ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › ವಿಶ್ವನಾಥ ರವರ ಬ್ಲಾಗ್

ಇದೇನಾ ಪತ್ರಿಕೋದ್ಯಮ? - 3

July 27, 2006 - 9:49am — ವಿಶ್ವನಾಥ

ಅಭಿವೃದ್ಧಿ ಪತ್ರಿಕೋದ್ಯಮ

(ಮುಂದುವರಿದ ಭಾಗ)

ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ.

ಈಗಾಗಲೇ ಪ್ರಶಸ್ತಿ ಪಡೆದವರನ್ನೇ, ಹಣವಿದ್ದವರನ್ನೇ ಮತ್ತೆ ಮತ್ತೆ ಪ್ರಶಸ್ತಿಗೆ ಆಯ್ಕೆ ಮಾಡುವುದು ರೂಢಿ. ವರ್ಷ ವರ್ಷವೂ ಹನುಮನ ಬಾಲದಂತೆ ಬೆಳೆಯುವ ನಮ್ಮ ರಾಜ್ಯೋತ್ಸವ ಪ್ರಶಸ್ತಿಯೇ ಇದಕ್ಕೆ ಉತ್ತಮ ಉದಾಹರಣೆ.

ಅದರೆ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು, ತಮ್ಮ ನಿಯಮಿತ ಸಂಪನ್ಮೂಲದಲ್ಲೇ ಸಮಾಜದಲ್ಲಿ ಬದಲಾವಣೆ ತರುವಂಥ ಸಾಧನೆ ಮಾಡಿದ ನಿಸ್ಪೃಹ ವ್ಯಕ್ತಿಗಳನ್ನು ಗುರುತಿಸುವ ಶ್ಲಾಘನೀಯ ಕಾರ್ಯವನ್ನು ಕನ್ನಡಪ್ರಭ ಕಳೆದೆರಡು ವರ್ಷಗಳಿಂದ ಮಾಡುತ್ತಿರುವುದು ಇದ್ದುದರಲ್ಲೇ ಸ್ವಲ್ಪ ನೆಮ್ಮದಿ ತಂದಿದೆ.

ಮಂಗಳೂರು ಬಳಿ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಿಯೇ ಜೀವನ ಸಾಗಿಸುವ ನಿರಕ್ಷರಿ ಹಾಜಬ್ಬ ಸ್ಥಳೀಯ ಶಾಲೆಯೊಂದನ್ನು ಅಭಿವೃದ್ಧಿಗೊಳಿಸಿದ್ದೊಂದು ಯಶೋಗಾಥೆ. ಅದೇ ರೀತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕಾಕೋಳು ಗ್ರಾಮದ ಚೆನ್ನಬಸಪ್ಪ ಕೊಂಬಳಿ ಜಲಕೊಯ್ಲು ಮಾಡಿ ನೀರಿನ ಸೆಲೆಯ ಬತ್ತಿ ಹೋಗಿದ್ದ ಗ್ರಾಮದಲ್ಲಿ ಹೊಸ ಭರವಸೆ ತಂದ ಭಗೀರಥ. ಇಂಥವರನ್ನು ಗುರುತಿಸಿದ ಕನ್ನಡಪ್ರಭದ ಸಾಧನೆ ಕಡಿಮೆಯೇನಲ್ಲ. ಇತರರಿಗೆ ಸ್ವಾವಲಂಬನೆಯ ಸ್ಫೂರ್ತಿ ಕೊಡುವ ಇಂಥ ವರದಿಗಳು ಇಂದು ತೀರಾ ಅಗತ್ಯ.

