ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಶ್ರೀಶಕಾರಂತ ರವರ ಬ್ಲಾಗ್

ಲೇಸು ಶುನಕದ ಜನ್ಮ

March 21, 2006 - 9:08pm — ಶ್ರೀಶಕಾರಂತ

ಧೀ ಶಕ್ತಿಯನು ನೀಡಿ ತಳ್ಳಿಹನು ದೇವ

ಬಾಳ ಮಹಿಮೆಯನರಿವ ಕೂಪದಲಿ ||

ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು

ಸುಖದಿ ಜೀವಿಪುದು ಬಾಳ ಪಂಡಿತಪುತ್ರ ||

-- ಜೀವನದ ಬಗ್ಗೆ ಬಹಳಷ್ಟು ಯೋಚನೆ ಮಾಡಿ , ಪ್ರತಿಯೊಬ್ಬರೂ ಅವರದ್ದೇ ಆದಂತಹ ಜೀವನ ತತ್ವ ಗಳನ್ನು ಹೇಳಿದ್ದಾರೆ...ಅವು ಕೆಲವೊಮ್ಮೆ ಸರಿ ಕೆಲವೊಮ್ಮೆ ಸಮಂಜಸವಾಗಿರುವುದಿಲ್ಲ...ಇಂತಹದ್ದೇ ಸರಿ ಎಂದು ಹೇಳಲಾಗುವುದಿಲ್ಲ...
ಇಷ್ಟೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳುವ ಬದಲು ಹಾಯಾಗಿ ಇರಬಹುದಿತ್ತು ಅನಿಸುತ್ತದೆ....ಅದೇ ಇದರ ಸಾರಾಂಶ...

  • ಅಧ್ಯಾತ್ಮ
~.~
  • ಶ್ರೀಶಕಾರಂತ ರವರ ಬ್ಲಾಗ್
  • Login or register to post comments
  • 806 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 22, 2006 - 9:42am — tvsrinivas41

ಉತ್ತಮ ಚಿಂತನೆ

tvsrinivas41's picture

ನಿಮ್ಮದು ಉತ್ತಮ ಚಿಂತನೆ - ಪಂಡಿತ ಪುತ್ರ ಅಂದ್ರೆ ನೀವೇನಾ?

ಈಗ ನನ್ನ ತಲೆಯಲ್ಲಿ ಒಂದು ಹುಳು ಕೊರೆಯುತ್ತಾ ಇದೆ.
ಪ್ರಾಣಿಗಳಲ್ಲಿ ಚಿಂತನೆಗಳಿಲ್ಲ ಎಂಬುದು ಸಿದ್ಧವಾಗಿದೆಯಾ? ಅಂತಹ ಪ್ರಾಣಿಗಳಲ್ಲಿ ಶುನಕವನ್ನೇ ಏಕೆ ತೆಗೆದುಕೊಂಡಿದ್ದಾರೆ ಪಂಡಿತಪುತ್ರರು?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 10:18am — ಶ್ರೀಶಕಾರಂತ

ಸ್ವಾಮೀ ದಯವಿಟ್ಟು ಕ್ಷಮಿಸಿ

ಶ್ರೀಶಕಾರಂತ's picture

ಸ್ವಾಮೀ ದಯವಿಟ್ಟು ಕ್ಷಮಿಸಿ,

ನಾನು ನಮ್ಮ ಮನೆ ನಾಯಿ ಯಾವಾಗಲೂ ಮಲಗಿರುವುದನ್ನು(ಆಗಾಗ ಬೊಗಳುವುದನ್ನು ಬಿಟ್ಟು)...ನೋಡಿ ಹೊಟ್ಟೆ ಉರಿದು ಬರೆದಿರುವುದಿದು...

ಪ್ರಾಣಿಗಳು ಚಿಂತಿಸುವುದಿಲ್ಲ ಎಂಬುದು ಮನುಷ್ಯನ ಚಿಂತನೆಯ ಕೂನೆ ಇರಬಹುದು....

ನಾನು ಉದಾಹರೆಣೆಗಷ್ಟೆ ಶುನಕವನ್ನ ತೆಗೆದು ಕೊಂಡಿರುವುದು ಸ್ವಾಮೀ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 10:56am — tvsrinivas41

ಹೊಟ್ಟೆಉರಿ

tvsrinivas41's picture

ಓಹ್! ನಿಮ್ಮ ಮನೆ ನಾಯಿ ಸುಮ್ಮನಿರುವುದನ್ನು ನೋಡಿ ನಿಮಗೆ ಹೊಟ್ಟೆ ಉರಿಯುತ್ತಿದೆಯಾ?

ಅದರ ಹೊಟ್ಟೆಗೆ ಊಟ ಹಾಕ್ಬೇಡಿ, ಆಗ ನೋಡಿ ನಿಮ್ಮ ಹೊಟ್ಟೆ ಉರಿ ಶಮನ ಆಗಬಹುದು. (ತಮಾಷೆಗಷ್ಟೆ).

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 9:47am — ಮಹೇಶ ಭೋಗಾದಿ

ಅ: ಲೇಸು ಶುನಕದ ಜನ್ಮ

ಮಹೇಶ ಭೋಗಾದಿ's picture

ಎನು ಸ್ವಾಮಿ ಯೋಚಿಸುವುದೆ ಬೇಡವೆ? ಯೋಚಿಸುವುದಕ್ಕಿಂತ ನಾಯಿಜನುಮವು ಲೇಸೆನ್ನುವಿರಲ್ಲ.
ಮನುಷ್ಯನು ತನ್ನ ಯೋಚನಾಸಮರ್ಥ್ಯದಿಂದಲೆ ವಿಭಿನ್ನನು, ಉತ್ತಮನು ಆದದ್ದಲ್ಲವೆ?

ಮತ್ತು ಮೊದಲೆರಡು ಸಾಲುಗಳಲ್ಲಿ "ದೇವರು ಬಾಳನ್ನು ತಿಳಿಯಬೇಕೆಂದು, ಬುದ್ಧಿಶಕ್ತಿಯನ್ನು ಕೊಟ್ಟು ನಮ್ಮನ್ನು ಇಲ್ಲಿಗೆ ಕಳುಹಿಸಿರುವನು" ಎಂದು ಹೇಳಿರುವಿರಿ. ಚಿಂತನೆಮಾಡದೆ, ಯೋಚಿಸದೆ ಹೋದರೆ, ಆ ದೇವದತ್ತ-ಧೀಶಕ್ತಿಯು ವ್ಯರ್ಥವಾಗುವುದಿಲ್ಲವೆ?

ನನಗೆ ಮೊದಲೆರಡು ಸಾಲುಗಳರ್ಥಕ್ಕು, ಕೊನೆಯೆರಡು ಸಾಲುಗಳರ್ಥಕ್ಕು ಅರ್ಥವಿರೋಧವಿರುವಂತೆ ತೋರುತ್ತಿದೆ.

ಹಿಂದೆ ನಾನು ಎರಡನೆ ಪಪೂತ(ಪದವಿ ಪೂರ್ವ ತರಗತಿ)ದಲ್ಲಿ, ಸಂಸ್ಕೃತದಲ್ಲಿ, "ಭೂ ಕೈಲಾಸ"ವೆಂಬ ನಾಟಕದಲ್ಲಿ, ನಾರದನು ರಾವಣನಿಗೆ ಹೇಳಿದ "ದೋಷೈಕದೃಷ್ಟಿಃ ಖಳರಾವಣಃ ತ್ವಂ" ಎಂದು ಓದಿದ ನೆನಪು. ಹಾಗೆಂದರೆ, ರಾವಣನಿಗೆ ಬರಿ ದೋಷಗಳೆ ಕಾಣುವುದೆಂದು ಅರ್ಥ. ನಾನು ಹೇಗೆಂದು ಭಾವಿಸದಿರಿ.

--

ಇನ್ನೊಂದು ರೀತಿ ನೀವು ಹೇಳಿರುವುದು ಸರಿ. ಸುಮ್ಮನೆ ಇಲ್ಲದ ವಿಚಾರಗಳನ್ನು ಯೋಚಿಸಿ ನಾವೇಕೆ ತೆಲೆಕೆಡಿಸಿಕೊಳ್ಳಬೇಕೆಂದು.

ಸ್ವಾಮಿ....

ಕೊನೆಸಾಲಿನಲ್ಲಿ "ಬಾಳ" ಅನ್ನುವ ಬದಲು "ಬಾಳು" ಎನ್ನಿರಿ ಚೆನ್ನಾಗಿರುತ್ತದೆ.

ಲೇಖನ ಚಿಹ್ನೆಗಳನ್ನು ಪದ್ಯದಲ್ಲಿ ಬಳಸಬಹುದಲ್ಲವೆ. ಇವನ್ನು ಹೆಚ್ಚು ಬಳಸಿದರೆ ಓದುವುದು ಸುಲಭವಾಗುವುದು. ಇದು ಕೇವಲ ಅಭಿಪ್ರಾಯ, ಆಕ್ಷೇಪಣೆಯಲ್ಲ.

ಉದಾ:

ಧೀಶಕ್ತಿಯನು ನೀಡಿ, ತಳ್ಳಿಹನು ದೇವ,
ಬಾಳಮಹಿಮೆಯನರಿವ ಕೂಪದಲಿ .
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು.
ಸುಖದಿ ಜೀವಿಪುದು ಬಾಳು, ಪಂಡಿತಪುತ್ರ.

| ಮತ್ತು || ಸಂಸ್ಕೃತದ ಲೇಖನಚಿಹ್ನೆಗಳು. ಆದರೆ ಕನ್ನಡದಲ್ಲಿಯು ಬಳಕೆಗೆ ಬಂದುಬಿಟ್ಟಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 10:35am — ಶ್ರೀಶಕಾರಂತ

ಟೀಕೆಗಳನ್ನೆದುರಿಸಬೇಕಲ್ಲವೇ

ಶ್ರೀಶಕಾರಂತ's picture

ನಿಮ್ಮ ಮೊದಲನೇ ಟೀಕೆ ಸರಿಯಾಗೆ ಇದೆ...ನನ್ನ ಬುದ್ಡಿ ಮಟ್ಟಕ್ಕೆ ಇತ್ತೀಚೆಗೆ...ಎಲ್ಲಾ ಆಧ್ಯಾತ್ಮ ಚಿಂತನೆಗಳೂ ನಶ್ವರವೆಂದೇ ಅನಿಸುತ್ತಿವೆ...ಭಗವಂತನಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದಿರಲಿ..ನಾನು ಯಾರು .. ಯಂಬುದನ್ನು ತಿಳಿಯಲು ಕೂಡ ನನ್ನ ಬುದ್ಡಿಶಕ್ತಿಯಿಂದ ಸಾಧ್ಯವಾಗುತ್ತಿಲ್ಲ...ನಿಮಗೇನಾದರೂ ತಿಳಿದರೆ ನನಗೂ ಸ್ವಲ್ಪ ತಿಳಿಸಿ...

ಟೀಕೆಗಳನ್ನೆದುರಿಸಲು ಸದಾ ಸಿದ್ಡ..ಅದು ಖುಶಿಯ ವಿಷಯವೂ ಹೌದೆನ್ನಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 22, 2006 - 10:46am — ಮಹೇಶ ಭೋಗಾದಿ

ಧ: ಟೀಕೆಗಳನ್ನೆದುರಿಸಬೇಕಲ್ಲವೇ

ಮಹೇಶ ಭೋಗಾದಿ's picture

ಒಳ್ಳೆಯ ಭಾವನೆಯಿಂದ ನನ್ನ ಅನಿಸಿಕೆಯನ್ನು ಸ್ವೀಕರಿಸಿದ್ದಕ್ಕೆ ಧನ್ಯವಾದ.
ಇದುವೆ ನನಗೆ ಅತಿತರವಾದ ಖುಷಿಯ ವಿಷಯ.

ನೀವು ಟೀಕೆಗಳನ್ನು ಎದುರಿಸುವ ಮಾತಾಡುವಿರಿ, ಕೆಲವರಿಗೆ ಅದನ್ನು ಸಹಿಸುವುದೆ ಕಷ್ಟವಾದಾಗ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬದುಕು-ಬವಣೆ
  • ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ
  • ನುಡಿಮುತ್ತು
  • ತಾಗುವಾ ಮುನ್ನವೇ ಬಾಗುವ ತಲೆ ಲೇಸು
  • ನುಡಿಮುತ್ತು
Syndicate content

ಲೇಖಕರು

ಶ್ರೀಶಕಾರಂತ's picture

ಪರಿಚಯ

ಶ್ರೀಶ ಕಾರಂತ...ಶಿವಮೊಗ್ಗದ ಗಂಡು...ಕನ್ನಡಕ್ಕೆ ನಿಜವಾಗಲೂ ಏನಾದರು ಸೇವೆ ಸಲ್ಲಿಸಬೇಕು ಎಂಬುದೆ ಎನ್ನಾಸೆ.....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator