಗಿ, ನನಗೆ ಅವನು ಇಂಗ್ಲೀಷ್ ಹೇಳಿಕೊಡ್ತಾನಂತೆ
ಬರೋ ಭಾನುವಾರದಿಂದ ಟ್ಯೂಶನ್ ಶುರು.
ಉ: ಪುಣ್ಯಕೋಟಿ ಎಂಬ ಹುಲಿಯು.....
ಅಮ್ಮಾ..ಹುಲಿ ಕಾಡಿಂದ ಬಂತಂತೆ..

-ಗಣೇಶ.
ಉ: ಪುಣ್ಯಕೋಟಿ ಎಂಬ ಹುಲಿಯು.....
"ಅಮ್ಮಾ ಹುಲಿ ಪಾಪ ಅಲ್ಲವಾ?" ಇದು ನನ್ನ ಮಗಳು ಕೇಳೊ ಪ್ರಶ್ನೆ
ಅವಳಿಗೆ ಕರುವಾಗಲಿ ಹಸುವಾಗಲಿ ಮುಖ್ಯವಲ್ಲ
ಹುಲಿ ಒಳ್ಳೆ ಹುಲಿ ಅದನ್ನು ಮನೇಲಿ ಇಟ್ಕೊಡು ಸಾಕ್ತೀನಿ ಅಂತಾಳೆ
ಅವಳಿಗೆ ಪುಣ್ಯಕೋಟಿ ಹಾಡು ಹೇಳು ಅಂದರೆ
"ಅಂಬಕೋಟಿ ಎಂಬ ಅಂಬ ತನ್ನ ಪಾಪುನ ...................."
ಅಂತ ಶುರು ಮಾಡುತ್ತಾಳೆ
http://thereda-mana.blogspot.com/
ರೂಪ