80 ರ ದಶಕದಲ್ಲೂ ಇಂಥದೇ ರೀತಿಯ ಪ್ರಯತ್ನವನ್ನು ಉದಯವಾಣಿಯೂ ಮಾಡಿತ್ತು. ಆಗ ಶ್ರೀ ಈಶ್ವರ ದೈತೋಟರ ನೇತೃತ್ವದಲ್ಲಿ ನಡೆದ "ಕುಗ್ರಾಮ ಗುರುತಿಸಿ" ಯೋಜನೆಯಡಿ, ಪ್ರತೀ ವಾರವೂ ಈ ವರೆಗೆ ಬೆಳಕಿಗೆ ಬಾರದ ದಕ್ಷಿಣ ಕನ್ನಡದ ಕುಗ್ರಾಮಗಳನ್ನು ಗುರುತಿಸಿ, ಅಲ್ಲಿನ ಸಮಸ್ಯೆ-ಸಾಮರ್ಥ್ಯಗಳನ್ನು ಪಟ್ಟಿ ಮಾಡಿ ವರದಿ ಮಾಡುತ್ತಿದ್ದುದು ಕನ್ನಡ ಪತ್ರಿಕೋದ್ಯಮದಲ್ಲೇ ಒಂದು ಮೈಲಿಗಲ್ಲು. "ಕುಗ್ರಾಮ ಗುರುತಿಸಿ" ಲೇಖನ ಮಾಲೆ ಭಾರಿ ಜನಪ್ರಿಯತೆ ಕಂಡಿತು. ಬಸ್ಸು ಕಾಣದ ಊರುಗಳಲ್ಲಿ ಬಸ್ಸಿನ ಸಂಚಾರವಾಯಿತು, ಶಾಲೆಯಿದ್ದೂ ಶಿಕ್ಷಕರು ಹೋಗದ ಊರಿಗೆ ಅವರು ದೌಡಾಯಿಸಿದರು, ಇನ್ನೂ ಎಷ್ಟೋ ಊರುಗಳು ಆಸ್ಪತ್ರೆಗಳನ್ನು ಕಂಡವು, ಕುಂಭಕರ್ಣ ನಿದ್ರೆಯಲ್ಲಿದ್ದ ಜನಪ್ರತಿನಿಧಿಗಳು ಎಚ್ಚೆತ್ತರು, ಕಂದಾಯವನ್ನು ಮಾತ್ರ ವಸೂಲಿ ಮಾಡಿ ಅಭಿವೃದ್ಧಿಯ ಕಡತ ಮುಚ್ಚಿಟ್ಟಿದ್ದ ಸರಕಾರಿ ಬಾಬುಗಳು ತಡಬಡಾಯಿಸಿ ಹುಡುಕಾಡಿದರು... ಹೀಗೆ ಆ ಲೇಖನ ಸರಣಿ ಮಾಡಿದ ಪ್ರಭಾವ ಒಂದೆರಡಲ್ಲ. ಪತ್ರಿಕೆಯೊಂದರ ತಾಕತ್ತು-ಉದ್ದೇಶ ಇದೇ ಅಲ್ಲವೇ?

ಆದರೆ ನಮ್ಮ ಮಾಧ್ಯಮಗಳಲ್ಲಿ ಇಂಥ ಎಷ್ಟು ಸುದ್ದಿಗಳು ಈಗ ಪ್ರಕಟವಾಗುತ್ತವೆ. ವಾರಕ್ಕೆ ಶೇಕಡಾ ಒಂದರಷ್ಟೂ ಅಲ್ಲ ಅನ್ನೋದೇ ಬೇಜಾರಿನ ವಿಷಯ.

ಭಾರತದಂಥ ಸಮಸ್ಯೆಗಳ ಆಗರವಾಗಿರುವ ದೇಶದಲ್ಲಿ ಕುಗ್ರಾಮ ಗುರುತಿಸಿಯಂಥ ವರದಿ/ಲೇಖನ ಸರಣಿಗಳು ಪ್ರಕಟವಾದರೆ ನಮ್ಮ ಎಷ್ಟೊಂದು ಗ್ರಾಮೀಣ ಜನರ ಬದುಕು ಹಸನವಾಗುತ್ತದೆ. ನಮ್ಮ ಗಾಂಧಿತಾತ ಕಂಡ ಕನಸಿನ ಭಾರತ ಕೂಡ ಇದೇ. ಆ ಕನಸಿನ ಭಾರತ ಬೇಗ ನಿರ್ಮಾಣವಾಗಲಿ, ಇದರಲ್ಲಿ ಮಾಧ್ಯಮ ತನ್ನ ಮಹತ್ವದ ಪಾತ್ರ ನಿರ್ವಹಿಸಲಿ ಎಂಬುದೇ ಆಶಯ.

~.~
  • ವಿಶ್ವನಾಥ ರವರ ಬ್ಲಾಗ್
  • Login or register to post comments
  • 1518 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದೇನಾ ಪತ್ರಿಕೋದ್ಯಮ? -2
  • ಹೊಸ ಹವಾಮಾನ ವರದಿ ಸೌಲಭ್ಯ
  • ಪೂರ್ವಗ್ರಹಗಳು
  • ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ
  • ಉಳಿತಾಯ ಖಾತೆ ಗೊತ್ತು..ಸಾಲ ಖಾತೆಯೂ ಗೊತ್ತು..ಜಲ ಠೇವಣಿ ಖಾತೆ ಬಗ್ಗೆ ಗೊತ್ತೆ? ಬನ್ನಿ ಕೆ.ವಿ.ಜಿ.ಬಿ.ಗೆ
Syndicate content

ಲೇಖಕರು

ವಿಶ್ವನಾಥ's picture

ಪರಿಚಯ

I am web journalist. Reading Kannada novels, watching art movies, travelling are my hobbies.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೂಗಲ್ ಮೇಲ್ - ಕನ್ನಡ
  • ಸಂಗೀತ ಸಂಜೆ
  • ಕಲ್ಪನೆಯು ಕನ್ಯೆ…
  • ಕನ್ನಡೀಕರಿಸಿದ ಶ್ಲೋಕಗಳು - ೩
  • ಓದಿದ್ದು ಕೇಳಿದ್ದು ನೋಡಿದ್ದು-85 ಧರ್ಮಸ್ಥಳದ ಮಾದರಿ; ಭೈರಪ್ಪ-II
  • ಅಕ್ಕನ ಮಗಳು ಇಂಜಿನೀರ್ ಆದಾಗ :)
  • ನಗಲಿಕ್ಕೊಂದು ಚಿತ್ರ 10
  • ಕನ್ನಡೀಕರಿಸಿದ ಶ್ಲೋಕಗಳು - ೨
  • ಹಾಸ್ಯ - ೭
  • ಕನ್ನಡೀಕರಿಸಿದ ಶ್ಲೋಕಗಳು - ೧
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:55pm
  • Rakesh Shetty
    ಉ: ಕಾಶ್ಮೀರ ಮುಂದೇನು?
    November 20, 2008 - 1:49pm
  • mahesha
    ಉ: ನಿದಾನ, ನಿಧಾನ
    November 20, 2008 - 1:45pm
  • prapancha
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:35pm
  • gurubaliga
    ಉ: ನಿದಾನ, ನಿಧಾನ
    November 20, 2008 - 1:14pm
  • vinayudupa
    ಉ: ಶರಾವತಿಯ ಹಿನ್ನೀರಿನೊಲ್ಲೊ೦ದು ವಾರದಕೊನೆ.....ಬಾಗ ೨
    November 20, 2008 - 1:12pm
  • mahesha
    ಉ: ಕಾಶ್ಮೀರ ಮುಂದೇನು?
    November 20, 2008 - 1:05pm
  • mahesha
    ಉ: ನಿದಾನ, ನಿಧಾನ
    November 20, 2008 - 12:59pm
  • nkumar
    ಉ: ಹಸಿರು ಹಾವಿನ ಚಿತ್ರ!!.. (Vine snake)
    November 20, 2008 - 12:57pm
  • gurubaliga
    ಉ: ನಿದಾನ, ನಿಧಾನ
    November 20, 2008 - 12:57pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator