ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಪ್ರಶಾಂತ.ಪಂಡಿತ ರವರ ಬ್ಲಾಗ್

ಇಂದಿನ ನಮ್ಮ ತವಕ ತಲ್ಲಣಗಳು

February 16, 2006 - 11:42am — ಪ್ರಶಾಂತ.ಪಂಡಿತ

ಸ್ನೇಹಿತರೇ,

ಈ ತಿಂಗಳ ಮೂರನೇ ಭಾನುವಾರ ವಿಚಾರಗೋಷ್ಠಿ ಹಾಗು ಚರ್ಚೆಯನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಆಯುಜಿಸುತ್ತಿದ್ದು, ಎಲ್ಲರಿಗೂ ಆದರದ ಸ್ವಾಗತ.

ಕಾರ್ಯಕ್ರಮದ  ವಿವರಗಳು: 

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
ನಂ.
36 ಬಿ.ವಿ. ಕಾರಂತ್ ರಸ್ತೆ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070

ಸಹಯೋಗ: ಮಲ್ಲಿಗೆ ಮಾಸಪತ್ರಿಕೆ ಹಾಗು
ಸಂಚಯ-ಅಭಿನವ ಸಾಹಿತ್ಯ ಪತ್ರಿಕಾ ಬಳಗ

ದಿವಂಗತ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ
‘ಇಂದಿನ ನಮ್ಮ ತವಕ ತಲ್ಲಣಗಳು’
ವಿಚಾರಗೋಷ್ಠಿ
ದಿನಾಂಕ: 19-2-2006

ಸಮಯ: ಬೆಳಿಗ್ಗೆ 1:30 ರಿಂದ ಸಂಜೆಯವರೆಗೆ

ಸ್ಥಳ: ಸುಚಿತ್ರ ಸಭಾಂಗಣ

ಉದ್ಘಾಟನೆ
: ಡಾ ಯು.ಆರ್. ಅನಂತಮೂರ್ತಿ

ಪ್ರತಿಭಾ ನಂದಕುಮಾರ್ ಅವರ
‘
ಮುನ್ನುಡಿ ಬೆನ್ನುಡಿಗಳ ನಡುವೆ’
‘
ಅವರು ಪುರಾವೆಗಳನ್ನು ಕೇಳುತ್ತಾರೆ’
ಪುಸ್ತಕಗಳ ಬಿಡುಗಡೆ
. ಪ್ರಕಾಶಕರು: ಮಹಿಳಾ ಸಾಹಿತ್ಯಿಕಾ, ಧಾರವಾಡ

 

ವಿಶೇಷ ಉಪನ್ಯಾಸ

ಆರ್ಥಿಕ ಉದಾರೀಕರಣ ಮತ್ತು ಸಮುದಾಯ ಅಸಮಾನತೆಗಳು: ಡಾ ಯು.ಆರ್. ಅನಂತಮೂರ್ತಿ

ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು: ಶ್ರೀ ಎಂ.ಪಿ. ಪ್ರಕಾಶ್

ಚರ್ಚೆ

ಊಟದ ವಿರಾಮ
ಮಧ್ಯಾಹ್ನ 2:00 ಗಂಟೆಗೆ

ವಿಜ್ಞಾನ-ತಂತ್ರಜ್ಞಾನ ಸೃಷ್ಟಿಸಿರುವ ಆತಂಕಗಳು: ಶ್ರೀ ಶರತ್ ಅನಂತಮೂರ್ತಿ

ಜಗತ್ತು, ರಾಷ್ಟ್ರ, ದೇಸೀಯತೆ: ಶ್ರೀ ವಿಜಯಶಂಕರ್
ವಾಣಿಜ್ಯ ಸಂಸ್ಕೃತಿ ಮತ್ತು ಸೃಜನಶೀಲತೆಯ ಸ್ವಾಯತ್ತತೆ: ಶ್ರೀ ಸುಗತ

ರಂಗಭೂಮಿ, ಟೆಲಿವಿಷನ್, ನಾಟಕಗಳು, ಸಿನಿಮಾ: ಶ್ರೀ ರಘುನಂದನ್

ಅಧ್ಯಕ್ಷತೆ
: ಎಚ್.ಎಸ್. ರಾಘವೇಂದ್ರರಾವ್

ಚರ್ಚೆ

ಚಹಾ ವಿರಾಮ

ಅಲನ್ ರೆನೆ ನಿರ್ದೇಶನದ ‘ಹಿರೋಷಿಮಾ ಮೋನಮೋರ್’ ಚಲನಚಿತ್ರ ಪ್ರದರ್ಶನ

~.~
  • ಪ್ರಶಾಂತ.ಪಂಡಿತ ರವರ ಬ್ಲಾಗ್
  • Login or register to post comments
  • 1092 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 18, 2006 - 10:20am — Sunil Jayaprakash

ಉ:ಇಂದಿನ ನಮ್ಮ ತವಕ ತಲ್ಲಣಗಳು

Sunil Jayaprakash's picture

ಪ್ರಶಾಂತ.ಪಂಡಿತ wrote:

ದಿನಾಂಕ: 19-2-2006
ಸಮಯ: ಬೆಳಿಗ್ಗೆ 1:30 ರಿಂದ ಸಂಜೆಯವರೆಗೆ

ವಾವ್. ಈ ಕಾರ್ಯಕ್ರಮದ ಆಯೋಜಕರು ನಿಜವಾಗಿಯೂ ಧೈರ್ಯಶಾಲಿಗಳೇ ಹೌದು. ಇಲ್ಲವಾದಲ್ಲಿ ಕಾರ್ಯಕ್ರಮವನ್ನು ಬೆಳಗ್ಗೆ(ಅಥವಾ ಮಧ್ಯರಾತ್ರಿ ಎನ್ನಬಹುದೇ) ೧:೩೦ ಕ್ಕೆ ಆಯೋಜಿಸುವ ಧೈರ್ಯ ಯಾರು ಮಾಡುತ್ತಾರೆ ಹೇಳಿ.

ಅಥವಾ ಇದು ಅಚ್ಚಣ ದೋಷವೇ? (ಅಚ್ಚಣ ಪದಪ್ರಯೋಗ ಸರಿಯಾಗಿದೆ ಎಂದುಕೊಂಡಿದ್ದೇನೆ.)

ಟೈಪೋ - ಇಂಗ್ಲೀಷ್.

ಮುದ್ರಣ - ಸಂಸ್ಕೃತ ?

ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 18, 2006 - 11:56am — shreekant.mishrikoti

ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ

shreekant.mishrikoti's picture

ಅಚ್ಚಣ ಎಂಬ ಪದವನ್ನು ನಾನು ಈ ವರೆಗೆ ನೋಡಿಿಲ್ಲ ; ಈ ರೀತಿಯ ಮತ್ತೆ ಯಾವ ಸಬ್ದಗಳಿವೆ ?( ಮೂಡಣ , ಪಡುವಣ , ತೆಂಕಣ , ಬಡಗಣ ಹೊರರ್ತಾಗಿ ) , ನೀವೇ ಟಂಕಿಸಿದ್ದೋ ? ಬೇರೆ ಪದಗಳಿದ್ದರೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 18, 2006 - 6:50pm — Sunil Jayaprakash

ಉಃ ಅಚ್ಚಿನ ದೋಷ - ಅಚ್ಚಣದೋಷ - ಕನ್ನಡ

Sunil Jayaprakash's picture

ಸುಮ್ಮನೆ ಹಾಗೆ ಒಂದು ಕನ್ನಡ ಬಾಣ(????) ತೇಲಿಬಿಟ್ಟೆ ಅಷ್ಟೇ.

ಏಕೆಂದರೆ - ಅಚ್ಚಿನ ದೋಷ ಎಂಬುವಲ್ಲಿ ಕ್ರಿಯಾಪದವನ್ನ ಹೆಚ್ಚು ಒತ್ತಿ ಹೇಳಿದ ಹಾಗಾಗುತ್ತದೆ. ಈ ಅಚ್ಚುವಾಗ ಆಗುವ ದೋಷಕ್ಕೆ ಒಂದು ನಾಮಪದದ ಸ್ವರೂಪ ಕೊಟ್ಟರೆ ಹೇಗಿರುತ್ತದೆ ಎಂದು ಯೋಚಿಸಿದಾಗ, ಅಂದರೆ ಟೈಪೊಗೆ ಸರಿಸಮಾನವಾಗಿ ಕನ್ನಡದಲ್ಲಿ ಹೇಳ ಹೊರಟರೆ ಏನು ಹೇಳಬೇಕು ಎಂದು ಯೋಚಿಸುತ್ತಿದ್ದಾಗ,  ಹೊಳೆದದ್ದೆ - ಅಚ್ಚಣದೋಷ. ಇವನು ನಮ್ಮ ಮುದ್ರಾರಾಕ್ಷಸನ ಸಂಬಂಧಿ.

ತಾವುಗಳು ಏನ ಹೇಳಬಯಸುತ್ತೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 18, 2006 - 8:33pm — tvsrinivas41

ಹೊಸ ಪದಗಳು

tvsrinivas41's picture

ಹೊಸ ಪದಗಳು ಹೀಗೆಯೇ ಅಲ್ಲವೇ ಸೃಷ್ಟಿಯಾಗುವುದು? ಈಗೇನೋ ತಮಾಷೆಗೆ ಬರೆದಿರಬಹುದು. ಮುಂದೊಂದು ದಿನ ಇದನ್ನು ಓದಿದವರು, ಇನ್ನೂ ಹೆಚ್ಚಿಗೆ ತಿಳಿದವರು ಈ ಪದವನ್ನು ಅಳವಡಿಸಿಕೊಳ್ಳಲೂಬಹುದು. ನಾನೊಂದು ಪದವನ್ನು ಉಪಯೋಗಿಸಿದ್ದೆ. ಮೋಸಿಸಿ. ಮೋಸಮಾಡಿ ಎನ್ನುವುದಕ್ಕೆ ಬದಲಾಗಿ ಪ್ರಾಸಬದ್ಧವಾಗಲೆಂದು ಉಪಯೋಗಿಸಿದ್ದು. ಬಹಳ ಜನರು ಈ ಪದದ ಉಪಯೋಗ ಇಲ್ಲ. ಇದು ಸರಿಯಿಲ್ಲವೆಂದರು. ಆಗ ನಾನು ಸಮಾಜಾಯಿಷಿ ಕೊಟ್ಟಿದ್ದೆ. ಉಪಯೋಗಿಸಿ, ಬಳಸಿ, ಬಯಸಿ, ಇತ್ಯಾದಿಯಂತೆ ಮೋಸಿಸಿ ಯಾಕಾಗಬಾರದು? ಆಗ ಚರ್ಚೆಯಲ್ಲಿ ಪಾಲ್ಗೊಂಡಿದ್ದ (ಅದೊಂದು ಅಂತರ್ಜಾಲ ವೇದಿಕೆ) ಮಂದಿ ಒಪ್ಪಿದ್ದರು. ಈ ಪದಪ್ರಯೋಗ ಸರಿ ಇಲ್ಲದಿರಬಹುದು. ನಮ್ಮ ಓಎಲ್‍ಎನ್ ಸರ್ ಅವರು ಇದರ ಬಗ್ಗೆ ನಮಗೆ ದಾರಿದೀಪವಾಗಬೇಕೆಂದು ಕೇಳಿಕೊಳ್ಳುವೆ.

ಹೀಗೆಯೇ ಮುಂದೊಂದು ದಿನ ಸುನೀಲ್ ಅವರು ವ್ಯಾಕರಣ ಪಂಡಿತರಾಗಬಹುದಲ್ಲವೇ?

ಸುನೀಲ್ ಇದೇ ತರಹ ಪದಪ್ರಯೋಗ ಮುಂದುವರೆಸಿ. ಇದರ ಬಗ್ಗೆ ನಮ್ಮ ಓಎಲ್‍ಎನ್ ಸರ್ ಅವರ ಮುಂದಾಳತ್ವದಲ್ಲಿ ಹೆಚ್ಚು ಹೆಚ್ಚು ಕಲಿಯೋಣ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2006 - 1:32pm — Sunil Jayaprakash

ಉ ಹೊಸ ಪದಗಳು

Sunil Jayaprakash's picture

tvsrinivas41 wrote:
ಹೊಸ ಪದಗಳು ಹೀಗೆಯೇ ಅಲ್ಲವೇ ಸೃಷ್ಟಿಯಾಗುವುದು? ಈಗೇನೋ ತಮಾಷೆಗೆ ಬರೆದಿರಬಹುದು. ಮುಂದೊಂದು ದಿನ ಇದನ್ನು ಓದಿದವರು. http://asraya.net

ಅಯ್ಯೋ ಕಾಲೇಜಿನಲ್ಲಿದ್ದಾಗ ಹೀಗೆಯೇ ಒಂದು ಪದ ಕಟ್ಟಿದ್ದೆ. ಆದರೆ ಅದು ಇಂಗ್ಲೀಷಿನದ್ದು.  ಹೀಗಿತ್ತದು. ನಮ್ಮಲ್ಲಿ ಬಳಕೆಯಲ್ಲಿರುವ "ಬಕರ ಆಗುವ" ಕ್ರಿಯೆಗೆ ಏನನ್ನಬೇಕು ಎನ್ನುವುದು ಎಂದು. ಅದಕ್ಕೆ ನನಗೆ  ಹೊಳೆದಿದ್ದೆ ಸುಲಭ ಉಪಾಯ  Bakrified. He gets bakrified always. ಹೇಗಿದೆ. ಮತ್ತೆ ನನ್ನ ಮಾತುಗಳನ್ನು ಕೇಳುತ್ತಾ ಸಂಪದಿಗರು - ಸಂಪದದ ಮಂದಿ ಅದಾದೀರಿ. ಯಾವುದಕ್ಕೂ ಎಚ್ಚರದಲ್ಲಿರುವುದು ಒಳ್ಳೆಯ ಗುಣ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 18, 2006 - 10:35pm — bhatpp

ಅಚ್ಚಿನ, ಅಚ್ಚಣ

bhatpp's picture

ಈ ಬಗೆಯ ಸಾಕಷ್ಚು ಪದಗಳು ಬಳಕೆಯಲ್ಲಿವೆ!

ಉದಾಹರಣೆ: ಮೇಲಿನ (ಮೇಲಣ, ಮೇಗಣ), ಕೆಳಗಿನ (ಕೆಳಗಣ), ಮುನ್ನಿನ (ಮುನ್ನಣ), ಹಿಂದಿನ (ಹಿಂದಣ)... ಇತ್ಯಾದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2006 - 1:00pm — ಪ್ರಶಾಂತ.ಪಂಡಿತ

ಕುಟ್ಟಣ ದೋಷ!!

ಪ್ರಶಾಂತ.ಪಂಡಿತ's picture

ಇದು ಕುಟ್ಟಣ ದೋಷ. ಕೀಲಿಮಣೆಯನ್ನು ಕುಟ್ಟುವಾಗ ಆಗುವ ಪ್ರಮಾದಗಳನ್ನು ಹೀಗೇ ಕರೆಯಬಹುದೇನೋ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2006 - 5:02pm — pavanaja

Re: ಕುಟ್ಟಣ ದೋಷ!!

pavanaja's picture

ಪ್ರಶಾಂತ.ಪಂಡಿತ wrote:
ಇದು ಕುಟ್ಟಣ ದೋಷ. ಕೀಲಿಮಣೆಯನ್ನು ಕುಟ್ಟುವಾಗ ಆಗುವ ಪ್ರಮಾದಗಳನ್ನು ಹೀಗೇ ಕರೆಯಬಹುದೇನೋ...

ನಾನು ಈ ಹಿಂದೆ ವಿಜಯ ಕರ್ನಾಟಕ ಪತ್ರಿಕೆಗಾಗಿ "eಳೆ" ಹೆಸರಿನ ಅಂಕಣ ಬರೆಯುತ್ತಿದ್ದೆ. ಅದರ ಕೆಲವು ಲೇಖನಗಳನ್ನು ವಿಶ್ವಕನ್ನಡದಲ್ಲಿ ಓದಬಹುದು. ಅದರಲ್ಲಿ ನಾನೊಮ್ಮೆ ಬರೆದಿದ್ದೆ -"ಮುದ್ರಣ ದೋಷಗಳಿಗೆ ಮುದ್ರಾರಾಕ್ಷಸ ಎಂಬ ಹೆಸರು ಚಾಲ್ತಿಯಲ್ಲಿದೆ. ಕೀಲಿಮಣೆ ಕುಟ್ಟುವಾಗ ಆಗುವ ದೋಷಗಳಿಗೆ ಕುಟ್ಟೋರಾಕ್ಷಸ ಎನ್ನಬಹುದೇನೋ?"

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2006 - 11:03pm — hpn

ಉ:ಇಂದಿನ ನಮ್ಮ ತವಕ ತಲ್ಲಣಗಳು

hpn's picture

ಭಾನುವಾರದಂದು ಕೆಲ ಕೆಲಸಗಳಿದ್ದ ಕಾರಣ ಭಾಗವಹಿಸಲಾಗಲಿಲ್ಲ. ಭಾಗವಹಿಸಿದವರು ಯಾರಾದರೂ ಏನು ನಡೀತು, ನಾವು ಏನೇನು ಮಿಸ್ ಮಾಡ್ಕೊಂಡ್ವು ಬರೀತೀರ?. ಫೋಟೋಗಳಿದ್ರೆ ತಪ್ಪದೇ ನಮ್ಮೊಂದಿಗೆ ಹಂಚ್ಕೊಳ್ಳಿ. ಫೋಟೋ ಅಪ್ಲೋಡ್ ಮಾಡುವ ಪರ್ಮಿಶನ್ ಈಗಾಗ್ಲೇ ನಿಮ್ಮ ಅಕೌಂಟಿಗೆ ಕೊಟ್ಟಿಲ್ದಿದ್ರೆ ನೀಡುವೆ.

- ಹೆಚ್ ಪಿ

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 22, 2006 - 3:03pm — ಪ್ರಶಾಂತ.ಪಂಡಿತ

ಕಾರ್ಯಕ್ರಮದ ವಿವರ

ಪ್ರಶಾಂತ.ಪಂಡಿತ's picture

ನಾಡಿಗ್, ನನ್ನ ಮಟ್ಟಿಗಂತೂ ಬಹಳ ದಿನ ನೆನಪಿನಲ್ಲುಳಿಯುವ, ಗಂಭೀರ ಚಿಂತನೆಗೆ ಅವಕಾಶಮಾಡಿಕೊಡುವ ಕಾರ್ಯಕ್ರಮ ಅದಾಗಿತ್ತು. ಭಾಗವಹಿಸಿದ್ದ ಎಲ್ಲ ಚಿಂತಕರು ನಮ್ಮ ಸಮಾಜದ ಇಂದಿನ ಆಗುಹೋಗುಗಳ ಬಗ್ಗೆ, ಅವುಗಳ ಕುರಿತಾದ ನಮ್ಮ ಧೋರಣೆಗಳು, ಇದರಲ್ಲಿ public intellectualಗಳ ಪಾತ್ರ ಇತ್ಯಾದಿ ವಿಷಯಗಳನ್ನು ಮಂಡಿಸಿದರು. ನಂತರ ಚರ್ಚೆ ನಡೆಯಿತು. ಅವೆಲ್ಲವನ್ನು ಇಲ್ಲಿ ವಿವರಿಸುವುದು ಸ್ವಲ್ಪ ಕಷ್ಟ. ನಾನು ಆ ದಿನ record ಮಾಡಲಾದ ಭಾಷಣ/ಚರ್ಚೆಯನ್ನು ಕೇಳಿಸಿಕೊಂಡು ಲೇಖನವೊಂದನ್ನು ಬರೆಯಬೇಕೆಂದಿದ್ದೇನೆ.
ಸಾರಾಂಶ ಕೊಡಬಲ್ಲೆ:
೧. ಎಂ.ಪಿ. ಪ್ರಕಾಶ್ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವುಗಳನ್ನು ಎದುರಿಸಿ ಹೊಸ ನಾಳೆಗಳನ್ನು ಕಟ್ಟುವ ಬಗ್ಗೆ ಆಶಾವಾದಿಯಾಗಿ ಮಾತನಾಡಿದರು
೨. ಯು.ಆರ್. ಅನಂತಮೂರ್ತಿಯವರು ಎಂ.ಪಿ. ಪ್ರಕಾಶರ ಮಾತಿಗೆ ಪ್ರತಿಕ್ರಿಯಿಸುತ್ತ 'ನಿಮ್ಮಂತ ಅಪರೂಪದ ರಾಜಕಾರಣಿಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ, ನಿಮ್ಮಿಂದ ಬಹಳ ನಿರೀಕ್ಷೆಯಿದೆ' ಎಂದರು
೩. Outlook ಪತ್ರಿಕೆಯ ಸುಗತ ಶ್ರೀನಿವಾಸರಾಜು Infosysನ ಭೂಮಿ ಹಗರಣದ ಹಿನ್ನೆಲೆಯಲ್ಲಿ corporate ಸಂಸ್ಥೆಗಳ ಉಢಾಫೆ ಧೋರಣೆ, ರಾಜಕಾರಣಿಗಳ/ಅಧಿಕಾರಿಗಳ ವರ್ತನೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ - ಈ ಎಲ್ಲ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲು ಕಾರಣರಾದರು
೪. ಶರತ್ ಅನಂತಮೂರ್ತಿಯವರು ವಿಜ್ಞಾನ (basic science) ಹಾಗು ತಂತ್ರಜ್ಞಾನ (technology) ಗಳ ನಡುವಿನ ಸೂಕ್ಷ್ಮ ವ್ಯತ್ಯಾಸ, ಇಂದಿನ ಸಮಾಜದಲ್ಲಿ ಅವುಗಳ ಬಳಕೆಗಳ ಬಗ್ಗೆ ಪ್ರಬಂಧ ಮಂಡಿಸಿದರು
೫. ವಿಜಯಶಂಕರ ಅವರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸಮಾಡುತ್ತ (beneficiary ಗಳಾಗಿ), ನಮ್ಮ ನೆಲದ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರುವ ಅಗತ್ಯ, ಜಾಗತೀಕರಣದ ಸಂದರ್ಭದಲ್ಲಿ ಸುತ್ತಲ ಆಗುಹೋಗುಗಳ ಬಗೆಗಿನ ಅರಿವು, ಅವುಗಳನ್ನು ಗ್ರಹಿಸುವ ಪರಿ - ಈ ವಿಷಯಗಳ ಬಗ್ಗೆ ಮಾತಾಡಿದರು
೬. ಖ್ಯಾತ ರಂಗಕರ್ಮಿ ರಘುನಂದನ ಅವರು TVಯ ಕಾರ್ಯಕ್ರಮಗಳು ಹಂತ ಹಂತವಾಗಿ ಭಾಷೆಯನ್ನು ಕೊಲ್ಲುತ್ತಿರುವ ಬಗ್ಗೆ, ನಾಟಕ ಹಾಗು ಸಿನಿಮಾ ಕಲೆಯ ಸಾಧ್ಯತೆಗಳ ಬಗ್ಗೆ (ಅವರ ಪ್ರಕಾರ ನಾಟಕ ಮತ್ತು ಸಿನಿಮಾ ಕಲಾಪ್ರಕಾರಗಳು - TV ಕೇವಲ ಮಾಧ್ಯಮ) ಪ್ರಬಂಧ ಮಂಡಿಸಿದರು
೭. ಕೊನೆಯಲ್ಲಿ ರಾಘವೇಂದ್ರ ರಾವ್ 'ಇಷ್ಟೆಲ್ಲ ತವಕ ತಲ್ಲಣಗಳ ಮಧ್ಯೆ ಅರಿವು, ಎಚ್ಚರಗಳನ್ನಿಟ್ಟುಕೊಂಡು, ಹೊಸ ಕನಸುಗಳನ್ನು ಕಾಣುವ, ಬದುಕುವ challenge'ಗಳ ಬಗ್ಗೆ ಮಾತನಾಡಿದರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
Syndicate content

ಲೇಖಕರು

ಪ್ರಶಾಂತ.ಪಂಡಿತ's picture

ಪರಿಚಯ

ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (lacefilms.googlepages.com)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 29 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator