Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.

ಸಂಪದ › Sampada Blogs › ಶ್ರೀನಿಧಿ ರವರ ಬ್ಲಾಗ್

ನನ್ನ ನುಡಿ, ನನ್ನ - ನಡಿಗೆ

ಹೆಚ್ಚೇನೂ ಇಲ್ಲ. ಬಹಳ ಯೋಚನೆ ಮಾಡಿ ಬರೆಯುವ ನನ್ನ ಕೆಲವು ಅನಿಸಿಕೆ-ಮಾತು-ಕವನ.

ಗೀತ ಗೋವಿಂದ

April 7, 2006 - 9:48am — ಶ್ರೀನಿಧಿ

ನಾನು ಆಗ ಮೊದಲ ಪದವಿ ಪೂರ್ವ (೧೧ನೇ) ತರಗತಿ ಎಂದು ನೆನಪು. "ಹಂಸಗೀತೆ" ಚಿತ್ರದಲ್ಲಿ ಬಾಲಮುರಳಿಯ ಗೀತಗೋವಿಂದದ ಹಾಡುಗಳನ್ನು ಕೇಳಿ ಪುಳಕಿತನಾಗಿದ್ದೆ. ಸರಿ ಗೀತ ಗೀತ-ಗೋವಿಂದದ ಪುಸ್ತಕಕ್ಕೆ ಹುಡುಕತೊಡಗಿದೆ. ನನ್ನ ಅಜ್ಜಿಯ ಬಳಿ ಗೀತಗೋವಿಂದ ಓದಬೇಕು ಎಂದಾಗ ಅಷ್ಟು ದೊಡ್ಡವನಾಗಿದ್ದೀಯಾ ಎಂದು ನಕ್ಕಿದ್ದರು. ಪುಸ್ತಕವೇನೋ ಸಿಕ್ಕಿತು ಆದರೆ ನನ್ನ ಸೋಮಾರಿತನ ಪುಸ್ತಕವನ್ನು ಮೂಲೆಗೆ ಸರಿಸಿತು. ಮೊನ್ನೆ ಸಂಜಯ್ ಸುಬ್ರಹ್ಮಣ್ಯಂ ಅವರ ಕಛೇರಿ ಕೇಳಿದ ನಂತರ ಆಸಕ್ತಿ ಕೆರಳಿತು. ಅದನ್ನು ಸಂಪದದಲ್ಲಿ ಯಾವ ವರ್ಗಕ್ಕೆ ಸೇರಿಸಬೇಕು ಎಂದು ತೋರದೆ ನನ್ನ ಬ್ಲಾಗಿಗೆ ಹಾಕಲು ನಿರ್ಧರಿಸಿದೆ. ಯಾವ ವರ್ಗಕ್ಕೆ ಸೂಕ್ತ ಎಂದು ತಿಳಿಸಿದರೆ ಅಲ್ಲಿಗೆ ಸೇರಿಸಲು ಸಿದ್ಧ. (ಅಥವಾ ಇದು ಸಂಪದಕ್ಕೆ ಹಾಕಲು ಸೂಕ್ತವೇ ಅಲ್ಲವೇ ಎಂದೂ ತಿಳಿಸಿದರೆ ಒಳ್ಳೆಯದು)

ಗೀತ ಗೋವಿಂದ ಕೃಷ್ಣ-ರಾಧೆಯರ ಪ್ರಣಯ ಕಥನವೇ ಅಥವಾ ಜಯದೇವ-ಪದ್ಮಾವತಿಯರ(೧) ದಾಂಪತ್ಯಗಾನವೇ ಅಥವಾ ಆತ್ಮ ಪರಮಾತ್ಮನನ್ನು ಸೇರಲು ತವಕಿಸುವ ಕಾವ್ಯ ಸರಣಿಯೇ?? ಗೀತ ಗೋವಿಂದದ ಅಷ್ಟಪದಿಗಳನ್ನು ಕೇಳಿದವರಿಗೆ ಈ ಸಂದೇಹ ಬಂದೇ ಬರುತ್ತದೆ. ಉದ್ದೇಶ ಯಾವುದೇ ಇದ್ದರೂ ಗೀತಗೋವಿಂದ ಕವಿಯ ದೃಷ್ಟಿಯಿಂದ ಮನಸ್ಸನ್ನು ಯಮುನೆಯ ತೀರಗಳಿಗೆ ಕರೆದೊಯ್ದು ಮುರಳೀಲೋಲನ ಮುರಳಿಗಾನ ಕೇಳಬೇಕೆನಿಸುವಂತೆ ಮಾಡುವ ಕಾವ್ಯ.
ಈ ಕೃತಿ ೧೨ ಅಧ್ಯಾಯಗಳಲ್ಲಿದೆ. ಒಟ್ಟು ಗೀತಗೋವಿಂದದಲ್ಲಿ ೨೪ ಅಷ್ಟಪದಿಗಳಿವೆ. ಮೊದಲ ಶ್ಲೋಕ ಗೀತಗೋವಿಂದದ ಒಟ್ಟು ಒಕ್ಕಣೆ ಕೊಡುತ್ತದೆ.

ಮೇಘೈರ್ಮೆಧುರಾಂಬರಂ ವನಭುವಃ ಶ್ಯಾಮಾಸ್ತಮಾಲಾದ್ರುಮೈಃ
ನಕ್ತಂ ಭೀರುರಯಂ ತ್ವಮೇವ ತದಿಮಂ ರಾಧೇ ಗೃಹಂ ಪ್ರಾಪಯ|
ಇತ್ಥಂ ನಂದನಿದೇಶಿತಶ್ಚಲಿತಯೋಃ ಪ್ರತ್ಯದ್ವಕುಂಜಮದ್ರುಮಂ
ರಾಧಾಮಾಧವಯೋರ್ಜಯಂತಿ ಯಮುನಾಕೂಲೆ ರಃಕೇಳಯಃ ||

ಸ್ಥೂಲಾರ್ಥ : ಹೇ ರಾಧೇ, ಆಗಸವು ಮೋಡಗಳಿಂದ ದಟ್ಟವಾಗುತ್ತಿದ್ದು ತಮಾಲ ವೃಕ್ಷಗಳು ಕಾನನವನ್ನು ಕಪ್ಪಾಗಿಸುತ್ತಿವೆ, ರಾತ್ರಿ ಬೇಗನೆ ಕವಿಯುತ್ತಿದೆ. ಈ ನಾಚಿಕೆ ಸ್ವಭಾವದವನಾದ ಇವನನ್ನು (ಕೃಷ್ಣನನ್ನು) ನೀನೇ ಮನೆಗೆ ಕರೆದೊಯ್ಯಬೇಕು. ಹೀಗೆ ನಂದನಿಂದ ಕೇಳಿಕೊಳ್ಳಲ್ಪಟ್ಟ ರಾಧೆಯು ಮಾಧವನನ್ನು ಕರೆದೊಯ್ಯುವಾಗ ಯಮುನಾ ತೀರದ ಪ್ರತಿಯೊಂದು ಘಟ್ಟದಲ್ಲೂ ಪ್ರತಿ ಮರಬಳ್ಳಿಗಳಲ್ಲೂ ಪ್ರಣಯಕೇಳಿಯು ವಿಜ್ರಂಭಿಸುತ್ತದೆ.

ಇದು ಜಯದೇವ ತನ್ನ ಕೃತಿಗೆ ಕೊಡುವ ಪ್ರಾರಂಭ,ಒಕ್ಕಣೆ!!!!!!!!!. ಸ್ಥೂಲಾರ್ಥ ಹೀಗಾದರೆ ಈ ಪದ್ಯಕ್ಕೆ ಅನೇಕ ಅರ್ಥಗಳನ್ನು ಕೊಡಬಹುದು!!!. ಈ ಮೊದಲನೆ ಪದ್ಯ ಕೇಳಿ ಜಯದೇವನ ಸೋದರಮಾವ ದೈವದ್ರೋಹಿ ಎಂದು ಜಯದೇವನನ್ನು ಖಂಡಿಸಿದನಂತೆ.ಜಯದೇವನಿಗೆ ಕೃಷ್ಣ ರಾಧೆಯರ (ಪ್ರಕೃತಿ-ಪರಮಾತ್ಮ??) ಪ್ರಣಯವೇ ಪ್ರಾರ್ಥನೆ ಆಗಿತ್ತು ಎಂಬುದು ಗಮನಿಸಬೇಕಾದ ಅಂಶ. ಸೋದರಮಾವನಿಂದ ಖಂಡನೆಗೊಳಗಾದ ಮೇಲೆ ಜಯದೇವನು ತನ್ನ ಎರಡನೇ ಶ್ಲೋಕದಲ್ಲಿ ಸರಸ್ವತಿಯ ಪ್ರಾರ್ಥನೆಯಿಂದ ತನ್ನ ಗೀತ-ಗೋವಿಂದ ಅಧಿಕೃತವಾಗಿ ಆರಂಭಿಸುತ್ತಾನೆ.

೧ - ಪದ್ಮಾವತಿ ಜಯದೇನ ಪತ್ನಿ.. ಪುರಿ ಜಗನ್ನಾಥ ದೇಗುಲದಲ್ಲಿ ನರ್ತಕಿ

Ornamental seperator
  • ಶ್ರೀನಿಧಿ ರವರ ಬ್ಲಾಗ್
  • Login or register to post comments
  • 593 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2006 - 1:04pm — ಮಹೇಶ ಭೋಗಾದಿ

ಗೀತ ಗೋವಿಂದ

ಮಹೇಶ ಭೋಗಾದಿ's picture

ಸಂಸ್ಕೃತಸಾಹಿತ್ಯದ pdf ಕಡತಗಳಿಗೆ ಕೊಂಡಿ

ಗೀತ ಗೋವಿಂದಕ್ಕೆ ಕೊಂಡಿ 

ಹರಿಪ್ರಸಾದರು "ಭಾಷಾಂತರ"ಕ್ಕೆ ಒಂದು ವಿಭಾಗ ಮಾಡುವರೆಂದು ಹೇಳಿದ್ದಾರೆ. ಇದನ್ನು ಅಲ್ಲಿ ಹಾಕಬಹುದು.

 

 

  • Login or register to post comments
  • link
  • Email this ಪ್ರತಿಕ್ರಿಯೆ
April 7, 2006 - 3:04pm — shreekant.mishrikoti

ಉ:ಗೀತ ಗೋವಿಂದ

shreekant.mishrikoti's picture

'ಹಂಸಗೀತೆ'ಯ ಧ್ವನಿಮುದ್ರಿಕೆ ನನ್ನ ಹತ್ತಿರ ಇದೆ , ಬಹಳ ಚೆನ್ನಾಗಿದೆ.
ಶ್ರೀ ಬಾಲಮುರಳಿಯವರ ಇನ್ನೊಂದು ಧ್ವನಿಮುದ್ರಿಕೆ ಜಯದೇವ ಅಷ್ಟಪದಿ ಹೆಸರಿನಲ್ಲಿ ಇದೆ ನನ್ನ ಹತ್ತಿರ ಇತ್ತು , ಈಗ ಇಲ್ಲ . ಬಹಳ ಇಂಪಾಗಿ ಹಾಡಿದ್ದಾರೆ . ಸಿಕ್ಕರೆ ಕೊಂಡು ಕೇಳಿ. ನಾನೂ ಹುಡುಕಿ ಕೊಳ್ಳಬೇಕು

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲೇಖನ ಅಳಿಸುವುದು (ಡಿಲೀಟ್) ಹೇಗೆ ?
  • ನೆನಪು
  • ಮಹಾಭಾರತದ ಕತೆ
  • ಕವಿಕಾಯಚೂಡಾಮಣಿ - ಒಂದು ನೆನಪು
  • ಗೋವಿಂದ.. ಸೇವಿಸುವೆನು ನಿನ್ನ ಪಾದಾರವಿಂದ
Syndicate content

ಲೇಖಕರು

ಶ್ರೀನಿಧಿ's picture

ಪೂರ್ಣ ಹೆಸರು
ಶ್ರೀನಿಧಿ ನರಸಿಂಹಾಚಾರ್

ಪರಿಚಯ

ಹುಟ್ಟಿದ್ದು ಬೆಂಗಳೂರಾದರೂ ಬಾಲ್ಯದ 13 ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮತ್ತೆ ಬೆಂಗಳೂರು, ನಂತರ ಅಲ್ಲೇ ಕೆಲಸ. ಎಂ. ಎಸ್ ಕ್ಲೆಂಸನ್, ಯು.ಎಸ್.ಏ ಯಲ್ಲಿ ಮುಗಿಸಿ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ.

ಹವ್ಯಾಸ- ಓದು, ಕರ್ನಾಟಕ ಶಾಸ್ತ್ರೀಯ ಸಂಗೀತ, ತತ್ವಶಾಸ್ತ್ರ, ಕ್ರಿಕೆಟ್, ಟಿ.ಟಿ,ಕನ್ನಡ ಚಲನಚಿತ್ರ(ತುಂಬಾ ವೀಕು).
ನೆಚ್ಚಿನ ಲೇಖಕರು/ಕವಿಗಳು - ತಾರಾಸು, ಭೈರಪ್ಪ, ಸತ್ಯಕಾಮ, ಮಾಸ್ತಿ, ಬೇಂದ್ರೆ, ಗೊರೂರು, ರಾಶಿ, ಅ.ರಾ. ಮಿತ್ರ, ನಯಸೇನ, ಇನ್ನೊ ಅನೇಕ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಲೇಖನಗಳ ಆಹ್ವಾನ

ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.

ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಯೂಹೂ ಮ್ಯಾಪ್ ಕನ್ನಡದಲ್ಲಿ
  • ’ರಾತ್ರಿಯ ಕನಸಿನಲಿ, ಸುರಿಯುವ ಸೋನೆಯಲಿ ಬರೀ ನಿನದೇ ನೆನಪು’
  • ವಿಮರ್ಶೆ
  • ಯು ಮಿ ಔರ್ ಹಮ್
  • ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..
  • ಹೆಲ್ಮೆಟ್ ಇದ್ರೆ ಸಾಕಾ.. ???
  • ತಿರುಪತಿ ತಿಮ್ಮನೂ, ಉಡುಪಿಯ ಹೋಟೆಲೂ...
  • ಮನಸಲ್ಲಿ ಬರುತ್ತೆ ಯೋಚನೆ
  • ಸುಮ್ನೆ ಗೀಚಿದ್ದು ...
  • ಹೂವಿನ ಹುಡುಗಿ....
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 11:40pm
  • Sunil Jayaprakash
    ಉ: ಯೂಹೂ ಮ್ಯಾಪ್ ಕನ್ನಡದಲ್ಲಿ
    May 22, 2008 - 11:10pm
  • prasannasp
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 9:32pm
  • venkatesh
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 9:18pm
  • harshab
    ಉ: ಇರೀರು ಕಿರೀರ್ಗೆ ಜಾಗ ಬಿಟ್ಕೊಟ್ಟು , ಆಸೀರ್ವಾದ ಮಾಡೋದೆ, ಅರಸೋದೆ ಅಲ್ವ್ರ, ನಮ್ಮ ಕನ್ನಡದೋರ್ ಪರಂಪರೆ. ಏನಂತೀರ ದೇವ್ರು ?
    May 22, 2008 - 7:23pm
  • Sunil Jayaprakash
    ಉ: MAC OS ನಲ್ಲಿ ಬರಹ ಅಥವಾ ನುಡಿ ಕನ್ನಡದ ವರ್ಶನ್ಗಳು ಸಿಗುತ್ವಾ?
    May 22, 2008 - 7:03pm
  • shylaswamy
    ಉ: ಅದೃಷ್ಟ
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:39pm
  • thiligola
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 6:34pm
  • ಮನಹ್ಪಠಲ
    ಉ: ಬೆಂಗಳೂರು ಏರ್‍ಪೋರ್ಟಿಗೆ ಯಾಕೆ ಕೆಂಪೇಗೌಡರ ಹೆಸರಿಡಬೇಕು?
    May 22, 2008 - 5:21pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator