ಸ್ವಚ್ಛಂದ ಬಂಧ
ಎಷ್ಟೇ ಸ್ವಚ್ಚಂದವಾಗಿ ಹರಿದರೂ, ನದಿಗೆ ತನ್ನದೇ ಲಯವಿದೆ..
ಎಲೆ ತಾವರೆ, ಹೂದಾವರೆ...
ಈಗಿನ್ನೂ ಮುಂಗಾರುಮಳೆ ಪ್ರಾರಂಭವಾಗಿದೆ. ಹೆಚ್ಚಾಗಿ ಎಲ್ಲಾ ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಆದರೆ ಈ ಒಂದು ಕೆರೆ ಮಾತ್ರ ನೋಡಿ ಅದು ಹೇಗೆ ಮಳೆಯ ಹಂಗಿಲ್ಲ ಎಂಬಂತೆ ನೀರುತುಂಬಿ ತಾವರೆತುಂಬಿ ಕಂಗೊಳಿಸುತ್ತಿದೆ. ಶಿಕಾರಿಪುರ ತಾಲೂಕಿನ ಕಲ್ಮನೆ ಯ ಸಮೀಪದ ಈ ‘ತಾವರೆಕೆರೆ’ ತುಂಬ ಸಾವಿರಾರು ತಾವರೆಗಳು. ಮರಿದುಂಬಿಯಂತೆ ದಡದ ತುಂಬ ಸುತ್ತಿ ಸುತ್ತಿ ತೆಗೆದ ಚಿತ್ರಗಳಲ್ಲಿ ಕೆಲವು ಇಲ್ಲಿವೆ. ಕಾರ್ಮೋಡಗಳು ತುಂಬಿದ್ದರೂ ಮಳೆಯೇನೂ ಬರುತ್ತಿರಲಿಲ್ಲ, ದೈವಕ್ಕೆ.
ಚಿತ್ರ ತೆಗೆಯುತ್ತಾ ನೆನಪಾಗಿದ್ದು ಒಂದು ದಾಸರ ಪದ: ಮಧುಕರ ವೃತ್ತಿ ನನ್ನದು..ಪದುಮನಾಭನ ಪಾದ ಪದುಮ ಮಧುಪವೆಂಬ...

- ಸ್ವಚ್ಛಂದ ಬಂಧ ರವರ ಬ್ಲಾಗ್
- Login or register to post comments
- 372 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: